ಹಲವು ಮನೆಗಳಿಗೆ ಒಂದೇ ನಂಬ್ರ; ದಾಖಲೆ ತಿದ್ದುಪಡಿಗಾಗಿ ಅಲೆದಾಟ!

ಮಹಾನಗರ ಪಾಲಿಕೆಯಲ್ಲಿ ಮನೆ ನಂಬ್ರ ದಾಖಲು ವೇಳೆ ಎಡವಟ್ಟು

Team Udayavani, Oct 29, 2022, 2:50 PM IST

14

ಸುರತ್ಕಲ್‌: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮನೆ ನಂಬ್ರ ನೀಡುವಾಗ ಮಾಡಿದ ಎಡವಟ್ಟಿನಿಂದಾಗಿ ಇದೀಗ ಹಲವಾರು ಕುಟುಂಬಗಳು ತಮ್ಮ ಮೂಲದಾಖಲೆಗಳನ್ನು ತಿದ್ದುಪಡಿ ಮಾಡಲು ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿವೆ.

ಮನೆ ನಂಬ್ರ ನೀಡುವಾಗ ಒಂದು ಮನೆಗೆ ಒಂದು ನಂಬ್ರ ಸಾಮಾನ್ಯ. ಆದರೆ ಪಾಲಿಕೆಯಲ್ಲಿ ಮನೆ ನಂಬ್ರವನ್ನು ಅಕ್ಕಪಕ್ಕದ ಮನೆಯ ನಂಬ್ರವನ್ನು ಸೇರಿಸಿ ಬಾರ್‌ ಒಂದು, ಎರಡು, ಮೂರು ಹೀಗೆ ಕೊಡಲಾಗುತ್ತದೆ. ಇನ್ನು ಕೆಲವೆಡೆ ಹೊಸ ಮನೆ ಮಾಡುವ ಸಂದರ್ಭ ಮನೆ ನಂಬ್ರ ಪಡೆಯದೆ ಕಟ್ಟಿರುವುದನ್ನು ಸಕ್ರಮಗೊಳಿಸಲೂ ಯಾವುದೋ ನಂಬ್ರ ಬಳಸಿ ತೆರಿಗೆ ಪಾವತಿ ಮಾಡಲಾಗುತ್ತಿದ್ದು, ಇದು ಅಸಲಿ ನಂಬ್ರ ಪಡೆದವರಿಗೆ ಸಮಸ್ಯೆ ತಂದೊಡ್ಡಿದೆ. ಪಾಲಿಕೆ ಎಲ್ಲ ಮೂಲ ದಾಖಲೆ ಒದಗಿಸಿದ ಬಳಿಕವೇ ಅಸಲಿ ಮನೆ ನಂಬ್ರ ಪತ್ತೆ ಹಚ್ಚಿ ಸರಿಪಡಿಸುವ ಕೆಲಸ ಮಾಡಬೇಕಾಗುತ್ತದೆ. ಇಂತಹ ಹಲವಾರು ಎಡವಟ್ಟುಗಳು ನಡೆದಿದ್ದು, ಪಾಲಿಕೆ ಅಧಿಕಾರಿಗಳು ತೆರಿಗೆ ಬಾಕಿ ನೋಟಿಸ್‌ ನೀಡುವ ವೇಳೆ ಹಲವು ಪ್ರಮಾದಗಳು ಬೆಳಕಿಗೆ ಬಂದಿವೆ.

ಮನೆ ನಂಬ್ರ ಡಿಜಿಟಲೀಕರಣದ ವೇಳೆ ಹಲವು ಮನೆಗಳಿಗೆ ಒಂದೇ ನಂಬ್ರ ಕೊಟ್ಟಿರುವುದು ಪತ್ತೆಯಾಗಿವೆ. ಇದರಿಂದ ಮನೆ ಮಾಲಕರು ಸಂಕಷ್ಟ ಎದುರಿಸುವಂತಾಗಿದೆ.

