ಹಾಲು ಕೊಡದ ಆಕಳು ಕೊಟ್ಟು ಕಲಬುರ್ಗಿ ರೈತರಿಗೆ ಮೋಸ ಮಾಡಿದರಾ ಸವಿತಾನಂದ ಶ್ರೀ!


Team Udayavani, Dec 20, 2022, 8:02 PM IST

ಹಾಲು ಕೊಡದ ಆಕಳು ಕೊಟ್ಟು ಕಲಬುರ್ಗಿ ರೈತರಿಗೆ ಮೋಸ ಮಾಡಿದ ಸವಿತಾನಂದ ಶ್ರೀ!

ವಾಡಿ: ಹೈನುಗಾರಿಕೆ ಮತ್ತು ಹಾಲು ಮಾರಾಟಕ್ಕಾಗಿ ಹಸು ಖರೀದಿಸಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ ತಲಾ 2 ಲಕ್ಷ ರೂ. ಸಾಲ ಸೌಲಭ್ಯ ಪಡೆದ ಜಿಲ್ಲೆಯ ನೂರಾರು ರೈತರಿಗೆ ಚಿತ್ತಾಪೂರ ತಾಲೂಕಿನ ಕೊಂಚೂರು ಮಹರ್ಷಿ ಸವಿತಾ ಪೀಠದ ಪೀಠಾಧ್ಯಕ್ಷ ಶ್ರೀಸವಿತಾನಂದನಾಥ ಸ್ವಾಮೀಜಿ ಮೋಸ ಮಾಡಿದ್ದಾರೆ. ದುಪ್ಪಟ್ಟು ಹಣ ವಸೂಲಿ ಮಾಡಿದರೂ ಹಾಲು ಕೊಡದ ಆಕಳು ಕೊಟ್ಟು ವಂಚಿಸಿದ್ದಾರೆ ಎಂದು ರೈತರು ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಂಗಳವಾರ ವಾಡಿ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ದೇವಾಪುರ ತಾಂಡಾದ ರೈತ ಹೀರಾ ಜಾಧವ, ಬ್ಯಾಂಕ್ ಮಧ್ಯವರ್ತಿ ಶ್ರೀಸವಿತಾನಂದನಾಥ ಸ್ವಾಮೀಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಮೂಲಕ ಸ್ವಾಮೀಜಿಯ ವಂಚಕ ಬುದ್ದಿಯನ್ನು ಬಯಲಿಗೆಳೆದಿದ್ದಾರೆ. ಕಲಬುರಗಿ ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚು ರೈತರಿಗೆ ತಲಾ ಎರಡು ಹಸು ಖರೀದಿಸಲು ಯಾದಗಿರಿ ಮತ್ತು ಕಲಬುರಗಿ ಸಹಕಾರ ಬ್ಯಾಂಕ್ ತಲಾ 2 ಲಕ್ಷ ರೂ. ಸಾಲ ಮಂಜೂರು ಮಾಡಿ ಖಾತೆಗೆ ಜಮೆ ಮಾಡಿದೆ. ಬ್ಯಾಂಕ್ ಮಧ್ಯವರ್ತಿಯಾಗಿರುವ ಕೊಂಚೂರು ಹರಿಪ್ರೀಯ ಗೋಶಾಲೆಯ ಶ್ರೀಸವಿತಾನಂದನಾಥ ಸ್ವಾಮೀಜಿ, ಜಿಲ್ಲೆಯ ರೈತರಿಗೆ ರಾಜಸ್ಥಾನ ಮೂಲದ ರಾಟಿ ತಳಿಯ ತಲಾ ಎರಡು ಆಕಳನ್ನು ಒಟ್ಟು 188,620 ರೂ.ಗೆ ನೀಡುವ ಹಾಗೂ ರೈತರಿಂದ ಪ್ರತಿದಿನ ಹಾಲು, ಗೋಮೂತ್ರ ಹಾಗೂ ಸೆಗಣಿ ಖರೀದಿಸುವ ವಾಗ್ಧಾನ ಮಾಡಿದ್ದಾರೆ. ಅವರ ಮಾತನ್ನು ನಂಬಿ ನಾವು ಸ್ವಾಮೀಜಿಯ ಖಾತೆಗೆ ಪೂರ್ಣ ಹಣ ಪಾವತಿಸಿದ್ದೇವೆ. ಮೂರು ತಿಂಗಳು ಕಳೆದರೂ ನಮಗೆ ಹಸು ತಂದು ಕೊಟ್ಟಿಲ್ಲ. ಕೆಲ ರೈತರಿಗೆ ಕೊಡಲಾಗಿರುವ ಹಸುಗಳು ಮುದಿತನಕ್ಕೆ ಬಂದಿವೆ. ಸರಿಯಾಗಿ ಹಾಲು ಕೊಡುತ್ತಿಲ್ಲ. ಕೆಲವು ಹಸುಗಳು ಅನಾರೋಗ್ಯದಿಂದ ಮೃತಪಟ್ಟಿವೆ. ಅಲ್ಲದೆ ಸ್ವಾಮೀಜಿ ಕೊಡುತ್ತಿರುವ ರಾಟಿ ಹಸುಗಳ ಬೆಲೆಯೂ ದುಪ್ಪಟ್ಟಾಗಿದೆ. ಹೀಗೆ ಪೂಜ್ಯನೀಯ ಸ್ಥಾನದಲ್ಲಿರುವ ಸ್ವಾಮೀಜಿ ಜಿಲ್ಲೆಯ ಮುಗ್ದ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ಕಿಡಿಕಾರಿದರು.

