ರಸ್ತೆ ವಿಸ್ತರಣೆಗೆ ಭೂ ಮಾಲೀಕರ ಸಹಕಾರ ಅಗತ್ಯ


Team Udayavani, Dec 11, 2022, 1:20 PM IST

TDY-7

ಮಾಗಡಿ: ಪಟ್ಟಣದಲ್ಲಿ ಕೈಗೊಂಡಿರುವ ಕೆಸಿಎಫ್ ರಸ್ತೆ ವಿಸ್ತರಣೆಗೆ ಭೂಮಾಲೀಕರು ಸಹಕಾರ ನೀಡಿ ಹೃದಯ ಶ್ರೀಮಂತಿಕೆ ಮೆರೆಯಬೇಕಿದೆ ಎಂದು ಶಾಸಕ ಎ. ಮಂಜುನಾಥ್‌ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಕೆಸಿಫ್ ಅಧಿಕಾರಿಗಳ ಹಾಗೂ ಭೂಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭೂಮಾಲೀಕರು ಸಹಕಾರ ಕೊಟ್ಟರೆ ಕೆಸಿಫ್ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿಲು ಬದ್ಧನಾಗಿದ್ಧೇನೆ. ನೀವೆಲ್ಲ ಬೇಡ ಎಂದರೆ ನನ್ನ ತಕರಾರು ಏನೂ ಇಲ್ಲ. ಕೆಸಿಫ್ ಅಧಿಕಾರಿಗಳು ಜಂಟಿ ಮೆಸರ್‌ವೆುಂಟ್‌ ಸರ್ವೆ(ಜೆಎಂಸಿ)ಮಾಡಿ ವಿಸ್ತರಣೆಯ ಗೊಂದಲ ಸರಿಪಡಿಸಲಿದ್ದಾರೆ. ಇದು 15ರಡಿ ಪ್ರಾಥಮಿಕ ಅಧಿಸೂಚನೆಯಾಗಿದ್ದು, ಇದೇ ಅಂತಿಮವಲ್ಲ, ಜೆಎಂಸಿ ನಂತರ ಅಂತಿಮವಾಗಿ 19 ರಡಿ ಅಧಿಸೂಚನೆ ಹೊರಡಿಸಲಾಗುತ್ತದೆ. ಭೂಮಿ ಕಳೆದುಕೊಳ್ಳುವವರು ತಮ್ಮ ಭೂಸ್ವಾಧೀನಕ್ಕೆ ಸಿಗುವ ಪರಿಹಾರ ಕಡಿಮೆಯಾಗಿದ್ದರೆ, ನಾನೂ ಕಾನೂನು ಬದ್ಧವಾಗಿ ಹೆಚ್ಚಿನ ಪರಿಹಾರ ಕೊಡಿಸುತ್ತೇನೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.

ಪುರನಾಗರಿಕರನ್ನು ಗಣನೆಗೆ: ಪುರನಾಗರಿಕರನ್ನು ಗಣನೆಗೆ ತೆಗೆದುಕೊಂಡು ಕೆಸಿಫ್ ರಸ್ತೆ ಕಾಮಗಾರಿ ಕೈಗೊಳ್ಳುವ ಮೂಲಕ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಪುರನಾಗರಿಕರ ಭಾವನೆಯ ವಿರುದ್ಧವಾಗಿ ಕೆಲಸ ಮಾಡುವುದಿಲ್ಲ, ಸುಮಾರು 50 ವರ್ಷದ ದೂರದೃಷ್ಟಿಯಿಂದ ಡಿಪಿಆರ್‌ ತಯಾರಾಗಿದೆ. ಸಾಧಕ-ಬಾಧಕ ನೋಡಿಕೊಂಡು ಪುರೋಭಿವೃದ್ಧಿಯೇ ನನ್ನ ಧ್ಯೇಯವಾಗಿದೆ. ಎಲ್ಲರೂ ಸಂಪೂರ್ಣ ಸಹಕಾರ ನೀಡಿ ಅಭಿವೃದ್ಧಿಗೆ ಕೈಜೋಡಿಸುವಂತೆ ಪುರನಾಗರಿಕರಿಗೆ ಮನವಿ ಮಾಡಿದರು.