ಪಾಲಿಕೆ ಆಡಳಿತಕ್ಕೆ ಸವಾಲು

ಪೇಪರ್‌ ಲೆಸ್‌ ಆಗಿ ಎಲ್ಲ ತೆರಿಗೆ ಕಟ್ಟುವ ಸೌಲಭ್ಯ ಅಳವಡಿಸಿದ ಸಂದರ್ಭ ಇದೀಗ ಮನೆ ನಂಬ್ರ ತಿದ್ದುಪಡಿಗೆ ಹಲವಾರು ದೂರುಗಳು ದಾಖಲಾಗುತ್ತಿವೆ. ಈ ಹಿಂದೆ ತೆರಿಗೆ ಕಟ್ಟಿದವರ ದಾಖಲೆಯೂ ಸಮರ್ಪಕವಾಗಿ ಇಲ್ಲವಾಗಿದ್ದು, ಪಾಲಿಕೆ ಆಡಳಿತಕ್ಕೆ ಸವಾಲಾಗಿದೆ. ಈ ಹಿಂದೆ ವೈಯುಕ್ತಿಕವಾಗಿ ಮನೆ ತೆರಿಗೆ ಕಟ್ಟಿದ್ದರೆ ರಶೀದಿಯನ್ನು ಬಿಸಾಡದೆ ಜಾಗ್ರತೆಯಿಂದ ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವಿದ್ದು, ಎಚ್ಚರ ತಪ್ಪಿದಲ್ಲಿ ಬಾಕಿ ನೋಟಿಸ್‌ ಬರುವ ಸಾಧ್ಯತೆಯೂ ಇಲ್ಲದಿಲ್ಲ.

ನಿತ್ಯ ಅಲೆದಾಟ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದೇ ತರಹದ ಮನೆ ನಂಬ್ರ ಹಲವಾರಿಗೆ ನೀಡಲಾಗಿದ್ದು, ಪೇಪರ್‌ ಲೆಸ್‌ ಸೌಲಭ್ಯ ಆಗುತ್ತಿರುವ ಈ ಸಂದರ್ಭ ಸಮಸ್ಯೆ ಎದುರಾಗುತ್ತಿದೆ. ನಾವು ಮಾಡದ ತಪ್ಪಿಗೆ ನಮ್ಮ ಆಧಾರ್‌ ಕಾರ್ಡ್‌ನಿಂದ ಹಿಡಿದು ಬ್ಯಾಂಕ್‌ ವರೆಗೆ ಎಲ್ಲ ದಾಖಲೆಗಳಲ್ಲಿ ಹೊಸ ಮನೆ ನಂಬ್ರ ಎಂಟ್ರಿ ಮಾಡುವುದು ಅಗತ್ಯವಾಗಿದ್ದು, ನಿತ್ಯ ಅಲೆದಾಡಬೇಕಾಗಿದೆ. ನನ್ನ ಉದ್ಯಮಕ್ಕೂ ಇದೇ ಸಮಸ್ಯೆ ಎದುರಾಗಿದೆ. -ವೈ. ರವೀಂದ್ರ ರಾವ್‌, ಸುರತ್ಕಲ್‌

ಸಮಸ್ಯೆ ಪರಿಹಾರಕೆ ಪೂರಕಕ ಕ್ರಮ: ಮನೆ ನಂಬ್ರ ನೀಡಿದ ವಿಚಾರದಲ್ಲಿ ಹಲವು ಗೊಂದಲ ಎದುರಾಗಿದ್ದು, ನಿತ್ಯ ಹಲವಾರು ದೂರುಗಳು ಬರುತ್ತಿವೆ. ಈ ಬಗ್ಗೆ ಮೇಯರ್‌ ಅವರ ಗಮನಕ್ಕೆ ತಂದು ನಗರ ಯೋಜನೆ ಸ್ಥಾಯೀ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಪೂರಕ ಕ್ರಮ ಕೈಗೊಳ್ಳಲಾಗುವುದು. –ಶಕಿಲಾ ಕಾವ, ಅಧ್ಯಕ್ಷರು ನಗರ ಯೋಜನೆ ಸ್ಥಾಯಿ ಸಮಿತಿ, ಮನಪಾ 

-ಲಕ್ಷ್ಮೀ ನಾರಾಯಣ ರಾವ್‌

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.