![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Dec 15, 2022, 5:51 PM IST
ಮುಂಬಯಿ: ಕೆಲ ದಿನಗಳ ಹಿಂದೆ ಆಸ್ತಿ ವಿಚಾರಕ್ಕೆ ಹಿರಿಯ ನಟಿ ವೀಣಾ ಕಪೂರ್ ಅವರನ್ನು ಮಗನೇ ಹೊಡೆದು ಸಾಯಿಸಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇದೀಗ ಈ ಸುದ್ದಿ ಸುಳ್ಳೆಂದು ನಟಿಯೇ ಸ್ವತಃ ಠಾಣೆಗೆ ಬಂದು ದೂರು ನೀಡಿದ್ದಾರೆ.
ಕೊಲೆಯಾಗಿರುವುದು ವೀಣಾ ಕಪೂರ್ ಹೆಸರುವುಳ್ಳ ಬೇರೆ ಮಹಿಳೆ. ಕೆಲ ಮಾಧ್ಯಮಗಳು ಕೊಲೆಯಾಗಿರುವುದು ನಾನೇ ಎಂದು ನನ್ನ ಫೋಟೋ ಬಳಸಿಕೊಂಡು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ನಾನು ವಾಸಿಸುತ್ತಿರುವುದು ಗುರಗಾಂವ್ ನಲ್ಲಿ ಘಟನೆ ನಡೆದಿರುವುದು ಜುಹುವುನಲ್ಲಿ. ನಾನು ಮಗನೊಟ್ಟಿಗೆ ವಾಸಿಸುತ್ತಿದ್ದೇನೆ. ಆ ಕಾರಣದಿಂದ ಜನ ಆ ಸುದ್ದಿಯನ್ನು ಸತ್ಯವೆಂದೇ ನಂಬಿದ್ದಾರೆ ಎಂದು ನಟಿ ಹೇಳಿದ್ದಾರೆ.
ನಾನಿನ್ನು ಸತ್ತಿಲ್ಲ. ನಾನು ಬದುಕಿದ್ದೇನೆ ವದಂತಿಗಳನ್ನು ನಂಬಬೇಡಿ ಎಂದಿರುವ ನಟಿ ಈಗ ನಾನು ಈ ಬಗ್ಗೆ ದೂರು ದಾಖಲಿಸದಿದ್ದರೆ ಮುಂದೆ ಮತ್ತೊಬ್ಬರಿಗೂ ಇದೇ ರೀತಿ ಆಗಬಹುದು. ಈ ಬಗ್ಗೆ ಕೇಳೋಕೆ ನನಗೆ ನೂರಾರು ಮಂದಿ ಕರೆ ಮಾಡಿದ್ದಾರೆ. ಅವರಿಗೆಲ್ಲ ಹಗಲು ರಾತ್ರಿ ಉತ್ತರಿಸಿ ಮಾನಸಿಕವಾಗಿ ನಾನು ನೊಂದಿದ್ದೇನೆ. ಕೆಲಸದ ಕಡೆಯೂ ನನಗೆ ಗಮನ ಹರಿಸಲು ಆಗುತ್ತಿಲ್ಲ ಆ ಕಾರಣದಿಂದ ನಾನು ದೂರು ನೀಡುತ್ತಿದ್ದೇನೆ ಎಂದಿದ್ದಾರೆ.
ಸುಳ್ಳು ಸುದ್ದಿ ಹಬ್ಬಿಸಿ, ನಟಿಯ ಫೋಟೋಗಳನ್ನು ಬಳಸಿದವರ ವಿರುದ್ಧ ದಿಂಡೋಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.