ವೈಟ್‌ವಾಶ್‌ ತಪ್ಪಿಸೀತೇ ಗಾಯಾಳು ಭಾರತ? ಭಾರತಕ್ಕೆ ಇಂದು ಪ್ರತಿಷ್ಠೆಯ ಪಂದ್ಯ

ಇಂದು 3ನೇ ಏಕದಿನ: 3-0 ಕ್ಲೀನ್‌ ಸ್ವೀಪ್‌ ಯೋಜನೆಯಲ್ಲಿ ಬಾಂಗ್ಲಾ

Team Udayavani, Dec 10, 2022, 7:35 AM IST

ವೈಟ್‌ವಾಶ್‌ ತಪ್ಪಿಸೀತೇ ಗಾಯಾಳು ಭಾರತ? ಭಾರತಕ್ಕೆ ಇಂದು ಪ್ರತಿಷ್ಠೆಯ ಪಂದ್ಯ

ಚತ್ತೋಗ್ರಾಮ್‌: ನೆರೆಯ ಕ್ರಿಕೆಟ್‌ ಎದುರಾಳಿ ಬಾಂಗ್ಲಾದೇಶ ತಾನು ನಿಜಕ್ಕೂ “ಟೈಗರ್‌’ ಎಂಬುದನ್ನು ತೋರಿಸಿ ಕೊಟ್ಟಿದೆ. ಮೊದಲೆರಡು ಏಕದಿನ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಅದೀಗ ಟೀಮ್‌ ಇಂಡಿಯಾವನ್ನು ವೈಟ್‌ವಾಶ್‌ ಮಾಡುವ ಹವಣಿಕೆಯಲ್ಲಿದೆ. ಶನಿವಾರ ಅಂತಿಮ ಮುಖಾಮುಖಿ ಏರ್ಪಡಲಿದ್ದು, ಇದನ್ನೂ ಗೆದ್ದು ಇತಿಹಾಸ ನಿರ್ಮಿಸುವುದು ಲಿಟನ್‌ ದಾಸ್‌ ಬಳಗದ ಯೋಜನೆ.

ಇತ್ತ ಭಾರತಕ್ಕೆ ಗಾಯದ ಮೇಲೆ ಬರೆ ಬಿದ್ದಿದೆ. ತಂಡದ ಬಹಳಷ್ಟು ಆಟ ಗಾರರು ನಾನಾ ಸಮಸ್ಯೆಗೆ ಸಿಲುಕಿದ್ದಾರೆ. ನಾಯಕ ರೋಹಿತ್‌ ಶರ್ಮ ದ್ವಿತೀಯ ಪಂದ್ಯದ ಫೀಲ್ಡಿಂಗ್‌ ವೇಳೆ ಕೈ ಬೆರಳಿಗೆ ಏಟು ತಿಂದು ತವರಿಗೆ ವಾಪಸಾಗಿದ್ದಾರೆ.

ಕುಲದೀಪ್‌ ಸೇನ್‌ ಒಂದೇ ಪಂದ್ಯ ಆಡುವಷ್ಟರಲ್ಲಿ ಬೆನ್ನುನೋವಿಗೆ ಸಿಲುಕಿದ್ದಾರೆ. ಅಕ್ಷರ್‌ ಪಟೇಲ್‌ ಅವರ ಪಕ್ಕೆಲುಬಿಗೆ ಏಟು ಬಿದ್ದಿದೆ. ದೀಪಕ್‌ ಚಹರ್‌ ಕೂಡ ಗಾಯಾಳಾಗಿ ಹೊರಗುಳಿಯುವ ಸಂಕಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನೆಲ್ಲ ಅರಿತ ಆಡಳಿತ ಮಂಡಳಿ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಅವರನ್ನು ಕರೆಸಿಕೊಂಡಿದೆ.

