ಕುಂದಾಪುರ ಕೋಡಿಯಲ್ಲೊಂದು ವಿಶಿಷ್ಟ ಘಟನೆ; ಮೆಸ್ಕಾಂ ತಪ್ಪಿಗೆ ಗ್ರಾಹಕರಿಗೆ ಬರೆ!

16.5 ಲಕ್ಷ ರೂ. ವಸೂಲಿ ಮಾಡಲು ಮೆಸ್ಕಾಂ ನೋಟಿಸ್‌ ನೀಡಿದೆ

Team Udayavani, Dec 29, 2022, 11:32 AM IST

ಕುಂದಾಪುರ ಕೋಡಿಯಲ್ಲೊಂದು ವಿಶಿಷ್ಟ ಘಟನೆ; ಮೆಸ್ಕಾಂ ತಪ್ಪಿಗೆ ಗ್ರಾಹಕರಿಗೆ ಬರೆ!

ಕುಂದಾಪುರ: ಮೆಸ್ಕಾಂ ಮಾಡಿದ ತಪ್ಪಿಗೆ ಗ್ರಾಹಕರಿಗೆ ಬರೆ ಬೀಳುತ್ತಿರುವ ಘಟನೆ ಕೋಡಿ ಭಾಗದಲ್ಲಿ ನಡೆದಿದೆ. ತಪ್ಪಾಗಿ ಬಿಲ್‌ ಕಳುಹಿಸಿ ಕಟ್ಟಿಸಿಕೊಂಡ ಇಲಾಖೆ ಈಗ ಏಕಾಏಕಿ ನಾವು ತಪ್ಪಾಗಿ ಬಿಲ್‌ ನೀಡಿದ್ದೇವೆ, ಹಳೆ ಬಾಕಿ ಪಾವತಿಸಿ ಎಂದು ಗ್ರಾಹಕರಿಂದ ಸಾವಿರಾರು ರೂ. ಕಟ್ಟಿಸಿಕೊಳ್ಳುತ್ತಿದೆ. ಅದೂ 700ಕ್ಕೂ ಅಧಿಕ ಗ್ರಾಹಕರಿಂದ ಸುಮಾರು 16.5 ಲಕ್ಷ ರೂ.

ತಾರತಮ್ಯ
ವಿದ್ಯುತ್‌ ಇಲಾಖೆ ಮೊದಲು ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಗ್ರಾಹಕರಿಗೆ ವಿದ್ಯುತ್‌ ಬಳಕೆಗೆ ಸಮಾನ ದರ ವಿಧಿಸುತ್ತಿತ್ತು. ದಶಕಗಳ ಹಿಂದೆ ಈ ಪದ್ಧತಿಗೆ ತಿಲಾಂಜಲಿ ಇಟ್ಟು ಸಂಸ್ಥೆಗೆ ಲಾಭ ಮಾಡಿಕೊಡಬೇಕೆಂಬ ಏಕೈಕ ಉದ್ದೇಶ ದಿಂದ, ಗ್ರಾಮಾಂತರ ಹಾಗೂ ನಗರ ಪ್ರದೇಶಕ್ಕೆ ಒಂದೇ ವಿದ್ಯುತ್‌ ನೀಡುವುದಾದರೂ ನಗರದಲ್ಲಿ ವಿದ್ಯುತ್‌ ಬಳಸುವ ಗ್ರಾಹಕರಿಗೆ ಅಧಿಕ ದರ ಎಂಬ ವಸೂಲಿ ಕ್ರಮ ಶುರುವಿಟ್ಟುಕೊಂಡಿತು. ನಗರದ ಬಿಲ್‌ಗ‌ೂ ಗ್ರಾಮಾಂತರದ ಬಿಲ್‌ಗ‌ೂ ತಾರತಮ್ಯ ಮಾಡತೊಡಗಿತು.

