ಉದಯವಾಣಿ ಸುವರ್ಣೋತ್ತರ ಸಂಭ್ರಮ : ಪತ್ರಿಕಾ ರಂಗದ ದಿಗ್ಗಜರ ಸಂಸ್ಮರಣೆ

ಕರಾವಳಿಗರು ಕನಸುಗಾರರಷ್ಟೇ ಅಲ್ಲ...

Team Udayavani, Nov 8, 2022, 11:25 AM IST

ಉದಯವಾಣಿ ಸುವರ್ಣೋತ್ತರ ಸಂಭ್ರಮ : ಪತ್ರಿಕಾ ರಂಗದ ದಿಗ್ಗಜರ ಸಂಸ್ಮರಣೆ

ಉಡುಪಿ : ಕರಾವಳಿಯ ಜನರು ಕನಸುಗಾರರು. ಕಂಡ ಕನಸನ್ನು ನನಸು ಮಾಡಲು ಕಾರ್ಯನಿರತ ವಾಗುವ ಪ್ರಯತ್ನಶೀಲರು ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಹೇಳಿದ್ದಾರೆ.

ಉದಯವಾಣಿ ಸುವರ್ಣೋ ತ್ತರ ಸಂಭ್ರಮದಂಗವಾಗಿ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ರವೀಂದ್ರ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಣಿಪಾಲದಲ್ಲಿ ಅರಳಿ ವಿವಿಧೆಡೆ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ ಧೀಮಂತ ಹಿರಿಯ 6 ಮಂದಿ ಸಾಧಕರ ಜನ್ಮಶತ ಮಾನೋತ್ತರ ಸಂಸ್ಮರಣೆ ಕಾರ್ಯ ಕ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರಾವಳಿಗರು ಕನಸುಗಾರರಾದ ಕಾರಣವೇ ಬ್ಯಾಂಕ್‌, ಶಿಕ್ಷಣ, ವೈದ್ಯಕೀಯ, ಪತ್ರಿಕೋದ್ಯಮ ರಂಗ- ಹೀಗೆ ಎಲ್ಲವೂ ಈ ನೆಲದಲ್ಲಿ ಹುಟ್ಟಿ ಬೆಳೆದಿವೆ ಎಂದರು.

ಯುವ ಪೀಳಿಗೆಗೆ ಸ್ಫೂರ್ತಿ
52 ವರ್ಷಗಳ ಹಿಂದೆ “ಉದಯ ವಾಣಿ’, 50 ವರ್ಷಗಳ ಹಿಂದೆ “ತುಷಾರ’, 40 ವರ್ಷಗಳ ಹಿಂದೆ ತರಂಗ, “ತುಂತುರು’ ಆರಂಭವಾ ಗಿತ್ತು. 75 ವರ್ಷಗಳ ಹಿಂದೆ ಇದೇ ಮಣಿಪಾಲದಲ್ಲಿ ಈ ಆರು ಮಂದಿ ದಿಗ್ಗಜರು ಮುದ್ರಣದ ಜತೆಗೆ ಪತ್ರಿಕೆ ಆರಂಭಿಸಿದ್ದರು. ಸುದ್ದಿ ಸಂಗ್ರಹ, ಪ್ರಸಾರ, ವಿತರಣೆ ಎಲ್ಲವನ್ನು ಆ ಕಾಲದಲ್ಲಿ ಹೇಗೆ ಮಾಡುತ್ತಿದ್ದರು ಎಂಬುದನ್ನು ಈಗ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹ ಶ್ರೇಷ್ಠ ಸಾಧಕರನ್ನು ಗುರುತಿಸಿ, ಕುಟುಂಬ ವರ್ಗವನ್ನು ಗೌರವಿಸುವ ಮೂಲಕ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಕಾರ್ಯ ಕೈಗೊಂಡಂತಾಗಿದೆ ಎಂದರು.
ಬೊಮ್ಮಾಯಿ ಅವರನ್ನು ಎಂಜಿಎಂ ಕಾಲೇಜಿನ ವತಿಯಿಂದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌, ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಪೈ, ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಸಮ್ಮಾನಿಸಿದರು.

ಕರಾವಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಉದಯವಾಣಿ ಆಗ್ರಹ
ಕರಾವಳಿಯ ಕೈಗಾರಿಕೆ ಪ್ರದೇಶಗಳ ವಸ್ತು ಸ್ಥಿತಿಯ ಅವಲೋಕನ ಕುರಿತು “ಉದಯವಾಣಿ’ ಸರಣಿ ರೂಪದಲ್ಲಿ ಪ್ರಕಟಿಸಿದ ವರದಿಯ ಕಿರು ಪುಸ್ತಕವನ್ನು ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್‌ ಕುಮಾರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿ, ಈ ವರದಿಗಳನ್ನು ಗಮನಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.

