ಇಂದು ಭೂಮಿಯ ಸನಿಹಕ್ಕೆ ಮಂಗಳ ಗ್ರಹ


Team Udayavani, Dec 8, 2022, 6:05 AM IST

ಇಂದು ಭೂಮಿಯ ಸನಿಹಕ್ಕೆ ಮಂಗಳ ಗ್ರಹ

ಡಿಸೆಂಬರ್‌ 8ರಂದು ಭೂಮಿಯ ಹತ್ತಿರ ಬರಲಿರುವ ಮಂಗಳ ಗ್ರಹ, ಆಕಾಶ ವೀಕ್ಷಕರಿಗೆ ಇತರ ಆಕರ್ಷ ಣೆಗಳ ಜತೆಗೆ ತನ್ನ ಇರವನ್ನು ಸಾರುತ್ತಾನೆ. ಅಂದು ಸೂರ್ಯಾಸ್ತವಾಗುವ ಸಮಯದಲ್ಲಿ ಪೂರ್ವಾಗಸ ದಲ್ಲಿ ಮೂಡುವ ಮಂಗಳ ಗ್ರಹವು ರಾತ್ರಿಯಿಡೀ ತಾಮ್ರ ವರ್ಣದೊಂದಿಗೆ ಸ್ವಲ್ಪ ದೊಡ್ಡದಾಗಿ ಕಾಣುತ್ತಿರುತ್ತದೆ.

ಈ ವಿದ್ಯಮಾನ ಸುಮಾರು 26 ತಿಂಗಳಿಗೊಮ್ಮೆ ಜರಗುತ್ತದೆ. ಎಲ್ಲ ಗ್ರಹಗಳಂತೆ ನಮ್ಮ ನೆರೆಯ ಮಂಗಳ ಗ್ರಹವೂ ಸೂರ್ಯನನ್ನು ಸುತ್ತುತ್ತಿದ್ದು ನಮ್ಮ ಭೂ ಕಕ್ಷೆಯಿಂದ ಹೊರಗೆ ಸೂರ್ಯನಿಂದ ದೂರದಲ್ಲಿ ದೀರ್ಘ‌ ವೃತ್ತಾಕಾರದ ತನ್ನದೇ ಕಕ್ಷೆಯಲ್ಲಿ ನಿಧಾನವಾಗಿ ಸಾಗುತ್ತಿದೆ. ಭೂಮಿ ಸೂರ್ಯನ ಸಮೀಪವಿರು ವುದರಿಂದ ವೇಗವಾಗಿ ಸಾಗುತ್ತಿದೆ. ಭೂಮಿ ಸುಮಾರು ಎರಡು ಸುತ್ತು ಸೂರ್ಯನ ಸುತ್ತ ಪೂರೈಸಿದಾಗ ಮಂಗಳ ತನ್ನ ಕಕ್ಷೆಯಲ್ಲಿ ಒಂದೇ ಸುತ್ತು ಸುತ್ತುತ್ತದೆ. ಹೀಗಾಗಿ ಎರಡೂ ಗ್ರಹಗಳು ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಕೆಲವೊಮ್ಮೆ ಹತ್ತಿರವಿರುತ್ತವೆ. ಭೂಮಿಯಿಂದ ನೋಡಿದಾಗ ಒಂದು ದಿಕ್ಕಿನಲ್ಲಿ, ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಮಂಗಳ ಕಂಡು ಬರುವುದನ್ನು ವಿಯುತಿ (opposition) ಎಂದು ಕರೆಯುತ್ತಾರೆ. ಆಗ ಮಂಗಳ ಭೂಮಿಯ ಸನಿಹದಲ್ಲಿ ರುವುದರಿಂದ ಸ್ವಲ್ಪ ದೊಡ್ಡದಾಗಿ ಕಂಡು ಬರುತ್ತಾನೆ.

