ಹೆಬ್ರಿ-ಮಲ್ಪೆ ರಸ್ತೆಗಾಗಿ 1,754 ಮರಗಳು ಬಲಿ !

ರಾ. ಹೆ. ಪ್ರಾಧಿಕಾರ ಹೆದ್ದಾರಿ ಅಭಿವೃದ್ಧಿ ಮರ ಕಡಿಯಲು ಸಾಕಷ್ಟು ನಿಯಮಾವಳಿ ಪಾಲಿಸಬೇಕು

Team Udayavani, Dec 24, 2022, 1:17 PM IST

ಹೆಬ್ರಿ-ಮಲ್ಪೆ ರಸ್ತೆಗಾಗಿ 1,754 ಮರಗಳು ಬಲಿ !

ಉಡುಪಿ; ಹೆಬ್ರಿ-ಪರ್ಕಳ ರಾ.ಹೆ.(169ಎ) ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿ 1734 ಮರಗಳಿಗೆ ಕೊಡಲಿ ಏಟು ಬೀಳಲಿದ್ದು, ಇದೇ ಮೊದಲ ಭಾರಿಗೆ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿ ಇಷ್ಟೊಂದು ಸಂಖ್ಯೆಯ ಮರಗಳು ಧರೆಗುರುಳುತ್ತಿವೆ.

ಉಡುಪಿ ನಗರಸಭೆ ವ್ಯಾಪ್ತಿ ಕರಾವಳಿ ಜಂಕ್ಷನ್‌ನಿಂದ ಮಲ್ಪೆವರೆಗೆ 205 ಮರಗಳನ್ನು ತೆರವುಗೊಳಿಸಲು ಮತ್ತು ಪೆರ್ಡೂರು ಗ್ರಾ.ಪಂ. ವ್ಯಾಪ್ತಿಯ ಮುಳ್ಳುಗುಡ್ಡೆಯಿಂದ ತಾಣದಮನೆವರೆಗೆ ಇರುವ ಒಟ್ಟು ವಿವಿಧ ಜಾತಿಯ 1,549 ಮರಗಳನ್ನು ತೆರವುಗೊಳಿಸಲು ಅಂತಿಮ ಸಿದ್ಧತೆ ನಡೆಯುತ್ತಿದೆ.

ತೀರ್ಥಹಳ್ಳಿ-ಮಲ್ಪೆ ರಾ.ಹೆ 169ಎ ವಿಭಾಗದ ಹೆಬ್ರಿ-ಮಲ್ಪೆ ಚತುಷ್ಪಥ ರಸ್ತೆ ವಿಸ್ತರಣೆ ಯೋಜನೆಗಾಗಿ ಅನುದಾನ ಮಂಜೂರು ಮಾಡಿದ್ದು, ಅಲ್ಲಲ್ಲಿ ಕಾಮಗಾರಿ ಆರಂಭಕ್ಕೆ ತಯಾರಿ ನಡೆಸಲಾಗುತ್ತಿದೆ. ಈ ಯೋಜನೆ ಅಡಿಯಲ್ಲಿ ಹೆಬ್ರಿಯಿಂದ-ಪರ್ಕಳದವರೆಗೆ ಮತ್ತು ಮಲ್ಪೆಯಿಂದ-ಕರಾವಳಿ ಜಂಕ್ಷನ್‌ ವರೆಗೆ ಎರಡು ವಿಭಾಗದಲ್ಲಿ ಕಾಮಗಾರಿ ನಡೆಯಲಿದೆ. ಕಲ್ಮಾಡಿ ಹೊಳೆ, ಹೆಬ್ರಿ ಸೀತಾನದಿ, ಪೆರ್ಡೂರು ಸ್ವರ್ಣಾ ನದಿಗೆ ಸೇತುವೆ ನಿರ್ಮಾಣವಾಗಲಿದ್ದು, ಇದಕ್ಕೆ 355.72 ಕೋ. ರೂ. ಮೊತ್ತ ವ್ಯಯವಾಗಲಿದೆ.

