ಮುದೂರು: ಶವಸಂಸ್ಕಾರಕ್ಕೆ ವಿನೂತನ ದಹನ ಯಂತ್ರ-ಸ್ಮಶಾನ ಕೊರತೆಗೆ ಶಾಶ್ವತ ಪರಿಹಾರ

ವಾಯುಮಾಲಿನ್ಯ ರಹಿತವಾಗಿ ಪರಿಸರ ಸ್ನೇಹಿಯಾಗಿ ಈ ಯಂತ್ರ ಕಾರ್ಯಾಚರಿಸುತ್ತದೆ.

Team Udayavani, Jan 25, 2023, 9:55 AM IST

ಮುದೂರು: ಶವಸಂಸ್ಕಾರಕ್ಕೆ ವಿನೂತನ ದಹನ ಯಂತ್ರ-ಸ್ಮಶಾನ ಕೊರತೆಗೆ ಶಾಶ್ವತ ಪರಿಹಾರ

ಕೊಲ್ಲೂರು: ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಮಶಾನದ ಕೊರತೆಗೊಂದು ಶಾಶ್ವತ ಪರಿಹಾರ ಈವರೆಗೆ ಲಭಿಸಿಲ್ಲ. ಗ್ರಾಮಸ್ಥರಿಗೆ ಶವಸಂಸ್ಕಾರಕ್ಕೆ ಅನನುಕೂಲವಾಗಿರುವ ಈ ದಿಸೆಯಲ್ಲಿ ಆರಂಭಗೊಂಡಿರುವ ಸಂಚಾರಿ ಶ್ಮಶಾನ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಅನುಕೂಲವಾಗಬಹುದೆಂಬ ನಿರೀಕ್ಷೆ ಜನಸಾಮಾನ್ಯರಲ್ಲಿ ಮೂಡಿದೆ.

ಅನೇಕ ಕಡೆ ಬಹುತೇಕ ಮಂದಿಗೆ ಎಕರೆಗಟ್ಟಲೆ ತೆಂಗು-ಕಂಗು, ಮಾವುಗಳ ಪ್ಲಾಂಟೇಶನ್‌ ಇದ್ದರೆ ಇನ್ನಿತರ ಕಡೆ ವಾಸವಾಗಿರುವವರಿಗೆ ಸೂರು ಕಟ್ಟಿಕೊಳ್ಳುವಷ್ಟು ಮಾತ್ರ ಜಾಗವಿದ್ದು ಮಿಕ್ಕುಳಿದ ಪ್ರದೇಶ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಸ್ವಾಮ್ಯದಲ್ಲಿದೆ, ಕೇವಲ 2-3 ಸೆಂಟ್ಸ್‌ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರು ಸಾವನ್ನಪ್ಪಿದವರ ಅಂತ್ಯಕ್ರಿಯೆಗೆ ವ್ಯವಸ್ಥೆಗೆ ಜಾಗವಿಲ್ಲದೆ ಮನೆಯಂಗಳವನ್ನೇ ಬಳಸಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗೊಂದು ಉದಾಹರಣೆ ಹಾಗೂ ಸಂದರ್ಭ ಮುದೂರು ಗ್ರಾಮದಲ್ಲಿ ನಡೆದ ಘಟನೆ ದೇಶವ್ಯಾಪ್ತಿ ಸುದ್ದಿಯಾಗಿತ್ತು.

ಸಂಚಾರಿ ಸ್ಮಶಾನ ಆರಂಭ
ಮರಣ ಹೊಂದಿದವರನ್ನು ದಹಿಸುವ ವಿನೂತನ ಮಾದರಿಯ ಯಂತ್ರ ಬಳಕೆಯ ಕ್ರಮ ಕೇರಳದಲ್ಲಿ ರೂಢಿಯಲ್ಲಿದ್ದು, ಇದೀಗ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಇಲ್ಲಿ ಕೂಡ ಅದನ್ನು ಪರಿಚಯಿಸಿದೆ. 7 ಅಡಿ ಉದ್ದ , 2 ಅಡಿ ಅಗಲ, 4 ಅಡಿ ಎತ್ತರದ ಈ ಶವ ದಹನ ಯಂತ್ರವು ಗ್ರಾಸ್‌ ವಿದ್ಯುತ್‌ ಮೂಲಕ ಬಳಸಲಾಗುತ್ತಿದೆ.