ರೈತರನ್ನು ದೂರವಿಟ್ಟು ಸ್ವಾಮೀಜಿಯೊಬ್ಬರೇ ಹಸುಗಳನ್ನು ಖರೀದಿಸಲು ರಾಜಸ್ಥಾನಕ್ಕೆ ಹೋಗಿರುವುದು ಯಾವನ್ಯಾಯ. ಖರೀದಿಸಿ ತರಲಾದ ನೂರಾರು ಹಸುಗಳ ದಾಖಲೆ ಪತ್ರಗಳಿಲ್ಲ. ಹಸುಗಳಿಗೆ ವಯಸ್ಸಾಗಿದ್ದು, ಪ್ರತಿದಿನ 10 ಲೀಟರ್ ಹಾಲು ಕೊಡುವುದು ಒತ್ತಟ್ಟಿಗಿರಲಿ ಅವು ಬಹಳ ದಿನ ಬದುಕುವ ಸ್ಥಿತಿಯಲ್ಲಿಲ್ಲ. ಇಂಥಹ ಹಸುಗಳನ್ನು ದುಪಟ್ಟು ದರಕ್ಕೆ ರೈತರಿಗೆ ನೀಡಲು ಹೊರಟಿರುವ ಗೋರಕ್ಷಕ ಸವಿತಾನಂದನಾಥ ಸ್ವಾಮೀಜಿ, ರೈತರನ್ನು ಜಾಣತನದಿಂದ ವಂಚಿಸುವ ತಂತ್ರ ಹೆಣೆದಿದ್ದಾರೆ ಎಂದು ದೂರಿದ ರೈತ ಹೀರಾ ಜಾಧವ, ಹಸುಗಳ ಬೆಲೆ ಎಷ್ಟೇಯಿರಲಿ ಸ್ವಾಮೀಜಿಯವರು ರೈತರ ಸಮ್ಮುಖದಲ್ಲಿ ಹಸುಗಳ ಖರೀದಿ ವ್ಯವಹಾರ ನಡೆಸಬೇಕು. ಅಥವ ನಮ್ಮ ಹಣ ನಮಗೆ ವಾಪಸ್ ಕೊಟ್ಟರೆ ನಾವೇ ಹಸುಗಳನ್ನು ಖರೀದಿಸಿ ಸ್ವಾಮೀಜಿಗೆ ಹಾಲು, ಗೋಮೂತ್ರ, ಸೆಗಣಿ ಮಾರಾಟ ಮಾಡುತ್ತೇವೆ ಎಂದರು.