ಸೂಕ್ತ ಪರಿಹಾರ ನಿಗದಿಪಡಿಸಿ: ಈ ಸಂಬಂಧ ಪುರನಾಗರಿಕರು ಒಕ್ಕರಲಿನಿಂದ ಒಪ್ಪಿಗೆ ಸೂಚಿಸಿದ್ದು, ಕೆಸಿಫ್ ಅಧಿಕಾರಿಗಳು ಜೆಎಂಸಿ ಮಾಡಿಸುವುದರಿಂದ ಯಾರ್ಯಾರು ಭೂಮಿ ಎಷ್ಟೆಷ್ಟು ರಸ್ತೆ ಅಗಲೀಕರಣ ಹೋಗುತ್ತದೆ ಎಂಬ ಚಿತ್ರಣ ಸಿಗುತ್ತದೆ. ಎಷ್ಟು ಭೂಮಿ ಉಳಿಸಿ ರಸ್ತೆ ಮಾಡಬಹುದು ಎಂಬ ಲೆಕ್ಕಚಾರವೂ ಸಿಗುತ್ತದೆ. ಜೆಎಂಸಿ ನಂತರ ಮತ್ತೂಂದು ಸಭೆ ಕರೆದು ಭೂ ಸ್ವಾಧೀನಕ್ಕೆ ಸೂಕ್ತ ಪರಿಹಾರ ನಿಗದಿಪಡಿಸಿ ಅಂತಿಮ ಗೊಳಿಸಲಾಗುವುದು. ಅಂಗಡಿ ಮಳಿಗೆ ಕಟ್ಟಿಕೊಳ್ಳುವವರು. ಹೈಟೆಕ್‌ ಕಾಂಫ್ಲೆಕ್ಸ್‌ ಕಟ್ಟಿಸಿ ಪಟ್ಣದ ಸೌಂದರ್ಯವನ್ನು ಹೆಚ್ಚಿಸುವಂತೆ ಶಾಸಕರು ಅಂಗಡಿ ಮಾಲೀಕರಿಗೆ ಸಲಹೆ ನೀಡಿದರು.

ಶಾಸಕರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ: ಗಣಪತಿ ದೇವಸ್ಥಾನದ ಟ್ರಸ್ಟಿ ಸತೀಶ್‌ ಮಾತನಾಡಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಒಪ್ಪಿಗೆ ಪಡೆದು ರಸ್ತೆ ಅಗಲೀಕರಣ ಮಾಡುವ ಅವಕಾಶವಿದೆ. ಪಟ್ಟಣದ ಎಲ್ಲರನ್ನು ಗಣನೆಗೆ ತೆಗೆದುಕೊಂಡು ರಸ್ತೆ ಅಗಲೀಕರಣವಾಗಲಿ. ರಸ್ತೆ ಮಧ್ಯ ಭಾಗದಿಂದ ಎರಡು ಬದಿಗೆ ಸಮನಾಗಿ ಸರ್ವೆ ಮಾಡಿಸಿ ರಸ್ತೆ ಅಗಲೀಕರಣ ಮಾಡಿಸಿ ತಾರತಮ್ಯ ಮಾಡಬೇಡಿ. ಏನೇ ರಸ್ತೆ ಅಗಲೀಕರಣವಾದರೂ ಪುರಪಿತೃಗಳ ಆಶಯದಂತೆ ಕಲ್ಯಾಗೇಟ್‌ ಗಣಪತಿ ದೇವಸ್ಥಾನ ಯಥಾಸ್ಥಿತಿ ಉಳಿಸಿ ಪುರನಾಗರಿಕರಿಗೆ ಧಾರ್ಮಿಕ ಕಾರ್ಯಗಳಿಗೆ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.

ಕದಂಬ ಗಂಗರಾಜು ಮಾತನಾಡಿ, ಶಾಸಕ ಎ.ಮಂಜುನಾಥ್‌ ಅವರ ವೈಯಕ್ತಿಕ ಹಿತಾಸಕ್ತಿಯಿಲ್ಲ, ಶಾಸಕರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ ಸಲ್ಲಿಸಿದ ಅವರು, ಪುರೋಭಿವೃದ್ಧಿಯ ಹಿತಾದೃಷ್ಟಿಯಿಂದ ಕೆಸಿಫ್ ರಸ್ತೆ ಕೈಗೊಂಡಿದ್ದಾರೆ. ಎಲ್ಲರೂ ಸಹಕರಿಸೋಣ ಎಂದರು.

