ಸಾಹಸ ಪ್ರವೃತ್ತಿ ಉದ್ದೀಪಿಸುವ ತರಬೇತಿ


Team Udayavani, Dec 23, 2022, 7:45 AM IST

tdy-45

ಮೂಡುಬಿದಿರೆ: ಜಾಂಬೂರಿಯಲ್ಲಿ ಪ್ರಧಾನವಾಗಿ ಪ್ರಶಿಕ್ಷಣಾರ್ಥಿಗಳಲ್ಲಿ ಪರಿಸರ ಪ್ರೀತಿಯೊಂದಿಗೆ, ಪರಿಸರದೊಂ ದಿಗೆ ಹೊಂದಿ ಬಾಳುವ ಶಿಕ್ಷಣ ನೀಡುವ, ಮನೋಸ್ಥೈರ್ಯ, ಸಾಹಸ ಪ್ರವೃತ್ತಿಯನ್ನು ಉದ್ದೀಪಿಸುವ ತರಬೇತಿ ವಿಶೇಷವಾಗಿ ನಡೆಯುತ್ತಿದೆ.

ವಿವೇಕಾನಂದ ನಗರದ ಆಳ್ವಾಸ್‌ ಪ್ರಾಥಮಿಕ ಶಾಲೆಯ ಹಿಂಭಾಗದ ಗುಡ್ಡ ಪ್ರದೇಶದಲ್ಲಿ ರೂಪಿಸಲಾದ ಚ್ಯಾಲೆಂಜ್‌ ವ್ಯಾಲಿಯಲ್ಲಿ ಕಲೆತ ವಿದ್ಯಾರ್ಥಿಗಳು ಸುಮಾರು 100 ಬಗೆಯ ಸಾಹಸಮಯ ಅಟಗಳಲ್ಲಿ ತೊಡಗಿ ಖುಷಿ ಪಟ್ಟರು.

ಖುಷಿ… ಥ್ರಿಲ್ಲಿಂಗ್‌ ….

ನೀರಿನ ಹೊಂಡಕ್ಕೆ ಬೆನ್ನು ಹಾಕಿ ಜಿಗಿಯುವ ಹೊತ್ತು ಏನಾಗುತ್ತದೆಯೋ ಏನೋ ಎಂಬ ಭಾವನೆಯಿಂದಲೇ ಜಿಗಿ ದವರೇ ಹೆಚ್ಚು. ಕೋಲಾರದ ಎಂಡಿಆರ್‌ಎಸ್‌ ಸ್ಕೂಲಿನ ವೆಂಕಟರಾಯ, ಮುಕುಂದ ಇವರೆಲ್ಲ ಬಹಳ ಖುಷಿಯಾ ಗ್ತಿದೆ ಸರ್‌, ಥ್ರಿಲ್ಲಿಂಗ್‌ ಆಗ್ತಿದೆ ಎಂದರು. ದಾವಣ ಗೆರೆಯ ಪ್ರಥಮ ಪಿಯುಸಿಯ ವಿದ್ಯಾರ್ಥಿನಿ ನಿಸರ್ಗ “ಭಯವಾಗಿತ್ತು, ಆದರೂ ಜಿಗಿದ ಬಳಿಕ ಖುಷಿ ಆಗ್ತಿದೆ’ ಎಂದು ಮುಖವರಳಿಸಿದರು.

ಡೆರಿಕ್‌ ಬ್ರಿಜ್‌ನಲ್ಲಿ ಹಗ್ಗವನ್ನು ರಾಟೆ ಮೂಲಕ ಎಳೆದುಕೊಂಡು ಹೊಂಡದ ಒಂದು ಭಾಗದಿಂದ ಮತ್ತೂಂದೆಡೆ ಸಾಗುವ ಅನುಭವ ವಿಶಿಷ್ಟವಾಗಿದೆ ಎಂದು ಬೆಂಗಳೂರು ಗ್ರಾಮಾಂತರದ ಎ.ವಿ. ರೇವಲಾಶ್ವರೀ ಹೇಳಿದರು.

ಜೀವ ಬಾಯಿಗೆ ಬಂತು! : 

ಸುಮಾರು 10 ಅಡಿ ಎತ್ತರದಲ್ಲಿ ಚೌಕಾಕಾರದ ಜಾಯಿಂಟ್‌ ಪ್ರೋಜೆಕ್ಟ್ ನ ಹಾದಿಯಲ್ಲಿ ನಡೆಯುತ್ತ ಸಾಗುವ ಸವಾಲು ಪ್ರಶಿಕ್ಷಣಾರ್ಥಿಗಳಿಗಿತ್ತು. ಈ ತರಬೇತಿ ಟ್ರೆಕ್ಕಿಂಗ್‌ಗೆ ಸೂಕ್ತವಾಗಿದೆ ಎಂದ ಶಿವಮೊಗ್ಗದ 8ನೇ ತರಗತಿಯ ವಿದ್ಯಾರ್ಥಿನಿ ಶ್ರೀರಕ್ಷಾ “ಜೀವ ಬಾಯಿಗೆ ಬಂದ ಹಾಗಾಯಿತು’ ಎಂದರು.

