ಶಿಖರ ಶ್ರೇಣಿಗೇರಲು ಬೇಕಿದೆ ಸೂಕ್ತ ಪರಿಹಾರದ ಏಣಿ

ಹರೀಶ್‌ ಪೂಂಜ ಅವರ ಮುತುವರ್ಜಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ

Team Udayavani, Dec 17, 2022, 11:35 AM IST

ಶಿಖರ ಶ್ರೇಣಿಗೇರಲು ಬೇಕಿದೆ ಸೂಕ್ತ ಪರಿಹಾರದ ಏಣಿ

ಬೆಳ್ತಂಗಡಿ: ಒಂದೆಡೆ ಪಶ್ಚಿಮಘಟ್ಟದ ತಪ್ಪಲು. ಮತ್ತೂಂದೆಡೆ ಜಿಲ್ಲೆಯ ಪವಿತ್ರ ನದಿ ನೇತ್ರಾವತಿ ಹರಿಯುವ ಹಚ್ಚಹಸುರ ಕೃಷಿ ಭರಿತ ಊರು ಮಲವಂತಿಗೆ ಗ್ರಾಮ. ಸಮಸ್ಯೆಗಳ ಬೆಟ್ಟವನ್ನು ಪರಿಹಾರದಂತಹ ಏಣಿ ಇಟ್ಟು ಏರುವಂತ ತವಕ ಜನಸಾಮಾನ್ಯರದ್ದು. ಅಂತಹ ಮಲವಂತಿಗೆ ಗ್ರಾಮದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ| ರವಿ ಕುಮಾರ್‌ ಅವರು ಡಿ. 17ರಂದು ಜಿಲ್ಲಾ ಮಟ್ಟದ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.

ಈ ಹಿಂದೆ ತಾಲೂಕಿನ ಶಿಶಿಲ ಗ್ರಾಮದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಮೊದಲ ಗ್ರಾಮ ವಾಸ್ತವ್ಯ ಹೂಡಿದ್ದರು. ಇದೀಗ ತಾಲೂಕಿನಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ 2ನೇ ಗ್ರಾಮ ವಾಸ್ತವ್ಯ ಇದಾಗಿದೆ. ಕಳೆದ ಬಾರಿಗಿಂತ ಈ ಬಾರಿ ಇನ್ನಷ್ಟು ಬೇಡಿಕೆಗಳಿವೆ. ಅರಣ್ಯದಂಚಿನ ಊರಿನಲ್ಲಿ ಕೃಷಿ ಪ್ರಧಾನ ಭೂಮಿಗೆ ಆನೆ ಸಹಿತ ಕಾಡು ಪ್ರಾಣಿಗಳ ಉಪಟಳ ಒಂದೆಡೆಯಾದರೆ, ಅಡಿಕೆ ಬೆಳೆಗೆ ಎಲೆಚುಕ್ಕಿ ರೋಗ ಬಂದು ಕೃಷಿ ಜರ್ಝರಿತವಾಗುತ್ತಿದೆ. ಅತ್ತ ಅಕ್ರಮ ಸಕ್ರಮ, 94 ಸಿ, ಸೇರಿದಂತೆ ಅರಣ್ಯದಂಚಿನಲ್ಲಿ ಬರುವ ರಸ್ತೆಗಳಿಗೆ ಕಾಯಕಲ್ಪ ಬೇಕಿದೆ.

