ನಿಟ್ಟೆ ಪರಿಸರದಲ್ಲಿ ಮಿತಿಮೀರಿದ ಮಂಗಗಳ ಉಪಟಳ: ಸಂಕಷ್ಟದಲ್ಲಿ ಬೆಳೆಗಾರ


Team Udayavani, Jan 30, 2023, 6:30 AM IST

ನಿಟ್ಟೆ ಪರಿಸರದಲ್ಲಿ ಮಿತಿಮೀರಿದ ಮಂಗಗಳ ಉಪಟಳ: ಸಂಕಷ್ಟದಲ್ಲಿ ಬೆಳೆಗಾರ

ಕಾರ್ಕಳ: ಒಂದೆಡೆ ಪ್ರಾಕೃತಿಕ ವಿಕೋಪದಿಂದ ಸಮಸ್ಯೆ. ಇನ್ನೊಂದೆಡೆ ನಿರಂತರ ಮಳೆಯಿಂದು ವಾತಾವರಣದಲ್ಲಿನ ಬದಲಾವಣೆಯಿಂದ ಕೃಷಿಗೆ ತೊಂದರೆ ಆಗುತ್ತಿದೆ. ಇದೆಲ್ಲದರ ಮಧ್ಯೆ ಉಳಿದ ಅಲ್ಪ ಫ‌ಸಲು ಮಂಗಗಳ ಪಾಲಾಗುತ್ತಿದೆ. ಇದರಿಂದ ಕೃಷಿಕರು ಬೇಸತ್ತು ಹೋಗಿದ್ದು ಆರ್ಥಿಕವಾಗಿ ಸಂಕಷ್ಟಕ್ಕೆ
ಸಿಲುಕಿದ್ದಾರೆ.

ಕಾರ್ಕಳ ತಾಲೂಕಿನ ನಿಟ್ಟೆ ಪರಿಸರದ ಜನರಿಗೆ ಮಂಗಳಗಳ ಉಪಟಳ ಬಾರಿ ಹೆಚ್ಚಾಗಿದೆ. ಈ ಭಾಗದ ಹಲವು ಕೃಷಿಕರು ಮಂಗಗಳ ನಿರಂತರ ಉಪಟಳಕ್ಕೆ ಬೇಸತ್ತು ಹೋಗಿದ್ದಾರೆ. ಮಂಗಗಳು ಗುಂಪಾಗಿ ತೆಂಗು ತೋಟ ಸಹಿತ ಕೃಷಿ ತೋಟಗಳಿಗೆ ದಾಳಿಯಿಡುತ್ತಿವೆ. ಉಳಿಸಿಕೊಂಡ ಅಲ್ಪ ಫ‌ಸಲನ್ನು ಕೂಡ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ಅವುಗಳ ಉಪಟಳ ತಳ್ಳಿದೆ. ಇದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಅಸಂಖ್ಯಾಕ ಪ್ರಮಾಣದಲ್ಲಿ ಕೃಷಿಕರ ಮನೆಗಳಿದ್ದು ಸೀಯಾಳ, ಅಡಿಕೆ ಇತರ ಅಲ್ಪಾವಧಿ ಬೆಳೆಗಳ ಫ‌ಸಲನ್ನು ತಿಂದು ಹಾಳುಗೆಡವುತ್ತಿವೆ.

