ಇಂದು ತುಳಸೀ ಪೂಜೆ: ಸರ್ವದೇವತೆಗಳ ಸನ್ನಿಧಾನ ತುಳಸೀ


Team Udayavani, Nov 5, 2022, 6:20 AM IST

ಇಂದು ತುಳಸೀ ಪೂಜೆ: ಸರ್ವದೇವತೆಗಳ ಸನ್ನಿಧಾನ ತುಳಸೀ

ಕಾರ್ತಿಕ ಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ಇದು ತುಳಸೀ ಪೂಜೆ ಎಂದೇ ಪ್ರಸಿದ್ಧ. ಈ ದಿನದಂದು ತುಳಸೀ ವೃಂದಾವನದ ಹತ್ತಿರ ಧಾತ್ರೀ(ನೆಲ್ಲಿಕಾಯಿ) ವೃಕ್ಷದ ಕೊಂಬೆಯನ್ನಿಟ್ಟು ಅದರ ಮುಂದೆ ಶ್ರೀಕೃಷ್ಣನ ಪ್ರತಿಮೆ ಅಥವಾ ಸಾಲಿಗ್ರಾಮಗಳನ್ನಿಟ್ಟು ಪೂಜೆ ಮಾಡುತ್ತಾರೆ. ಚಾತುರ್ಮಾಸವು ಮುಗಿದು, ವ್ರತಗಳ ಸಮಾಪನವಾಗುವುದು ಈ ಸಮಯದಲ್ಲೇ. ಶ್ರೀಹರಿಯು ನಾಲ್ಕು ತಿಂಗಳ ಯೋಗನಿದ್ರೆಯ ಬಳಿಕ ಎಚ್ಚರಗೊಳ್ಳುವ ಪರ್ವಕಾಲ. ಕ್ಷೀರಾಬ್ಧಿ ವ್ರತವೆಂದು ಆಚರಿಸಲಾಗುತ್ತದೆ. ಇಂದು ಶ್ರೀಕೃಷ್ಣನ ದಿವಸ, ತುಲಸೀ ಮತ್ತು ಶ್ರೀಮನ್ನಾ ರಾಯಣನ ವಿವಾಹದ ದಿನವೂ ಹೌದು.

ಬಹುಪಯೋಗೀ ತುಳಸಿಯು ಮನುಷ್ಯನ ಪಾರಮಾರ್ಥಿಕ ಹಾಗೂ ಲೌಕಿಕ ಬದುಕಿನಲ್ಲಿ ಅತೀ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪವಿತ್ರ ತುಳಸಿ ಎಂದೇ ಅದಕ್ಕೆ ವಿಶೇಷಣ. ಇಂಗ್ಲಿಷ್‌ನಲ್ಲಿ ಅದು ಹೋಲಿ ಬೇಸಿಲ್‌, ಸಂಸ್ಕೃತದಲ್ಲಿ ತುಳಸಿ. ತುಳಸಿಗೆ ಇತರ ಹೆಸರುಗಳು ಮಂಜರಿ, ಕೃಷ್ಣತುಳಸಿ, ತ್ರಿತ್ತವು ಇತ್ಯಾದಿ. ವೃಂದ, ವೃಂದಾವನೀ, ವಿಶ್ವಪಾವನಿ, ವಿಶ್ವಪೂಜಿತ, ತುಳಸಿ, ಪುಷ್ಪಸಾರ, ನಂದಿನಿ, ಕೃಷ್ಣಜೀವನಿ ಎಂಬ ಅಷ್ಟ ನಾಮಗಳೊಂದಿಗೆ ತುಳಸೀ ಸಂಕೀರ್ತನೆ ಅತೀ ಪ್ರಸಿದ್ಧ. ರಾಮತುಳಸಿ, ಕೃಷ್ಣ ತುಳಸಿ ಅಥವಾ ಶ್ಯಾಮ ತುಳಸಿ, ವನ ತುಳಸಿ, ಕಾಳಿ ತುಳಸಿ ಇತರ ಪ್ರಭೇದಗಳು.