ಹಳಕರ್ಟಿ ಗ್ರಾಮದ ಮುಖಂಡ ರಾಘವೇಂದ್ರ ಅಲ್ಲಿಪೂರ ಮಾತನಾಡಿ, ಸವಿತಾನಂದನಾಥ ಸ್ವಾಮೀಜಿ ಅವರು ರೈತರ ಮಾತು ಕೇಳಿಸಿಕೊಳ್ಳುತ್ತಿಲ್ಲ. ನಾನು ಖರೀದಿಸಿ ಕೊಡುತ್ತಿರುವ ಹಸುಗಳನ್ನೇ ನೀವು ಸಾಕಬೇಕು. ಇಲ್ಲದಿದ್ದರೆ ಬ್ಯಾಂಕ್ ನೀಡುವ ಸಾಲ ರದ್ದುಪಡಿಸಿಕೊಳ್ಳಿ ಎಂದು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಅನ್ಯಾಯ ಪ್ರಶ್ನಿಸುವ ರೈತರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ಕಡಿಮೆ ಹಣಕ್ಕೆ ಹಸು ಖರೀದಿಸಿ ರೈತರಿಂದ ದುಪ್ಪಟ್ಟು ಹಣ ಪಡೆಯುತ್ತಿರುವುದನ್ನು ಪ್ರಶ್ನಿಸಿದರೆ ರೈತರ ಮೇಲೆ ಕೈಮಾಡಲು ಬರುತ್ತಿದ್ದಾರೆ. ಬ್ಯಾಂಕ್ ಮಧ್ಯವರ್ತಿಯಾಗುವ ಮೂಲಕ ಈ ಸ್ವಾಮೀಜಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದೇವಾಪುರ ತಾಂಡಾದ ರೈತ ಪರಶುರಾಮ ರಾಠೋಡ, ಹಳಕರ್ಟಿ ಗ್ರಾಮದ ಮಹೆಬೂಬಸಾಬ ಲದಾಫ್, ಮಹ್ಮದ್ ಸೋಯಲ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ಇದನ್ನೂ ಓದಿ: ಪಾಲಾರ್ ಬಾಂಬ್ ಸ್ಫೋಟ ಪ್ರಕರಣ: ವೀರಪ್ಪನ್ ಸಹಚರ ಜ್ಞಾನಪ್ರಕಾಶ್‌ ಗೆ ಜಾಮೀನು

ಟಾಪ್ ನ್ಯೂಸ್

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

1-reess

Modi USA tour; ಭಾರತದ ಸೆಮಿಕಂಡಕ್ಟರ್‌ ಕನಸಿಗೆ ಈಗ ಹೊಸ ‘ಶಕ್ತಿ’

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Ambulance

Vahical Riders: ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್‌ ರದ್ದು: ಸಿಎಂ ಸಿದ್ದರಾಮಯ್ಯ

Chandra

Mini Moon!;ಇದೇ 29ರಿಂದ ಭೂಮಿಗೆ ಬರಲಿದೆ ಹೊಸ ಅತಿಥಿ

nitin-gadkari

4th term ಅಧಿಕಾರ ಗ್ಯಾರಂಟಿ ಇಲ್ಲ, ಆದರೆ…: ಕೇಂದ್ರ ಸಚಿವ ಗಡ್ಕರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ambulance

Vahical Riders: ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್‌ ರದ್ದು: ಸಿಎಂ ಸಿದ್ದರಾಮಯ್ಯ

High-Court

High Court: ಮರಗಳಿಗೆ ಕತ್ತರಿ: ಸರಕಾರ, ಜಿಲ್ಲಾಡಳಿತಕ್ಕೆ ನೋಟಿಸ್‌

High-Court

High Court: ಕೋರ್ಟ್‌ ಕಲಾಪದ ವೀಡಿಯೋ ಹಂಚಿಕೆಗೆ ತಡೆ: ಇಂದು ವಿಚಾರಣೆ

pratp

Challenge: ಮಹಿಷ ದಸರಾಕ್ಕೆ ಮುಂದಾದರೆ ಚಾಮುಂಡಿ ಚಲೋ: ಪ್ರತಾಪ್‌ ಸಿಂಹ

Balachandra

Thirupathi: ಲಡ್ಡು ವಿವಾದ ಬಳಿಕ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ: ಶಾಸಕ ಬಾಲಚಂದ್ರ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

Kundapura 3ದಿನ ಕಳೆದರೂ ಸಿಗದ ರುಂಡ; ಮುಂದುವರಿದ ಶೋಧ

1-reess

Modi USA tour; ಭಾರತದ ಸೆಮಿಕಂಡಕ್ಟರ್‌ ಕನಸಿಗೆ ಈಗ ಹೊಸ ‘ಶಕ್ತಿ’

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Wenlock Hospital: ಸಮಸ್ಯೆ ನಿವಾರಣೆಗೆ ಗುಳಿಗ ಪುನರ್‌ ಪ್ರತಿಷ್ಠೆ

Ambulance

Vahical Riders: ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್‌ ರದ್ದು: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.