ತಾಲೂಕಿನ ಅತ್ಯಂತ ಹಿಂದುಳಿದ ಗ್ರಾಮವಾದ ಮಲವಂತಿಗೆಯಲ್ಲಿ ಹಲವಾರು ಸಮಸ್ಯೆಗಳಿವೆ. ಒಂದು ಕಾಲದಲ್ಲಿ ಮೂಲ ಸೌಕರ್ಯವಿಲ್ಲದೆ ನಲುಗಿತ್ತು. 30 ವರ್ಷಗಳ ಹಿಂದೆ ಉದಯವಾಣಿ ಈ ಊರಿನ ಚಿತ್ರಣವನ್ನು “ಕುಗ್ರಾಮ ಗುರುತಿಸಿ’ ಎಂಬ ಸರಣಿಯಲ್ಲಿ ವರದಿಯಲ್ಲಿ ಬಿತ್ತರಿಸಿತ್ತು. ಅದಾದ ಬಳಿಕ ಸರಕಾರದ ಗಮನಕ್ಕೆ ತಂದು ಸೇತುವೆ, ರಸ್ತೆ ಸಹಿತ ಪ್ರಗತಿಯ ಪಥವೇರಿತ್ತು. ಕೃಷಿ ಮೂಲವಾಗಿದ್ದರಿಂದ ಜನ ಒಂದು ಮಟ್ಟಿಗೆ ತಾವೇ ಬದುಕು ಕಟ್ಟಿಕೊಂಡಿದ್ದಾರೆ. ಸರಕಾರದ ಅಲ್ಪಸ್ವಲ್ಪ ಆಸರೆಗಳು ಬರುತ್ತಾ ಸಾಗುವಾಗಲೆ ಕಳೆದ 2019ರಲ್ಲಿ ನೆರೆಯ ಛಾಯೆ ಮತ್ತೆ ಕುಗ್ರಾಮದ ಪರಿಸ್ಥಿತಿಗೆ ತಳ್ಳಿತ್ತು. ಆ ಸಂದರ್ಭದಲ್ಲಿ ಶಾಸಕ ಹರೀಶ್‌ ಪೂಂಜ ಅವರ ಮುತುವರ್ಜಿಯಿಂದ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ. ಮಲವಂತಿಗೆ ಆಸುಪಾಸು ಗ್ರಾಮದಲ್ಲೇ ಸುಮಾರು 150ಕ್ಕೂ ಅಧಿಕ ಮನೆಗಳು ಸರಕಾರದಿಂದ ನಿರ್ಮಾಣವಾಗಿದೆ.

ಎಳನೀರು, ಗುತ್ಯಡ್ಕಕ್ಕೆ ಬೇಕಿದೆ ಮುಕ್ತಿ
ಬೆಳ್ತಂಗಡಿಯಿಂದ 120 ಕಿ.ಮೀ., ಚಿಕ್ಕಮಗಳೂರು ಭಾಗಕ್ಕೆ 10 ಕಿ.ಮೀ. ಎಂಬ ಪರಿಸ್ಥಿತಿ ಎಳನೀರು, ಗುತ್ಯಡ್ಕ ಗ್ರಾಮದ ಜನತೆಯದ್ದು. 100ಕ್ಕೂ ಅಧಿಕ ಕುಟುಂಬಗಳು ಗುಡ್ಡದ ಮಧ್ಯೆ ಜೀವನ ಸಾಗಿಸುತ್ತಿವೆ.

ಅನಧಿಕೃತ ಹೋಂ ಸ್ಟೇಗಳು
ಇಲ್ಲಿನ ಪ್ರೇಕ್ಷಣೀಯ ಸ್ಥಳ, ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುವ ಕಾರಣ ಅನಧಿಕೃತ ಹೋಂ ಸ್ಟೇ ಗಳು ತಲೆ ಎತ್ತುತ್ತಿವೆ. ಪಂಚಾಯತ್‌ನಿಂದ ಕೇವಲ ಎರಡು ಹೋಂ ಸ್ಟೇಗೆ ಮಾತ್ರ ಅನುಮತಿ ನೀಡಲಾಗಿದ್ದು ಇನ್ನೊಂದು ಅರ್ಜಿ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕಿದೆ.

ಇಲ್ಲಿನ ಪ್ರೇಕ್ಷಣೀಯ ಸ್ಥಳ, ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುವ ಕಾರಣ ಅನಧಿಕೃತ ಹೋಂ ಸ್ಟೇ ಗಳು ತಲೆ ಎತ್ತುತ್ತಿವೆ. ಪಂಚಾಯತ್‌ನಿಂದ ಕೇವಲ ಎರಡು ಹೋಂ ಸ್ಟೇಗೆ ಮಾತ್ರ ಅನುಮತಿ ನೀಡಲಾಗಿದ್ದು ಇನ್ನೊಂದು ಅರ್ಜಿ ಪರಿಶೀಲನೆ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಬೇಕಿದೆ.

