ಅದಾನಿ ಪ್ರಧಾನಿಯ ‘ಪವಿತ್ರ ಗೋವು’ ; ಲೇವಡಿ ಮಾಡಿದ ಉದ್ಧವ್ ಶಿವಸೇನೆ
ಪ್ರೇಮಿಗಳ ದಿನದಂದು ಗೋವಿನ ಅಪ್ಪುಗೆಯ ಕ್ರಮ
Team Udayavani, Feb 10, 2023, 3:44 PM IST
ಮುಂಬಯಿ : ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ‘ಗೋವಿನ ಅಪ್ಪುಗೆಯ ದಿನ’ ಉಪಕ್ರಮವನ್ನು ಶುಕ್ರವಾರ ಅಪಹಾಸ್ಯ ಮಾಡಿರುವ ಉದ್ಧವ್ ಠಾಕ್ರೆ ಬಣದ ಶಿವಸೇನೆ, ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಪವಿತ್ರ ಹಸು” ಎಂದು ಲೇವಡಿ ಮಾಡಿದೆ.
ಶಿವಸೇನೆಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ “ಜನರು ಅದಾನಿ ಹಗರಣದ ಬಗ್ಗೆ ಪ್ರಧಾನಿಯಿಂದ ಸ್ಪಷ್ಟೀಕರಣವನ್ನು ಬಯಸುತ್ತಾರೆ, ಆದರೆ ಮೋದಿ ಸರಕಾರವು ಜನರನ್ನು ಸುಮ್ಮನಿರಲು ಮತ್ತೆ ಧರ್ಮದ ಪ್ರಮಾಣವನ್ನು ನೀಡಿದೆ. ಮೋದಿ ಸಂಸತ್ತಿನಲ್ಲಿ ಅದಾನಿ ಬಗ್ಗೆ ಮಾತನಾಡಲಿಲ್ಲ, ಆದರೆ ಅವರ ಸರ್ಕಾರ ಗೋವಿನ ಬಗ್ಗೆ ಮಾತನಾಡಿದೆ.” ಎಂದು ಬರೆದಿದೆ.
ಪ್ರಾಣಿ ಕಲ್ಯಾಣ ಮಂಡಳಿಯು “ಸಕಾರಾತ್ಮಕ ಶಕ್ತಿಯನ್ನು” ಹರಡಲು ಮತ್ತು “ಸಾಮೂಹಿಕ ಸಂತೋಷ” ವನ್ನು ಉತ್ತೇಜಿಸಲು ಪ್ರೇಮಿಗಳ ದಿನವನ್ನು ‘ಗೋವಿನ ಅಪ್ಪುಗೆಯ ದಿನ’ ಎಂದು ಆಚರಿಸಲು ಜನರನ್ನು ಒತ್ತಾಯಿಸುವ ಸಲಹೆಯನ್ನು ನೀಡಿದೆ. ಈ ಕ್ರಮಕ್ಕೆ ಬಿಜೆಪಿ ನಾಯಕರ ಬೆಂಬಲವಿದ್ದು ಅದನ್ನು ಅಪಹಾಸ್ಯ ಮಾಡುವ ಮೀಮ್ಸ್ ಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.
ಅಮೆರಿಕ ಮೂಲದ ಹಿಂಡೆನ್ಬರ್ಗ್ ರಿಸರ್ಚ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ವಂಚನೆ ಆರೋಪದ ನಂತರ ಕಳೆದ ಕೆಲವು ವಾರಗಳಲ್ಲಿ ಅದಾನಿ ಗ್ರೂಪ್ ಸಂಸ್ಥೆಗಳ ಷೇರುಗಳ ಮೌಲ್ಯವು ಹೊಡೆತವನ್ನು ಅನುಭವಿಸಿದೆ. ಆರೋಪಗಳನ್ನು ಅದಾನಿ ಸಮೂಹ ತಳ್ಳಿಹಾಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ
J-K Election: ಚುನಾವಣೆ ಫಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್ ಆಕ್ಷೇಪ
Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ
Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್ಗೆ ಹೋಗುತ್ತಿಲ್ಲ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.