ಮಂಗಳನ ಬಗೆಗೇಕೆ ಕುತೂಹಲ ?
ಪ್ರಾಚೀನ ಕಾಲದಿಂದಲೂ ಮಂಗಳನ ಕೆಂಪು ಬಣ್ಣದ ಬಗ್ಗೆ ಕುತೂಹಲ ಮತ್ತು ಭಯವೂ ಇತ್ತು. ಮಂಗಳನೆಂದರೆ ಯುದ್ಧದ ಮುನ್ಸೂಚನೆ ಹಾಗಾಗಿ ಅಶುಭ ಎಂಬ ನಂಬಿಕೆಯಿತ್ತು. ಈ ಕೆಂಪು ಬಣ್ಣ ಮಂಗಳನ ಮೇಲ್ಮೆ„ಯ ಕಬ್ಬಿಣದ ಆಕ್ಸೆ„ಡ್‌ನಿಂದ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಈಗ ವಾಸಕ್ಕೆ ನಮಗಿರುವುದು ಭೂಮಿಯೊಂದೇ ಇನ್ನುಳಿದಂತೆ ಭೂಮಿಯ ಉಪಗ್ರಹ ಚಂದ್ರನಾಗಲಿ ಅಥವಾ ಮಂಗಳ ಗ್ರಹವಾಗಲಿ ಬದಲಿ ವಾಸಕ್ಕೆ ಯೋಗ್ಯವೇ? ನಮ್ಮ ವಸಾಹತನ್ನು ಮಂಗಳನ ಅಂಗಳಕ್ಕೆ ವಿಸ್ತರಿಸಬಹುದೇ ಎಂಬುದನ್ನು ಶೋಧಿಸಲು ತಂತ್ರಜ್ಞಾನಗಳ ಮೂಲಕ ಮಂಗಳನಲ್ಲಿಗೆ ಉಪಗ್ರಹ ಗಳನ್ನು ಕಳುಹಿಸಿ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಭಾರತವೂ ಮಂಗಳಾನ್ವೇಷಣೆಯಲ್ಲಿ ತೊಡಗಿದೆ.

