12 ವರ್ಷ ದಲೈಲಾಮಾ ಭದ್ರತೆಯಲ್ಲಿ ಯೋಧನಂತೆ ಸೇವೆ ಸಲ್ಲಿಸಿದ್ದ ಶ್ವಾನ ಹರಾಜಿನಲ್ಲಿ ಮಾರಾಟ
Team Udayavani, Feb 11, 2023, 4:57 PM IST
ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ಮುಖಂಡ ದಲೈ ಲಾಮಾ ಅವರ ಭದ್ರತೆಗಾಗಿ ಸುಮಾರು 12 ವರ್ಷಗಳಿಂದ ನಿಯೋಜನೆಗೊಂಡಿದ್ದ ಶ್ವಾನ 1,550 ರೂಪಾಯಿಗೆ ಮಾರಾಟವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಟಾಪ್ ಲೆಸ್ ನಲ್ಲಿ ಬಾಯ್ ಫ್ರೆಂಡ್ನನ್ನು ಅಪ್ಪಿಕೊಂಡು ಬರ್ತ್ ಡೇ ವಿಶ್ ಮಾಡಿದ ನಟಿ ಪಾಯಲ್
ದಲೈಲಾಮಾ ಅವರ ಭದ್ರತೆಗಾಗಿ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ನಿಯೋಜನೆಗೊಂಡಿದ್ದ “ಡುಕಾ” ಎಂಬ ಸ್ನಿಫ್ಪರ್ ಲ್ಯಾಬ್ರಡಾರ್ ಶ್ವಾನವನ್ನು ಈ ವಾರ ಹರಾಜಿಗೆ ಹಾಕಲಾಯಿತು ಎಂದು ಹಿಮಾಚಲಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಈ ಶ್ವಾನ(ಡುಕಾ)ವನ್ನು ಪೊಲೀಸರು ದಲೈಲಾಮಾ ಅವರ ಅಧಿಕೃತ ನಿವಾಸದಲ್ಲಿ ಗಸ್ತು ತಿರುಗಲು ಮತ್ತು ಸ್ಫೋಟಕ ಪತ್ತೆ ಹಚ್ಚಲು ಬಳಸಿಕೊಂಡಿದ್ದರು. ಡುಕಾ ಶ್ವಾನ ವಿಶೇಷವಾಗಿ ಸ್ಫೋಟಕದ ಬಗ್ಗೆ ಎಚ್ಚರಿಸುವ ತರಬೇತಿ ಪಡೆದಿತ್ತು ಎಂದು ದಲೈಲಾಮಾ ಅವರ ಭದ್ರತೆಗೆ ನಿಯೋಜಿತರಾಗಿರುವ ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ನಿತೀನ್ ಚೌಹಾಣ್ ತಿಳಿಸಿದ್ದಾರೆ.
ಡುಕಾ ದಲೈಲಾಲಾ ಅವರ ಅತ್ಯಂಕ ನಂಬಿಕಸ್ಥ ಶ್ವಾನವಾಗಿತ್ತು ಎಂದು ಚೌಹಾಣ್ ಐಎಎನ್ ಎಸ್ ಗೆ ಮಾಹಿತಿ ನೀಡಿದ್ದಾರೆ. ಇದೀಗ ದಲೈಲಾಮಾ ಅವರ ರಕ್ಷಣೆಗಾಗಿ 9 ತಿಂಗಳ ಟಾಮಿಯನ್ನು ನಿಯೋಜಿಸಲಾಗಿದೆ. 3 ಲಕ್ಷ ರೂಪಾಯಿಗೆ ಖರೀದಿಸಿರುವ ಟಾಮಿಗೆ ಪಂಜಾಬ್ ಗೃಹರಕ್ಷಕ ದಳ ತರಬೇತಿ ನೀಡಿರುವುದಾಗಿ ವರದಿ ವಿವರಿಸಿದೆ.
2010ರಲ್ಲಿ 7 ತಿಂಗಳ ಡುಕಾ ನಾಯಿ ಮರಿಯನ್ನು ಸೇನಾ ತರಬೇತಿ ಕೇಂದ್ರದಿಂದ 1.23 ಲಕ್ಷ ರೂಪಾಯಿ ಖರೀದಿಸಲಾಗಿತ್ತು. ಪ್ರಾಥಮಿಕ ತರಬೇತಿಯ ನಂತರ ಡುಕಾ ಶ್ವಾನವನ್ನು ದಲೈಲಾಮಾ ಅವರ ಭದ್ರತೆಗೆ ನಿಯೋಜಿಸಲಾಗಿದ್ದು, ಡುಕಾ ಯೋಧನಂತೆ ಸೇವೆ ಸಲ್ಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
12 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಡುಕಾ ಶ್ರವಣ ಶಕ್ತಿ ಕಳೆದುಕೊಂಡಿದ್ದು, ಇದೀಗ ಹರಾಜಿನಲ್ಲಿ ರಾಜೀವ್ ಕುಮಾರ್ ಎಂಬವರು 1,550 ರೂಪಾಯಿಗೆ ಶ್ವಾನವನ್ನು ಖರೀದಿಸಿರುವುದಾಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Haryana Polls; ಕೈ ಕಾರ್ಯಕರ್ತರು ಮತ್ತು ಪಕ್ಷೇತರನ ಬೆಂಬಲಿಗರ ಮಾರಾಮಾರಿ
PM: ಕಾಂಗ್ರೆಸ್ ಡ್ರಗ್ಸ್ ದಂಧೆ ಹಣ ಚುನಾವಣೆ ಗೆಲ್ಲಲು ಬಳಸಿಕೊಳ್ಳುತ್ತಿದೆ: ಪ್ರಧಾನಿ ಮೋದಿ
IFFI: ನವೆಂಬರ್ 20ರಿಂದ ಗೋವಾದಲ್ಲಿ 55ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ
Theft Case: ಬ್ಯಾಂಕಿನಿಂದ ಹಣದ ಬ್ಯಾಗ್ ಕಳವು ಪ್ರಕರಣ
Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?
Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ
ನಾಡೋಜ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.