ಮಂಗಳೂರು: “ದಂಡ’ ವಸೂಲಿಗೆ ನಕಲಿ ಪೊಲೀಸರ “ಚಾಟಿಂಗ್‌’ ಅಸ್ತ್ರ ! 


Team Udayavani, Oct 28, 2022, 7:50 AM IST

“ದಂಡ’ ವಸೂಲಿಗೆ ನಕಲಿ ಪೊಲೀಸರ “ಚಾಟಿಂಗ್‌’ ಅಸ್ತ್ರ ! 

ಮಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ನಾನಾ ರೂಪದಲ್ಲಿ ವಂಚಿಸಿ ಹಣ ಗಳಿಸುತ್ತಿರುವ ಖದೀಮರು ಈಗ ಸೈಬರ್‌ ಪೊಲೀಸರ ಹೆಸರಿನಲ್ಲಿ ವಂಚನೆಗೆ ದಾಳ ಎಸೆದಿದ್ದಾರೆ.

ವಂಚಕರು ಈಗ ಪೊಲೀಸ್‌ ವೇಷದಲ್ಲಿ “ದಂಡ’ ವಸೂಲಿಗೆ ಮುಂದಾಗಿದ್ದಾರೆ. ನೇರವಾಗಿ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ ಬಲೆಗೆ ಕೆಡವುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ರೊಂದಿಗಿನ “ಚಾಟಿಂಗ್‌’ (ಸಂಭಾಷಣೆ) ವಿಚಾರ ಮುಂದಿಟ್ಟು ವಂಚಿಸಲಾಗುತ್ತಿದೆ. ಹೆಚ್ಚಾಗಿ ಯುವಜನರನ್ನೇ ಗುರಿ ಮಾಡಲಾಗುತ್ತಿದೆ.

ರಶೀದಿಯೂ ಸಿದ್ಧ:

ದಂಡದ ಮೊತ್ತ ಪಾವತಿಸುವವರಿಗೆ ಪೊಲೀಸ್‌ ಇಲಾಖೆಯದ್ದು ಎಂದು ಬಿಂಬಿಸುವ ನಕಲಿ ರಶೀದಿಯನ್ನು ಕೂಡ ನೀಡಲಾಗುತ್ತದೆ. ಈ ರೀತಿ ಸಂದೇಶ ಕಳುಹಿಸುವವರ ವಾಟ್ಸ್‌ಆ್ಯಪ್‌ ಅಥವಾ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಪೊಲೀಸ್‌ ಅಧಿಕಾರಿಗಳ ಪೊಟೋ ಇರುತ್ತದೆ. ಜತೆಗೆ ಸರಕಾರಿ ಅಧಿಕಾರಿ ಎಂದು ಉಲ್ಲೇಖೀಸಲಾಗುತ್ತದೆ ಎಂದು ಸೈಬರ್‌ ಭದ್ರತಾ ತಜ್ಞರು ಹಾಗೂ ಈ ರೀತಿಯ ಸಂದೇಶಗಳನ್ನು ಸ್ವೀಕರಿಸಿದವರು ತಿಳಿಸಿದ್ದಾರೆ.

ಪೋರ್ನ್’ ಹೆಸರಲ್ಲೂ ದೋಖಾ!:

ಇನ್ನು ಕೆಲವರಿಗೆ ಪೋರ್ನ್ ವೀಡಿಯೋ (ಅಶ್ಲೀಲ ದೃಶ್ಯಗಳು) ಹೆಸರಿನಲ್ಲಿ ಹೆದರಿಸಿ ಹಣ ಪಡೆಯಲಾಗುತ್ತಿದೆ. “ನೀವು ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ್ದೀರಿ. ನಿಮ್ಮ ವಾಟ್ಸ್‌ ಆ್ಯಪ್‌ನಲ್ಲಿ ಅಶ್ಲೀಲ ದೃಶ್ಯ ರವಾನೆಯಾಗಿದೆ’ ಎಂಬಿತ್ಯಾದಿ ಸಂದೇಶ ಕಳುಹಿಸಲಾಗುತ್ತದೆ. ಅಲ್ಲದೆ “ನಿಮ್ಮ ವಿರುದ್ಧ ಪ್ರಕರಣ ದಾಖಲಾಗುವುದನ್ನು ತಪ್ಪಿಸಬೇಕಾದರೆ ಹಣ ನೀಡಬೇಕು’ ಎಂದು ಹೆದರಿಸಲಾಗುತ್ತದೆ. ಇದು ಕೂಡ ಪೊಲೀಸರ ಹೆಸರಿನಲ್ಲಿ ನಡೆಯುವ ಮೋಸ.