ಹೀಗೆಯೇ ಹ್ಯಾಂಗಿಂಗ್‌ ಬ್ರಿಜ್‌, ಹಗ್ಗದ ಮಗ್ಗವನ್ನೇರ ಬೇಕಾದ ರಶಿಯನ್‌ ವಾಲ್‌ ರೋಪ್‌ ಕ್ಲೈಂಬಿಂಗ್‌ನ ಸಾಹಸ ಕ್ರಿಯೆ ನಡೆಸಿದೆ ತಮಿಳುನಾಡಿನ ಪ್ರಥಮ ಬಿಬಿಎ ವಿದ್ಯಾರ್ಥಿನಿ ತಿರುಮಗಳ್‌ ” ಇದು

ನಮಗೆ ಭಯ ನಿವಾರಿಸಿಕೊಳ್ಳಲು, ಆತ್ಮವಿಶ್ವಾಸ ಮೂಡಿಸಲು, ಮನಸ್ಸನ್ನು ಗಟ್ಟಿಯಾಗಿಸಲು ಸಹಕಾರಿ ಎಂದರು.

ರೋಚಕ ಅನುಭವ: 

ಇದೇ ರೀತಿ, ಬ್ಯಾಲೆನ್ಸಿಂಗ್‌ ಬೀಂ ವಾಕ್‌, ಪ್ಲಾಂಕ್‌ ಕ್ಲೈಂಬಿಂಗ್‌, ಮಂಕಿ ಬ್ರಿಜ್‌, ಅಗಲವಾದ ಏಣಿ ಹತ್ತುವ ವೈಡ್‌ ಲ್ಯಾಡರ್‌ ಕ್ಲೈಂಬಿಂಗ್‌, ಟಯರ್‌ ಬ್ಯಾಲೆನ್ಸ್‌ ವಾಕ್‌ ರೋಚಕ ಅನುಭವ ನೀಡಿದವು ಎಂದರು ದೊಡ್ಡ ಬಳ್ಳಾಪುರದ ಕಾರ್ಮೆಲ್‌ ಜ್ಯೋತಿ, ಮಿಥುನ್‌. ಸ್ವಿಂಗಿಂಗ್‌ ಪ್ಲಾಂಕ್‌ನಲ್ಲಿ ನಡೆದ ಕೊಪ್ಪಳ ಕಾರಟಗಿಯ ಚಿರು ರಾಘವೇಂದ್ರ ದೇಹ‌ದ ಸಮತೋಲನ ಕಾಪಾಡಿಕೊ ಳ್ಳುವ ಈ ತರಬೇತಿ ಉತ್ತಮ ಎಂದರು.

ಸೈನಿಕ ತರಬೇತಿಯಂತೆ ಜೋಡಿಸಿಟ್ಟ ಟಯರ್‌ಗಳ ಒಳಗೆ ದೇಹವನ್ನು ತೂರಿಸಿ ಹರಸಾಹಸ ಪಟ್ಟು 10 ದೂರ ಕ್ರಮಿಸಿ ಹೊರಬರುವ ಟಯರ್‌ ಕ್ರಾಲಿಂಗ್‌ ನಿಜಕ್ಕೂ ಒಂದು ಸೈನಿಕ ತರಬೇತಿಯಂತೆ ತೋರಿತು.

ಇದೇ ರೀತಿ ಮಂಕಿ ಕ್ರಾಲಿಂಗ್‌, ಲ್ಯಾಡರ್‌ ಕ್ರಾಸಿಂಗ್‌ ಮೊದಲಾದ ಸಾಹಸಮಯ ಆಟಗಳಲ್ಲಿ ವಿದ್ಯಾರ್ಥಿಗಳೂ ತೊಡಗಿಸಿಕೊಂಡರು. ಪ್ರತಿಯೊಂದು ಚಟುವಟಿಕೆ ನಡೆಸಿದ ಬಳಿಕ ನಿರ್ವಹಣ ಅಧಿಕಾರಿಗಳು ವಿದ್ಯಾರ್ಥಿಗಳ ಕೈಯಲ್ಲಿದ್ದ ದಾಖಲೆ ಪುಸ್ತಿಕೆಯಲ್ಲಿ ಮೊಹರು ಒತ್ತಿ ಮುಂದೆ ಕಳುಹಿಸುತ್ತಿದ್ದರು.