ಆಧ್ಯಾತ್ಮಿಕ ಮಹತ್ವ: ಕಾರ್ತಿಕ ಮಾಸ ತುಳಸಿ ಪ್ರತಿಷ್ಠಾಪನೆಗೆ ಪರ್ವ ಕಾಲ. ಎಷ್ಟು ತುಳಸೀ ಗಿಡಗಳನ್ನು ಬೆಳೆಸುತ್ತಿಯೋ ಅಷ್ಟು ಜನ್ಮಗಳಲ್ಲಿ ಎಸಗಿದ ಪಾಪಗಳೆಲ್ಲವೂ ನಾಶವಾಗುತ್ತವೆ ಎಂದು ಸ್ಕಂದಪುರಾಣದ ಉಲ್ಲೇಖ. ಎಲ್ಲಿ ತುಳಸೀವನವಿರುವುದೋ ಅದುವೇ ಒಂದು ತೀರ್ಥಕ್ಷೇತ್ರ ಎಂದು ಪದ್ಮಪುರಾಣದ ವರ್ಣನೆ. ಯಮಭಟರು ಆ ಮನೆಗೆ ಪ್ರವೇಶಿಸುವುದಿಲ್ಲ. ತುಳಸೀ ಬೆಳೆದ ಮಣ್ಣಿನಿಂದ ಸಾರಿಸಲ್ಪಟ್ಟ ಮನೆಗೆ ಕಾಯಿಲೆ ಬರದು. ತುಳಸೀ ಗಂಧವಿರುವ ಗಾಳಿ ಆರೋಗ್ಯಕ್ಕೆ ಉತ್ತಮ. ತುಳಸಿಯಲ್ಲಿ ತ್ರಿಮೂರ್ತಿಗಳ ಸನ್ನಿಧಾನವಿದೆ. ಪುಷ್ಕರ ಮತ್ತು ಗಂಗಾಸ್ನಾನದ ಪುಣ್ಯವು ಲಭಿಸುತ್ತದೆ.

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವ ದೇವತಾ ಯದಾಗ್ರೇ ಸರ್ವವೇದಾಶ್ಚ ತುಲಸೀ ತ್ವಾಂ ನಮಾಮ್ಯಹಂ || – ಎಲ್ಲ ತೀರ್ಥಗಳೂ ತುಳಸೀ ಗಿಡದ ಮೂಲದಲ್ಲಿ, ಎಲ್ಲ ದೇವತೆಗಳು ಅದರ ಕಾಂಡದಲ್ಲಿ, ಎಲ್ಲ ವೇದಗಳು ತುದಿ ಭಾಗದಲ್ಲಿ ಸನ್ನಿಹಿತವಾಗಿದೆ.

ತುಳಸೀ ದರ್ಶನದಿಂದ ಎಲ್ಲ ಪಾಪಗಳೂ ನಿವಾರಣೆಯಾಗುತ್ತವೆ. ದೇಹ ಶುದ್ಧಿಗೆ ಅದರ ಸ್ಪರ್ಶ, ನಮಸ್ಕಾರದಿಂದ ಕಾಯಿಲೆ ದೂರ, ತುಳಸಿಗೆ ನೀರು ಹಾಕುವುದರಿಂದ ಯಮನ ಪಾಶದಿಂದ ಮುಕ್ತಿ, ತುಳಸಿ ಬೆಳೆಸುವುದರಿಂದ ಹರಿಭಕ್ತಿಯ ಸಂಪಾದನೆ, ಶ್ರೀಹರಿಗೆ ತುಳಸಿಯನ್ನು ನೀಡುವುದರಿಂದ ಮೋಕ್ಷ ಪ್ರಾಪ್ತಿ. ಸರ್ವದೇವತೆಗಳ ಸನ್ನಿಧಾನವಿರುವುದರಿಂದ ಮತ್ತದರ ದಿವೌಷಧೀ ಗುಣಗಳಿಂದ ಮನೆಯನ್ನೂ ಮನೆಮಂದಿಯನ್ನೂ ತುಳಸಿ ಕಾಪಾಡುತ್ತದೆ.

