ಸದ್ದಿಲ್ಲದೆ ನಡೆಯುತ್ತಿದೆ “ಓದುವ ಕ್ರಾಂತಿ’ …ವೆನ್ಲಾಕ್‌  ಆಸ್ಪತ್ರೆ ವಾರ್ಡ್‌ಗಳಲ್ಲಿ ಪತ್ರಿಕೆ, ಮ್ಯಾಗಝೀನ್‌ ಲಭ್ಯ!

ವೃತ್ತಿಪರ ತರಬೇತಿಗೆ ಅಗತ್ಯವಾದ ಪುಸ್ತಕಗಳಿದ್ದು, ವಾಚನಾಲಯದಲ್ಲಿ ಬಂದು ಓದುವ ಅವಕಾಶವೂ ಇದೆ.

Team Udayavani, Jan 11, 2023, 11:07 AM IST

ಸದ್ದಿಲ್ಲದೆ ನಡೆಯುತ್ತಿದೆ “ಓದುವ ಕ್ರಾಂತಿ’ …ವೆನ್ಲಾಕ್‌  ಆಸ್ಪತ್ರೆ ವಾರ್ಡ್‌ಗಳಲ್ಲಿ ಪತ್ರಿಕೆ, ಮ್ಯಾಗಝೀನ್‌ ಲಭ್ಯ!

ಮಹಾನಗರ: ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರು ಹೊರ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳಿಂದ ಬಹುತೇಕವಾಗಿ ದೂರ ವಾಗಿರುತ್ತಾರೆ. ಅದರಲ್ಲೂ ಸರಕಾರಿ ಆಸ್ಪತ್ರೆಗಳಲ್ಲಿ ವಾರ್ಡ್‌ ಗಳಲ್ಲಿ ಟಿವಿ ಸೌಲಭ್ಯವೂ ಇರುವುದಿಲ್ಲ. ಆದರೆ ದ.ಕ. ಜಿಲ್ಲೆಯ ವೆನ್ಲಾಕ್‌ ಆಸ್ಪತ್ರೆಯ ವಾರ್ಡ್‌ ಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರು ದಿನಪತ್ರಿಕೆಗಳು, ಮ್ಯಾಗ ಝೀನ್ಸ್‌ಗಳನ್ನು ಓದಬಹುದು. ಈ ಮೂಲಕ ವಾರ್ಡ್‌ನ ಹಾಸಿಗೆಯಲ್ಲಿ ಚಿಕಿತ್ಸೆಯ ಜತೆಗೆ ಬಡ ರೋಗಿಗಳು ಜಗತ್ತಿನ ವಿದ್ಯಮಾನವನ್ನು ತಿಳಿಸುವ ಜತೆಗೆ ಓದಿನ ಹವ್ಯಾಸವನ್ನು ಬೆಳೆಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.

ನಾಲ್ಕು ತಿಂಗಳುಗಳ ಹಿಂದೆ ಭಾರತೀಯ ರೆಡ್‌ಕ್ರಾಸ್‌, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ ಕ್ರಾಸ್‌, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದೊಂದಿಗೆ ವೆನ್ಲಾಕ್‌ ಆಸ್ಪತ್ರೆಯ ಆವರಣದಲ್ಲಿ ಆರಂಭಗೊಂಡ ಸಮುದಾಯ ವಾಚನಾಲಯದ ಮೂಲಕ ಈ ಕಾರ್ಯ ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ, ರೆಡ್‌ಕ್ರಾಸ್‌ ಯುನಿಫಾರಂ ಧರಿಸಿದ ಕಾಲೇಜು ವಿದ್ಯಾರ್ಥಿಗಳು ಸಂಜೆ ಹೊತ್ತು ಆಸ್ಪತ್ರೆಯ ವಿವಿಧ ವಾರ್ಡ್‌ಗಳಿಗೆ ತೆರಳಿ ಆ ದಿನಪತ್ರಿಕೆಗಳು, ಮ್ಯಾಗಝೀನ್‌ಗಳನ್ನು ಒದಗಿಸುತ್ತಾರೆ. ಮರುದಿನ ಅವರಿಂದ ವಾಪಸ್‌ ಪಡೆಯುತ್ತಾರೆ.

