ಬಿದ್ರಿ ಕಲೆಯಲ್ಲಿ ದೇಶ ವಿದೇಶದಲ್ಲಿ ಖ್ಯಾತಿ ಪಡೆದ ರಶೀದ್‌ ಅಹ್ಮದ್‌ ಖಾದ್ರಿಯವರಿಗೆ ಪದ್ಮಶ್ರೀ

ತಂದೆಯ ವಿರೋಧದ ನಡುವೆಯೂ ಬಿದ್ರಿ ಕಲೆಯತ್ತ ಆಕರ್ಷಿತರಾಗಿ‌ದ್ದರು

Team Udayavani, Jan 25, 2023, 11:36 PM IST

1-wsdadadsd

ಬೀದರ್ : ಬೆಳ್ಳಿ ಕುಸರಿಯ ಬಿದ್ರಿ ಕಲೆಯನ್ನು ದೇಶ ವಿದೇಶದಲ್ಲಿ ಖ್ಯಾತಿಗೊಳಿಸಿರುವ ಬೀದರನ ಬಿದ್ರಿ ಕಲಾವಿದ ಶಾಹ ರಶೀದ್‌ ಅಹ್ಮದ್‌ ಖಾದ್ರಿ ಅವರು ಕೇಂದ್ರ ಸರ್ಕಾರದಿಂದ ಕೊಡಮಾಡುವ 2023 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ‌ ಆಯ್ಕೆಯಾಗಿದ್ದಾರೆ.

ನಗರದ ಸಿದ್ದಿ ತಾಲೀಮ್ ನಿವಾಸಿಯಾಗಿರುವ ರಶೀದ್ ಅಹ್ಮದ್ ಖಾದ್ರಿ‌ (78) ಅವರು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದು, ತಂದೆಯ ವಿರೋಧದ ನಡುವೆಯೂ ಬಿದ್ರಿ ಕಲೆಯತ್ತ ಆಕರ್ಷಿತರಾಗಿ‌, ಆ ಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಈ ಐತಿಹಾಸಿಕ ಕ್ರಾಫ್ಟ್ ಅವರನ್ನು‌ ದೇಶ- ವಿದೇಶದಲ್ಲಿ ಪರಿಚಯಿಸುವುದರ ಜತೆಗೆ ಇಂದು‌ ಪದ್ಮಶ್ರೀ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಳ್ಳುವಂತೆ ಮಾಡಿದೆ.

ಶಿಲ್ಪಗುರು ಪ್ರಶಸ್ತಿ ವಿಜೇತರಾದ ಖಾದ್ರಿ ಅವರು ಬಿದ್ರಿ ಕಲೆಗಾಗಿ ಖಾದ್ರಿ ಜೀವನ ಮುಡುಪಾಗಿಟ್ಟಿದ್ದಾರೆ. ಜತೆಗೆ, ಜಿಲ್ಲೆಯ ಹಲವರಿಗೆ ಬಿದ್ರಿ ಕಲೆಯ ತರಬೇತಿ ನೀಡಿ ಬದುಕು‌ ರೂಪಿಸಿದ್ದಾರೆ.

ದೆಹಲಿಯಲ್ಲಿ 2011ರ ಗಣರಾಜ್ಯೋತ್ಸವ ಪರೇಡ್ ನಲ್ಲಿ‌ ಖಾದ್ರಿ ಅವರು ಕರ್ನಾಟವನ್ನು ಪ್ರತಿನಿಧಿಸಿ‌ ಪ್ರದರ್ಶಿಸಿದ ಬಿದ್ರಿ ಕಲಾಕೃತಿಯ ಟ್ಯಾಬ್ಲೋಗೆ ಎರಡನೇ ಸ್ಥಾನ ಲಭಿಸಿತ್ತು. ಖಾದ್ರಿ ಅವರು ಬೊಸ್ಟನ್‌ (ಅಮೆರಿಕಾ), ರೋಮ್‌ (ಇಟಲಿ), ಸಿಂಗಾಪುರ, ಬಾರ್ಸಿಲೋನಾ (ಸ್ಪೇನ್‌), ಬೆಹರೀನ್‌, ಮಸ್ಕತ್‌ (ಓಮಾನ್‌) ದೇಶಗಳಲ್ಲಿ ಭಾತರವನ್ನು ಪ್ರತಿನಿಧಿಸಿ, ಬಿದ್ರಿ ಕಲೆಯನ್ನು‌ ಪ್ರದರ್ಶಿಸಿದ್ದಾರೆ.

