ಸಮ್ಮಿಲನ್ ಶೆಟ್ಟಿಯ ಚಿಟ್ಟೆಗಳ ಬಣ್ಣದ ಲೋಕ
Team Udayavani, Dec 27, 2022, 3:38 PM IST
ಮೂಡುಬಿದಿರೆ: ಇಲ್ಲಿಗೆ ಸಮೀಪದ ಬೆಳುವಾಯಿಯ ನಿವಾಸಿಯಾಗಿರುವ ಸಮ್ಮಿಲನ್ ಶೆಟ್ಟಿ ಅವರ ಬಣ್ಣಬಣ್ಣದ ಚಿಟ್ಟೆಗಳ ಲೋಕ ಕರಾವಳಿ ಪ್ರದೇಶದಲ್ಲಿ ಛಾಪನ್ನು ಮೂಡಿಸುತ್ತಿದೆ.
ಸಮ್ಮಿಲನ್ ಶೆಟ್ಟಿ ಅವರು ಆಳ್ವಾಸಿನ ಜಾಬೂರಿಯಲ್ಲೂ ಚಿಟ್ಟೆಗಳ ಬಣ್ಣದ ಲೋಕವನ್ನು ಪ್ರದರ್ಶಿಸಿದ್ದಾರೆ. ಇವರು ಚಿಟ್ಟೆಗಳ ಛಾಯಾಗ್ರಹಣಗಳನ್ನು ಪ್ರದರ್ಶಿಸುದಲ್ಲದೆ ಚಿಟ್ಟೆಗಳ ಬಗ್ಗೆ ಅದ್ಬುತ ಮಾಹಿತಿಗಳನ್ನು ಜನರಿಗೆ ನೀಡುತ್ತಾರೆ.
ಇವರು ಛಾಯಾಗ್ರಹಿಸಿರುವ ಚಿಟ್ಟೆಯಲ್ಲಿ ಭಾರತದ ಸುಂದರವಾದ ಬಣ್ಣದ ಚಿಟ್ಟೆ ಎಂದು ದಾಖಲೆಯಾಗಿರುವ ಹಸಿರು ಬಣ್ಣದ ಪ್ಯಾರಿಸ್ ಚಿಟ್ಟೆಯನ್ನು ನಾವು ನೋಡಬಹುದು.
ನಮ್ಮ ದಕ್ಷಿಣ ಕನ್ನಡದಲ್ಲಿ ರೆಡ್ ಪಿಯರೊಟ್ ಚಿಟ್ಟೆಗಳು ಸಾಮಾನ್ಯವಾಗಿದೆ. ಇದರ ಚಿತ್ರವನ್ನು ಸಹ ಇವರು ಪ್ರದರ್ಶಿಸುತ್ತಾರೆ. ಬ್ಲೂ ಮಾರ್ಮರ್ ಅನ್ನುವ ಬಣ್ಣದ ಚಿಟ್ಟೆ ಮಹಾರಾಷ್ಟ್ರ ರಾಜ್ಯದ ಚಿಟ್ಟೆಯಾಗಿದ್ದು, ಮಲಬಾರ್ ಪಿಕೊಕ್ ಕೇರಳ ರಾಜ್ಯದ ಬಣ್ಣದ ಚಿಟ್ಟೆಯಾಗಿದ್ದು ಸಮ್ಮಿಲನ್ ಶೆಟ್ಟಿ ಅವರು ಜನರ ಕಣ್ಣನ್ನು ಸೆಳೆಯುವ ರೀತಿಯಲ್ಲಿ ಛಾಯಾಗ್ರಹಣದಲ್ಲಿ ಈ ಚಿತ್ರವನ್ನು ಸೆರೆಹಿಡಿದಿದ್ದಾರೆ. ಇನ್ನೊಂದು ರೀತಿಯ ಚಿಟ್ಟೆ ಎಂದರೆ ಅಟೋಮ್ ಲೀಫ್ ಅಟೋ ಕಾಲದಲ್ಲಿ ಬರುವ ಎಲೆ ಹೇಗಿರುತ್ತೋ ಅದೇ ತರಹದ ಎಲೆಯ ರೀತಿಯ ಚಿಟ್ಟೆಯಾಗಿದೆ. ಅಟೋ ಲೀಫ್ ಮತ್ತು ಬ್ಲೂ ಒಕ್ಲೀಫ್ ಇವು ಎರಡು ಒಂದೇ ಆಗಿದೆ.
