ಉಪ್ಲಾಡಿಯಲ್ಲಿ ಸರಣಿ ಅಪಘಾತ; ಬೈಕ್ ಸವಾರ ಮೃತ್ಯು
Team Udayavani, Dec 18, 2022, 12:12 AM IST
ಕೋಟ : ಬೈಕ್ಗಳೆರಡರ ನಡುವೆ ಅಪಘಾತ ಸಂಭವಿಸಿ, ಎದುರಿನಿಂದ ಬರುತ್ತಿದ್ದ ಕಾರಿನ ಚಕ್ರದಡಿ ಓರ್ವ ಬೈಕ್ ಸವಾರ ಸಿಲುಕಿ ಸಾವನ್ನಪ್ಪಿದ ಘಟನೆ ಬನ್ನಾಡಿ ಸಮೀಪ ಉಪ್ಲಾಡಿಯಲ್ಲಿ ಡಿ. 16ರಂದು ರಾತ್ರಿ ಸಂಭವಿಸಿದೆ.
ಗದಗ ನಿವಾಸಿ, ಪ್ರಸ್ತುತ ಅಲ್ತಾರಿನಲ್ಲಿ ಕಲ್ಲು ಕೋರೆ ಕಾರ್ಮಿಕನಾಗಿ ದುಡಿಯುತ್ತಿರುವ ಗಂಗಾಧರ ಪುಣೇಕರ್ (22) ಸಾವನ್ನಪ್ಪಿದ ಯುವಕ.
ಗಂಗಾಧರ ಅವರು ಕುಂದಾಪುರದಲ್ಲಿ ಕರಾಟೆ ತರಬೇತಿ ಮುಗಿಸಿ ಸಾೖಬ್ರಕಟ್ಟೆಯಲ್ಲಿರುವ ಮನೆ ಕಡೆ ತೆರಳುತ್ತಿರುವಾಗ ಬೈಕ್ಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಗಂಗಾಧರ್ ರಸ್ತೆಗೆ ಬಿದ್ದಿದ್ದಾನೆ. ಈ ಸಂದರ್ಭ ಎದುರುಗಡೆ ಬನ್ನಾಡಿಯಿಂದ ಕೋಟ ಕಡೆಗೆ ಸಂಚರಿಸುತ್ತಿದ್ದ ಕಾರೊಂದು ಮೈ ಮೇಲೆ ಹರಿದಿದ್ದು, ಅಪಘಾತದ ತೀವ್ರತೆಗೆ ಗಂಗಾಧರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತ ಯುವಕ ತಂದೆ, ತಾಯಿಯನ್ನು ಅಗಲಿದ್ದಾನೆ.
ದೂರು-ಪ್ರತಿದೂರು
ಅಪಘಾತಕ್ಕೆ ಬೈಕ್ ಸವಾರನ ನಿರ್ಲಕ್ಷ್ಯ ಕಾರಣ ಎಂದು ಕಾರು ಚಾಲಕ ದೂರು ನೀಡಿದ್ದಾನೆ. ಬೈಕ್ ಸವಾರ ಹಾಗೂ ಕಾರು ಚಾಲಕನ ನಿರ್ಲಕ್ಷéವೇ ಕಾರಣ ಎನ್ನುವುದಾಗಿ ಗಂಗಾಧರ ಅವರ ಸಹೋದರ ಪ್ರತಿದೂರು ದಾಖಲಿಸಿದ್ದಾನೆ. ಕೋಟ ಠಾಣಾಧಿಕಾರಿ ಮಧು ಬಿ. ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ : ಮೂಲ್ಕಿ: ಬಾಲಕಿಯೊಂದಿಗೆ ಅಸಭ್ಯ ವರ್ತನೆ; ಯುವಕನನ್ನು ಕಟ್ಟಿ ಹಾಕಿ ಹಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಅ.11ರಂದು ಕಾಪು ಪಿಲಿ ಪರ್ಬ- ಸೀಸನ್ 2 ಹುಲಿವೇಷ ಕುಣಿತ ಸ್ಪರ್ಧೆ
Hebri: ಮುದ್ರಾಡಿ ಬಲ್ಲಾಡಿ ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ವೃದ್ಧೆಯ ಮೃತದೇಹ ಪತ್ತೆ
Hebri: ವರುಣನ ರುದ್ರ ನರ್ತನ: ಮುದ್ರಾಡಿ ಬಲ್ಲಾಡಿ ಪರಿಸರ ತತ್ತರ
Gangolli: ಶ್ರೀ ಮಹಾಂಕಾಳಿ ದೇಗುಲದ ಅಡವಿರಿಸಿದ್ದ 256 ಗ್ರಾಂ ಚಿನ್ನಾಭರಣ ವಶ
Railway Connectivity: ಕರಾವಳಿಯಿಂದ ತಿರುಪತಿಗೆ ರೈಲು ಸಂಪರ್ಕ ಕಲ್ಪಿಸಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vitla : ಭಾರೀ ಮಳೆಗೆ ಆಯತಪ್ಪಿ ಹೊಳೆಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಿದ ಯುವಕರು
Gadag; ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ
ನವರಾತ್ರಿ ಪ್ರಯುಕ್ತ ಮೌನ ವ್ರತ ಆಚರಣೆ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಭವನದ ಗಡಿಯಾರ!
Ratan Tata ಆರೋಗ್ಯದಲ್ಲಿ ಏರುಪೇರು-ಆಸ್ಪತ್ರೆಗೆ ದಾಖಲು: ಆತಂಕ ಬೇಡ: ರತನ್ ಟಾಟಾ
Gadag: ಕಾನೂನು ಸಚಿವರ ತವರಲ್ಲಿ ವ್ಯಾಜ್ಯ ಮುಕ್ತ ಗ್ರಾಮಕ್ಕಾಗಿ ಜಾಗೃತಿ ಅಭಿಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.