ಮಂಗಳನ ವೀಕ್ಷಣೆಗೆ ವ್ಯವಸ್ಥೆ
ಡಿಸೆಂಬರ್‌ 8ರಂದು ಸಂಜೆ ಗಂಟೆ 7ರಿಂದ ಮಂಗಳ ಭೂಮಿಯ ಹತ್ತಿರಕ್ಕೆ ಬರುವ ವಿದ್ಯಮಾನ ವನ್ನು ದೂರದರ್ಶಕಗಳ ಮೂಲಕ ವೀಕ್ಷಿಸಲು ಮಂಗಳೂರಿನ ಪಿಲಿಕುಳದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಹಿತ ನಾಡಿನ ಪ್ರಮುಖ ವಿಜ್ಞಾನ ಮತ್ತು ಖಗೋಳ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದರ ಜತೆಗೆ ಡಿಸೆಂಬರ್‌ ತಿಂಗಳಲ್ಲಿ ಕಂಡು ಬರುವ ಆಕಾಶಕಾಯಗಳಾದ ಗುರು ಮತ್ತು ಶನಿ ಗ್ರಹ ಹಾಗೂ ಹುಣ್ಣಿಮೆ ಚಂದ್ರನನ್ನು ಸಹ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಜತೆಯಲ್ಲಿ ನಕ್ಷತ್ರ ಪುಂಜಗಳನ್ನೂ ಪರಿಚಯಿಸಿಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಮಂಗಳ ಗ್ರಹದ
ಕುತೂಹಲಕಾರಿ ಮಾಹಿತಿಗಳು
1. ಸೂರ್ಯನಿಂದ ನಾಲ್ಕನೇ ಗ್ರಹ.
2. ಸೌರವ್ಯೂಹದಲ್ಲಿ ಎರಡನೇ ಚಿಕ್ಕ ಗ್ರಹ (ಮೊದಲನೆಯದು ಬುಧ).
3. ಮಂಗಳ ಗ್ರಹವನ್ನು ಕುಜ ಅಥವಾ ಅಂಗಾರಕ ಎಂದೂ ಕರೆಯುತ್ತಾರೆ.
4. ಮಂಗಳ ಗ್ರಹವು ತನ್ನ ಅಕ್ಷದ ಸುತ್ತ ಸುತ್ತಲು ಸುಮಾರು 24 ಗಂಟೆ 36 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
5. ಮಂಗಳ ಗ್ರಹದ ಅಕ್ಷದ ಓರೆಯು ಭೂಮಿಯನ್ನು ಹೋಲುತ್ತದೆ. ಅದರ ಕಕ್ಷೆಯ ಸಮತಲಕ್ಕೆ ಸುಮಾರು 25 ಡಿಗ್ರಿ ವಾಲಿದೆ ಹಾಗಾಗಿ ಭೂಮಿಯಂತೆ ಮಂಗಳ ಗ್ರಹದಲ್ಲೂ ಋತುಮಾನಗಳು ಉಂಟಾಗುತ್ತವೆ.
6. ಮಂಗಳವು ಸೂರ್ಯನ ಸುತ್ತ ಸುತ್ತಲು ಸುಮಾರು 687 ಭೂದಿನಗಳನ್ನು ತೆಗೆದುಕೊಳ್ಳುತ್ತದೆ.
7. ಮಂಗಳ ಗ್ರಹದ ಮೇಲ್ಮೈ ಕಬ್ಬಿಣದ ಆಕ್ಸೈಡ್ ನಿಂದ ತುಂಬಿರುವ ಕಾರಣ ಕೆಂಪು ಗ್ರಹ (ರೆಡ್‌ ಪ್ಲಾನೆಟ್‌) ಎಂದು ಕರೆಯುತ್ತಾರೆ.
8. ಫೋಬೋಸ್‌ ಮತ್ತು ಡೀಮೋಸ್‌ ಮಂಗಳದ 2 ಉಪಗ್ರಹಗಳು
9. ಮಂಗಳ ಗ್ರಹವು ಇಂಗಾಲದ ಡೈ ಆಕ್ಸೆ„ಡ್‌ ನ ತೆಳುವಾದ ವಾತಾವರಣವನ್ನು ಹೊಂದಿದೆ.
10. ಮಂಗಳನ ಮೇಲ್ಮೈ ಯಲ್ಲಿ ಗುರುತ್ವಾ ಕರ್ಷಣೆಯು ಭೂಮಿಯ ಗುರುತ್ವಾಕ ರ್ಷಣೆಯ ಶೇ. 38 ರಷ್ಟಿದೆ (3.74 ಞ/s2).

– ಡಾ| ಕೆ.ವಿ. ರಾವ್‌ ಮಂಗಳೂರು

ಟಾಪ್ ನ್ಯೂಸ್

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

31 ವರ್ಷದ ಲಾರೆನ್ಸ್‌ ಬಿಷ್ಣೋಯ್‌ ಪಾತಕಲೋಕಕ್ಕೆ ಹೊಸ ಎಂಟ್ರಿ; ಮುಂಬಯಿಗೆ ಹೊಸ ಡಾನ್‌!

31 ವರ್ಷದ ಲಾರೆನ್ಸ್‌ ಬಿಷ್ಣೋಯ್‌ ಪಾತಕಲೋಕಕ್ಕೆ ಹೊಸ ಎಂಟ್ರಿ; ಮುಂಬಯಿಗೆ ಹೊಸ ಡಾನ್‌!

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ಚುನಾವಣೆ ಗೆಲ್ಲುವ ಅಸ್ತ್ರವಾದ ಉಚಿತ ಕೊಡುಗೆ

Election: ಗೆಲ್ಲುವ ಅಸ್ತ್ರವಾದ ಉಚಿತ ಕೊಡುಗೆ

PM-Intren

Practical Training: ಉದ್ಯೋಗಕ್ಕೆ ಹೊಸ ದಾರಿ: ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.