ವಿಶೇಷವೆಂದರೆ, ವಾಚನಾಲಯಕ್ಕೆ ರೆಡ್‌ಕ್ರಾಸ್‌ ಪ್ರತಿನಿಧಿಗಳು ಅಥವಾ ಆಸಕ್ತರು ತಾವು ಖರೀದಿಸಿ, ಓದಿದ ಬಳಿಕ ನೀಡುವ ಪತ್ರಿಕೆ, ಮ್ಯಾಗಝೀನ್‌ ಗಳನ್ನೇ ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ಬಡ ರೋಗಿಗಳಲ್ಲಿ ಓದಿನ ಆಸಕ್ತಿ ಬೆಳೆಸುವ ಜತೆಗೆ ಆಯಾ ದಿನದ ವಿದ್ಯಮಾನಗಳ ಬಗ್ಗೆ ತಿಳಿಸುವುದು ಇದರ ಉದ್ದೇಶವಾಗಿದೆ ಎನ್ನುವುದು ವಾಚನಾಲಯದ ಮೇಲ್ವಿ ಚಾರಕರ ಅಭಿಪ್ರಾಯ. “ವಾಚನಾಲಯಕ್ಕೆ ಕೊಡುಗೆಯಾಗಿ, ಉಚಿತವಾಗಿ ನೀಡಲಾಗಿರುವ
ಹಲವು ರೀತಿಯ ಕಥೆ, ಕಾದಂಬರಿ, ವೃತ್ತಿಪರ ತರಬೇತಿಗೆ ಅಗತ್ಯವಾದ ಪುಸ್ತಕಗಳಿದ್ದು, ವಾಚನಾಲಯದಲ್ಲಿ ಬಂದು ಓದುವ ಅವಕಾಶವೂ ಇದೆ.

ವಿವಿಧ ಭಾಷೆಯ ದಿನಪತ್ರಿಕೆಗಳು ಸುಮಾರು ದಿನವೊಂದಕ್ಕೆ 20ರಷ್ಟು ವಾಚನಾಲಯಕ್ಕೆ ಸಹೃದಯಿಗಳು ತಂದು ನೀಡುತ್ತಾರೆ. ಅದನ್ನು ಸಂಜೆ ಹೊತ್ತು ವಾರ್ಡ್ ಗಳಲ್ಲಿ ರೋಗಿಗಳಿಗೆ ನೀಡಲಾಗುತ್ತದೆ. ಆಸಕ್ತರು, ವಾಚನಾಲಯಕ್ಕೆ ಉಚಿತವಾಗಿ ಪತ್ರಿಕೆ, ಪುಸ್ತಕಗಳನ್ನು ಒದಗಿಸುವ ಮೂಲಕ ಸಹಕಾರ ನೀಡಬಹುದು’ ಎನ್ನುತ್ತಾರೆ ವಾಚನಾಲಯದ ಮೇಲ್ವಿಚಾರಕ ಸಫ್ಜಾನ್‌. ಇದಕ್ಕೆ ರೋಗಿಗಳೂ ಸ್ಪಂದಿಸುತ್ತಿದ್ದಾರೆ.ಲಭ್ಯವಾದ ಪತ್ರಿಕೆ, ಮ್ಯಾಗಜಿನ್‌ ಗಳನ್ನು ಓದುವ ಮೂಲಕ ಸಮಯ ಕಳೆಯುತ್ತಿದ್ದಾರೆ. ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಆಸ್ಪತ್ರೆ, ಜನನಿಬಿಡ ಸ್ಥಳಗಳ ಸುತ್ತಮುತ್ತ ಕಂಡುಬರುತ್ತಿದ್ದ ಪುಸ್ತಕ, ಪೇಪರ್‌ ಸ್ಟಾಲ್‌ಗ‌ಳು ಮರೆಯಾಗುತ್ತಿವೆ ಎಂಬ ಕೊರಗಿನ ನಡುವೆ ಆಸ್ಪತ್ರೆಯ ಸಮುದಾಯ ವಾಚನಾಲಯದ ಆಲೋಚನೆ ವಿಭಿನ್ನವಾದದ್ದು.