ಏನಾಗಿದೆ
ಕೋಡಿ ಪ್ರದೇಶವು ಕುಂದಾಪುರ ಪುರಸಭೆ ವ್ಯಾಪ್ತಿಗೆ ಸೇರುತ್ತದೆ. ಕುಂದಾಪುರ ಪುರಸಭೆ ರಚನೆಯಾಗಿ 50 ವರ್ಷಗಳಾದವು. 3 ವರ್ಷಗಳ ಹಿಂದೆ ಕೋಡಿ ಪ್ರದೇಶಕ್ಕೆ ವಿದ್ಯುತ್‌ ಸರಬರಾಜಿಗೆ ಪ್ರತ್ಯೇಕ ಫೀಡರ್‌ ಕೂಡ ಅಳವಡಿಸಲಾಗಿದೆ. ಇದೇನೇ ಇದ್ದರೂ ಕೋಡಿ ಪ್ರದೇಶಕ್ಕೆ ಮೆಸ್ಕಾಂ ವತಿಯಿಂದ ಗ್ರಾಮಾಂತರದ ಬಳಕೆದಾರರ ಬಿಲ್‌ ನೀಡಲಾಗುತ್ತಿತ್ತು. ಅಸಲಿಗೆ ಕೋಡಿ ಪುರಸಭೆ ವ್ಯಾಪ್ತಿಯಾದ ಕಾರಣ ನಗರದ ಗ್ರಾಹಕರ ಬಿಲ್‌ ಹಾಕಬೇಕಿತ್ತು. ಈಗ ಲೆಕ್ಕಪತ್ರ ತಪಾಸಣೆ ವರದಿಯಲ್ಲಿ ಈ ವ್ಯತ್ಯಾಸ ಸಿಕ್ಕಿಬಿದ್ದಿದೆ. ಆದ್ದರಿಂದ ಮೆಸ್ಕಾಂ ವಸೂಲಿಗೆ ಹೊರಟಿದೆ.

ನೋಟಿಸ್‌
ಕೋಡಿ ಭಾಗದ 764 ಮನೆಗಳಿಂದ 16.5 ಲಕ್ಷ ರೂ. ವಸೂಲಿ ಮಾಡಲು ಮೆಸ್ಕಾಂ ನೋಟಿಸ್‌ ನೀಡಿದೆ. ಕಳೆದ 3 ವರ್ಷಗಳಿಂದ ಬಿಲ್‌ನಲ್ಲಿ ವ್ಯತ್ಯಾಸವಾದ ಹಣವನ್ನು ಪಾವತಿಸುವಂತೆ ಸೂಚಿಸಲಾಗಿದೆ. ಕೆಲವರಿಗೆ 92 ರೂ. ಅಷ್ಟೇ ಬಂದಿದ್ದರೆ ಇನ್ನೂ ಕೆಲವರಿಗೆ 3 ಸಾವಿರ ರೂ., 5 ಸಾವಿರ ರೂ.ವರೆಗೆ ಬಂದಿದೆ. ಕೋಡಿ ಪುರಸಭೆ ವ್ಯಾಪ್ತಿಯಲ್ಲಿದ್ದರೂ ಗ್ರಾಮಾಂತರದ ಮಾದರಿಯಲ್ಲಿ ಆರ್ಥಿಕವಾಗಿ ಸಿರಿತನವಿಲ್ಲದ ಮಂದಿಯೇ ಹೆಚ್ಚು ಇರುವ ಕಡಲತಡಿಯ ಪ್ರದೇಶ.
ಆದ್ದರಿಂದ ಈ ವ್ಯತ್ಯಾಸದ ಬಿಲ್‌ ಪಾವತಿ ಅನೇಕರಿಗೆ ಕಷ್ಟವಾಗಿದೆ.

ಮನವಿ
ಮೆಸ್ಕಾಂ ವತಿಯಿಂದ ಆದ ತಪ್ಪಿಗೆ ಗ್ರಾಹಕರ ಮೇಲೆ ಬರೆ ಎಳೆಯುವುದು ಸರಿಯಲ್ಲ. ಈ ಬಿಲ್‌ ರದ್ದು ಮಾಡಬೇಕು ಎಂದು ಸ್ಥಳೀಯರಾದ ದೀಪಕ್‌ ಕೋಡಿ ಒತ್ತಾಯಿಸಿದ್ದಾರೆ. ಈ ಸಂಬಂಧ ಇಂಧನ ಸಚಿವ ಸುನಿಲ್‌ ಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗುವುದು. ಮೆಸ್ಕಾಂ ಮಾಡಿದ ತಪ್ಪಿಗೆ ಗ್ರಾಹಕರ ಮೇಲೆ ಬರೆ ಎಳೆಯುವುದು ಸರಿಯಲ್ಲ. ಏಕಾಏಕಿ ಮೂರು ವರ್ಷದ ಹಣ ಪಾವತಿ ಬಡವರಿಂದ ಅಸಾಧ್ಯ ಎಂದು ಅವರು ಹೇಳಿದ್ದಾರೆ.

ಮಾನವೀಯತೆಯಿಂದ 3 ವರ್ಷದಷ್ಟೇ ವಸೂಲಿ: ಮೆಸ್ಕಾಂ
ಮೆಸ್ಕಾಂನಲ್ಲಿ ನಗರ ಹಾಗೂ ಗ್ರಾಮಾಂತರ ಎಂದು ಬಿಲ್‌ ಮಾಡುವ ವಿಧಾನದಲ್ಲಿ ವಿಭಾಗ ಮಾಡದ ಕಾರಣ ಈ ತೊಂದರೆ ಕಾಣಿಸಿಕೊಂಡಿದೆ. ದಶಕಗಳಿಂದ ಈ ವ್ಯತ್ಯಾಸ ಇದ್ದರೂ ಮಾನ ವೀಯತೆಯಿಂದ ಮೆಸ್ಕಾಂ ಅಧಿಕಾರಿಗಳು ಕೇವಲ 3 ವರ್ಷದ ವಸೂಲಿಗೆ ಮುಂದಾಗಿದ್ದಾರೆ ಎಂದು ಮೆಸ್ಕಾಂ ಮೂಲಗಳು ತಿಳಿಸಿವೆ.