ತುರ್ತು ಪಾವತಿಗೂ ಉಪಾಯ:

ಈ ರೀತಿಯಾಗಿ ಮೋಸದ ಜಾಲಕ್ಕೆ ಒಡ್ಡುವ ವಂಚಕರು ಹಣ ಪಾವತಿಗೆ ತುರ್ತು ಸ್ಥಿತಿ (ಸೆನ್ಸ್‌ ಆಫ್ ಅರ್ಜೆನ್ಸಿ) ಸೃಷ್ಟಿ ಮಾಡುತ್ತಾರೆ. “ನೀವು ಈಗಲೇ ದಂಡದ ಮೊತ್ತ ಅಥವಾ ಹಣ ಪಾವತಿಸಿದರೆ ಮೊತ್ತದಲ್ಲಿ ಕಡಿಮೆ ಮಾಡುತ್ತೇವೆ. ವಿಳಂಬವಾದರೆ ಹೆಚ್ಚು ನೀಡಬೇಕಾಗುತ್ತದೆ’ ಎಂದು ಹೇಳುತ್ತಾರೆ. ಹಾಗಾಗಿ ಕೆಲವು ಮಂದಿ ಕೂಡಲೇ ಪಾವತಿಸಲು ಮುಂದಾಗಿ ವಂಚನೆಗೊಳಗಾಗುತ್ತಾರೆ.

ಅಶ್ಲೀಲ ಚಿತ್ರದ ಭಯ:

ವಂಚಕರು ತಮಗೆ ಸಿಗುವ ಮೊಬೈಲ್‌ ನಂಬರ್‌ಗಳಿಗೆ ಇಂತಹ ಸಂದೇಶಗಳನ್ನು ಕಳುಹಿಸುತ್ತ ಹೋಗುತ್ತಾರೆ. ಕೆಲವು ಮಂದಿ ಅವರ ಬಲೆಗೆ ಬಿದ್ದರೂ ಉದ್ದೇಶ ಈಡೇರುತ್ತದೆ. ಕೆಲವರು ಹಲವು ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳಲ್ಲಿರುತ್ತಾರೆ. ಆಗ ಯಾವುದಾದರೊಂದು ಗ್ರೂಪ್‌ನಿಂದ ಅವರಿಗೆ ಗೊತ್ತಿಲ್ಲದಂತೆಯೇ ಅಶ್ಲೀಲ ಚಿತ್ರ, ವೀಡಿಯೋ ಅವರ ಮೊಬೈಲ್‌ ಸೇರಿರಬಹುದು. ಇಂತಹ ಸಂದರ್ಭದಲ್ಲಿ ಪೊಲೀಸರೆಂದು ಹೇಳಿ ಯಾರಾದರೂ ಕರೆ ಮಾಡಿ “ನಿಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳಿವೆ’ ಎಂದು ಹೆದರಿಸಿದರೆ ಆತಂಕ ಹೆಚ್ಚಾಗಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು.

ಡಾಟಾಬೇಸ್‌ ಸೇಲ್‌ :

ಮೊಬೈಲ್‌ ಬಳಕೆದಾರರ ನಂಬರ್‌ಗಳು ಕೆಲವು ಖದೀಮರಿಗೆ ಸುಲಭವಾಗಿ ಸಿಗುತ್ತದೆ. ಬಳಕೆದಾರರ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸಿ ಮಾರಾಟ ಮಾಡುವವರೂ ಇದ್ದಾರೆ. ವಿದ್ಯಾರ್ಥಿಗಳು, ಕಾರು ಮಾಲಕರು ಹೀಗೆ ವಿವಿಧ ವರ್ಗಗಳ ಗ್ರಾಹಕರ ಮೊಬೈಲ್‌ ಸಂಖ್ಯೆ (ಡಾಟಾ ಬೇಸ್‌) ಮಾರಾಟ ಮಾಡುವ ಸಂಸ್ಥೆಗಳು ಕೂಡ ಇವೆ.

