![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 5, 2022, 6:35 AM IST
ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆಯ ತಿದ್ದುಪಡಿ ಪ್ರಕಾರ ಜಾನುವಾರುಗಳ ಸಾಗಾಟಕ್ಕೆ ಜಿಎಸ್ಟಿ ಅನ್ವಯವಾಗಲಿದ್ದು, ಅದನ್ನು ಜಾನುವಾರುಗಳ ಮಾಲಕರು ಪಾವತಿಸಬೇಕು.
“ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ- 2021ರ ನಿಯಮ 3ಕ್ಕೆ ತಿದ್ದುಪಡಿ ತರಲಾಗಿದ್ದು, ಅದರ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.
ನಿಯಮ 3ರ ತಿದ್ದುಪಡಿಯಂತೆ ಯಾವುದೇ ವ್ಯಕ್ತಿಯು ಕೃಷಿ ಹಾಗೂ ಪಶುಸಂಗೋಪನೆ ಉದ್ದೇಶಗಳಿಗೆ ಜಾನುವಾರನ್ನು ಯಾವುದೇ ಬಗೆ ಅಥವಾ ವಿಧಾನದಲ್ಲಿ ಸಾಗಿಸಲು ಬಯಸಿದರೆ ಅಂತಹ ವ್ಯಕ್ತಿ ಪಶುಸಂಗೋಪನೆ ಇಲಾಖೆಯಿಂದ ಆನ್ಲೈನ್ನಲ್ಲಿ ಜಾನುವಾರು ಸಾಗಾಣಿಕೆ ಪರವಾನಿಗೆ ಪಾಸ್ ಪಡೆದುಕೊಳ್ಳಬೇಕು. ಎರಡಕ್ಕಿಂತ ಕಡಿಮೆ ಜಾನುವಾರುಗಳನ್ನು ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಗಳಿಗೆ ಸ್ಥಳೀಯ 15 ಕಿ.ಮೀ. ವ್ಯಾಪ್ತಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದರೆ ಪಾಸ್ನಿಂದ ವಿನಾಯಿತಿ ಇರಲಿದೆ. ಆದರೆ. ಪಶುಸಂಗೋಪನೆ ಇಲಾಖೆಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.
ದರದ ಬಗ್ಗೆ ಉಲ್ಲೇಖವಿಲ್ಲ
ಕಾಯ್ದೆಯ ನಿಯಮ 3ರ ಉಪ ನಿಯಮ (1)ರ ತಿದ್ದುಪಡಿಯಂತೆ ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಗಳಿಗೆ ಜಾನುವಾರು ಸಾಗಾಣಿಕೆಗೆ ಲಘು ವಾಣಿಜ್ಯ ವಾಹನಗಳು (ಎಲ್ಸಿವಿ)ಗಳ ಪಾಸ್ಗೆ 25 ರೂ. ಶುಲ್ಕ ಹಾಗೂ ಜಿಎಸ್ಟಿ ಅನ್ವಯವಾಗಲಿದೆ. ಅದೇ ರೀತಿ ಬಾರಿ ವಾಣಿಜ್ಯ ವಾಹನಗಳಿಗೆ (ಎಚ್ಸಿವಿ) ಪಾಸ್ಗೆ 50 ರೂ. ಶುಲ್ಕ ಹಾಗೂ ಜಿಎಸ್ಟಿ ಅನ್ವಯವಾಗಲಿದೆ ಎಂದು ಕರಡು ನಿಯಮಗಳಲ್ಲಿ ಹೇಳಲಾಗಿದೆ. ಆದರೆ, ಜಿಎಸ್ಟಿ ಎಷ್ಟು ಇರಲಿದೆ ಎಂಬ ಬಗ್ಗೆ ಉಲ್ಲೇಖೀಸಿಲ್ಲ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.