29 ವಿಷಕಾರಿ ಹಾವುಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬಂಧನ !
ಟಾಟಾನಗರ ರೈಲು ನಿಲ್ದಾಣದಲ್ಲಿ ಬೆಚ್ಚಿ ಬೀಳುವ ಘಟನೆ...
Team Udayavani, Nov 7, 2022, 5:29 PM IST
ಜಮ್ಶೆಡ್ಪುರ: ದೆಹಲಿಗೆ ತೆರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳನ್ನು ಟಾಟಾನಗರ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ಪಡೆ ವಶಕ್ಕೆ ಪಡೆದಿದ್ದು, ಆಕೆಯ ಬಳಿಯಿದ್ದ ವಿಷಕಾರಿ ಹಾವುಗಳು, ಹಲ್ಲಿಗಳು ಮತ್ತು ವಿದೇಶಿ ತಳಿಗಳ ಕೀಟಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರ್ಪಿಎಫ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಭಾನುವಾರ ರಾತ್ರಿ ದೆಹಲಿಗೆ ತೆರಳುವ ನೀಲಾಂಚಲ್ ಎಕ್ಸ್ಪ್ರೆಸ್ನ ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಆರ್ಪಿಎಫ್ ಸಿಬಂದಿ ಶೋಧ ನಡೆಸಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ ಹಾವುಗಳು, ಹಲ್ಲಿಗಳು ಮತ್ತು ಕೀಟಗಳನ್ನು ವಶಪಡಿಸಿಕೊಂಡರು.
ವಿದೇಶಿ ತಳಿಯ 29 ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅವುಗಳಲ್ಲಿ ಮೂರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಲಾ 25 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಗೂಗಲ್ ಸರ್ಚ್ನಿಂದ ತಿಳಿದುಬಂದಿದೆ. ವಶಪಡಿಸಿಕೊಂಡ ಹಲ್ಲಿಗಳ ಬೆಲೆ 10,000 ರಿಂದ 20,000 ರೂ.ಆಗಿದೆ.
ಪುಣೆ ಮೂಲದ 52 ವರ್ಷದ ಮಹಿಳೆ ನಾಗಾಲ್ಯಾಂಡ್ನಿಂದ ಸರೀಸೃಪಗಳು, ಹಲ್ಲಿಗಳು ಮತ್ತು ಕೀಟಗಳನ್ನು ಸಂಗ್ರಹಿಸಿದ್ದಾಳೆ ಎಂದು ಹೇಳಿದ್ದು. ನಂತರ ಆಕೆ ದಿಮಾಪುರ್ಗೆ ಪ್ರಯಾಣ ಬೆಳೆಸಿ ಅಲ್ಲಿಂದ ದೆಹಲಿಗೆ ರೈಲು ಹಿಡಿಯಲು ಖರಗ್ಪುರ ಬಳಿಯ ಹಿಜ್ಲಿ ತಲುಪಿದಳು ಎಂದು ಆರ್ಪಿಎಫ್ ಅಧಿಕಾರಿ ತಿಳಿಸಿದ್ದಾರೆ.
ಹಾವುಗಳು ವಿಷಕಾರಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಉರಗ ತಜ್ಞರನ್ನು ಕರೆಸಲಾಗಿದ್ದು, ದೃಢೀಕರಣದ ಮೇರೆಗೆ ಅವೆಲ್ಲವನ್ನೂ ಹಲ್ಲಿಗಳೊಂದಿಗೆ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.