![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 30, 2022, 7:31 PM IST
ಹೊನ್ನಾವರ: ಪುನೀತ್ ರಾಜಕುಮಾರ್ ಅವರ ವಿದಾಯದ ಹಾಗೂ ವಿಶಿಷ್ಟ ಸಂದೇಶಗಳುಳ್ಳ ಚಿತ್ರ ಗಂಧದಗುಡಿಯನ್ನು ಹೊನ್ನಾವರದ ಅಕ್ಷಯ ಪೈ ಸಂಕಲನ ಮಾಡಿದ್ದಾರೆ.
ಪುನೀತ್ ಅವರು ಇರುವಾಗಲೇ ಮೊದಲ ಸಂಕಲನವನ್ನು ಅವರಿಗೆ ತೋರಿಸಿದ್ದೆ, ಮೆಚ್ಚುಗೆ ದೊರಕಿತ್ತು. ಅವರು ಇಹಲೋಕ ತ್ಯಜಿಸಿದ ನಂತರ ಹಲವು ಬದಲಾವಣೆಗಳೊಂದಿಗೆ ಒಂದು ವರ್ಷ ಎಡಿಟಿಂಗ್ ನಡೆಸಿ ಚಿತ್ರ ಬಿಡುಗಡೆಯಾಗಿದ್ದು, ಚಿತ್ರೀಕರಣದಿಂದ ಆರಂಭಿಸಿ ಎಡಿಟಿಂಗ್ ಕಾಲದಲ್ಲಿ ನಿರಂತರವಾಗಿ ಅಪ್ಪು ಅವರ ಮುಖವನ್ನು ನೋಡುತ್ತಿದ ಕಾರಣ ನಾನೇ ಎಡಿಟಿಂಗ್ ಮಾಡಿದರೂ ಚಿತ್ರವನ್ನು ಥಿಯೇಟರ್ನಲ್ಲಿ ನೋಡುತ್ತಿದ್ದಂತೆ ಭಾವನೆಗಳು ಕಾಡಿದವು ಎಂದು ಅಕ್ಷಯ ಪೈ ಹೇಳಿದ್ದಾರೆ.
ಚಿತ್ರ ವೀಕ್ಷಿಸಿದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅಕ್ಷಯ ಪೈ ಅವರೊಂದಿಗೆ ಮಾತನಾಡಿ, ಜಗತ್ತು ಭಾರತವನ್ನು ಮತ್ತು ಕರ್ನಾಟಕವನ್ನು ತಿರುಗಿ ನೋಡುವಂತೆ ಚಿತ್ರವನ್ನು ಲೋಕಕ್ಕೆ ತೆರೆದಿಟ್ಟ ನಿಮ್ಮ ಕುರಿತು ನನಗೆ ಹೆಮ್ಮೆ ಎಂದು ಹೇಳಿದ್ದಾರೆ. ನನ್ನೂರು ಹೊನ್ನಾವರ, ನನ್ನ ಜಿಲ್ಲೆ ಉತ್ತರ ಕನ್ನಡದಲ್ಲಿ ಸಾಕಷ್ಟು ಚಿತ್ರೀಕರಣವಾದ ಕಾರಣ ನನಗೆ ಹೆಮ್ಮೆಯೂ ಹೌದು. ನಾನೇ ನೋಡಿರದ ನನ್ನ ಜಿಲ್ಲೆಯ ಚಿತ್ರಗಳು ಅಭೂತಪೂರ್ವವಾಗಿ ಬಂದಿದೆ. ಈ ಚಿತ್ರದ ಚಿತ್ರೀಕರಣ ಮಾಡುತ್ತಿರುವಾಗ ಕರ್ನಾಟಕದ ವೈಭವವನ್ನು ಜಗತ್ತಿಗೆ ತೋರಿಸಲು ಅಪ್ಪು ಸರ್ ಮತ್ತು ನಿರ್ದೇಶಕ ಅಮೋಘವರ್ಷ ಅಪೇಕ್ಷೆ ಪಟ್ಟಿದ್ದರು.
ಆದ್ದರಿಂದ ಈ ಚಿತ್ರದ ಸಂಕಲನ ಕೂಡ ಸವಾಲಾಗಿತ್ತು. ಚಿತ್ರದಲ್ಲಿ ಕಾಡು ಬೆಳೆಸುವ, ನಾಡು ಉಳಿಸುವ, ಪ್ಲಾಸ್ಟಿಕ್ ತ್ಯಜಿಸುವ ಹಲವು ಸಂದೇಶಗಳಿವೆ. ಚಿತ್ರದ ಎಡಿಟಿಂಗ್ ಬಹುಮುಖ್ಯ ಜವಾಬ್ದಾರಿ, ಅಪ್ಪು ಸರ್ ಅವರ ಕಾಳಜಿ, ಆಸಕ್ತಿ ಮತ್ತು ನಿರ್ದೆಶಕರ ಭಾವನೆಗಳು, ಕೋಟ್ಯಾಂತರ ಅಪ್ಪು ಅಭಿಮಾನಿಗಳ ಭಾವನೆಗಳು ಇವುಗಳನ್ನು ಲಕ್ಷದಲ್ಲಿಟ್ಟುಕೊಂಡು ಚಿತ್ರ ಸಂಕಲನಗೊಂಡಿದೆ. ಎಲ್ಲ ನೋಡಿ ಸಂತೋಷ ಪಡಿ ಎಂದು ಅಕ್ಷಯ ಪೈ ಹೇಳಿದ್ದಾರೆ. ಹೊನ್ನಾವರ ಪೇಟೆಯಲ್ಲಿ ಕಾಮಾಕ್ಷಿ ಸ್ಟೀಲ್ ಮಳಿಗೆ ನಡೆಸುತ್ತಿರುವ ಜಗದೀಶ ಪೈ ಮತ್ತು ವಿದ್ಯಾ ಪೈ ಅವರ ಪುತ್ರ ಅಕ್ಷಯ ಸಾಧನೆ ಸಂತೋಷ ತಂದಿದೆ. ಜಿಲ್ಲೆಗೆ ಹೆಮ್ಮೆ ತಂದ ಈ ತರುಣನಿಂದ ಇನ್ನಷ್ಟು ಚಿತ್ರಗಳು ಸಂಕಲನಗೊಳ್ಳಲಿ ಎಂದು ಹಾರೈಸೋಣ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.