ಮಂಗಳೂರಲ್ಲೂ ಆರಂಭವಾಯ್ತು ಆಹಾರ ಸುರಕ್ಷೆ ಗುಣಮಟ್ಟ ಪ್ರಾಧಿಕಾರ

ಹೆಚ್ಚುತ್ತಿರುವ ಆಹಾರ ಆಮದು

Team Udayavani, Nov 18, 2022, 12:35 PM IST

9

ಮಂಗಳೂರು: ವಾಣಿಜ್ಯೋದ್ಯಮದಲ್ಲಿ ರಾಜ್ಯದ ಪ್ರಮುಖ ನಗರವಾಗಿ ಹೊರ ಹೊಮ್ಮುತ್ತಿರುವ ಮಂಗಳೂರಿನಲ್ಲಿ ಈಗ ಆಹಾರವಸ್ತುಗಳ ಆಮದು ಹೆಚ್ಚುತ್ತಿದ್ದು, ಆ ಹಿನ್ನೆಲೆಯಲ್ಲಿ ಮಂಗಳೂರು ಬಂದರಿಗೆ ಆಗಮಿಸುವ ಆಹಾರವಸ್ತುಗಳ ಗುಣಮಟ್ಟ ಪರಿಶೀಲನೆಗಾಗಿ ಎಫ್‌ ಎಸ್‌ಎಸ್‌ಎಐ (ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ) ಕಾರ್ಯಾಚರಣೆ ಪ್ರಾರಂಭಿಸಿದೆ.

ರಾಜ್ಯದಲ್ಲಿ ಈ ಪ್ರಾಧಿಕಾರದ ಕಚೇರಿ ಇದುವರೆಗೆ ಬೆಂಗಳೂರಿನಲ್ಲಿ ಮಾತ್ರವೇ ಇತ್ತು. ನವ ಮಂಗಳೂರು ಬಂದರು ನಿರಂತರ ಬೆಳವಣಿಗೆ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಪಣಂಬೂರಿನಲ್ಲೇ ಎಫ್‌ಎಸ್‌ಎಸ್‌ಎಐ ಕಚೇರಿಯನ್ನು ತಿಂಗಳ ಹಿಂದೆಯಷ್ಟೇ ಆರಂಭಿಸಿದೆ. ಹೊರದೇಶಗಳಿಂದ ಆಮದಾಗುವ ಆಹಾರವಸ್ತುಗಳ ಪರಿವೀಕ್ಷಣೆ ನಡೆಸಿ ಅದರ ಗುಣಮಟ್ಟವನ್ನು ದೃಢಪಡಿಸುವುದು ಮುಖ್ಯ ಉದ್ದೇಶ.

ಪ್ರಕ್ರಿಯೆ ಹೇಗೆ? ಮಂಗಳೂರು ಬಂದರಿನಲ್ಲಿ ಸದ್ಯ ಆಮದಾಗುವ ಆಹಾರವಸ್ತುಗಳಲ್ಲಿ ಒಣಹಣ್ಣುಗಳೇ ಪ್ರಮುಖ. ಗೇರು ಬೀಜದ್ದು ಸಿಂಹಪಾಲು. ಹಡಗುಗಳಲ್ಲಿ ಆಗಮಿಸುವ ಆಹಾರವಸ್ತುವಿನ ಎರಡು ಮಾದರಿಗಳನ್ನು ಪಡೆಯಲಾಗುತ್ತದೆ. ಒಂದನ್ನು ಕಚೇರಿಯಲ್ಲಿ ಇರಿಸಿಕೊಂಡು ಇನ್ನೊಂದನ್ನು ಎನ್‌ ಎಬಿಎಲ್‌ ಪ್ರಮಾಣಿಕೃತ ಪ್ರಯೋ ಗಾಲಯಗಳಿಗೆ ಕಳುಹಿಸಲಾಗುತ್ತದೆ. ಸಾಮಾನ್ಯವಾಗಿ 2 ದಿನಗಳಲ್ಲಿ ಇದರ ಫಲಿತಾಂಶ ಬರುತ್ತದೆ. ಎಲ್ಲವೂ ಸರಿಯಿದ್ದರೆ ಬಂದರಿನಿಂದ ಆಹಾರವಸ್ತುವನ್ನು ಅದರ ಆಮದುದಾರರು ಹೊರಗೆ ಕೊಂಡೊಯ್ಯಬಹುದು.

