ಮಲ್ಪೆ: ಸ್ವಾಗತ ನೀಡುತ್ತಿದೆ ಸರ್ಕಲ್‌ ಬಳಿಯಿರುವ ಕಿತ್ತು ಹೋದ ರಸ್ತೆ…!


Team Udayavani, Dec 12, 2022, 5:42 AM IST

ಮಲ್ಪೆ: ಸ್ವಾಗತ ನೀಡುತ್ತಿದೆ ಸರ್ಕಲ್‌ ಬಳಿಯಿರುವ ಕಿತ್ತು ಹೋದ ರಸ್ತೆ…!

ಮಲ್ಪೆ: ದೇಶ ವಿದೇಶಗಳ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್‌ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಾಣುತ್ತಿದೆ. ಸುಂದರ ಸಮುದ್ರ ವೀಕ್ಷಣೆಗೆಂದು ದಿನನಿತ್ಯ ರಾಜ್ಯ ಹಾಗೂ ಹೊರ ರಾಜ್ಯದ ಮಂದಿ ಅಸಂಖ್ಯೆಯಲ್ಲಿ ಅಗಮಿಸುತ್ತಾರೆ. ಆದರೆ ಈ ಬೀಚ್‌ ಆರಂಭದಲ್ಲಿರುವ ಸ್ವಾಗತ ಕಮಾನಿನ ಸಮೀಪ ಸರ್ಕಲ್‌ ಬಳಿ ಕಿತ್ತು ಹೋದ ರಸ್ತೆ ಮಾತ್ರ ಎಲ್ಲರಿಗೆ ಸ್ವಾಗತ ಕೋರುವಂತಿದೆ.

ಮಳೆಗಾಲದ ಮೊದಲೇ ಈ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿದೆ. ವರ್ಷ ಕಳೆದರೂ ಗುಂಡಿ ಮುಚ್ಚುವ ಕೆಲಸಗಳು ಮಾತ್ರ ಸಂಭಂದಪಟ್ಟ ಇಲಾಖೆಯಿಂದ ಆಗಿಲ್ಲ. ಹೊಂಡ ಗುಂಡಿಗಳಿಂದ ತುಂಬಿದ ರಸ್ತೆಗಳಲ್ಲೇ ಜನರು ಪ್ರಯಾಸದ ಪ್ರಯಾಣ ಮಾಡಬೇಕು. ಕೋಡಿಬೆಂಗ್ರೆಯವರೆಗೂ ಬೀಚ್‌ ನೋಡಲು ವರ್ಷವಿಡೀ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಒಂದು ಕಡೆ ಸಮುದ್ರತೀರಕ್ಕೆ, ಇನ್ನೊಂದು ಕಡೆ ತೊಟ್ಟಂಗೆ ಹೋಗಲು ವಡಭಾಂಡೇಶ್ವರ ಸರ್ಕಲ್‌ ಆಗಿರುವುದರಿಂದ ಬೀಚ್‌ಗೆ ಹೋಗುವವರು ಸೇರಿದಂತೆ ಎಲ್ಲ ಬಸ್‌ಗಳು ಜನರನ್ನು ಇಲ್ಲೇ ಇಳಿಸಲು ನಿಲ್ಲಿಸುತ್ತದೆ.

ಪ್ರವಾಸೋದ್ಯಮದ ಹಿತ ಕಾಯುವಂತಹ ಮೂಲ ಸೌಕರ್ಯಗಳು ರಸ್ತೆಗಳು ಈ ಭಾಗದಲ್ಲಿ ಅಭಿವೃದ್ಧಿ ಯಾಗಬೇಕಿದೆ. ಮಾರ್ಗ ಸೂಚನಾ ಫಲಕ ಇಲ್ಲ ಈ ಸರ್ಕಲ್‌ನ ಪಶ್ಚಿಮ ಬದಿಯ ರಸ್ತೆ ಬೀಚ್‌ ಕಡೆಗೂ, ಪೂರ್ವ ಬದಿಯ ರಸ್ತೆ ತೊಟ್ಟಂ ಕಡೆಗೂ ಸಾಗುತ್ತದೆ. ಇಲ್ಲಿ ಸಮರ್ಪಕವಾದ ಮಾರ್ಗ ಸೂಚಕ ಫಲಕ ಇಲ್ಲದ ಕಾರಣ ಬೀಚ್‌ಗೆ ಹೋಗುವ ಬಹುತೇಕ ಪ್ರವಾಸಿಗರು ಈ ಸ್ಥಳದಲ್ಲಿ ಗೊಂದಲಕ್ಕೆ ಈಡಾಗುತ್ತಾರೆ. ಇಲ್ಲೊಂದು ಸಮರ್ಪಕ ಮಾರ್ಗ ಸೂಚಕ ಫಲಕವನ್ನು ಅಳವಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

ತತ್‌ಕ್ಷಣ ದುರಸ್ತಿಗೆ ಮುಂದಾಗಬೇಕು
ಇಲ್ಲಿನ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದರಿಂದ ಇಲ್ಲಿ ನಿತ್ಯಅಪಘಾತಗಳು ನಡೆಯುತ್ತಲೇ ಇದೆ. ಮುಖ್ಯವಾಗಿ ದ್ವಿಚಕ್ರ ಸವಾರರು ಸ್ಕಿಡ್ಡಾಗಿ ಬೀಳುತಿದ್ದಾರೆ. ಸಂಬಂಧಪಟ್ಟ ಆಡಳಿತ ಜನರ ಪ್ರಾಣದ ಜತೆ ಚೆಲ್ಲಾಟವಾಡದೇ ತತ್‌ಕ್ಷಣ ದುರಸ್ತಿಗೆ ಮುಂದಾಗಬೇಕು. -ಈಶ್ವರ್‌ ಮಲ್ಪೆ, ಸ್ಥಳೀಯ ಮುಳುಗು ತಜ್ಞ

ತಾತ್ಕಾಲಿಕ ಕ್ರಮ
ಲೋಕೋಪಯೋಗಿ ಇಲಾಖೆಯಿಂದ ಒನ್‌ ಟೈಮ್‌ ಗ್ರ್ಯಾಂಟ್‌ ಮೂಲಕ ವಡಭಾಂಡೇಶ್ವರ ಬಲರಾಮ ನಗರದಿಂದ ಕೊಳ ಶಿವಪಂಚಾಕ್ಷರಿ ಭಜನ ಮಂದಿರದವರೆಗೆ ರಸ್ತೆ ಕಾಮಗಾರಿ ನಡೆಯಲಿದ್ದು, ಪ್ರಸ್ತುತ ಕಾಮಗಾರಿ ಟೆಂಡರ್‌ ಹಂತದಲ್ಲಿದೆ. ಸರ್ಕಲ್‌ ಬಳಿ ಕಿತ್ತು ಹೋದ ರಸ್ತೆಗೆ ತಾತ್ಕಾಲಿಕವಾಗಿ ತೇಪೆ ಕಾಮಗಾರಿ ನಡೆಸಲಾಗುವುದು.
-ಸುಮಿತ್ರಾ ನಾಯಕ್‌ ಅಧ್ಯಕ್ಷರು, ಉಡುಪಿ ನಗರಸಭೆ

ಟಾಪ್ ನ್ಯೂಸ್

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

4

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

1

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

13(1)

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

mantrika kannada movie

Kannada Cinema; ಮಾಂತ್ರಿಕ ಆಟ ಶುರು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

Prakarana Tanikha Hantadallide: ತೆರೆಮೇಲೆ ಪ್ರಕರಣದ ವಿವರ

3-aranthodu

Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.