ಜನರ ಭಾವನೆಗೆ ಸ್ಪಂದಿಸಬೇಕು: ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್‌.ಜಿ.ರಮೇಶ್‌ ಗುಪ್ತಾ ಮತನಾಡಿ, ಶಾಸಕರು ಪುರನಾಗರಿಕರ ಭಾವನೆ ಸ್ಪಂದಿಸಬೇಕಿದೆ.ಪಟ್ಟಣದಲ್ಲಿ ನಾಲ್ಕು ಪಥದ ರಸ್ತೆ ಅನಾವಶ್ಯಕ ಎಂದರು.

ಸಂದೀಪ್‌, ಕೆ.ವಿ. ಬಾಲರಘು, ಎಂ.ಎನ್‌. ಮಂಜುನಾಥ್‌ ಮಾತನಾಡಿ, ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಶಾಸಕರು ಜನರ ಭಾವನೆಗೆ ಸ್ಪಂದಿಸಬೇಕು. ಎಷ್ಟು ವಿಸ್ತೀರ್ಣ ಕಡಿಮೆ ಮಾಡಬಹುದು ಅಷ್ಟನ್ನು ಕಡಿಮೆ ಮಾಡಿಸಿ ಅಂಗಡಿ ಮಾಲೀಕರನ್ನು ಉಳಿಸಿ,ನಾವೂ ಕೂಡ ರಸ್ತೆ ಅಗಲೀಕರಣಕ್ಕೆ ಕೈಜೋಡಿಸುತ್ತೇವೆ ಎಂದು ಸಲಹೆ ನೀಡಿದರು. ಆನಂದ್‌, ಸಂದೀಪ್‌, ಮೋಹನ್‌ ,ಮೂರ್ತಿ, ಎಸ್‌.ನಾಗರಾಜಶೆಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಮು, ಭರತ್‌, ಎಂ.ಆರ್‌. ರಾಘವೇಂದ್ರ, ಕುಮಾರ್‌ ಎನ್‌.ಎನ್‌.ನಟರಾಜ್‌, ಮೂರ್ತಿ, ಶಿವಕುಮಾರ್‌, ಜಯರಾಮ್‌, ಪ್ರಭಾಕರ್‌, ದಿವಾಕರ್‌, ಶಿವರಾಜು ವೆಂಕಟೇಶ್‌, ಕೆಸಿಫ್ ಮುಖ್ಯ ಎಂಜಿನಿಯರ್‌ ವಿವೇಕ್‌, ಎಂಜಿನಿಯರ್‌ ಎಇಇ ಗುರುರಾಜ್‌, ಕುಮಾರ್‌ ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

ಸಾರ್ವಜನಿಕರ ಸಂಚಾರಕ್ಕೆ ಸಹಕಾರಿ: ಪಟ್ಟಣದ ಕಲ್ಯಾಗೇಟ್‌ ವೃತ್ತದಲ್ಲಿರುವ ಗಣಪತಿ ದೇವಸ್ಥಾನವನ್ನು ಒಟ್ಟಾರೆ ಎಲ್ಲರ ಅಭಿಪ್ರಾಯದಂತೆ ಅಲ್ಲೇ ಉಳಿಸುತ್ತೇವೆ. ವೃತ್ತದಲ್ಲಿಯೇ ಸ್ಥಾಪಿಸಲಾಗುವುದು. ಹೊಸಪೇಟೆ ವೃತ್ತದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ತೆರುವುಗೊಳಿಸಿ ಹಿಂಭಾಗದಲ್ಲಿ ಸ್ಥಳ ಗುರುತಿಸಿ ಸ್ಥಾಪಿಸಲಾಗುವುದು. ಹೊಸಪೇಟೆ, ಹೊಂಬಾಳಮ್ಮನಕೆರೆ ಏರಿ ಬಳಿ ಮತ್ತು ಕಲ್ಯಾಗೇಟ್‌ ವೃತ್ತ ಹಾಗೂ ಸೋಮೇಶ್ವರಸ್ವಾಮಿ ವೃತ್ತಗಳಲ್ಲಿ ಜೆಂಕ್ಷನ್‌ ಮಾಡಲಾಗುವುದು. ಇದರಿಂದ ಪಟ್ಟಣದ ಸೌಂದರ್ಯ ಹೆಚ್ಚುತ್ತದೆ. ಸಾರ್ವಜನಿಕರ ಸಂಚಾರಕ್ಕೆ ಸಹಕಾರಿ ಆಗುತ್ತದೆ ಎಂದು ಶಾಸಕ ಎ.ಮಂಜುನಾಥ್‌ ಹೇಳಿದರು.

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

BJPBJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

BJP MLA Munirathna: ನನಗೇ ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದರು

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

10

Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.