ಕೆಲವೊಮ್ಮೆ ಸರ್ಟಿಫಿಕೆಟ್‌ ಆಫ್‌ ಒರಿಜಿನ್‌, ಬಿಲ್‌ ಆಫ್‌ ಎಂಟ್ರಿ ಇತ್ಯಾದಿಗಳಲ್ಲಿ ತಾಳೆಯಾಗದಿದ್ದರೆ ಸರಿಯಾಗುವವರೆಗೆ ಸರಕನ್ನು ತಡೆಹಿಡಿಯಬಹುದು. ಗೋಡಂಬಿ, ಖಾದ್ಯ ತೈಲಗಳಿಗೆ ಪ್ರಾವಿಶನಲ್‌ ಎನ್‌ ಒಸಿ ನೀಡುವ ಅವಕಾಶವೂ ಇದೆ ಎನ್ನುತ್ತಾರೆ ಅಧಿಕಾರಿಗಳು.

ಕಳಪೆ ಆಹಾರಕ್ಕಿಲ್ಲ ಪ್ರವೇಶ

ಕಳಪೆ ಆಹಾರವಸ್ತುಗಳು, ಅವಧಿ ಮೀರಿದ ಆಹಾರ ಇತ್ಯಾದಿಗಳನ್ನು ಲ್ಯಾಬ್‌ನಲ್ಲಿ ಪರಿಶೀಲಿಸಿ ತಡೆಹಿಡಿಯಲಾಗುತ್ತದೆ. ಈ ಬಗ್ಗೆ ಎರಡನೇ ಬಾರಿ ಪರೀಕ್ಷೆ ನಡೆಸಲು ಆಮದುದಾರರು ಕೇಳುವುದಕ್ಕೆ ಅವಕಾಶವಿದೆ. ಈ ಪ್ರಕ್ರಿಯೆ ಮೂಲಕ ದೇಶದೊಳಕ್ಕೆ ಕಳಪೆ ಗುಣಮಟ್ಟದ ಆಹಾರ ವಸ್ತು ಬರದಂತೆ ತಡೆಯಲಾಗುತ್ತದೆ.

ಆಹಾರ ಸಚಿವಾಲಯದ ಅಧೀನ ದಲ್ಲಿರುವ ಎಫ್‌ಎಸ್‌ಎಸ್‌ಎಐ 2008ರಲ್ಲಿ ದೇಶದಲ್ಲಿ ಕಾರ್ಯಾರಂಭಿ ಸಿತ್ತು. ವಾರ್ಷಿಕ 12 ಲಕ್ಷ ರೂ. ನಿಂದ 20 ಕೋಟಿ ರೂ. ವರೆಗಿನ ವಹಿವಾಟು ನಡೆಸುವ ಆಹಾರ ಪದಾರ್ಥ ಉದ್ಯಮಗಳಿಗೆ ರಾಜ್ಯದ ಲೈಸನ್ಸ್‌ ನೀಡಿದರೆ 20 ಕೋಟಿ ರೂ. ಮೇಲ್ಪಟ್ಟ ವಹಿವಾಟು ನಡೆಸುವವರು ಕೇಂದ್ರದ ಲೈಸನ್ಸ್‌ ಪಡೆದುಕೊಳ್ಳಬೇಕು. 12 ಲಕ್ಷ ರೂ.ಗಿಂತ ಕಡಿಮೆ ವಹಿವಾಟಿನ ಉದ್ದಿಮೆ ನೋಂದಣಿ ಮಾಡಿಕೊಂಡರೆ ಸಾಕು. ಮಂಗಳೂರಿನಲ್ಲಿ ಪ್ರಸ್ತುತ ಲೈಸನ್ಸ್‌ ಪಡೆಯುವ ಸೌಲಭ್ಯ ಇನ್ನೂ ಆರಂಭವಾಗಿಲ್ಲ, ಸದ್ಯ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಈ ಅನುಕೂಲ ಇದೆ.

