ಬಂಡೀಪುರ, ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ
Team Udayavani, Jan 2, 2023, 10:46 AM IST
ಗುಂಡ್ಲುಪೇಟೆ: ಹೊಸ ವರ್ಷದ ಹಿನ್ನೆಲೆಯಲ್ಲಿ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀ ಪುರ ಸಫಾರಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಕೃತಿ ಸೌಂದರ್ಯ ಸವಿದು ಖುಷಿ ಪಟ್ಟರು.
ವರ್ಷದ ಅಂತ್ಯ ಶನಿವಾರ ಹಾಗೂ ನೂತನ ವರ್ಷಾರಂಭ ಭಾನುವಾರವಾದ ಹಿನ್ನೆಲೆ ಕೇರಳ, ತಮಿಳುನಾಡು, ಮೈಸೂರು, ಬೆಂಗಳೂರು ಸೇರಿ ವಿವಿಧೆಡೆಯಿಂದ ಸಾವಿ ರಾರು ಪ್ರವಾಸಿಗರು ಕುಟುಂಬ ಸಮೇತರಾಗಿ ಈ ಎರಡು ಪ್ರವಾಸಿ ತಾಣಗಳಿಗೆ ಧಾವಿಸಿ ದ್ದರು. ಗೋಪಾಲಸ್ವಾಮಿ ಬೆಟ್ಟಕ್ಕೆ ಕೆಎಸ್ಆರ್ ಟಿಸಿಯಿಂದ 12 ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಟ್ಟದಲ್ಲಿ ಜನ ಜಂಗುಳಿ ಹೆಚ್ಚಿದ ಹಿನ್ನೆಲೆಯಲ್ಲಿ ಭಕ್ತರು ದೇವಸ್ಥಾನದ ಸುತ್ತಲು ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು.
ಬಂಡೀಪುರ ಸಫಾರಿಯಲ್ಲೂ ಜನ ಜಂಗುಳಿ: ಹೊಸ ವರ್ಷದ ಹಿನ್ನೆಲೆ ಬಂಡೀಪುರ ಸಫಾರಿಗೂ ಜನರ ದಂಡೆ ಆಗಮಿಸಿ ಸಫಾರಿ ವೀಕ್ಷಣೆ ಮಾಡಿದರು. 8 ಬಸ್, 5 ಜಿಪ್ಸಿ, ಮತ್ತು ಒಂದು ಕ್ಯಾಂಟ್ ವಾಹನಗಳು ಸಂಚರಿಸಿದವು. ಅಧಿಕ ಮಂದಿ ಸಫಾರಿಗೆ ಆಗಮಿಸಿದ್ದ ಕಾರಣ ಹಲವರಿಗೆ ಟಿಕೆಟ್ ಸಿಗದೆ ವಾಪಸ್ಸಾದರು.
ವಿವಿಧ ದೇಗುಲಗಳಲ್ಲಿ ಪೂಜೆ: ತಾಲೂಕಿನ ಪಾರ್ವತಿ ಬೆಟ್ಟ, ಹುಲುಗನ ಮರಡಿ ವೆಂಕಟರಮಣಸ್ವಾಮಿ ಬೆಟ್ಟ, ಮೇಲುಕಾಮನ ಹಳ್ಳಿ ಹತ್ತಿರದ ಹನುಮನ ದೇವಸ್ಥಾನ, ಪಟ್ಟಣದ ರಾಮೇಶ್ವರಸ್ವಾಮಿ, ಆಂಜನೇಯ, ತಾಲೂಕಿನ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯಿತು. ಸುತ್ತಮುತ್ತಲ ಗ್ರಾಮದ ಭಕ್ತರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ವ್ಯಾಪಾರ ಜೋರು: ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ ಮೂಲಕ ತಮಿಳುನಾಡು, ಕೇರಳದ ಕಡೆಗೆ ಸಾವಿರಾರು ವಾಹನಗಳು ಸಂಚರಿಸಿದ ಹಿನ್ನೆಲೆ ಹೆದ್ದಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚು ಕಂಡು ಬಂತು. ಈ ಕಾರಣದಿಂದ ಪ್ರವಾಸಿಗರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಟೆಲ್, ಹೆದ್ದಾರಿ ಬದಿಯ ಅಂಗಡಿಗಳಲ್ಲಿ ಎಳೆನೀರು, ಕಲ್ಲಂಗಡಿ, ಪಪ್ಪಾಯ, ಕಬ್ಬಿನ ಬ್ಯೂಸ್ ಸವಿದರು. ಇದರಿಂದ ಮಾಮೂಲಿಗಿಂತ ಹೊಸ ವರ್ಷದ ದಿನ ಹೆಚ್ಚಿನ ಆದಾಯ ಅಂಗಡಿ ಮಾಲಿಕರು ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.