ಅರಣ್ಯೀಕರಣ ವೆಚ್ಚ ಭರಿಸಬೇಕು
ರಾ. ಹೆ. ಪ್ರಾಧಿಕಾರ ಹೆದ್ದಾರಿ ಅಭಿವೃದ್ಧಿ ಮರ ಕಡಿಯಲು ಸಾಕಷ್ಟು ನಿಯಮಾವಳಿ ಪಾಲಿಸಬೇಕು. ಅರಣ್ಯ ಇಲಾಖೆ, ಪ್ರಾಧಿಕಾರ ಜಂಟಿ ಸಮೀಕ್ಷೆ ನಡೆಸಿ ಮರ ಗುರುತಿಸಿ ಬಳಿಕ ಸಾರ್ವಜನಿಕ ಅಹವಾಲು ಸಭೆ ಕರೆದು ಸಾರ್ವಜನಿಕರ ಆಕ್ಷೇಪ ಇಲ್ಲದ ವರದಿ ಪರಿಗಣಿಸಿ, ಅರಣ್ಯ ಇಲಾಖೆ ಹೆದ್ದಾರಿ ಇಲಾಖೆಗೆ ಮರ ಕತ್ತರಿಸಲು ಅನುಮತಿ ನೀಡುತ್ತದೆ. ಮರ ಕತ್ತರಿಸುವ ಮುನ್ನ ಅರಣ್ಯೀಕರಣ ವೆಚ್ಚವನ್ನು ಪ್ರಾಧಿಕಾರ ಅರಣ್ಯ ಇಲಾಖೆಗೆ ಪಾವತಿಸಬೇಕು. ಒಂದು ಮರ ಕಡಿದಲ್ಲಿ 10 ಮರ ನೆಡಬೇಕು ಎಂಬ ನಿಯಮದಂತೆ ಒಂದು ಮರಕ್ಕೆ 411.27 ರೂ. ದರವಿದ್ದು, ಇದರ 10ರಷ್ಟು ವೆಚ್ಚ ಪಾವತಿಸಬೇಕು. ಅನಂತರ ಒಂದು ಕಿ. ಮೀ.ಗೆ 3 ಲಕ್ಷ ರೂ.ನಂತೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕು.

ಸಭೆಗೆ ಸಾರ್ವಜನಿಕರು ಗೈರು
ಅರಣ್ಯ ಇಲಾಖೆ ಉಡುಪಿ ವಲಯ ಕಚೇರಿ ಸಾರ್ವಜನಿಕ ಅಹವಾಲು ಸಭೆ ಕರೆದಿದ್ದು, ಇದಕ್ಕೆ ಒಬ್ಬರೂ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಸಾರ್ವಜನಿಕ ಸಭೆ ಡಿ.31 ರಂದು ಹೆಬ್ರಿ ವಲಯ ಕಚೇರಿ ಸಭಾಂಗಣದಲ್ಲಿ ನಡೆಯಲಿದ್ದು, ಎಷ್ಟು ಮಂದಿ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

ಸಾಧ್ಯವಾದಷ್ಟು ಮರ ಉಳಿಸಲು ಇಲಾಖೆ ಶ್ರಮ ವಹಿಸಲಿದೆ
ಹೆಬ್ರಿ-ಮಲ್ಪೆ ರಸ್ತೆ ವಿಸ್ತರಣೆ ಯೋಜನೆಗೆ ಸಂಬಂಧಿಸಿ ಇನ್ನೂ ಮರಗಳ ತೆರವಿಗೆ ಅನುಮತಿ ನೀಡಿಲ್ಲ. ರಸ್ತೆ ಅಭಿವೃದ್ಧಿ ಯೋಜನೆಗೂ ಹಿನ್ನಡೆಯಾಗದಂತೆ ಮರಗಳನ್ನು ಕನಿಷ್ಠ ಸಂಖ್ಯೆಯಲ್ಲಿ ಸಂರಕ್ಷಿಸುವ ಪ್ರಯತ್ನ ಇಲಾಖೆ ಮಾಡಲಿದೆ. ಈಗಾಗಲೇ ಗುರುತಿಸಿ ರುವ ಮರಗಳ ವರದಿ ಪರಿಶೀಲನೆ ನಡೆಸಿದ್ದೇನೆ. ಇನ್ನೊಮ್ಮೆ ಸ್ಥಳ ಪರಿಶೀಲನೆ ನಡೆಸಿಯೇ ಇದನ್ನು ಅಂತಿಮಗೊಳಿಸಲಾಗುವುದು. ಸಾಧ್ಯವಾದಷ್ಟು ಮರಗಳನ್ನು ಉಳಿಸಿಕೊಳ್ಳಲು ಇಲಾಖೆ ಶ್ರಮಿಸಲಿದೆ.
ಉದಯ ನಾಯ್ಕ , ವೃಕ್ಷ ಅಧಿಕಾರಿ, ಉಪ ಅರಣ್ಯ
ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ

