![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Nov 21, 2022, 7:15 AM IST
ಹೊಸದಿಲ್ಲಿ : “ಕಿರಿಯ ವಕೀಲರು ಗುಲಾಮರಲ್ಲ. ಉತ್ತಮ ರೀತಿಯಲ್ಲಿ ಜೀವನ ಮಾಡುವಂತಾಗಲು ಅವರಿಗೆ ಉತ್ತಮ ಸಂಬಳ ಕೊಡಬೇಕು’ ಹೀಗೆಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಪ್ರತಿಪಾದಿಸಿದ್ದಾರೆ.
ವಕೀಲ ವೃತ್ತಿ ಎನ್ನುವುದು ಕೇವಲ ಹಿರಿಯದ್ದು ಎಂಬ ಭಾವನೆ ಬರುವಂತೆ ಆಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. “ಬೆಂಗಳೂರು, ಕೋಲ್ಕತಾ, ಹೊಸದಿಲ್ಲಿ , ಮುಂಬಯಿಗಳಲ್ಲಿ ಯುವ ವಕೀಲರು ವಾಸಿಸುತ್ತಿದ್ದರೆ, ಅಲ್ಲಿನ ಖರ್ಚುಗಳೆಷ್ಟು? ಅವರು ಊಟೋಪಚಾರ, ಬಾಡಿಗೆ, ಪ್ರಯಾಣಕ್ಕೆ ತಗಲುವ ವೆಚ್ಚ ಹೆಚ್ಚಾಗಿಯೇ ಇದೆ. ಕೆಲವು ಯುವ ವಕೀಲರಿಗೆ ಸೂಕ್ತ ರೀತಿಯಲ್ಲಿ ಸಂಭಾವನೆಯನ್ನೇ ಕೊಡಲಾಗುತ್ತಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಅವರು ಅಭಿಪ್ರಾಯಪಟ್ಟರು.
ದೀರ್ಘ ಕಾಲದಿಂದ ಯುವ ವಕೀಲರನ್ನು ಗುಲಾಮರಂತೆ ಕಾಣಲಾಗುತ್ತಿದೆ. ನಮ್ಮ ಮನೋಭಾವ ಆ ರೀತಿಯೇ ಬೆಳೆದು ಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರತಿಪಾದಿಸಿದರು. ನಾವು ಹೀಗೆದ್ದೆವು ಎನ್ನುವಂತಿಲ್ಲ: ನಾವು ನಮ್ಮ ಹಿರಿಯ ವಕೀಲರಿಂದ ಕಷ್ಟಪಟ್ಟು ವಕೀಲಿಕೆಯ ಪಟ್ಟುಗಳನ್ನು ಕಲಿತಿದ್ದೆವು. ಅದನ್ನೇ ನಮ್ಮ ಕಿರಿಯ ವಕೀಲರೂ ಅನುಭವಿಸಬೇಕು ಎಂದು ಈಗ ಹಿರಿಯರಾಗಿರುವವರು ಹೇಳುವುದು ಸೂಕ್ತ ಅಲ್ಲ. ಅದಕ್ಕಾಗಿ ಕಿರಿಯ ವಕೀಲರಿಗೆ ಕಡಿಮೆ ಸಂಬಳ ನೀಡಲಾಗುತ್ತದೆ ಎಂಬ ವಾದ ಒಪ್ಪಲು ಸಾಧ್ಯವಿಲ್ಲ ಎಂದು ಸಿಜೆಐ ಪ್ರತಿಪಾದಿಸಿದರು.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.