ಯಂತ್ರದ ಒಳಭಾಗದಲ್ಲಿರುವ ಚೇಂಬರ್‌ ಮೇಲೆ ಶವ ಇಟ್ಟು ಕರ್ಪೂರವನ್ನು ಹಚ್ಚಿ ಮೇಲ್ಭಾಗವನ್ನು ಮುಚ್ಚಿ ಗ್ಯಾಸ್‌ ಸಂಪರ್ಕ ನೀಡಿದರೆ ಕ್ಷಣಾರ್ಧದಲ್ಲಿ ದಹನ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ವಾಯುಮಾಲಿನ್ಯ ರಹಿತವಾಗಿ ಪರಿಸರ ಸ್ನೇಹಿಯಾಗಿ ಈ ಯಂತ್ರ ಕಾರ್ಯಾಚರಿಸುತ್ತದೆ.

ಒಂದು ಶವಸಂಸ್ಕಾರಕ್ಕೆ 10 ಕಿಲೋ ಗ್ಯಾಸ್‌, 100 ಗ್ರಾಮ್‌ ಕರ್ಪೂರ ಬಳಕೆಯಾಗುತ್ತದೆ. ಸುಮಾರು 5 ಲಕ್ಷ 80 ಸಾವಿರ ರೂ. ವೆಚ್ಚದ ಸಂಚಾರಿ ಶವಪೆಟ್ಟಿಗೆಯನ್ನು ಕೇರಳದ ಖಾಸಗಿ ಕಂಪೆನಿಯೊಂದು ನಿರ್ಮಿಸಿದೆ. ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಈ ಭಾಗದ ಜನರ ಶವಸಂಸ್ಕಾರದ ಸಮಸ್ಯೆಗೊಂದು ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಘದ ಅಧ್ಯಕ್ಷ ಎಂ.ವಿಜಯಶಾಸ್ತ್ರೀ, ಉಪಾಧ್ಯಕ್ಷ ನಕ್ಷತ್ರ ಭೋವಿ, ನಿರ್ದೇಶಕರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಕಾರಾತ್ಮಕ ಸ್ಪಂದನೆಯಿಂದಾಗಿ ಸಂಚಾರಿ ಶವಸಂಸ್ಕಾರ ಯಂತ್ರವನ್ನು ಮುದೂರಿಗೆ ಒದಗಿಸಿದೆ.

ಸೂಕ್ತ ಜಾಗ ಗುರುತು ಮಾಡಿ
ಮುದೂರು ಜಡ್ಕಲ್‌ ಗ್ರಾ.ಪಂ.ವ್ಯಾಪ್ತಿಯ ನಿವಾಸಿಗಳಿಗೆ ಸಂಚಾರಿ ಸ್ಮಶಾನ ಉಪಯೋಗಿಯಾಗಲಿದೆ. ಈ ಕ್ರಮಕ್ಕೆ ಜನ ಹೊಂದಿಕೊಳ್ಳಬೇಕಾಗಿದೆ. ಕಂದಾಯ
ಹಾಗೂ ಅರಣ್ಯ ಇಲಾಖೆ ಗ್ರಾ.ಪಂ.ಗೆ ಸೂಕ್ತ ಜಾಗ ಗುರುತು ಮಾಡಿ ಅವಕಾಶ ಕಲ್ಪಿಸಿದಲ್ಲಿ ಸಾರ್ವಜನಿಕ ರುದ್ರಭೂಮಿ ನಿರ್ಮಿಸಲು ಬದ್ಧರಾಗಿದ್ದೇವೆ.
-ವನಜಾಕ್ಷಿ ಶೆಟ್ಟಿ
ಅಧ್ಯಕ್ಷರು, ಗ್ರಾ.ಪಂ. ಜಡ್ಕಲ್‌

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

1-kotaaaaaa

Kota: ಅಚ್ಲಾಡಿ ಸಿದ್ಧಿವಿನಾಯಕ ದೇವಸ್ಥಾನ ತೀರ್ಥ ಪುಷ್ಕರಿಣಿ ಲೋಕಾರ್ಪಣೆ

train-track

Kundapura; ರೈಲಿನಿಂದ ಬಿದ್ದ ಯುವಕನ ರಕ್ಷಣೆ

robbers

Kota; ಪಾರಂಪಳ್ಳಿ ದೇವಸ್ಥಾನದ ಆಸುಪಾಸಿನಲ್ಲಿ ಕಳ್ಳನ ಓಡಾಟದ ಸುದ್ದಿ

1–a-KNDp[

Kundapura; ಕಂಚುಗೋಡಲ್ಲಿ ಕಡಲ್ಕೊರೆತ: ಮನೆಗಳು ಅಪಾಯದಲ್ಲಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

5

Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ

10-bng

Bengaluru: ಬೊಲೆರೊದಲ್ಲಿ ಬಂದು ಮೇಕೆ ಕಳ್ಳತನ ; 29 ಕುರಿ, ಮೇಕೆ, ವಾಹನ ಜಪ್ತಿ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.