![1-raju](https://www.udayavani.com/wp-content/uploads/2024/07/1-raju-415x235.jpg)
ಪ್ರಧಾನಿ ಮೋದಿ ಈಗ ಚಲಾವಣೆಯಿಲ್ಲದ ನಾಣ್ಯ: ಕಾಂಗ್ರೆಸ್
Team Udayavani, Nov 12, 2022, 9:00 AM IST
![ಪ್ರಧಾನಿ ಮೋದಿ ಈಗ ಚಲಾವಣೆಯಿಲ್ಲದ ನಾಣ್ಯ: ಕಾಂಗ್ರೆಸ್](https://www.udayavani.com/wp-content/uploads/2022/11/Congress-5-620x348.jpg)
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಈಗ ಚಲಾವಣೆ ಇಲ್ಲದ ನಾಣ್ಯ ಎಂದು ಕಾಂಗ್ರೆಸ್ ಟ್ವಿಟರ್ನಲ್ಲಿ ಗೇಲಿ ಮಾಡಿದೆ. ಜನ ಮಳೆ ಬಂದರೆ ನಿಲ್ಲಬಲ್ಲರು, ಪ್ರಧಾನಿಯ ಸುಳ್ಳಿನ ಸುರಿಮಳೆಗೆ “ನಿಲ್ಲರು ಎಂದು ಲೇವಡಿ ಮಾಡಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಕಾಂಗ್ರೆಸ್, ಮೋದಿ ಈಗ ಚಲಾವಣೆ ಇಲ್ಲದ ನಾಣ್ಯ’ ಹಾಗಾಗಿ ಖಾಲಿ ಕುರ್ಚಿಗಳಿಗೆ ಭಯ ಬಿದ್ದ ಬಿಜೆಪಿ ಹಣದ ಆಮಿಷ ಒಡ್ಡಿ ಜನರನ್ನು ಕರೆತಂದಿದೆ. ವಂಚಕ ಬಿಜೆಪಿ ಕಾರ್ಮಿಕರಿಗೆ ಹಣ ನೀಡುವುದರಲ್ಲೂ ವಂಚಿಸಿದೆ ಎಂದು ಕುಟುಕಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರದ ಕಮಿಷನ್ 100 ಪರ್ಸೆಂಟ್ಗೆ ಏರಿಕೆಯಾಗಿದೆಯೇ ಎಂದು ಪ್ರಶ್ನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ 500 ರೂ. ನೀಡುವ ಭರವಸೆ ಕೊಟ್ಟು ಕರೆತಂದವರಿಗೆ 200 ರೂ. ಕೊಟ್ಟು ವಂಚಿಸಿದ್ದ ಬಿಜೆಪಿ ಈಗ ಮತ್ತೂಮ್ಮೆ ಒಂದು ರೂಪಾಯಿಯನ್ನೂ ಕೊಡದೆ ವಂಚಿಸಿದೆ ಎಂದು ವ್ಯಂಗ್ಯ ಮಾಡಿದೆ.
ಹಣ ಸಿಗದೆ ಕಾರ್ಮಿಕರು ಬಿಜೆಪಿ ವಿರುದ್ಧ ಪೊಲೀಸ್ ದೂರು ನೀಡುವಂತಾಗಿದ್ದು ಬಿಜೆಪಿ ವಂಚನೆಗೆ ಹಿಡಿದ ಕನ್ನಡಿ. ಕಮಿಷನ್ ಲೂಟಿ ಈಗ 100 ಪರ್ಸೆಂಟ್ಗೆೆ ಏರಿಕೆಯಾಗಿದೆಯೇ ಬಿಜೆಪಿ ಫಾರ್ ಕರ್ನಾಟಕ ಎಂದು ವಾಗ್ಧಾಳಿ ನಡೆಸಿದೆ.
