ನಾಲ್ಕು ವರ್ಷ; ದಾವೂದ್‌ನಿಂದ ಬಂದಿದ್ದು 13 ಕೋಟಿ ರೂ.! ಭೂಗತ ಪಾತಕಿ ವಿರುದ್ಧ ಎನ್‌ಐಎ ಆರೋಪ

ವಾಟ್ಸ್‌ಆ್ಯಪ್‌ ಮೂಲಕ ಮುದ್ರಿತ ಧ್ವನಿ ವರ್ಗಾವಣೆ

Team Udayavani, Nov 9, 2022, 7:35 AM IST

ನಾಲ್ಕು ವರ್ಷ; ದಾವೂದ್‌ನಿಂದ ಬಂದಿದ್ದು 13 ಕೋಟಿ ರೂ.! ಭೂಗತ ಪಾತಕಿ ವಿರುದ್ಧ ಎನ್‌ಐಎ ಆರೋಪ

ಮುಂಬೈ: ಪಾಕಿಸ್ತಾನದಲ್ಲಿರುವ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ದೇಶಕ್ಕೆ 4 ವರ್ಷಗಳ ಅವಧಿಯಲ್ಲಿ ಅಪರಾಧ ಕೃತ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ 12ರಿಂದ 13 ಕೋಟಿ ರೂ.ಗಳ ವರೆಗೆ ವಿತ್ತೀಯ ನೆರವು ನೀಡಿದ್ದಾನೆ. ಅದಕ್ಕಾಗಿ ಆತ ಹವಾಲಾ ಜಾಲವನ್ನು ಬಳಸಿಕೊಂಡಿದ್ದಾನೆ ಎಂದು ದಾವೂದ್‌, ಸಹಚರರ ವಿರುದ್ಧ ಎನ್‌ಐಎ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಹಣ ವರ್ಗಾವಣೆಗೆ ದಾವೂದ್‌ ಛೋಟಾ ಶಕೀಲ್‌ನ ಬೆಂಬಲವನ್ನೂ ಪಡೆದುಕೊಂಡಿದ್ದ ಎಂದು ಸೂರತ್‌ ಮೂಲದ ಹವಾಲಾ ಡೀಲರ್‌ ಎನ್‌ಐಎಗೆ ತಿಳಿಸಿದ್ದಾನೆ.

ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಛೋಟಾ ಶಕೀಲ್‌ ವಿರುದ್ಧ ಒಟ್ಟು 107 ಆರೋಪಗಳನ್ನು ಮಾಡಿದೆ. ದಾವೂದ್‌ ವಿರುದ್ಧ 1993ರ ಮುಂಬೈ ಸ್ಫೋಟದ ಪ್ರಧಾನ ರೂವಾರಿಯ ಆರೋಪ ಮಾತ್ರವಲ್ಲದೆ, ಸುಲಿಗೆ ಆರೋಪಗಳನ್ನೂ ಮಾಡಿದೆ.

ಆರೋಪಪಟ್ಟಿಯಲ್ಲಿ ದಾವೂದ್‌, ಛೋಟಾ ಶಕೀಲ್‌, ಆತನ ಭಾವ ಮೊಹಮ್ಮದ್‌ ಸಲೀಂ ಖುರೇಷಿ ಹೆಸರುಗಳೂ ಇವೆ. ಸದ್ಯ ಬಂಧಿತನಾಗಿರುವ ಆರಿಫ್ ಶೇಖ್‌ ಧ್ವನಿಯನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿ ಅದನ್ನು ಶಬೀರ್‌ ವಾಟ್ಸ್‌ಆ್ಯಪ್‌ಗೆ ಕಳುಹಿಸುತ್ತಿದ್ದ. ಈ ಮೂಲಕ ಸುರಕ್ಷಿತವಾಗಿ ಮಾಹಿತಿ ವರ್ಗಾವಣೆ ಮಾಡುತ್ತಿದ್ದರು. ಈ ಮೂಲಕ ದಾವೂದ್‌ಗೆ ಸಂದೇಶ ಸಿಗುವಂತೆ ಮಾಡುತ್ತಿದ್ದರು. ಅವರ ಮೊಬೈಲ್‌ ಅನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ ಈ ಅಂಶ ದೃಢಪಟ್ಟಿದೆ.

ಹಲವು ಕೃತ್ಯಗಳು:
ಪಾಕಿಸ್ತಾನದಿಂದ 25 ಲಕ್ಷ ರೂ.ಗಳನ್ನು ದೇಶದಲ್ಲಿ ಉಗ್ರ ಚಟುವಟಿಕೆಗಳಿಗಾಗಿ ಕಳುಹಿಸಲಾಗಿತ್ತು. ಈ ಪೈಕಿ 5 ಲಕ್ಷ ರೂ.ಗಳನ್ನು ಶಬ್ಬೀರ್‌ ಶೇಖ್‌ ಇರಿಸಿಕೊಂಡಿದ್ದ. ಉಳಿದ ಮೊತ್ತವನ್ನು ಆರಿಫ್ ಶೇಖ್‌ಗೆ ಅಪರಾಧ ಕೃತ್ಯಗಳಿಗೆಂದು ನೀಡಿದ್ದ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಹೇಳಿದೆ. ಉಗ್ರ ಕೃತ್ಯಗಳಿಗೆ ಸಂಬಂಧಿಸಿದಂತೆ ಸಲೀಂ ಫ್ರುಟ್‌, ಆರಿಫ್ ಶೇಖ್‌ ಮತ್ತು ಶಬ್ಬೀರ್‌ ಶೇಖ್‌ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ.

ದೇಶದ ಹೊರಭಾಗಕ್ಕೆ ಕೂಡ ಛೋಟಾ ಶಕೀಲ್‌ಗೆ ಸಂದಾಯವಾಗುವಂತೆ 16 ಕೋಟಿ ರೂ. ಪಾವತಿ ಮಾಡಲಾಗಿದೆ. ಅದನ್ನು ಆರಿಫ್ ಮತ್ತು ಶಬ್ಬೀರ್‌ ಎಂಬುವರು ನಡೆಸಿದ್ದಾರೆ ಎಂದು ಎನ್‌ಐಎ ಹೇಳಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.