ಕನ್ನಡ ಪತ್ರಿಕೆಗಳಿಗೆ ಹೆಚ್ಚಿನ ಬೇಡಿಕೆ
“ಪ್ರತಿ ದಿನ ಸುಮಾರು 20ರಷ್ಟು ಪತ್ರಿಕೆಗಳು, ಮ್ಯಾಗಝೀನ್‌ ಗಳನ್ನು ವಾರ್ಡ್‌ಗಳ ರೋಗಿಗಳಿಗೆ ನೀಡಲಾಗುತ್ತಿದೆ. ನನ್ನ ಜತೆ ನಮ್ಮ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿ ರವಿ ಹನಮಸಾಗರ್‌ ಮತ್ತು ಆಸ್ಪತ್ರೆಯಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುವ ವಿದ್ಯಾರ್ಥಿಗಳೂ ಜತೆಗೂಡುತ್ತಾರೆ. ಕನ್ನಡ ಪತ್ರಿಕೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ವಿವಿಧ ಜಿಲ್ಲೆ, ರಾಜ್ಯಗಳಿಂದ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಓದುವ ಆಸಕ್ತಿಯನ್ನೂ ಇದು ಹೆಚ್ಚಿಸಿದೆ.

ಸ್ವಯಂ ಸೇವಕರಾಗಿ ಈ ಕಾರ್ಯ ಮಾಡುವುದರಿಂದ ರೋಗಿಗಳು ಹಾಗೂ ಅವರ ಜತೆಗಿರುವವರ ಜತೆ ಒಡನಾಟ, ಅವರ ಸಂಕಷ್ಟಗಳನ್ನು ತಿಳಿಯುವ ಅವಕಾಶವೂ ದೊರಕಿದೆ.
-ಎಂ. ಸಾಕ್ಷಿ ಕಿಣಿ,
ವಿದ್ಯಾರ್ಥಿನಿ, ದಯಾನಂದ ಪೈ
ಹಾಗೂ ಸತೀಶ್‌ ಪೈ ಸರಕಾರಿ ಪದವಿ
ಕಾಲೇಜು, ರಥಬೀದಿ

*ಸತ್ಯಾ ಕೆ

 

ಟಾಪ್ ನ್ಯೂಸ್

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

sanjay manjrekar

Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್‌ ಸಂಜಯ್‌ ಮಾಂಜ್ರೇಕರ್

West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವ ವಿಶ್ವಾಸವಿದೆ ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

Pune: ಉತ್ತರಕನ್ನಡ ಮೂಲದ ಮಾಜಿ ಕ್ರಿಕೆಟಿಗ, ನಟ ಸಲೀಲ್‌ ತಾಯಿ ಶವ ಪತ್ತೆ, ಗಂಟಲು ಸೀಳಿ ಕೊಲೆ?

17-mng-dasara

Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-mng-dasara

Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ

15-nalin

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

Kinnigoli ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ

Kinnigoli ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

Speaker UT Khader: ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಶೀಘ್ರ ಸಿಎಂ, ಕಾನೂನು ಸಚಿವರ ಭೇಟಿ

MNG-Deeraj

Mangaluru: ಒಂದೂವರೆ ಕೋಟಿಗೂ ಅಧಿಕ ಬಿಜೆಪಿ ಸದಸ್ಯತ್ವ ಗುರಿ: ಧೀರಜ್‌ ಮುನಿರಾಜು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

Women’s T20 World Cup: ಮೊದಲ ಪಂದ್ಯದಲ್ಲೇ ಸೋತ ಭಾರತದ ಸೆಮಿ ಫೈನಲ್‌ ಹಾದಿ ಹೀಗಿದೆ

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

sanjay manjrekar

Women’s T20 World Cup: ಮತ್ತೆ ವಿವಾದಕ್ಕೆ ಸಿಲುಕಿದ ಕಾಮೆಂಟೇಟರ್‌ ಸಂಜಯ್‌ ಮಾಂಜ್ರೇಕರ್

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

West Bengal: ಬಾಲಕಿಯನ್ನು ಅಪಹರಿಸಿ ಕೊ*ಲೆ: ಭುಗಿಲೆದ್ದ ಆಕ್ರೋಶ, ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.