ಅಡಿಕೆಯನ್ನು ಕೊಳ್ಳೆ ಹೊಡೆದ ಎಲೆಚುಕ್ಕಿ
ಎಲೆಚುಕ್ಕಿರೋಗ ಮಲವಂತಿಗೆ ಗ್ರಾಮದ ಎಳನೀರು ಭಾಗಕ್ಕೆ ಆವರಿಸಿ 150 ಎಕ್ರೆಯಷ್ಟು ಅಡಿಕೆ ಗಿಡ ನಶಿಸುವ ಹಂತದಲ್ಲಿದೆ. 2019ರಲ್ಲಿ ಆರಂಭವಾದ ಎಲೆ ಚುಕ್ಕಿ ರೋಗ ಪ್ರಸಕ್ತ ಅಲ್ಲಿಂದ ಕೆಳಭಾಗಕ್ಕೆ ಹಬ್ಬಿದೆ. ಇದರ ಸಂಪೂರ್ಣ ನಿರ್ಮೂಲನೆಗೆ ಏನು ಕ್ರಮ ಎಂಬ ಪ್ರಶ್ನೆ ಜಿಲ್ಲಾಧಿಕಾರಿಗೆ ಎದುರಾಗುವುದರಲ್ಲಿ ಅಚ್ಚರಿಯಿಲ್ಲ.

*ಕಜಕ್ಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟ್ಟದ ಗ್ರಾಮ ವಾಸ್ತವ್ಯ
*10 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ
* ಜಿಲ್ಲಾಧಿಕಾರಿಗಳಿಂದ ವಿವಿಧ ಮಾಸಾಶನ ವಿತರಣೆ
* ಸ್ಥಳೀಯ ಶಾಲೆ, ಅಂಗನವಾಡಿ, ನ್ಯಾಯಬೆಲೆ ಅಂಗಡಿ ಭೇಟಿ
*ಕೃಷಿ, ಆಹಾರ, ಆರೋಗ್ಯ ಇಲಾಖೆಯಿಂದ ಸ್ಟಾಲ್‌ (ಮಾಹಿತಿ , ಆರೋಗ್ಯ ತಪಾಸಣೆ)
* ಸಾರ್ವಜನಿಕರ ತೊಂದರೆಗಳಿಗೆ ಸ್ಥಳದಲ್ಲಿ ಪರಿಹಾರ

ಪೂರಕ ಸಿದ್ದತೆ
ಜಿಲ್ಲಾಧಿಕಾರಿಗಳು ಮಲವಂತಿಗೆ ಶಾಲೆಯಲ್ಲಿ ಡಿ. 17ರಂದು ಗ್ರಾಮ ವಾಸ್ತವ್ಯ ಹೂಡುವ ಹಿನ್ನೆಲೆ ಇಲಾಖೆಯಿಂದ ಕಡತ ವಿಲೇವಾರಿಗೆ ಪೂರಕ ಸಿದ್ಧತೆ ಕೈಗೊಳ್ಳಲಾಗಿದೆ. ಸ್ಥಳದಲ್ಲಿ ಬರುವ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು.
-ಪೃಥ್ವಿ ಸಾನಿಕಮ್ , ತಹಶೀಲ್ದಾರ್‌

*ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

10

Puttur: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು

1

Puttur: ವಿದ್ಯುತ್‌ ಉಪಕರಣದಲ್ಲಿ ಬೆಂಕಿ

Ninthikallu-ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಹೊಂಡ-ಗುಂಡಿಗಳದ್ದೇ ಸಾಮ್ರಾಜ್ಯ

Ninthikallu-ಬೆಳ್ಳಾರೆ-ಸುಳ್ಯ ರಸ್ತೆಯಲ್ಲಿ ಹೊಂಡ-ಗುಂಡಿಗಳದ್ದೇ ಸಾಮ್ರಾಜ್ಯ

High Court ನಿರ್ದೇಶನ: ಕೊಂಬಾರಿನ ರಸ್ತೆ, ಬಿರ್ಮೆರೆಗುಂಡಿ ಸೇತುವೆಗೆ 1.31 ಕೋಟಿ ರೂ.

High Court ನಿರ್ದೇಶನ: ಕೊಂಬಾರಿನ ರಸ್ತೆ, ಬಿರ್ಮೆರೆಗುಂಡಿ ಸೇತುವೆಗೆ 1.31 ಕೋಟಿ ರೂ.

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.