ಸುತ್ತಮುತ್ತಲಿನ ಕಾಡಿನಿಂದ ಮಂಗಗಳ ಹಿಂಡು ತೋಟಗಳಿಗೆ ಮುತ್ತಿಗೆ ಹಾಕಿ ಬಿಡುತ್ತಿವೆ. ಅವುಗಳನ್ನು ಓಡಿಸುವ ಯಾವ ಪ್ರಯತ್ನಗಳು ಈಡೇರುತ್ತಿಲ್ಲ. ಹಿಂಡಾಗಿ ಬರುವ ಮಂಗಗಳು ತೆಂಗು ಕಂಗು ಬಾಳೆ ಹಲಸು ಮಿಶ್ರ ಬೆಳೆಗಳಿಗೆ ದಾಳಿಯಿಟ್ಟು ಅಪಾರ ಪ್ರಮಾಣದ ನಷ್ಟ ಆಗುತ್ತಿದೆ. ತಿಂದು ಬಿಸಾಡಿದ ಕಾಯಿಗಳ ಮರ ಬುಡದಲ್ಲಿ ನೋಡಿದರೆ ಮರುಕ ಹುಟ್ಟುತ್ತದೆ. ಅಷ್ಟು ಪ್ರಮಾಣದಲ್ಲಿ ಈ ಭಾಗದಲ್ಲಿ ಮಂಗಗಳಿಂದ ಉಪಟಳವಿದೆ ಎಂದು ಅಲ್ಲಿನ ಕೃಷಿಕರು ಅಳಲು ವ್ಯಕ್ತಪಡಿಸುತ್ತಿದ್ದಾರೆ. ಮಂಗಗಳ ಹಾವಳಿ ತಡೆಯಲು ರೈತ ನಾನಾ ವಿಧದಲ್ಲಿ ಬೆದರುಗೊಂಬೆ, ಸಿಡಿಮದ್ದು, ಡಬ್ಬಿ ಶಬ್ಧ ಮಾಡಿ ಪ್ರಯತ್ನಿಸಿದರೂ ನಿಯಂತ್ರಣ ಸಾಧ್ಯವಾಗದೆ ಪರಿಸರದ ಜನ ಕೈ ಚೆಲ್ಲಿ ಕುಳಿತಿದ್ದಾರೆ. ಪಂಚಾಯತ್‌, ಸರಕಾರಕ್ಕೆ ದೂರಿತ್ತರೂ ಪ್ರಯೋಜನವಾಗಿಲ್ಲ. ಸರಕಾರದಿಂದ ಮಂಗಗಳ ಹಾವಳಿಯಿಂದ ಹಾನಿಗೊಳಗಾದ ಫ‌ಸಲುಗಳಿಗೆ ಸೂಕ್ತ ಪರಿಹಾರವನ್ನು ನೀಡುತ್ತಿಲ್ಲ. ಇವೆಲ್ಲದರಿಂದ ರೈತರು ಈಗ ಮಂಗಗಳ ಕಾಟದಿಂದ ಬೇಸತ್ತು ಹೋಗಿ ಕೃಷಿ ನಡೆಸುವುದಕ್ಕೆ ಹಿಂದೇಟು ಹಾಕುವ ಸ್ಥಿತಿಗೆ ತಲುಪಿದ್ದಾರೆ.

ಮನೆಗೂ ನುಗ್ಗುತ್ತವೆ
ಕೃಷಿ ತೋಟಗಳಿಗೆ ನುಗ್ಗುವ ವಾನರರು ಫ‌ಸಲು ನಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಮನೆಯ ಅಂಗಳದವರೆಗೂ ಧಾವಿಸಿ ಬಂದು ಹೊಸ್ತಿಲಲ್ಲಿ ಬೆಳೆದ ತರಕಾರಿ, ಫ‌ಲ ಪುಷ್ಪಗಳಿಗೂ ಹಾನಿ ಮಾಡುತ್ತವೆ. ಮುಂದುವರಿದೂ ಮನೆಯ ಒಳಗಡೆಗೂ ಮುನ್ನುಗ್ಗಲು ಪ್ರಯತ್ನಿಸುತ್ತವೆ. ಒಂಟಿ ಹೆಂಗಸರು ಓಡಿಸಲು ಹೋದರೆ ಹೋದರೆ ಮಂಗಗಳೇ ತಿರುಗು ಹೆದರಿಸಿ ಕಳುಹಿಸುತ್ತಿವೆ.

ಪರಿಹಾರ ನೀಡಿ
ಇತ್ತೀಚಿನ ದಿನಗಳಲ್ಲಂತೂ ಈ ಭಾಗದಲ್ಲಿ ಅತೀವ ಸಮಸ್ಯೆಗಳನ್ನು ಮಂಗಗಳು ತಂದಿಡುತ್ತಿವೆ. ಅವುಗಳಿಗೆ ಯಾರ ಬಗ್ಗೆ ಯಾವ ಭಯವೂ ಇಲ್ಲ. ಇಲಾಖೆಗಳು ಇವುಗಳ ಹಾವಳಿ ತಡೆಗೆ ಏನಾದರೂ ಪ್ರಯತ್ನಗಳನ್ನು ನಡೆಸಬೇಕು. ಗರಿಷ್ಠ ಪ್ರಮಾಣದ ಪರಿಹಾರವನ್ನಾದರೂ ಹಾನಿಗೆ ನೀಡುವಂತಾಗಬೇಕು.
– ದಿನೇಶ್‌, ಸ್ಥಳೀಯ ಕೃಷಿಕ

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.