ಅಸಾಧ್ಯವಾಗಿದೆ
ಪ್ರತೀ ಮನೆಗೂ ಮೆಸ್ಕಾಂನಿಂದ ನೋಟಿಸ್‌ ಬಂದಿದ್ದು ಮೂರು ವರ್ಷದ ಬಾಕಿ ಹಣ ಪಾವತಿಸಲು ಸೂಚಿಸಿದ್ದಾರೆ. ಇದು ನಾವಾಗಿ ಬಾಕಿ ಇಟ್ಟಿರುವುದು ಅಲ್ಲ. ಮೆಸ್ಕಾಂ ಕಳಿಸಿದ ಬಿಲ್ಲನ್ನು ಗ್ರಾಹಕರಾದ ನಾವೆಲ್ಲ ಸರಿಯಾಗಿ ಪಾವತಿಸಿದ್ದೇವೆ. ಬಿಲ್‌ ತಡವಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಮೆಸ್ಕಾಂ ಇಂತಹ ತಪ್ಪು ಮಾಡಿದವರಿಂದಲೇ ದಂಡ ವಸೂಲಿ ಮಾಡಬೇಕು ವಿನಾ ಗ್ರಾಹಕರಿಂದ ಅಲ್ಲ.
-ಅಶೋಕ್‌ ಪೂಜಾರಿ, ಕೋಡಿ

ಪಾವತಿಸಬೇಕಾಗುತ್ತದೆ
ಗ್ರಾಹಕರು ವೆಚ್ಚ ಮಾಡಿದ ವಿದ್ಯುತ್‌ಗೆ ಬಿಲ್‌ ಕಳುಹಿಸಲಾಗಿದೆ ವಿನಾ ಉಪಯೋಗಿಸದ ವಿದ್ಯುತ್‌ಗೆ ಅಲ್ಲ. ಭಾರೀ ಮೊತ್ತವೇನೂ ಇಲ್ಲ. ಮೆಸ್ಕಾಂಗೆ ಪಾವತಿಸಬೇಕಾದ ಹಣ ಆದ ಕಾರಣ ರದ್ದು ಮಾಡುವ ಅಧಿಕಾರ ನಮ್ಮ ವ್ಯಾಪ್ತಿಯಲ್ಲಿ ಇಲ್ಲ. ಗ್ರಾಹಕರು ಇದನ್ನು ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗೆ ಗ್ರಾಹಕರು ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು.
-ರಾಕೇಶ್‌, ಕಾರ್ಯನಿರ್ವಾಹಕ ಎಂಜಿನಿಯರ್‌, ಮೆಸ್ಕಾಂ ಕುಂದಾಪುರ ಉಪವಿಭಾಗ

*ಲಕ್ಷ್ಮೀ ಮಚ್ಚಿನ

 

ಟಾಪ್ ನ್ಯೂಸ್

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupa ಲಡ್ಡು ಪ್ರಸಾದ ಪ್ರಮಾದ!

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ

PM Modi U.S. visit: ಇಂದಿನಿಂದ 3 ದಿನಗಳ ಕಾಲ ಮೋದಿ ಅಮೆರಿಕ ಪ್ರವಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

1

Amparu: ರೆಸ್ಟೋರೆಂಟ್‌ನಲ್ಲಿ ಹೊಡೆದಾಟ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Kunigal: ಪುರಸಭೆಯಲ್ಲಿ ಅವ್ಯವಹಾರ… ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸೇವೆಯಿಂದ ಅಮಾನತು

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

Mysuru: ದಸರಾ ಆನೆಗಳ ಕಾದಾಟ: ರೋಡಿಗೆ ದೌಡು, ದಿಕ್ಕೆಟ್ಟ ಜನ

ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Ibrahim Aqil: ಅಮೆರಿಕಾಗೆ ಬೇಕಾಗಿದ್ದ ಹಿಜ್ಬುಲ್ಲಾ ಕಮಾಂಡರ್‌ ಇಸ್ರೇಲ್‌ ದಾಳಿಯಲ್ಲಿ ಸಾವು

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Karnataka ರಾಜ್ಯದ ದೇಗುಲಗಳಲ್ಲಿ ನಂದಿನಿ ತುಪ್ಪ: ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.