ಕರ್ನಾಟಕ್ಕೆ ಭಾಷಣ ಮಾಡಲಷ್ಟೇ ಬರುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರಿಗೆ ಹೇವರಿಕೆ ಹುಟ್ಟಿದೆ. ಭ್ರಷ್ಟ ಟ್ರಬಲ್ ಎಂಜಿನ್ ಸರ್ಕಾರದ ಮೇಲೆ ಜಿಗುಪ್ಸೆ ಹುಟ್ಟಿದೆ. ಸುಳ್ಳುಗಳನ್ನೇ ಜೀವಳವಾಗಿಸಿಕೊಂಡ ಬಿಜೆಪಿ ಫಾರ್ ಕರ್ನಾಟಕಕ್ಕೆ ಕೋಪ ಹುಟ್ಟಿದೆ.ಅದಕ್ಕೆ ಸಾಕ್ಷಿ ಇಲ್ಲಿದೆ ಎಂದು ಟೀಕಾಪ್ರಹಾರ ನಡೆಸಿದೆ.
ಟಾಪ್ ನ್ಯೂಸ್
![1-raju](https://www.udayavani.com/wp-content/uploads/2024/07/1-raju-415x235.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-raju](https://www.udayavani.com/wp-content/uploads/2024/07/1-raju-150x85.jpg)
Vijayapura: ವೀರಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ತವರಿಗೆ ಆಗಮನ
![Pen Drive Case 4 ತಿಂಗಳಿಗೊಮ್ಮೆ ಎಚ್ಐವಿ ಟೆಸ್ಟ್ ಮಾಡಿಸುತ್ತಿದ್ದ ಪ್ರಜ್ವಲ್?](https://www.udayavani.com/wp-content/uploads/2024/07/HIV-150x90.jpg)
Pen Drive Case 4 ತಿಂಗಳಿಗೊಮ್ಮೆ ಎಚ್ಐವಿ ಟೆಸ್ಟ್ ಮಾಡಿಸುತ್ತಿದ್ದ ಪ್ರಜ್ವಲ್?
![Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್](https://www.udayavani.com/wp-content/uploads/2024/07/dinesh-gundu-rao-150x87.jpg)
Private Hospital ಡೆಂಗ್ಯೂ ಪರೀಕ್ಷೆಗೆ ಶುಲ್ಕ ನಿಗದಿ: ಸಚಿವ ದಿನೇಶ್
![Udayavani exclusive interview of KN Rajanna](https://www.udayavani.com/wp-content/uploads/2024/07/N-Rajanna-150x83.jpg)
ಡಿಕೆಶಿ ಕಾಂಗ್ರೆಸ್ಗೆ ಕಾಲಿಡುವ ಮೊದಲೇ ನೋಟಿಸ್, ಉಚ್ಚಾಟನೆ ಎಲ್ಲಾ ನೋಡಿದ್ದೀನಿ…; ರಾಜಣ್ಣ
![CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ](https://www.udayavani.com/wp-content/uploads/2024/07/SIDDA-150x84.jpg)
CM Siddaramaiah ರೈತರಿಗೆ ನಿತ್ಯ 5 ಕೋಟಿ ರೂ. ಪ್ರೋತ್ಸಾಹ ಧನ
MUST WATCH
ಹೊಸ ಸೇರ್ಪಡೆ
![1-raju](https://www.udayavani.com/wp-content/uploads/2024/07/1-raju-150x85.jpg)
Vijayapura: ವೀರಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ತವರಿಗೆ ಆಗಮನ
![1-PTI](https://www.udayavani.com/wp-content/uploads/2024/07/1-PTI-150x91.jpg)
Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್
![1-asddasdsa](https://www.udayavani.com/wp-content/uploads/2024/07/1-asddasdsa-1-150x100.jpg)
Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ
![Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000](https://www.udayavani.com/wp-content/uploads/2024/07/Bombay-150x89.jpg)
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಜಿಗಿತ…@80,000
![Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್ ಲಾಂಚ್](https://www.udayavani.com/wp-content/uploads/2024/07/9-2-150x90.jpg)
Shiva Rajkumar: ನಾಳೆ ಶಿವಣ್ಣ ಹೊಸ ಚಿತ್ರದ ಟೈಟಲ್ ಲಾಂಚ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.