ಅರೆಸ್ಟ್‌ಗೆ ಬರುತ್ತಿದ್ದೇವೆ… ! :

“ನಾವು ಸೈಬರ್‌ ಪೊಲೀಸರು. ನಿನ್ನೆ ರಾತ್ರಿ ನೀವು ಒಂದು ಹುಡುಗಿಯೊಂದಿಗೆ ವಾಟ್ಸ್‌ ಆ್ಯಪ್‌ನಲ್ಲಿ ಮಾತನಾಡಿದ್ದೀರಿ, ಅವಳೊಂದಿಗೆ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಚಾಟ್‌ ಮಾಡಿದ್ದೀರಿ. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಮೊಬೈಲ್‌ನಲ್ಲಿ ನಿಮ್ಮ ನಂಬರ್‌ ಇತ್ತು. ನಿಮ್ಮಂತಹ 8 ಮಂದಿಯನ್ನು ಬಂಧಿಸಲಾಗಿದೆ. ನಿಮ್ಮ ವಿರುದ್ಧ ಕೂಡ ಎಫ್ಐಆರ್‌ ದಾಖಲಿಸಲಾಗಿದ್ದು, ಕೂಡಲೇ ಬಂಧಿಸಲಾಗುವುದು. ಒಂದು ವೇಳೆ ಇದರಿಂದ ಬಚಾವ್‌ ಆಗಬೇಕಾದರೆ ದಂಡದ ಹಣ ನೀಡಬೇಕು’ ಎಂಬ ಸಂದೇಶ ಕಳುಹಿಸಲಾಗುತ್ತದೆ. ಅಲ್ಲದೆ ಕೂಡಲೇ ಕರೆ ಮಾಡುವಂತೆ ಒಂದು ಮೊಬೈಲ್‌ ಸಂಖ್ಯೆಯನ್ನು ಕೂಡ ಕಳುಹಿಸಲಾಗುತ್ತದೆ. ಕರೆ ಸ್ವೀಕರಿಸಿದರೆ ಇನ್ನಷ್ಟು ಹೆದರಿಸಲಾಗುತ್ತದೆ. ಆನ್‌ಲೈನ್‌ ಮೂಲಕ ಹಣ ಪಾವತಿಸಿಕೊಳ್ಳಲಾಗುತ್ತದೆ.

ಪೊಲೀಸರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವುದು ಕಂಡುಬಂದಿದೆ. ಆದರೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ, ನೋಟಿಸ್‌ ಕಳುಹಿಸುವುದಿಲ್ಲ. ಆತಂಕಕ್ಕೊಳಗಾಗಿ ಹಣ ಪಾವತಿಸುವ ಅಗತ್ಯವಿಲ್ಲ. ಡಾ| ಅನಂತ ಜಿ. ಪ್ರಭು, ಸೈಬರ್‌ ಭದ್ರತಾ ತಜ್ಞ, ಮಂಗಳೂರು

ಈ ಹಿಂದೆ ಲೋನ್‌ ನೀಡಿ ಅನಂತರ ಮರುಪಾವತಿಸುವಂತೆ ಸತಾಯಿಸಿ ಸಾಲ ಗಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದ “ಲೋನ್‌ ಆ್ಯಪ್‌’ಗಳನ್ನು ಸರಕಾರ ನಿಷೇಧಿ

ಸಿದೆ. ಇದೇ ರೀತಿ ಅಶ್ಲೀಲ ಚಿತ್ರಗಳ ವಿಷಯ ಮುಂದಿಟ್ಟು ಬೇರೆ ಬೇರೆ ರೀತಿಯಲ್ಲಿ ವಂಚಿಸುವ ಸಾಧ್ಯತೆಗಳಿವೆ. ಆಮಿಷ, ಬೆದರಿಕೆ ಬಗ್ಗೆ ಪ್ರತಿಕ್ರಿಯಿಸದೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಸತೀಶ್‌, ಇನ್‌ಸ್ಪೆಕ್ಟರ್‌, ಸೆನ್‌ ಠಾಣೆ ಮಂಗಳೂರು

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.