ಜಾಂಬೂರಿಯಲ್ಲಿ ವಿಜ್ಞಾನದ ಮೆರುಗು; ವಿದ್ಯಾರ್ಥಿಗಳ ಕೌತುಕ ನಿವಾರಿಸಿದ ಮಾದರಿಗಳು

ಮೇಳದಲ್ಲಿ ಸಂಚಾರಿ ತಾರಾಲಯವೂ ವಿಶೇಷ ಆಕರ್ಷಣೆಯಾಗಿದೆ

Team Udayavani, Dec 24, 2022, 12:49 PM IST

ಜಾಂಬೂರಿಯಲ್ಲಿ ವಿಜ್ಞಾನದ ಮೆರುಗು; ವಿದ್ಯಾರ್ಥಿಗಳ ಕೌತುಕ ನಿವಾರಿಸಿದ ಮಾದರಿಗಳು

ಮೂಡುಬಿದಿರೆ: ಇಸ್ರೋದ ರಾಕೆಟ್‌, ಉಪಗ್ರಹಗಳು, ಸೆಮಿ ಕಂಡಕ್ಟರ್‌ಗಳು, ವಿವಿಧ ಮಾದರಿಯ ವಿಮಾನಗಳು, ಸೋಲಾರ್‌ ಶಕ್ತಿಯಿಂದ ಸಂಚರಿಸುವ ವಾಹನಗಳು, ವಿವಿಧ ಮಾದರಿಯ ರೋಬೋಟ್‌, ಡ್ರೋನ್‌ಗಳು, ಟೆಲಿಸ್ಕೋಪ್‌…ಹೀಗೆ ನೂರಾರು ಬಗೆಯ ವಿಜ್ಞಾನ ಮಾದರಿಗಳು ಒಂದೇ ಕಡೆಯಲ್ಲಿ ಕಾಣಲು ಸಿಕ್ಕಿದ್ದು, ಆಳ್ವಾಸ್‌ ವಿಜ್ಞಾನ ಮೇಳದಲ್ಲಿ.

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆತ್ತಿರುವ ಸ್ಕೌಟ್ಸ್‌ – ಗೈಡ್ಸ್‌ ಸಾಂಸ್ಕೃತಿಕ ಜಾಂಬೂರಿ ಯಲ್ಲಿ ವಿಜ್ಞಾನ ಕ್ಷೇತ್ರದ ವಿವಿಧ ಕೌತುಕಗಳನ್ನು ಅನಾವರಣಗೊಳಿಸಲಾಗಿದೆ. ಶಾಲಾ ವಿದ್ಯಾರ್ಥಿ ಗಳಿಂದ ಹಿಡಿದು ಎಂಜಿನಿಯರಿಂಗ್‌, ಬಿಎಸ್ಸಿ- ಎಂಎಸ್ಸಿ ವಿದ್ಯಾರ್ಥಿಗಳು ತಮ್ಮ ಕಲ್ಪನೆಯ ಮಾದರಿಗಳನ್ನು ಪ್ರದರ್ಶಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಮಾದರಿಗಳಿದ್ದು, ಸೀನಿಯರ್‌, ಜೂನಿಯರ್‌, ಸೀನಿಯರ್‌ ಪ್ರಾಜೆಕ್ಟ್ ಎಂದು ವಿಭಾಗಿಸಿ ಪ್ರದರ್ಶನ ಮಾಡಲಾಗಿದೆ. ಸ್ಟಾರ್ಟ್‌ ಅಪ್‌ ಪ್ರಾಜೆಕ್ಟ್ಗಳಿಗೂ ಉತ್ತೇಜನ ನೀಡಲಾಗಿದೆ.

ವಿಜ್ಞಾನ ಮೇಳದಲ್ಲಿ ಇಸ್ರೋ, ಐಐಎಸ್ಸಿ, ಡಿ ಆರ್‌ಡಿಒ, ಸಿತಾರ್‌, ಮೊದಲಾದ ಕಡೆಗಳಿಂದ ಆಯ್ದ ವಿಜ್ಞಾನಿಗಳು ಆಗಮಿಸಿದ್ದು, ಆಯಾ ಸಂಸ್ಥೆಗಳಿಗೆ ಸಂಬಂಧಿಸಿದ ಮಾದರಿಗಳು, ವೈಜ್ಞಾನಿಕ ಉಪಕರಣಗಳನ್ನು ಪ್ರದರ್ಶಿಸಿದ್ದಾರೆ. ವಿಜ್ಞಾನಿಗಳ ಜತೆಗೆ ಸಂವಾದದ ಮೂಲಕ ಮಕ್ಕಳಿಗೆ ವೈಜ್ಞಾನಿಕ ಜ್ಞಾನ ಒದಗಿಸುತ್ತಿದ್ದಾರೆ.

