ರೈತರು ಉದ್ಯಮಿಗಳಾಗಿ ಆರ್ಥಿಕವಂತರಾಗಿ; ಡಾ| ಚನ್ನಬಸವಶ್ರೀ
ರೈತನು ಉದ್ಯಮಿದಾರನಾದರೆ ಮಾತ್ರ ಆತನಿಗೆ ಸಾಲದ ಸಂಕಷ್ಟ ತಪ್ಪಲು ಸಾಧ್ಯ.
Team Udayavani, Dec 20, 2022, 3:27 PM IST
ಜಮಖಂಡಿ: ರೈತರು ಕೃಷಿಯನ್ನು ಉದ್ಯಮವನ್ನಾಗಿಸಿಕೊಂಡು ಆರ್ಥಿಕವಾಗಿ ಸಬಲರಾದಾಗ ದೇಶ ಆರ್ಥಿಕ ಉತ್ತಮಗೊಳ್ಳಲು ಸಾಧ್ಯವೆಂದು ಓಲೇಮಠದ ಡಾ| ಚನ್ನಬಸವ ಶ್ರೀ ಹೇಳಿದರು.
ಸಾವಳಗಿಯಲ್ಲಿ ನೂತನವಾಗಿ ಕಬ್ಬಿಣರಸ ಉತ್ಪಾದನಾ ಘಟಕ ಉದ್ಘಾಟನೆ ಮತ್ತು ಜಿನಸೇನ ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆ ಮಾತೃಛಾಯಾ ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ರೈತ ಸಾವಯವ ಕೃಷಿ ಪದ್ದತಿ ರೂಢಿಸಿಕೊಂಡು ಕೃಷಿ ನಡೆಸುವ ಕಾಲ ಮತ್ತೇ ಬರಲಿದೆ. ಕ್ರಿಮಿನಾಶಕಗಳು ಆರೋಗ್ಯಕ್ಕೆ ಹಾನಿಕರವಾಗಿವೆಎಂದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ರೈತ ಆರ್ಥಿಕವಾಗಿ ಬೆಳೆಯಬೇಕಾದರೆ ಉದ್ಯೋಗದಲ್ಲಿ ಹೆಚ್ಚು ಆಸಕ್ತನಾಗಬೇಕು.
ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಲಭಿಸಲು ಸಾವಯವ ಕೃಷಿ ಪದ್ದತಿಗೆ ಶರಣಾಗಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದು, ಯಾರನ್ನು ನಂಬುವ ಸ್ಥಿತಿಯಲ್ಲಿಲ್ಲ. ರೈತನು ಉದ್ಯಮಿದಾರನಾದರೆ ಮಾತ್ರ ಆತನಿಗೆ ಸಾಲದ ಸಂಕಷ್ಟ ತಪ್ಪಲು ಸಾಧ್ಯ. ಸರ್ಕಾರಗಳು ರಿಯಾಯತಿಯಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದ್ದು, ಸದುಪಯೋಗ ಮಾಡಿಕೊಳ್ಳಬೇಕೆಂದರು.
ಶಿವಮೊಗ್ಗದ ಸುಭೀಕ್ಷಾ ಆರ್ಗಾನಿಕ ಸಂಸ್ಥೆ ಅಧ್ಯಕ್ಷ ಆನಂದ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನಿಗಳಾದ ಡಾ| ಟಿ.ಟಿ.ಭೋರ್ಸೆ, ಎ.ಚಕ್ರವರ್ತಿ, ಡಾ| ಸಂಜಯ ಪಾಟೀಲ, ಡಾ| ಕೆ.ಆರ್. ಹುಲ್ಲುನಾಜೇಗೌಡ, ಅಪರಾಧ ವಿಭಾಗದ ಎಸ್ಪಿ ಜಿನೇಂದ್ರ ಖನಗಾವಿ, ಪ್ರಶಾಂತ ಭಾಗವತ್, ಅಭಯ ನಾಂದ್ರೇಕರ ಮಾತನಾಡಿದರು.
ರಾಜಸ್ಥಾನ ತಿಜಾರಾ ಪದ್ಮಾವತಿಧಾಮದ ಸೌರಭಸೇನ ಭಟ್ಟಾರಕಜೀ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಜಗಸೀಶ ಗುಡಗುಂಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ, ಆರ್ .ಟಿ.ಪಾಟೀಲ, ಪತ್ರಕರ್ತ ಗುರುರಾಜ ವಾಳ್ವೆಕರ, ಸಿ.ಟಿ.ಉಪಾಧ್ಯೆ, ಧಾರವಾಡದ ಖೋತ, ಕಿಶನ್ ಚಕ್ರವರ್ತಿ, ಸಂಗಪ್ಪ ಲೋಬೋಗೋಳ, ಡಾ| ಆನಂದ ಉಪಾಧ್ಯೆ, ಸಾವಳಗಿ ಗ್ರಾಪಂ ಅಧ್ಯಕ್ಷೆ ಸುನಂದಾ ಮಾನೋಜ, ಉಪಾಧ್ಯಕ್ಷೆ ಮನ್ನುಮತಿ ಉಪಾಧ್ಯೆ, ಕೃಷಿ ಸಹಾಯಕ ನಿರ್ದೆಶಕ ಬಿ.ಜಿ.ಬುಜರುಖ್, ಶ್ರೀಮಂತವ್ವ ಚಂದು ಆಲಗೂರ ಇದ್ದರು.ತವನಪ್ಪ ಆಲಗೂರ ಸ್ವಾಗತಿಸಿದರು. ಚಿತ್ತ್ರಂಜನ್ ನಾಂದ್ರೇಕರ ನಿರೂಪಿಸಿದರು. ಪಾಶ್ವನಾಥ ಉಪಾಧ್ಯೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ… ರಾತ್ರಿಯಿಡಿ ಸಾಗುವ ರಥೋತ್ಸವ
Pak flag ಹಾರಾಡುವ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ
Mudhol: ಆರ್ಎಸ್ಎಸ್ನಿಂದ ದೇಶಕ್ಕೆ ಕಂಟಕ: ಆರ್.ಬಿ.ತಿಮ್ಮಾಪುರ
Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.