ಸೂಕ್ತ ಮುನ್ನೆಚ್ಚರಿಕೆ: 

ಈ ಎಲ್ಲ ಚಟುವಟಿಕೆಗಳನ್ನು ನಡೆಸುವಾಗ ಯಾವುದೇ ಅವಘಡ ಗಳಾಗದಂತೆ ನುರಿತ ತರಬೇತುದಾರರು ನೋಡಿಕೊಳ್ಳುತ್ತಿದ್ದು ಚಟುವಟಿಕೆ ನಡೆಯುವ ಪ್ರದೇಶದಲ್ಲಿ ಪ್ರಥಮ ಚಿಕಿತ್ಸಾ ಗುಡಾರವನ್ನೂ ಹಾಕಲಾಗಿತ್ತು.

ಕೊಡಗಿನ ಲೀಡರ್‌ ಟ್ರೈನರ್‌ ಜಿಮ್ಮಿ ಸಿಕ್ವೇರಾ ಅವರ ಮೇಲುಸ್ತುವಾರಿ, ನಿರ್ದೇಶನದಲ್ಲಿ ಬಾಬೂರಾವ್‌ ನೆಮ್ಮಾರೆ, ಶಿವಣ್ಣ ದಾವಣಗೆರೆ, ಚಂದ್ರು ಬೆಂಗಳೂರು ಮೊದಲಾದ ಸಹವರ್ತಿಗಳು ವಿವಿಧ ಸಾಹಸ ಕ್ರಿಯೆಗಳ ತರಬೇತಿಯನ್ನು ನೀಡುತ್ತಿದ್ದಾರೆ. 55 ಸಾವಿರ ಮಂದಿ ಪ್ರಶಿಕ್ಷಣಾರ್ಥಿಗಳಿರುವುದರಿಂದ ತಂಡ ತಂಡವಾಗಿ ಎಲ್ಲರಿಗೂ ತರಬೇತಿ ಲಭಿಸುವಂತೆ ವೇಳಾಪಟ್ಟಿ ಮಾv ಲಾಗಿದೆ ಎಂದವರು ತಿಳಿಸಿದರು.

- ಧನಂಜಯ ಮೂಡುಬಿದಿರೆ

ಟಾಪ್ ನ್ಯೂಸ್

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

CM Siddaramaiah slams BJP about Ganeshotsav riot

Mysuru; ಬಿಜೆಪಿಯವರ ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಗಲಾಟೆ: ಸಿಎಂ ಸಿದ್ದರಾಮಯ್ಯ ಆರೋಪ

ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

Mysuru Dasara 2024: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ

ಶಸ್ತ್ರಾಸ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಕೇಂದ್ರ ಸಚಿವ ಅಮಿತ್ ಶಾ ಮನವಿ

Surrender Arms: ಶಸ್ತ್ರಾಸ್ತ್ರ ತ್ಯಜಿಸಿ ಕೂಡಲೇ ಶರಣಾಗಿ… ನಕ್ಸಲರಿಗೆ ಅಮಿತ್ ಶಾ ಮನವಿ

Supreme Court slams Karnataka High Court judge for Pakistan statement

Karnataka HC: ಪಾಕಿಸ್ತಾನ ಹೇಳಿಕೆ ನೀಡಿದ ಹೈಕೋರ್ಟ್‌ ಜಡ್ಜ್‌ ಗೆ ಸುಪ್ರೀಂ ಕೋರ್ಟ್ ತರಾಟೆ

NS2

Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

Mangaluru: ನೂತನ ಮೇಯರ್‌ ಮನದಾಳ:ಜನಸ್ನೇಹಿ ಆಡಳಿತ, ಸ್ಮಾರ್ಟ್‌ ಸಿಟಿಗೆ ವೇಗ

Kinnigoli – Patching work for potholes on Mulki State Highway

Kinnigoli – ಮೂಲ್ಕಿ ರಾಜ್ಯ ಹೆದ್ದಾರಿ ಹೊಂಡ ಗುಂಡಿಗಳಿಗೆ ತೇಪೆ ಕಾರ್ಯ

Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ

Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ರಾಂಗ್ ರೂಟ್ ನಲ್ಲಿ ಬಂದ ಕಾರಿಗೆ ಬೈಕ್ ಡಿಕ್ಕಿ… ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

ಸಣ್ಣ-ಮಧ್ಯಮ ಕೈಗಾರಿಕೆಗೆ ಸಿಗಲಿ ಪ್ರೋತ್ಸಾಹ-ಸಂಸದ ಗೋವಿಂದ ಕಾರಜೋಳ

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Supreme court ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಚಾನೆಲ್‌ ಹ್ಯಾಕ್…ಕ್ರಿಪ್ಟೋ ವಿಡಿಯೋ ಪೋಸ್ಟ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.