ಭಾರತೀಯ ಸಿನಿಮಾದಲ್ಲಿ ಪ್ರಾದೇಶಿಕ ಸಿನಿಮಾಗಳ ಪ್ರಾಬಲ್ಯ

ಇಫಿ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರಿಂದ ವ್ಯಕ್ತವಾದ ಅಭಿಪ್ರಾಯ

Team Udayavani, Nov 21, 2022, 8:17 PM IST

1-qwewq-ewqe

ಪಣಜಿ: ‘ದಿನೇದಿನೆ ಪ್ರಾದೇಶಿಕ ಸಿನಿಮಾಗಳ (ಪುಟ್ಟ ಪುಟ್ಟ ರಾಜ್ಯಗಳ) ಪ್ರಾಬಲ್ಯ ಭಾರತೀಯ ಸಿನಿಮಾದಲ್ಲಿ ಹೆಚ್ಚುತ್ತಿದೆ’.ಇದು ಇಫಿ ಚಲನಚಿತ್ರೋತ್ಸವದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಪನೋರಮಾ ವಿಭಾಗದ ತೀರ್ಪುಗಾರರಿಂದ ವ್ಯಕ್ತವಾದ ಅಭಿಪ್ರಾಯದ ಒಟ್ಟೂ ಸಾರ.

ಸಣ್ಣಪುಟ್ಟ ರಾಜ್ಯ, ಸಮುದಾಯಗಳ ಕುರಿತೂ ಸಿನಿಮಾಗಳು ಬರತೊಡಗಿರುವುದು ಸಂತೋಷದ ಸಂಗತಿ. ಇದು ಒಳ್ಳೆಯ ಬೆಳವಣಿಗೆ. ಭಾರತೀಯ ಸಿನಿಮಾದಲ್ಲಿ ಪ್ರಾದೇಶಿಕ ಸಿನಿಮಾಗಳ ಪ್ರಾಮುಖ್ಯತೆ ಹೆಚ್ಚುತ್ತಿದೆ ಎಂಬ ಅಭಿಮತ ವ್ಯಕ್ತವಾಯಿತು.

ಸುಮಾರು ನಾಲ್ಕು ನೂರರಷ್ಟು ಸಿನಿಮಾಗಳು ಬಂದಿದ್ದವು. ಅದರಲ್ಲಿ ಜನಪ್ರಿಯ ಐದು ಸಿನಿಮಾಗಳೂ ಸೇರಿದಂತೆ ಇಪ್ಪತ್ತೈದು ಕಥಾ ಚಿತ್ರಗಳನ್ನು ಆಯ್ಜೆ ಮಾಡುವ ಹೊಣೆ ಇತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ ಎಂದವರು ಸಮಿತಿ ಅಧ್ಯಕ್ಷ ವಿನೋದ್ ಗಣತ್ರ.

ಕೆಲವು ಸಿನಿಮಾಗಳಿಗೆ ಸಂಬಂಧಿಸಿ ಕೆಲವರ ಅಭಿಪ್ರಾಯಗಳು ಬೇರೆ ಇರಬಹುದು. ಹೊಂದಾಣಿಕೆ ಇದ್ದದ್ದೇ. ಆದರೆ ಬಹುಮತದ ಆಯ್ಕೆಯನ್ನು ಮಾಡಿದ್ದೇವೆ ಎಂದರು ವಿನೋದ್.

ಸಿನಿಮಾದ್ದೇ ಭಾಷೆ ಇದೆ. ಅದು ಬಹಳ ಸರಳ. ನಮ್ಮ ಮನಸ್ಸು ಮತ್ತು ಹೃದಯವನ್ನು ತಟ್ಟಬೇಕಷ್ಟೇ. ಅದೇ ಒಳ್ಳೆಯ ಸಿನಿಮಾ‌ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ನಾವೆಲ್ಲ ಸಿನಿಮಾದ ಬೇರೆ ಬೇರೆ ರಂಗದಿಂದ ಬಂದವರು. ಆದರೂ ಆಯ್ಕೆಯಲ್ಲಿ ಒಮ್ಮತ ಸಾಧ್ಯವಾಯಿತು ಎಂದರು ಗೀತಾ ಗುರಪ್ಪ.