ಆಳ್ವಾಸ್‌ ವಿಜ್ಞಾನ, ಎಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಂದ, ವಿವಿಧ ಎಂಜಿನಿಯರಿಂಗ್‌ ಕಾಲೇಜುಗಳ ವತಿಯಿಂದಲೂ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ವಿವಿಧ ರಾಜ್ಯಗಳ ಸಾಂಪ್ರದಾಯಿಕ, ವೈಜ್ಞಾನಿಕ ಆಟಿಕೆಗಳ ಪ್ರದರ್ಶನ, ಹ್ಯಾಮ್‌ ರೇಡಿಯೋ, ನೇಚರ್‌ ಕ್ಲಬ್‌, ಬರ್ಡ್‌ ಕ್ಲಬ್‌ಗಳೂ ಪಾಲ್ಗೊಂಡಿವೆ. ಅಗಸ್ತ್ಯ ಫೌಂಡೇಶನ್‌ ಸಂಸ್ಥೆ, ನಿರ್ಮಿತಿ ಕೇಂದ್ರಗಳಿಂದ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರಾತ್ಯಕ್ಷಿಕೆ, ಭಾರತದ ಭೂವೈಜ್ಞಾನಿಕ ಸಮೀಕ್ಷೆ ವತಿಯಿಂದ ವಿವಿಧ ರೀತಿಯ ಕಲ್ಲುಗಳನ್ನೂ ಪ್ರದರ್ಶನಕ್ಕೆ ಇಡಲಾಗಿದೆ.

ಸಂಚಾರಿ ತಾರಾಲಯ
ಮೇಳದಲ್ಲಿ ಸಂಚಾರಿ ತಾರಾಲಯವೂ ವಿಶೇಷ ಆಕರ್ಷಣೆಯಾಗಿದೆ. ಮೂರು ಸಂಚಾರಿ ತಾರಾಲಯದ ವಾಹನಗಳನ್ನು ಮೇಳ ನಡೆಯುವಲ್ಲಿ ಇರಿಸಲಾಗಿದ್ದು, ಮಕ್ಕಳಿಗೆ ನಭೋಮಂಡಲದಲ್ಲಿರುವ ವಿವಿಧ ಕೌತುಕಗಳನ್ನು ನೋಡುವ ಅವಕಾಶ ಕಲ್ಪಿಸಲಾಗಿದೆ.

ಯುದ್ಧ ವಿಮಾನಗಳು
ಬೆಂಗಳೂರಿನ ಎರೋನಾಟಿಕಲ್‌ ಡೆವಲಪ್‌ ಮೆಂಟ್‌ ಏಜೆನ್ಸಿಯವರು ತೇಜಸ್‌, ಮಾರ್ಕ್‌ 1 ಯುದ್ಧ ವಿಮಾನಗಳ ಮಾದರಿಗಳನ್ನು ಇರಿಸಿದ್ದು, ಮಕ್ಕಳನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. 2025, 2026 ಮತ್ತು 2035ರಲ್ಲಿ ಬಿಡುಗಡೆಯಾಗಲಿರುವ ಆಮ್ಕಾ, ಟಿಇಡಿಬಿಎಫ್‌ ಯುದ್ಧ ವಿಮಾನಗಳೂ ಪ್ರದರ್ಶನದಲ್ಲಿವೆ. ವಿವಿಧ ರಾಷ್ಟ್ರಗಳ 30ಕ್ಕೂ ಅಧಿಕ ವಿಮಾನಗಳ ಮಾದರಿಗಳನ್ನು ಆಳ್ವಾಸ್‌ ಎರೊನಾಟಿಕಲ್‌ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಇಟ್ಟಿದ್ದಾರೆ.