ಕುಲದೀಪ್‌ ಯಾದವ್‌ ಅವರೀಗ ತಂಡದ ಅತ್ಯಂತ ಅನುಭವಿ ಬೌಲರ್‌ ಆಗಿದ್ದಾರೆ. 72 ಏಕದಿನಗಳಿಂದ 118 ವಿಕೆಟ್‌ ಕೆಡವಿದ್ದು ಇವರ ಸಾಧನೆ. ಉಳಿದಂತೆ ಮೊಹಮ್ಮದ್‌ ಸಿರಾಜ್‌, ಶಾದೂìಲ್‌ ಠಾಕೂರ್‌, ಉಮ್ರಾನ್‌ ಮಲಿಕ್‌, ವಾಷಿಂಗ್ಟನ್‌ ಸುಂದರ್‌ ಅವರೆಲ್ಲ ಬೌಲಿಂಗ್‌ ವಿಭಾಗವನ್ನು ನೋಡಿಕೊಳ್ಳಬೇಕಿದೆ. ಆದರೆ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ, ರವೀಂದ್ರ ಜಡೇಜ ಗೈರಲ್ಲಿ ಭಾರತದ ಈಗಿನ ಬೌಲಿಂಗ್‌ ಪಡೆ ತೀರಾ ದುರ್ಬಲವಾಗಿ ಗೋಚರಿಸುತ್ತಿದೆ.

ಆರಂಭದಲ್ಲಿ ಭಾರತದ ಬೌಲಿಂಗ್‌ ದಾಳಿ ಹರಿತವಾಗಿಯೇ ಕಾಣುತ್ತದೆ. ಆದರೆ ಒಂದು ಹಂತದಲ್ಲಿ ಎಲ್ಲರೂ ಕೈಚೆಲ್ಲುವುದು ದೊಡ್ಡ ದುರಂತ. ಮೊದಲ ಪಂದ್ಯದಲ್ಲಿ ಅಂತಿಮ ವಿಕೆಟ್‌ ಕೆಡವಲಾಗದೆ ಸೋಲು ಕಾಣಬೇಕಾ ಯಿತು. ದ್ವಿತೀಯ ಪಂದ್ಯದಲ್ಲಿ 69ಕ್ಕೆ 6 ವಿಕೆಟ್‌ ಉರುಳಿಸಿದ ಬಳಿಕ ನಮ್ಮ ಬೌಲರ್ ಥಂಡಾ ಹೊಡೆದರು. ಆತಿಥೇ ಯರ ಸ್ಕೋರ್‌ 270ರ ಗಡಿ ದಾಟಿತು.

ಸವಾಲಾಗಿರುವ ಮಿರಾಜ್‌
ಎರಡೂ ಪಂದ್ಯಗಳಲ್ಲಿ ಮೆಹಿದಿ ಹಸನ್‌ ಮಿರಾಜ್‌ ವಿಕೆಟ್‌ ಉರುಳಿಸಲು ನಮ್ಮವರಿಂದ ಸಾಧ್ಯವಾಗಿಲ್ಲ. ಮೊದಲ ಪಂದ್ಯದಲ್ಲೇನೋ ಅವರ ಕ್ಯಾಚ್‌ ಕೈಚೆಲ್ಲಿ ಸೋತೆವು ಎಂದಾಯಿತು. ಆದರೆ ದ್ವಿತೀಯ ಪಂದ್ಯದಲ್ಲಿ ಇನ್ನಷ್ಟು ಬೆಳೆದ ಮಿರಾಜ್‌, ಚೊಚ್ಚಲ ಶತಕ ಬಾರಿಸಿ ತಂಡವನ್ನು ಮೇಲೆತ್ತಿದರು. ಮಿರಾಜ್‌ ಅವರನ್ನು ಔಟ್‌ ಮಾಡಲಾಗದೆ ಭಾರತ ಮುಗ್ಗರಿಸಿದ್ದು ಸ್ಪಷ್ಟವಾಗಿದೆ.

