12 ಲಕ್ಷ ರೂ. ಚಿನ್ನವನ್ನು ವಾರಸುದಾರರಿಗೆ ಒಪ್ಪಿಸಿದ ರಿಕ್ಷಾ ಚಾಲಕ
Team Udayavani, Nov 8, 2022, 11:49 AM IST
ಬಸ್ರೂರು : ಬಳ್ಕೂರು ಕಾರೇಕುದ್ರುವಿನ ರಿಕ್ಷಾ ಚಾಲಕ ಬಳ್ಕೂರಿನ ಪ್ರಕಾಶ್ ನಾಯಕ್ ಅವರು ಮಹಿಳೆಯೊಬ್ಬರು ತನ್ನ ರಿಕ್ಷಾದಲ್ಲಿ ಬಿಟ್ಟುಹೋಗಿದ್ದ ಸುಮಾರು 12 ಲಕ್ಷ ರೂ. ಬೆಲೆ
ಬಾಳುವ ಚಿನ್ನಾಭರಣವನ್ನು ಅವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಲಲಿತಾ ಕೆ. ಅವರು ಸೋಮವಾರ ಕುಂದಾಪುರ ಪೇಟೆಯಿಂದ ತನ್ನ ಮನೆಯಿರುವ ಒಂಭತ್ತು ದಂಡಿಗೆಗೆ ರಿಕ್ಷಾದಲ್ಲಿ ತೆರಳಿದ್ದರು. ಮರಳಿ ಬಂದ ಚಾಲಕ ರಿಕ್ಷಾಕ್ಕೆ ಗ್ಯಾಸ್ ಹಾಕಲು ಹೋದಾಗ ಸೀಟಿನ ಕೆಳಗೆ ಚಿನ್ನಾಭರಣ ಬಿದ್ದಿರುವುದನ್ನು ನೋಡಿದ್ದು, ತತ್ಕ್ಷಣ ಕುಂದಾಪುರ ಪೊಲೀಸ್ ಠಾಣೆಗೆ ಅದನ್ನು ಒಪ್ಪಿಸಿದರು.
ಇತ್ತ ಮನೆ ತಲುಪಿದ ಲಲಿತಾ ಅವರಿಗೆ ಚಿನ್ನ ಕಳೆದುಹೋಗಿರುವ ವಿಚಾರ ಗಮನಕ್ಕೆ ಬಂದಿದ್ದು, ದೂರು ಸಲ್ಲಿಸಲೆಂದು ಸಹೋದರ ನೊಂದಿಗೆ ಪೊಲೀಸ್ ಠಾಣೆಗೆ ಬಂದರು. ಪೊಲೀಸ್ ಉಪನಿರೀಕ್ಷಕ ಸದಾಶಿವ ಗವರೋಜಿ ಅವರು ರಿಕ್ಷಾ ಚಾಲಕನನ್ನು ಬರಮಾಡಿ ಅವರ ಉಪಸ್ಥಿತಿಯಲ್ಲಿ ಚಿನ್ನಾಭರಣವನ್ನು ಮಹಿಳೆಗೆ ಒಪ್ಪಿಸಿದರು. ಪ್ರಕಾಶ್ ಅವರ ಪ್ರಾಮಾಣಿಕತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ : ಉದಯವಾಣಿ ಸುವರ್ಣೋತ್ತರ ಸಂಭ್ರಮ : ಪತ್ರಿಕಾ ರಂಗದ ದಿಗ್ಗಜರ ಸಂಸ್ಮರಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ: ಸೆ.9ರಂದು ಪ್ರಥಮ ವರ್ಷದ ಲೋಬಾನ ಸೇವೆ ಹುಲಿವೇಷ ಕುಣಿತ
Ganesh Chaturthi; ಆನೆಗುಡ್ಡೆ: ಸಂಭ್ರಮದ ಶ್ರೀ ವಿನಾಯಕ ಚತುರ್ಥಿ; ಹರಿದು ಬಂದ ಭಕ್ತ ಸಮೂಹ
Kaup ವಿದೂಷಕರ ವೇಷ ಧರಿಸಿ ಸಂಗ್ರಹಿಸಿದ 14.33 ಲ.ರೂ. ಅನಾಥಾಶ್ರಮಕ್ಕೆ !
Ganesh Chaturthi ; ಕರಾವಳಿಯ ಮನೆಮನೆಗಳಲ್ಲಿ ಇಂದು ಗಣೇಶೋತ್ಸವ ಸಂಭ್ರಮ
Udupi ಗೀತಾರ್ಥ ಚಿಂತನೆ-29; ಭಗವದವತಾರದ ಉದ್ದೇಶವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.