ಅವಿನ್‌ ಶೆಟ್ಟಿ

ಟಾಪ್ ನ್ಯೂಸ್

Vijayapura: ಜಿಲ್ಲೆಯಲ್ಲಿ 5 ಗಂಟೆಗೂ ಅಧಿಕ ಕಾಲ ಸುರಿದ ಮಳೆ… ತುಂಬಿ ಹರಿದ ಹಳ್ಳ-ಕೊಳ್ಳಗಳು

Vijayapura: ಜಿಲ್ಲೆಯಲ್ಲಿ 5 ಗಂಟೆಗೂ ಅಧಿಕ ಕಾಲ ಸುರಿದ ಮಳೆ… ತುಂಬಿ ಹರಿದ ಹಳ್ಳ-ಕೊಳ್ಳಗಳು

Aranthodu : ಸ್ಕೂಟಿ- ಕಂಟೈನರ್ ನಡುವೆ ಭೀಕರ ಅಪಘಾತ… ಸ್ಕೂಟಿ ಸವಾರ ಗಂಭೀರ

Aranthodu : ಸ್ಕೂಟಿ- ಕಂಟೈನರ್ ನಡುವೆ ಭೀಕರ ಅಪಘಾತ… ಸ್ಕೂಟಿ ಸವಾರ ಗಂಭೀರ

1

Belagavi: ಐದೇ ದಿನದಲ್ಲಿ 9 ಮಂದಿಗೆ ತಲಾ 20 ವರ್ಷ ಶಿಕ್ಷೆ; ನ್ಯಾಯಾಧೀಶರ ಮಹತ್ವದ ತೀರ್ಪು

Tobacco: ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಆರೋಪ

Tobacco: ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಗಂಭೀರ ಆರೋಪ

Mudhol: ಅನೈತಿಕ‌ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ

Mudhol: ಅನೈತಿಕ‌ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ

Garlic2

Smuggling Garlic: ಭಾರತಕ್ಕೆ ನಿಷೇಧಿತ ಚೀನಿ ಬೆಳ್ಳುಳ್ಳಿ ಪ್ರವೇಶ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Udupi: ಸಂತೆಕಟ್ಟೆ ರಸ್ತೆ ಕಥೆ ವ್ಯಥೆ; ಈ ಸರ್ವೀಸ್‌ ರಸ್ತೆಗಳೆಂಬ ನಿತ್ಯ ತಮಾಷೆ !

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Karkala ಕೋರ್ಟ್‌ಗೆ ನಕ್ಸಲ್‌ ಕನ್ಯಾಕುಮಾರಿ, ರಮೇಶ್‌

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ

Udupi; ಗೀತಾರ್ಥ ಚಿಂತನೆ-44: ಸ್ವಭಾವಕ್ಕೆ ತಕ್ಕುದಾಗಿ ವ್ಯಕ್ತಿಯ ಬೆಳವಣಿಗೆ

accident

Kaup; ಮೂಳೂರು: ಪಾದಯಾತ್ರೆ ಹೋಗುತ್ತಿದ್ದ ಭಕ್ತರಿಗೆ ಕಾರು ಢಿಕ್ಕಿ; ಮೂವರಿಗೆ ಗಾಯ

1-udupi

Udupi; ಹೊರರಾಜ್ಯದ ಕಾರ್ಮಿಕರ ತಂಡಗಳ ಬೀದಿ ಕಾಳಗ: ಹಲವರು ವಶಕ್ಕೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Vijayapura: ಜಿಲ್ಲೆಯಲ್ಲಿ 5 ಗಂಟೆಗೂ ಅಧಿಕ ಕಾಲ ಸುರಿದ ಮಳೆ… ತುಂಬಿ ಹರಿದ ಹಳ್ಳ-ಕೊಳ್ಳಗಳು

Vijayapura: ಜಿಲ್ಲೆಯಲ್ಲಿ 5 ಗಂಟೆಗೂ ಅಧಿಕ ಕಾಲ ಸುರಿದ ಮಳೆ… ತುಂಬಿ ಹರಿದ ಹಳ್ಳ-ಕೊಳ್ಳಗಳು

Aranthodu : ಸ್ಕೂಟಿ- ಕಂಟೈನರ್ ನಡುವೆ ಭೀಕರ ಅಪಘಾತ… ಸ್ಕೂಟಿ ಸವಾರ ಗಂಭೀರ

Aranthodu : ಸ್ಕೂಟಿ- ಕಂಟೈನರ್ ನಡುವೆ ಭೀಕರ ಅಪಘಾತ… ಸ್ಕೂಟಿ ಸವಾರ ಗಂಭೀರ

1

Belagavi: ಐದೇ ದಿನದಲ್ಲಿ 9 ಮಂದಿಗೆ ತಲಾ 20 ವರ್ಷ ಶಿಕ್ಷೆ; ನ್ಯಾಯಾಧೀಶರ ಮಹತ್ವದ ತೀರ್ಪು

Tobacco: ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಆರೋಪ

Tobacco: ತಿರುಪತಿ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆ… ಮಹಿಳೆಯ ಗಂಭೀರ ಆರೋಪ

Mudhol: ಅನೈತಿಕ‌ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ

Mudhol: ಅನೈತಿಕ‌ ಚಟುವಟಿಕೆ ಕೇಂದ್ರವಾಗಿರುವ ಸಮುದಾಯ ಭವನ, ಬೇಕಿದೆ ಸೂಕ್ತ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.