ಇದನ್ನೂ ಓದಿ:ʼಪಠಾಣ್ʼಗೆ ಟಕ್ಕರ್ ಕೊಡುತ್ತಾʼ ಗಾಂಧಿ-ಗೋಡ್ಸೆ ಏಕ್ ಯುದ್ಧ್ʼ: ಮೋಷನ್ ರಿಲೀಸ್
ತುಂಬಾನೇ ಶಕ್ತಿಯುತವಾದ ಚಿಟ್ಟೆ ಎಂದರೆ ಕೋಮನ್ ನವಾಬ್ ಈ ಕೋಮನ್ ನವಾಬ್ ಚಿಟ್ಟೆ ಹೇಗೆ ಎಂದರೆ ಯಾವುದಾದರೂ ಇರುವೆ ಅದನ್ನು ಮುಟ್ಟಿದರೆ ಅಥವಾ ಬೇಟೆಯಾಡಲು ಬಂದರೆ ಅದು ಪ್ರಮಿಸೀಸ್ ನ ಹಿಡಿದಿಟ್ಟುಕೊಳ್ಳುತ್ತೆ ಚಿಟ್ಟೆ ಆವಾಗ ಇರುವೆಯ ಎತ್ತಿ ಕೆಳಗೆ ಬಡಿಯುತ್ತದೆ. ಹೀಗೆ ಆಗುವಾಗ ಇರುವೆ ಚಿಟ್ಟೆಯನ್ನು ಬಿಟ್ಟು ಹೋಗುವ ಸಂದರ್ಭ ಇರುತ್ತದೆ ಎಂದು ಸಮ್ಮಿಲನ್ ಶೆಟ್ಟಿ ಆವರು ಹೇಳುತ್ತಾರೆ.
ಇನ್ನೊಂದು ಜನರ ಕಣ್ಣನ್ನು ಬೆರಗು ಗೊಳಿಸುವ ಚಿಟ್ಟೆ ಯಾವುದೆಂದರೆ ಪೇಯಿಂಟೆಡ್ ಲೇಡಿ. ಇದು ಕಾಫಿ, ಕೇಸರಿ, ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಒಂದು ಬ್ರಷ್ ಹಿಡಿದುಕೊಂಡು ಚಿತ್ರ ಬಿಡಿಸಿದ ರೀತಿ ಕಾಣುವ ಇದಕ್ಕೆ ಪೆಯಿಂಟೆಡ್ ಲೇಡಿ ಅಂತ ಹೆಸರು ಬಂದಿದೆ ಎನ್ನಬಹುದು. ಇನ್ನೊಂದು ಅದ್ಭುತ ಚಿಟ್ಟೆ ಟೋನಿ ರಾಜ. ಈ ಟೋನಿ ರಾಜ ತನ್ನ ರೆಕ್ಕೆಯನ್ನು ಬಿಡಿಸುವಾಗ ರಾಜನ ಕಿರೀಟದಂತೆ ಕಾಣಿಸುತ್ತದೆ. ಹಾಗಾಗಿ ಈ ಹೆಸರಿನಿಂದ ಪ್ರಸಿದ್ದವಾಗಿದೆ. ದಕ್ಷಿಣ ಕನ್ನಡದಲ್ಲಿ ಐದು ರೀತಿಯ ವಿಭಿನ್ನ ಟೈಗರ್ ಕಾಣಸಿಗುತ್ತದೆ. ಬ್ಲೂ ಟೈಗರ್,ಡಾರ್ಕ್ ಟೈಗರ್, ಪ್ಲೈನ್, ಕ್ಲಾಸಿ ಅಥವಾ ಸ್ಕ್ರಿಪ್ಟ್ ಇದು ಐದು ತರಹದ ಟೈಗರ್ ಗಳನ್ನು ನೋಡಲು ಸಿಗುವ ಚಿಟ್ಟೆಯಾಗಿದೆ. ಇದರ ಚಿತ್ರವನ್ನು ಬಹಳ ಸುಂದರವಾಗಿ ಛಾಯಾಗ್ರಹಿಸಿದ್ದಾರೆ.
ಈ ತರಹದ ಇನ್ನಷ್ಟು ಅನೇಕ ರೀತಿಯ ಬಣ್ಣ- ಬಣ್ಣದ ಚಿಟ್ಟೆಗಳ ಲೋಕವನ್ನು ತೋರಿಸಿ ಜನರ ಮನದಲ್ಲಿ ಸಮ್ಮಿಲನ್ ಶೆಟ್ಟಿ ಅವರು ಹೊಸ ರೀತಿಯ ಚಿಟ್ಟೆಯ ಬೆರಗನ್ನು ಮೂಡಿಸುತ್ತಿದ್ದಾರೆ ಎನ್ನಬಹುದು.
ಸುಮನ ಉಜಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thug Life: ದುಬಾರಿ ಬೆಲೆಗೆ ಕಮಲ್ ಹಾಸನ್ ʼಥಗ್ ಲೈಫ್ʼ ಓಟಿಟಿ ರೈಟ್ಸ್ ಸೇಲ್
BJP; ರಮೇಶ ಜಾರಕಿಹೊಳಿ ಸಿಟ್ಟು ಕಡಿಮೆಯಾಗಿಲ್ಲ,ಅವರ ನಿರ್ಧಾರಕ್ಕೆ ಬದ್ಧ: ಯತ್ನಾಳ್
Padmaavat To Billu.. ಟೈಟಲ್ನಿಂದಲೇ ವಿವಾದಕ್ಕೆ ಗುರಿಯಾದ ಬಾಲಿವುಡ್ ಸಿನಿಮಾಗಳಿವು
Darshan ಜಾಮೀನು ಅರ್ಜಿ ಕೊನೆಗೂ ಸಲ್ಲಿಕೆ:ವಿಚಾರಣೆ ಮುಂದೂಡಿದ ಕೋರ್ಟ್
ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.