ಮೀನುಗಾರಿಕೆ ಮಾದರಿ
ಮೀನುಗಾರಿಕೆ ಬೋಟ್‌, ಬಲೆಗಳು ಮೀನುಗಾರಿಕೆ ಇಲಾಖೆಯಿಂದ ವಿವಿಧ ಬೋಟ್‌ಗಳು, ಬಲೆಗಳು, ಪಂಜರಕೃಷಿ ಮಾದರಿಗಳನ್ನು ಪ್ರದರ್ಶಿಸಲಾಗಿದ್ದು, ವಿವಿಧ ಬಗೆಯ ಅಕ್ವೇರಿಯಂ ಮೀನುಗಳನ್ನೂ ಪ್ರದರ್ಶಿಸಲಾಗಿದೆ. ವಿವಿಧ ಯೋಜನೆಗಳ ಬಗ್ಗೆಯೂ ವಿವರಿಸಿಲಾಗಿದೆ. 30ಕ್ಕೂ ಅಧಿಕ ಅಕ್ವೇರಿಯಂಗಳಲ್ಲಿ ಬಣ್ಣಬಣ್ಣದ ಮೀನುಗಳು ವಿಶೇಷ ಆಕರ್ಷಣೆಯಾಗಿದೆ.

ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಭಾಗ ವಹಿಸುತ್ತಿರುವುದು ಇದೇ ಮೊದಲು. ಆಳ್ವಾಸ್‌ ಕಾಲೇಜಿನಲ್ಲಿ ಸಾಂಸ್ಕೃತಿಕ ಲೋಕವೇ ಧರೆಗಿಳಿದಿದೆ, ಉತ್ಸಾಹದಿಂದಲೇ ಭಾಗವಹಿಸುತ್ತಿದ್ದೇವೆ.
– ಶ್ರಾವಣಿ, ಹೈದರಾಬಾದ್‌

ಜಾಂಬೂರಿ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭಾಗವಹಿಸುತ್ತಿದ್ದೇವೆ. ಶಾಲೆಯಿಂದ ಒಟ್ಟು 65 ಮಂದಿ ಬಂದಿದ್ದೇವೆ. ವಿವಿಧ ಮೇಳಗಳು ಆಕರ್ಷಣೀಯವಾಗಿವೆ. ಕಲಿಕೆಗೂ ಪೂರಕವಾಗಿದೆ. ಬೀಚ್‌, ಪಿಲಿಕುಳಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಅಲ್ಲಿಗೆ ಹೋಗಲೂ ಕಾತರದಿಂದಿದ್ದೇವೆ.
– ಗಾದಿಲಿಂಗನಗೌಡ, ಬಿಪಿಎಸ್‌ಸಿ ಶಾಲೆ ಬಳ್ಳಾರಿ

ಬೆಂಗಳೂರಿನಿಂದ ಮಕ್ಕಳನ್ನು ಕರೆದು ಕೊಂಡು ಬಂದಿದ್ದೇವೆ. ವ್ಯವಸ್ಥೆ ಅಚ್ಚುಕಟ್ಟಾಗಿದ್ದು, ಮಕ್ಕಳೂ ವಿವಿಧ ಚಟುವಟಿಕೆಗಳಲ್ಲಿ ಉತ್ಸಾಹದಿಂದಲೇ ಭಾಗವಹಿಸುತ್ತಿದ್ದಾರೆ. ಮೂರು ದಿನ ಹೇಗೆ ಕಳೆಯಿತು ಎಂದೇ ಗೊತ್ತಾಗಿಲ್ಲ. ಸಾಂಸ್ಕೃತಿಕ ಜಾಂಬೂರಿ ನಿಜಕ್ಕೂ ಸಾಂಸ್ಕೃತಿಕ ವಿಚಾರ-ವೈವಿಧ್ಯಗಳನ್ನು ಪರಿಚಯ ಮಾಡಿಸುವಲ್ಲಿ ಯಶಸ್ವಿಯಾಗಿದೆ ಎನ್ನಬಹುದು.
– ಜ್ಯೋತಿ, ಶಿಕ್ಷಕಿ, ಆರ್‌ಎಂಎಸ್‌
ಇನ್‌ಸ್ಟಿಟ್ಯೂಶನ್ಸ್‌ ಬೆಂಗಳೂರು

*ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-bantwala-1

Bantwala: ನವ ದಂಪತಿ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ; ಪತ್ನಿ ಮೃತ್ಯು, ಪತಿ ಗಂಭೀರ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

Belthangady ಅಂಗಮಾರಿ ರೋಗ ಲಕ್ಷಣ: ಪರಿಶೀಲನೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.