ವಿಚಾರ ಸಂಕಿರಣ
ಬೆಳಗ್ಗೆ ಆರುಮಂದಿ ಪತ್ರಿಕಾ ರಂಗದ ದಿಗ್ಗಜರ ಕುರಿತ ವಿಚಾರ ಗೋಷ್ಠಿಯನ್ನು ಜಿಲ್ಲಾಧಿಕಾರಿ ಕೂರ್ಮಾರಾವ್‌ ಉದ್ಘಾಟಿಸಿ, ಹಿರಿಯ ಸಾಧಕರ ಸಾಧನೆಯನ್ನು ಸ್ಮರಿಸಿದರು. ಜಿ.ಪಂ. ಸಿಇಒ ಪ್ರಸನ್ನ ಎಚ್‌. ಹಾಜರಿದ್ದರು. ಗಣಕ ಲಿಪಿ ತಜ್ಞ ಪ್ರೊ| ಕೆ.ಪಿ. ರಾವ್‌ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಗೋಷ್ಠಿಯಲ್ಲಿ ಎಸ್‌.ಯು. ಪಣಿಯಾಡಿಯವರ ಬಗ್ಗೆ ಸಾಹಿತಿ ಪ್ರೊ| ಮುರಳೀಧರ ಉಪಾಧ್ಯ, ಪಾವೆಂ ಆಚಾರ್ಯರ ಕುರಿತು ಪಾ.ವೆಂ. ಆಚಾರ್ಯ ಟ್ರಸ್ಟ್ ನಿರ್ವಾಹಕ ವಿಶ್ವಸ್ತೆ ಬೆಂಗಳೂರಿನ ಛಾಯಾ ಉಪಾಧ್ಯ, ಕಮಲ್‌ ಹೈದರ್‌ ಬಗ್ಗೆ ಪ್ರೊ| ಕೆ.ಪಿ. ರಾವ್‌, ಬನ್ನಂಜೆ ರಾಮಾಚಾರ್ಯರ ಬಗ್ಗೆ ಲೇಖಕ ಡಾ| ಶ್ರೀಕಾಂತ್‌ ರಾವ್‌ ಸಿದ್ದಾಪುರ, ಬೈಕಾಡಿ ಕೃಷ್ಣಯ್ಯ ಅವರ ಬಗ್ಗೆ ಸಾಹಿತಿ ಬೆಳಗೋಡು ರಮೇಶ್‌ ಭಟ್‌, ಎಂ.ವಿ. ಹೆಗ್ಡೆಯವರ ಬಗ್ಗೆ ಸಂಶೋಧಕ ಡಾ| ಅನಿಲ್‌ ಕುಮಾರ್‌ ಶೆಟ್ಟಿ ವಿಚಾರ ಮಂಡಿಸಿದರು.

ಸಾಧಕರ ಕುಟುಂಬ ವರ್ಗಕ್ಕೆ ಗೌರವ
ಪತ್ರಿಕ ರಂಗದ ಸಾಧಕರಾದ ಎಂ.ವಿ. ಹೆಗ್ಡೆ ಅವರ ಪರವಾಗಿ ಅವರ ಪುತ್ರ ಡಾ| ಸನತ್‌ ಹೆಗ್ಡೆ, ಬನ್ನಂಜೆ ರಾಮಾಚಾರ್ಯರ ಪುತ್ರ ಸರ್ವಜ್ಞ ಬನ್ನಂಜೆ, ಕಮಲ್‌ ಹೈದರ್‌ ಅವರ ಬಂಧು ಇಕ್ಬಾಲ್‌ ಅಹಮ್ಮದ್‌ ಬೆಂಗಳೂರು, ಬೈಕಾಡಿ ಕೃಷ್ಣಯ್ಯ ಅವರ ಪುತ್ರ ಬಿ. ನರಹರಿ, ಎಸ್‌.ಯು. ಪಣಿಯಾಡಿಯವರ ಪರವಾಗಿ ಗಣಕ ಲಿಪಿ ತಜ್ಞ ಪ್ರೊ| ಕೆ.ಪಿ. ರಾವ್‌, ಪಾವೆಂ ಆಚಾರ್ಯರ ಮೊಮ್ಮಗಳಾದ ಛಾಯಾ ಉಪಾಧ್ಯ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಮ್ಮಾನಿಸಿದರು.

ಟಾಪ್ ನ್ಯೂಸ್

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

Bramavara: ಫ್ಯಾಕ್ಟರಿಯಿಂದ ಕಳವು; ಪ್ರಕರಣ ದಾಖಲು

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.