ಎಫ್‌ಎಸ್‌ಎಸ್‌ಎಐ ದಕ್ಷಿಣ ಭಾರತದಾದ್ಯಂತ ವಿಸ್ತರಣೆಯಾಗುತ್ತಿದೆ, ಕಳೆದ ವರ್ಷ ಬೆಂಗಳೂರಿನಲ್ಲಿ, ಈ ವರ್ಷ ಮಂಗಳೂರಿನಲ್ಲಿ ಕಚೇರಿ ಪ್ರಾರಂಭಗೊಂಡಿದೆ. ಮಂಗಳೂರು ಬಂದರಿನ ಪ್ರಾಮುಖ್ಯತೆಯನ್ನು ಅರಿತು ಇಲ್ಲಿ ಕಚೇರಿ ಪ್ರಾರಂಭಿಸಲಾಗಿದೆ. – ಕುಮರೇಸನ್‌ ಚಂದ್ರಶೇಖರ್‌, ಅಧಿಕೃತ ಅಧಿಕಾರಿ, ಎಫ್‌ಎಸ್‌ಎಸ್‌ಎಐ

ಟಾಪ್ ನ್ಯೂಸ್

Hubli: President of Ramakrishna Ashram Swami Raghuveerananda Maharaj is no more

Hubli: ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜರು ಇನ್ನಿಲ್ಲ

Delhi; ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ

Delhi; ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Oscars 2025: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Oscars: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

chaitra j achar joins Marnami movie team

Chaithra J Achar: ಮಾರ್ನಮಿ ತಂಡ ಸೇರಿದ ಚೈತ್ರಾ

Will discuss about Rayanna Chennamma Brigade: K.S.Eshwarappa

Shimoga; ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಬಗ್ಗೆ ಶೀಘ್ರ ತೀರ್ಮಾನ: ಕೆ.ಎಸ್.ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

Hospital

Mangaluru: ಮದ್ಯಸೇವಿಸಿ ತೂರಾಡುತ್ತಾ ಐಸಿಯುಗೆ ಬಂದ ಪಿಜಿ ವೈದ್ಯ!

BK-hariprasad

Arkavathi: 25 ವರ್ಷಗಳ ಅಕ್ರಮ ಸುಪ್ರೀಂ ನ್ಯಾಯಮೂರ್ತಿಯವರಿಂದ ತನಿಖೆಯಾಗಲಿ: ಹರಿಪ್ರಸಾದ್‌

ganja

Bajpe; ಗಾಂಜಾ ಸೇವನೆ; ಮೂವರು ವಶಕ್ಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

Mangaluru: ಸಿಸಿ ಕೆಮರಾದ ಇಂಟರ್‌ನೆಟ್‌ಗೆ ರೀಚಾರ್ಜ್‌ ಮಾಡದ ಪಾಲಿಕೆ!

Hubli: President of Ramakrishna Ashram Swami Raghuveerananda Maharaj is no more

Hubli: ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜರು ಇನ್ನಿಲ್ಲ

ಪ್ಯಾಸೆಂಜರ್‌ ರೈಲು ಓಡಾಟ ಎಂದು? ರೈಲ್ವೆ ಹೋರಾಟಗಾರರಿಗೆ ಬೇಸರ…

Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

Multi-level ಕಾರ್‌ ಪಾರ್ಕಿಂಗ್‌ ಮತ್ತೆ ಸಾಕಾರದ ಆಶಾಭಾವ!

Delhi; ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ

Delhi; ಕೇಜ್ರಿವಾಲ್‌ ಗಾಗಿ ಖಾಲಿ ಕುರ್ಚಿ ಇರಿಸಿ ನಿಷ್ಠೆ ತೋರಿಸಿದ ದೆಹಲಿ ಸಿಎಂ ಆತಿಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.