![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 27, 2022, 3:36 PM IST
ಹ್ಯಾಮಿಲ್ಟನ್: ಇಲ್ಲಿ ಭಾನುವಾರ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಎರಡನೇ ಏಕದಿನ ಪಂದ್ಯ ಪ್ರತಿಕೂಲ ಹವಾಮಾನದಿಂದ ರದ್ದಾಗಿದೆ. ಸೊಗಸಾದ ಶುಭ್ ಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಸ್ವಲ್ಪ ಸಮಯದವರೆಗೆ ಪ್ರೇಕ್ಷಕರನ್ನು ರಂಜಿಸಿದರು.
ನಿಗದಿತ ಕಟ್-ಆಫ್ ಸಮಯದೊಳಗೆ ಪ್ರತಿ ತಂಡಕ್ಕೆ ಕನಿಷ್ಠ 20-ಓವರ್ ಪಂದ್ಯವನ್ನು ನಡೆಸುವ ಸಾಧ್ಯತೆಯಿಲ್ಲದ ಕಾರಣ ಎರಡನೇ ಬಾರಿ ಪಂದ್ಯ ನಿಲ್ಲಿಸಿದಾಗ ಭಾರತ 12.5 ಓವರ್ಗಳಲ್ಲಿ 1 ವಿಕೆಟ್ಗೆ 89 ರನ್ ಗಳಿಸಿತ್ತು.
ಮೊದಲ ಬಾರಿ ಮಳೆ ಅಡ್ಡಿಯಾದಾಗ ನಾಲ್ಕು ಗಂಟೆಗಳ ವಿರಾಮವನ್ನು ಉಂಟುಮಾಡಿದ ಕಾರಣ ಪಂದ್ಯವನ್ನು 29-ಓವರ್ಗಳಿಗೆ ಇಳಿಸಲಾಯಿತು. ಆ ವೇಳೆಗೆ ಭಾರತ ಐದನೇ ಓವರ್ನಲ್ಲಿ ವಿಕೆಟ್ ನಷ್ಟವಿಲ್ಲದೆ 22 ರನ್ ಗಳಿಸಿತ್ತು. ಪುನರಾರಂಭದ ನಂತರ ನಾಯಕ ಶಿಖರ್ ಧವನ್ 10 ಎಸೆತಗಳಲ್ಲಿ 3 ರನ್ ಗಳಿಸಿ ಔಟಾದರು.
ಗಿಲ್ ಔಟಾಗದೆ 45( 42 ಎಸೆತ) ಮತ್ತು ಸೂರ್ಯಕುಮಾರ್ ಔಟಾಗದೆ 34( 25 ಎಸೆತ) ಎಂಟು ಓವರ್ಗಳಲ್ಲಿ 66 ರನ್ ಜತೆಯಾಟವಾಡಿದ್ದರು. ಆ ವೇಳೆ ಮಳೆ ಪಂದ್ಯವನ್ನು ನುಂಗಿತು.
ನ್ಯೂಜಿ ಲ್ಯಾಂಡ್ ವಿರುದ್ಧದ ಸರಣಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಳೆಯಿಂದ ಅಡ್ಡಿಪಡಿಸಿದ ಸರಣಿಗಳಲ್ಲಿ ಒಂದಾಗಿದೆ. ವೆಲ್ಲಿಂಗ್ಟನ್ನಲ್ಲಿ ನಡೆದ ಮೊದಲ ಟಿ20 ಪಂದ್ಯವೂ ಒಂದು ಚೆಂಡಿನ ಎಸೆತವನ್ನು ಕಾಣದೆಯೇ ಕೈಬಿಡಲಾಗಿತ್ತು. ನೇಪಿಯರ್ನಲ್ಲಿ ನಡೆದ ಮೂರನೇ ಟ್ವೆಂಟಿ-20 ಪಂದ್ಯ ಕೂಡ ಮಳೆಯಿಂದ ಹಾನಿಗೊಳಗಾಗಿತ್ತು. ಏಕದಿನ ಸರಣಿಯ ಅಂತಿಮ ಪಂದ್ಯ ನವೆಂಬರ್ 30 ರಂದು ಕ್ರೈಸ್ಟ್ಚರ್ಚ್ನಲ್ಲಿ ನಡೆಯಲಿದೆ. ಮೊದಲ ಪಂದ್ಯವನ್ನು ನ್ಯೂಜಿಲ್ಯಾಂಡ್ ಗೆದ್ದಿದೆ.
ಅಂತಾರಾಷ್ಟ್ರೀಯ ತಂಡಗಳು ಸಾಮಾನ್ಯವಾಗಿ ಡಿಸೆಂಬರ್ ಮತ್ತು ಮಾರ್ಚ್ ನಡುವೆ ನ್ಯೂಜಿ ಲ್ಯಾಂಡ್ ಪ್ರವಾಸ ಮಾಡುತ್ತವೆ ಮತ್ತು ಹವಾಮಾನದ ವ್ಯತ್ಯಾಸಗಳು ಕಾರಣವಾಗದ ಕಳಪೆ ವೇಳಾಪಟ್ಟಿ, ಸೀಮಿತ-ಓವರ್ಗಳ ಸರಣಿಯನ್ನು ಹಾಳುಮಾಡಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.