ಹೆಚ್ಚು ಸಿನಿಮಾಗಳು ಗುಣಮಟ್ಡದಲ್ಲಿ ಇರಲಿಲ್ಲ. ಕೆಲವೊಮ್ಮೆ ಪ್ರತಿಯೊಬ್ಬರೂ ರಾಜಕಾರಣಿಯಾಗಲು ಇಷ್ಟ ಪಡುತ್ತಾರೆ. ಅದರೆ ಚುನಾಯಿತರಾಗುವುದಿಲ್ಲ. ಹದಿನೈದು ಸಿನಿಮಾಗಳ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ ಎಂದರು ಶೈಲೇಶ್ ದವೆ.

ಬಹುಭಾಷೆ, ಬಹು ಸಂಸ್ಕೃತಿಯೇ ಭಾರತದ ಹಿರಿಮೆ. ಅದು ಈ ವಿಭಾಗದಲ್ಲಿ ಶೋಭಿಸಿದೆ. ಎರಡನೇ ಸುತ್ತಿಗೆ 53 ಸಿನಿಮಾ ಆಯ್ಕೆ ಮಾಡಿದೆವು. ಅಂತಿಮವಾಗಿ ನಿಗದಿತ ಸಂಖ್ಯೆಗೆ ಕಟ್ಟು ಬೀಳಬೇಕಾಯಿತು ಎಂದು ಅಶೋಕ್ ಕಶ್ಯಪ್ ಹೇಳಿದರು.

ಎಲ್ಲ ರಾಜ್ಯಗಳ ಸಿನಿಮಾಗಳಿಗೆ ಪ್ರಾಶಸ್ತ್ಯ ಸಿಕ್ಕಿಲ್ಲ ಎಂಬ ಪ್ರಶ್ನೆಗೆ, ನಾವು ರಾಜ್ಯಗಳ ಲೆಕ್ಕಾಚಾರದಲ್ಲಿ ಸಿನಿಮಾ ಆಯ್ಕೆ ಮಾಡುವುದಿಲ್ಲ. ಇದು ಸ್ಪರ್ಧೆ. ಅದರಲ್ಲಿ ಆಯ್ಕೆ ಮಾಡಲಾಗಿದೆ ಎಂದರು ತೀರ್ಪುಗಾರರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಇತರೆ ಸದಸ್ಯರೂ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-tudar

Movie: ತುಡರ್ ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಬೆಳಕಾಗಿ ಮೂಡಿಬರಲಿ; ಗಣೇಶ್ ರಾವ್

chef chidambara kannada movie

Chef Chidambara: ಅನಿರುದ್ಧ್ ಅಡುಗೆ ಶುರು

tdy-7

Bollywood: ರಿಮೇಕ್‌ ಆಗಿ ಮತ್ತೆ ತೆರೆಗೆ ಬರಲಿದೆ 70ರ ದಶಕದ ಮೂರು ಹಿಟ್‌ ಸಿನಿಮಾಗಳು

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ನಮ್ಮೊಳಗೆ ಬೆಳೆಯುವಂಥ ಪಾತ್ರಗಳು ನನಗಿಷ್ಟ : ಗ್ರೀಷ್ಮಾ ಶ್ರೀಧರ್‌

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

ಕಾಶ್ಮೀರ್ ಫೈಲ್ಸ್ ಅಸಭ್ಯ ಚಿತ್ರ ಎಂದು ನಡಾವ್ ಗೆ ನಾಚಿಕೆಯಾಗಬೇಕು…ಇಸ್ರೇಲ್ ರಾಯಭಾರಿ ಆಕ್ರೋಶ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.