ಪ್ರಸೀದ ತುಳಸೀ ದೇವೀ ಪ್ರಸೀದ ಹರಿವಲ್ಲಭೇ.. .. ತುಳಸೀ ತ್ವಾಂ ನಮಾಮ್ಯಹಮ್‌ || ತುಳಸಿಯ ಔಷಧೀಯ ಲಾಭಗಳು: ತುಳಸಿ ಒಂದು ವಿಶಿಷ್ಟ ಗಿಡಮೂಲಿಕೆ. ವಿಶೇಷವಾಗಿ ಶ್ವಾಸೋಚ್ಛಾಸ, ಜೀರ್ಣಕ್ರಿಯೆ ಮತ್ತು ಚರ್ಮದ ವ್ಯಾಧಿಗಳಿಗೆ ಉಪ ಶಮನಕಾರೀ ಔಷಧ. ಅದು ಟ್ಯೂಮರ್‌ ನಿವಾರಕ ಔಷಧವೆಂದು ಆಯುರ್ವೇದವು ಗುರುತಿಸಿದೆ. ತುಳಸಿಯು ಇಮ್ಯುನೋ ಮೋಡ್ಯುಲೇಟರ್‌, ಸೈಟೋ ಪ್ರೊಟೆಕ್ಟಿವ್‌ ಮತ್ತು ಕ್ಯಾನ್ಸರ್‌ ನಿವಾರಕ ಪದಾರ್ಥವೆಂದು ಪ್ರಯೋಗಗಳು ದೃಢಪಡಿಸಿವೆ. ತುಳಸಿ ಯಲ್ಲಿ ವಿಟಮಿನ್‌ ಸಿ ಇರುವುದರಿಂದ ಹೃದಯ ಸಂಬಂಧೀ ವ್ಯಾಧಿಗಳು ದೂರ ವಾಗುತ್ತವೆ. ರಕ್ತದಲ್ಲಿ ಕೊಬ್ಬಿನಂಶವನ್ನು ಹತೋಟಿಯಲ್ಲಿಡುತ್ತದೆ.

ತುಳಸಿಯಲ್ಲಿ ಅಸೆಟಿಕ್‌ ಆಮ್ಲವಿರುವುದರಿಂದ ಶರೀರ ದಲ್ಲಿನ ಯೂರಿಕ್‌ ಆಮ್ಲ ಮಟ್ಟವನ್ನು ಕಡಿಮೆಗೊಳಿಸಿ ಕಿಡ್ನಿ ಸ್ಟೋನ್‌ಗೆ ಉತ್ತಮ ಔಷಧ. ತಲೆನೋವು, ಜ್ವರ, ಕಣ್ಣಿನ ಆರೋಗ್ಯ, ಮೌಖೀಕ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸುತ್ತದೆ. ತುಳಸಿ ಯಲ್ಲಿರುವ ವಿಟಮಿನ್‌ ಕೆ ಯಿಂದ ಎಲುಬಿನ ಮತ್ತು ಹೃದಯದ ಆರೋಗ್ಯವು ಕಾಪಾಡಲ್ಪಡುತ್ತವೆ. ತುಳಸಿ ಬಳಕೆಯಿಂದ ಅಸ್ತಮಾ, ಬ್ರೋಂಕೈಟಿಸ್‌, ಶೀತ, ಕೆಮ್ಮು,  ಸೈನಸೈಟಿಸ್‌, ರಕ್ತದೊತ್ತಡ, ಕೊಬ್ಬು, ಅಜೀರ್ಣ, ಅಲ್ಸರ್‌, ಸಕ್ಕರೆ ಕಾಯಿಲೆ, ಸಂಧಿನೋವು, ಅರ್ಥರೈಟಿಸ್‌, ಮಲೇರಿಯಾ ಮುಂತಾದ ಕಾಯಿಲೆಗಳನ್ನು ಗುಣಪಡಿಸಬಹುದು. ಮಾನಸಿಕ ಒತ್ತಡ ಮತ್ತು ನರಮಂಡಲ ಸಂಬಂಧೀ ಸಮಸ್ಯೆಗಳನ್ನು ಗುಣಪಡಿಸುತ್ತದೆ ಎಂದು ಚೀನದ ಸಂಶೋಧನೆ ತಿಳಿಸುತ್ತದೆ. ಅಲ್ಲದೆ ಅನೇಕ ಮನೆಮದ್ದುಗಳಲ್ಲಿ ತುಳಸಿಯನ್ನು ಬಳಸುತ್ತಾರೆ.

-  ಜಲಂಚಾರು ರಘುಪತಿ ತಂತ್ರಿ, ಉಡುಪಿ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.