![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Dec 13, 2022, 12:55 PM IST
ಮೊಗಾದಿಶು(ಆಫ್ರಿಕಾ): ಭಾರತೀಯ ಉಪಖಂಡದಾದ್ಯಂತ ಸಮೋಸಾ ಜನಪ್ರಿಯ ತಿಂಡಿಯಾಗಿದೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳದಲ್ಲಿ ಜನರು ಸಮೋಸಾದ ಜತೆ ಟೀಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಹೀಗೆ ಅನೇಕ ಭಾರತೀಯ ಖಾದ್ಯಗಳು ವಿದೇಶಗಳಲ್ಲೂ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ತಿಳಿದಿರುವಂತೆ ಪಾಶ್ಚಾತ್ಯ ದೇಶಗಳಲ್ಲಿಯೂ ಸಮೋಸಾ ಅಂಗಡಿಗಳು ಜನಪ್ರಿಯವಾಗಿವೆ.
ಇದನ್ನೂ ಓದಿ:ಒಂದೆಡೆ ಮದುವೆ, ಮತ್ತೊಂದೆಡೆ ಗಲಾಟೆ..: ಏನಿದು ವೈರಲ್ ವಿಡಿಯೋ
ಆಲೂಗಡ್ಡೆ, ವಿವಿಧ ತರಕಾರಿಗಳನ್ನೊಳಗೊಂಡ ಗರಿಗರಿಯಾದ ಸಮೋಸಾ ಹಲವರಿಗೆ ಮೆಚ್ಚಿನ ತಿಂಡಿಯಾಗಿದೆ. ಆದರೆ ಈ ಜನಪ್ರಿಯ ತಿಂಡಿ ಜಗತ್ತಿನ “ಈ” ದೇಶದಲ್ಲಿ ನಿಷೇಧಿಸಲಾಗಿದೆ ಎಂಬ ವಿಚಾರ ನಿಮಗೆ ತಿಳಿದಿದೆಯಾ? ಹೌದು ಈ ದೇಶದ ಕಾನೂನು ಪ್ರಕಾರ ಸಮೋಸಾ ತಯಾರಿಸುವುದಾಗಲಿ ಅಥವಾ ತಿನ್ನುವುದಾಗಲಿ ಅಪರಾಧ! ಒಂದು ವೇಳೆ ನೀವು ಕಾನೂನು ಉಲ್ಲಂಘಿಸಿದರೆ ನಿಮಗೆ ಶಿಕ್ಷೆ ಖಚಿತ ಎಂದು ವರದಿ ತಿಳಿಸಿದೆ.
ಆಫ್ರಿಕಾದ ಸೋಮಾಲಿಯಾದಲ್ಲಿ ಸಮೋಸಾ ನಿಷೇಧಿತ ತಿಂಡಿಯಾಗಿದೆ. ಜನಪ್ರಿಯ ಪಾಶ್ಚಾತ್ಯ ತಿಂಡಿ ಸಮೋಸಾವನ್ನು ಸೋಮಾಲಿಯಾದ ಉಗ್ರಗಾಮಿ ಇಸ್ಲಾಮ್ ಬಂಡುಕೋರರು ನಿಷೇಧಿಸಿ ಫರ್ಮಾನು ಹೊರಡಿಸಿದ್ದಾರೆ. ಸೋಮಾಲಿಯಾದಲ್ಲಿ ನಡೆಯುತ್ತಿರುವ ನಾಗರಿಕ ಯುದ್ಧದಲ್ಲಿ ಅಲ್ ಶಬಾಬ್ ಮೂಲಭೂತವಾದಿ ಗುಂಪು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಗುಂಪು ಸೋಮಾಲಿಯದಲ್ಲಿನ ಅಲ್ ಖೈದಾ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಸೋಮಾಲಿಯಾದ ಬಹುತೇಕ ಭಾಗ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದು, 2011ರಿಂದ ಸಮೋಸಾವನ್ನು ನಿಷೇಧಿಸಿರುವುದಾಗಿ ವರದಿ ವಿವರಿಸಿದೆ.
ಸಮೋಸಾ ನಿಷೇಧದ ಬಗ್ಗೆ ಉಗ್ರಗಾಮಿ ಗುಂಪು ಅಧಿಕೃತವಾಗಿ ಯಾವುದೇ ವಿವರಣೆಯನ್ನು ನೀಡಿಲ್ಲ. ಆದರೆ ಸಮೋಸಾ ಕ್ರಿಶ್ಚಿಯನ್ ಸಮುದಾಯದ ಶಿಲುಬೆಯಂತೆ ತ್ರಿಕೋನಾಕೃತಿಯಲ್ಲಿರುವುದರಿಂದ ಉಗ್ರಗಾಮಿ ಗುಂಪು ಅದನ್ನು ನಿಷೇಧಿಸಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿವೆ. ಸ್ಥಳೀಯವಾಗಿ ಸಾಂಬುಸಾಸ್ (ಸಮೋಸಾ) ಎಂದು ಕರೆಯಲಾಗುವ ಈ ತಿಂಡಿಯನ್ನು ಯಾರಾದರೂ ತಿನ್ನುವುದಾಗಲಿ ಅಥವಾ ತಯಾರಿಸುವುದು ಕಂಡುಬಂದಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ವರದಿ ತಿಳಿಸಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.