ಹೀಗಾಗಿ ಕೇವಲ ಬ್ಯಾಟರ್‌ಗಳ ಮೇಲೆ ಸೋಲಿನ ಹೊಣೆ ಹೊರಿಸುವುದು ತಪ್ಪಾಗುತ್ತದೆ. ಒಂದು ತಂಡವಾಗಿ ಭಾರತ ಸೋತಿದೆ. ನಮ್ಮವರ ಅವಸ್ಥೆಯನ್ನು ಕಂಡಾಗ ಶನಿವಾರದ ಪಂದ್ಯದಲ್ಲೂ ಬಾಂಗ್ಲಾ ದೇಶವೇ ಫೇವರಿಟ್‌ ಎಂಬುದರಲ್ಲಿ ಅನುಮಾನವಿಲ್ಲ.

ರೋಹಿತ್‌ ಗೈರಲ್ಲಿ ಕೆ.ಎಲ್‌. ರಾಹುಲ್‌ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಇವರು ಶಿಖರ್‌ ಧವನ್‌ ಜತೆ ಇನ್ನಿಂಗ್ಸ್‌ ಆರಂಭಿಸುವ ಸಾಧ್ಯತೆ ಇಲ್ಲ. ಈ ಸ್ಥಾನಕ್ಕೆ ಇಶಾನ್‌ ಕಿಶನ್‌ ಬರಬ ಹುದು. ವಿರಾಟ್‌ ಕೊಹ್ಲಿ ಓಪನಿಂಗ್‌ ಬರುವುದು ಅಷ್ಟೇನೂ ಸಮಂಜಸವಾಗಿ ಕಾಣದು. ಅವರು ವನ್‌ಡೌನ್‌ನಲ್ಲಿ ಮುಂದುವರಿಯುವುದೇ ಉತ್ತಮ. ಆದರೆ ಧವನ್‌ ಮತ್ತು ಕೊಹ್ಲಿ, ಇಬ್ಬರ ಫಾರ್ಮ್ ಕೂಡ ಚಿಂತೆಯ ಸಂಗತಿಯಾಗಿದೆ. ಮಧ್ಯಮ ಸರದಿ ಯಲ್ಲಿ ರಾಹುಲ್‌ ತ್ರಿಪಾಠಿ ಅಥವಾ ರಜತ್‌ ಪಾಟೀದಾರ್‌ ಅವರನ್ನು ಆಡಿಸುವ ಅಗತ್ಯವಿದೆ.

ನಮ್ಮವರಿಗೆ ಪಾಠ
ನಾಯಕ ತಮಿಮ್‌ ಇಕ್ಬಾಲ್‌ ಗೈರಲ್ಲೂ ಬಾಂಗ್ಲಾದೇಶ ತೋರ್ಪಡಿಸಿದ ಸಾಹಸ ಪ್ರಶಂಸನೀಯ. ಮಿರಾಜ್‌ ಅವರದು ಏಕಾಂಗಿ ಸಾಹಸವಾದರೂ ಅವರು ಜತೆಗಾರನನ್ನು ಆಡಿಸುವ ರೀತಿಯಿಂದ ಹೆಚ್ಚು ಆಪ್ತರಾಗುತ್ತಾರೆ. ಅಗ್ರ ಕ್ರಮಾಂಕದವರೆಲ್ಲ ಅಗ್ಗಕ್ಕೆ ಔಟಾದ ಬಳಿಕ ಮಿರಾಜ್‌ ಇನ್ನಿಂಗ್ಸ್‌ ಬೆಳೆಸುವ ರೀತಿ ನಮ್ಮವರಿಗೊಂದು ಪಾಠ.