ಖಾದ್ರಿ ಅವರು ಈವರೆಗೆ ಶಿಲ್ಪ ಗುರು ಅವಾರ್ಡ್ (2012), ನ್ಯಾಶನಲ್‌ ಅವಾರ್ಡ್ (1988), ಸ್ಟೇಟ್ ಅವಾರ್ಡ್ (1984), ಸುವರ್ಣ ಕರ್ನಾಟಕ ರಾಜ್ಯೋತ್ಸವ ಅವಾರ್ಡ್ (2006), ಗ್ರೇಟ್ ಇಂಡಿಯನ್ ಅಚಿವರ್ಸ್ ಅವಾರ್ಡ್ (2004) ಸೇರಿದಂತೆ ಹಲವು ಪ್ರಶಸ್ತಿ‌, ಗೌರವಗಳಿಗೆ ಪಾತ್ರರಾಗಿದ್ದಾರೆ.

ಏನಿದು ಬಿದ್ರಿ ಕಲೆ ?
ಕಣ್ಣಿಗೆ ಮುದ ನೀಡುವ ವಿಶ್ವವಿಖ್ಯಾತ ಬಿದ್ರಿ ಕಲೆಗೆ‌ ದೇಶ ವಿದೇಶಗಳಲ್ಲಿ ಬೇಡಿಕೆ ಇದೆ. ಅಲಂಕಾರಿಕೆ, ಉಡುಗರೆಯಾಗಿ ನೀಡಲು ಸೈ ಎನಿಸಿಕೊಂಡಿರುವ ಕಲಾಕೃತಿಗಳಿಗೆ ಮನ ಸೋಲದವರೇ ಇಲ್ಲ. ಬೀದರನ ಬಹುಮನಿ ಕೋಟೆಯಲ್ಲಿ‌ ಸಿಗುವ ವಿಶಿಷ್ಟ ಮಣ್ಣಿನ‌ ಜತೆಗೆ ಬೆಳ್ಳಿ, ಸತುವು ಹಾಗೂ ತಾಮ್ರವನ್ನು‌ ಬಳಸಿ‌ ಈ ಬಿದ್ರಿ‌ ಕಲಾಕೃತಿಗಳನ್ನು‌ ತಯ್ಯಾರಿಸುತ್ತಾರೆ. ಬಿದ್ರಿ ಕಲೆಯನ್ನೇ ನೆಚ್ಚಿಕೊಂಡಿರುವ ಅಂದಾಜು 500ಕ್ಕೂ ಹೆಚ್ಚು ಕರಕುಶಲ ಕರ್ಮಿಗಳು, ಕಾರ್ಮಿಕರು ಮತ್ತು ವ್ಯಾಪಾರಿಗಳು ಬೀದರನಲ್ಲಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ನನ್ನ ಜೀವನದ ಕನಸಿನ ಪ್ರಶಸ್ತಿಯಾಗಿದ್ದು, ಇದನ್ನು ಬೀದರ ಜನರಿಗೆ ಅರ್ಪಿಸುತ್ತೆನೆ. ಬಿದ್ರಿ ಕಲೆಯಿಂದ ನನಗೆ ಹಲವು ಪ್ರಶಸ್ತಿ‌ ಸಮ್ಮಾನಗಳು ದೊರತಿವೆ. ಹಲವು ದೇಶಗಳಲ್ಲಿ‌ ಕಲೆಯನ್ನು ಪ್ರದರ್ಶಿಸಿದ ಹೆಮ್ಮೆ ನನಗಿದೆ ಎಂದು ಶಾಹ ರಶೀದ್ ಅಹ್ಮದ್ ಖಾದ್ರಿ ಸಂತಸ ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Chikkamagaluru: ಸಾವಿನಲ್ಲೂ ಸಾರ್ಥಕತೆ; ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Chikkamagaluru: ಸಾವಿನಲ್ಲೂ ಸಾರ್ಥಕತೆ… ರಸ್ತೆ ಅಪಘಾತದಿಂದ ಮೃತಪಟ್ಟ ಯುವಕರ ನೇತ್ರದಾನ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Sandalwood: ಮೀ ಟೂ ಪ್ರಕರಣ; ಸೆ.16ಕ್ಕೆ ಚಿತ್ರರಂಗ ಸಭೆ

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

Mudhol: ಈ ಸಾರ್ವಜನಿಕ ಆಸ್ಪತ್ರೆಗೆ 10 ತಿಂಗಳಿನಿಂದ ಪ್ರಭಾರಿ ವೈದ್ಯಾಧಿಕಾರಿಯೇ ದಿಕ್ಕು

9

Cabinet Meeting: ದಶಕದ ಬಳಿಕ ಕಲಬುರಗಿಯಲ್ಲಿ ಸಂಪುಟ ಸಭೆ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.