ಭಾರತದ ಆತಿಥ್ಯದಲ್ಲೇ ಮುಂದಿನ ವರ್ಷದ ಏಕದಿನ ವಿಶ್ವಕಪ್‌ ಪಂದ್ಯಾ ವಳಿ ನಡೆಯಲಿದ್ದು, ಸಾಧ್ಯವಾದಷ್ಟು ಬೇಗ ಸಶಕ್ತ ತಂಡವನ್ನು ರೂಪಿಸುವ ಹೊಣೆಗಾರಿಕೆ ಆಡಳಿತ ಮಂಡಳಿಯ ಮೇಲಿದೆ. ಈಗೇನಾಗುತ್ತಿದೆಯೆಂದರೆ… ಪ್ರಯೋಗಗಳೇ ಅತಿಯಾಗುತ್ತಿವೆ. ಸೀನಿಯರ್‌ಗಳೆಲ್ಲ ಕೈಕೊಡುತ್ತಿದ್ದಾರೆ. ಯುವಕರು ಅವಕಾಶವನ್ನು ಬಳಸಿ ಕೊಳ್ಳುತ್ತಿಲ್ಲ. ಬಾಂಗ್ಲಾ ಪ್ರವಾಸ ದಲ್ಲಿ ಇದು ನಿಚ್ಚಳವಾಗಿದೆ. ಇನ್ನು ಆಸ್ಟ್ರೇಲಿಯ, ಇಂಗ್ಲೆಂಡ್‌ನ‌ಂಥ ಬಲಿಷ್ಠ ತಂಡಗಳನ್ನು ಎದುರಿಸುವುದು ಹೇಗೆ? ಯೋಚಿಸಬೇಕಿದೆ.

ಟಾಪ್ ನ್ಯೂಸ್

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

MS Dhoni Sends ‘shocking’ Message To Chennai Super Kings

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

9

Actor Suriya: ತಾಯಿ ಮಾಡಿದ 25 ಸಾವಿರ ರೂ. ಸಾಲ ತೀರಿಸಲು ಸಿನಿಮಾ ರಂಗಕ್ಕೆ ಬಂದ ಸೂರ್ಯ

ಕಾನೂನು ಸಮರದಲ್ಲಿ ಪವಾರ್‌ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್‌ ಬಣಕ್ಕೆ ಮೇಲುಗೈ

ಕಾನೂನು ಸಮರದಲ್ಲಿ ಪವಾರ್‌ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್‌ ಬಣಕ್ಕೆ ಮೇಲುಗೈ

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

INDvsNZ: New Zealand caught in Washington’s spin web; All out for 259 run

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MS Dhoni Sends ‘shocking’ Message To Chennai Super Kings

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

INDvsNZ: New Zealand caught in Washington’s spin web; All out for 259 run

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್

ಕಿವೀಸ್‌ ವಿರುದ್ದದ ಮೊದಲ ಪಂದ್ಯದಿಂದ ಹರ್ಮನ್‌ ಪ್ರೀತ್‌ ಔಟ್

INDWvsNZW: ಕಿವೀಸ್‌ ವಿರುದ್ದದ ಮೊದಲ ಪಂದ್ಯದಿಂದ ಹರ್ಮನ್‌ ಪ್ರೀತ್‌ ಔಟ್

INDvsNZ: Why KL Rahul, Kuldeep Yadav & Mohammed Siraj dropped? Here’s the reason

INDvsNZ: ರಾಹುಲ್‌, ಕುಲದೀಪ್‌, ಸಿರಾಜ್‌ ರನ್ನು ಕೈಬಿಟ್ಟಿದ್ಯಾಕೆ? ಇಲ್ಲಿದೆ ಕಾರಣ

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

INDvsNZ: ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಬರೆದ ರವಿ ಅಶ್ವಿನ್

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

8

KSRTC ನಿಲ್ದಾಣ-ಲಾಲ್‌ಭಾಗ್‌ ರಸ್ತೆ ಫುಟ್‌ಪಾತ್‌ ಇಲ್ಲದೆ ಪಾದಚಾರಿಗಳ ಪರದಾಟ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

MS Dhoni Sends ‘shocking’ Message To Chennai Super Kings

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

7

Thekkatte: ಹೆದ್ದಾರಿ ಹೊಡೆತದಿಂದ ತೆಕ್ಕಟ್ಟೆ ಕನ್ನಡ ಶಾಲೆ ಉಳಿಸಿ

9

Actor Suriya: ತಾಯಿ ಮಾಡಿದ 25 ಸಾವಿರ ರೂ. ಸಾಲ ತೀರಿಸಲು ಸಿನಿಮಾ ರಂಗಕ್ಕೆ ಬಂದ ಸೂರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.