“ಓಂ , ಅಲ್ಲಾಹ್ ಎರಡೂ ಒಂದೇ’! ಸೈಯ್ಯದ್ ಅರ್ಷದ್ ಮದನಿ
ಅರ್ಷದ್ ಮದನಿ ಹೇಳಿಕೆಗೆ ಇತರೆ ಧರ್ಮಗುರುಗಳ ಅಸಮಾಧಾನ
Team Udayavani, Feb 12, 2023, 8:46 PM IST
ನವದೆಹಲಿ: “ಓಂ ಮತ್ತು ಅಲ್ಲಾಹ್ ಎರಡೂ ಒಂದೇ ಆಗಿದೆ. ಸುಮಾರು 1,400 ವರ್ಷಗಳಿಂದ ದೇಶದಲ್ಲಿ ಹಿಂದೂ ಮತ್ತು ಮಸ್ಲಿಮರು ಸೌಹಾರ್ದತೆಯಿಂದ ಜೀವನ ಮಾಡುತ್ತಿದ್ದಾರೆ,’ ಎಂದು ಜಮೀಯತ್ ಉಲೆಮಾ-ಇ-ಹಿಂದ್ ಅಧ್ಯಕ್ಷ ಸೈಯ್ಯದ್ ಅರ್ಷದ್ ಮದನಿ ಹೇಳಿದರು.
ನವದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆದ ಜಮೀಯತ್ ಉಲೆಮಾ-ಇ-ಹಿಂದ್ ಸಮಾವೇಶದ 2ನೇ ದಿನವಾದ ಭಾನುವಾರ ಮಾತನಾಡಿದ ಅವರು, “ಈ ಮೊದಲು ಭೂಮಿ ಮೇಲೆ ಶ್ರೀರಾಮ, ಬ್ರಹ್ಮ ಅಥವಾ ಶಿವ ಯಾರೂ ಇಲ್ಲದೇ ಇದ್ದಾಗ ಮನು ಯಾರನ್ನು ಪೂಜಿಸುತ್ತಿದ್ದರು?,’ ಎಂದು ಅಲ್ಲಿ ನೆರೆದಿದ್ದ ಇತರೆ ಧರ್ಮ ಗುರುಗಳನ್ನು ಪಶ್ನಿಸಿದರು.
“ಕೆಲವರು ನನಗೆ ಹೇಳಿದರು, ಆ ಸಮಯದಲ್ಲಿ ಮನು “ಓಂ’ ಅನ್ನು ಆರಾಧಿಸುತ್ತಿದ್ದರು ಎಂದು. ಈ “ಓಂ’ ಎನ್ನುವುದನ್ನೇ ನಾವು “ಅಲ್ಲಾಹ್’ ಎಂದು ಕೆರೆಯುತ್ತೇವೆ. ಪಾರ್ಸಿಗಳು “ಖುದಾ’ ಎನ್ನುತಾರೆ, ಆಂಗ್ಲರು “ಗಾಡ್’ ಎನ್ನುತ್ತಾರೆ,’ ಎಂದು ಪ್ರತಿಪಾದಿಸಿದರು.
“ಆರಂಭದಲ್ಲಿ “ಓಂ’ ಅಥವಾ “ಅಲ್ಲಾಹ್’ ಮಾತ್ರ ಇತ್ತು. ಇವೆರಡೂ ಒಂದೇ ಆಗಿದೆ. ಇದನ್ನೇ ಮನು ಆರಾಧಿಸುತ್ತಿದ್ದರು. ಶಿವ, ಬ್ರಹ್ಮ ಯಾರು ಇಲ್ಲದೇ ಇದ್ದಾಗ ನಾವು “ಓಂ’ ಮತ್ತು “ಅಲ್ಲಾಹ್’ ಎಂದೇ ಪೂಜಿಸುತ್ತಿದ್ದೆವು,’ ಎಂದು ವಿವಾದಿತ ಹೇಳಿಕೆ ನೀಡಿದರು.
ಹೊರನಡೆದ ಧರ್ಮಗುರುಗಳು
ಮದನಿ ಅವರ ಹೇಳಿಕೆಯಿಂದ ಅಸಮಾಧಾನಗೊಂಡ ಅನೇಕ ಇತರೆ ಧರ್ಮದ ಗುರುಗಳು ಸಮಾವೇಶದಿಂದ ಹೊರನಡೆದಿದ್ದಾರೆ. ವೇದಿಕೆಯಲ್ಲಿ ಉಪಸ್ಥಿತರಿದ್ದ ಜೈನ ಮುನಿ ಆಚಾರ್ಯ ಲೋಕೇಶ್ ಮುನಿ ಮಾತನಾಡಿ, “ಸಾಮರಸ್ಯದಿಂದ ಬದುಕುವ ವಿಚಾರವನ್ನು ನಾವೂ ಒಪ್ಪುತ್ತೇವೆ. ಆದರೆ, ಈ ಓಂ, ಅಲ್ಲಾಹ್, ಮನು ಕುರಿತ ಕಥೆಗಳನ್ನು ಒಪ್ಪಲ್ಲ. ಮದನಿ ಅವರು ಈ ಸಮಾವೇಶದ ವಾತಾವರಣವನ್ನೇ ಹಾಳು ಮಾಡಿದರು’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ
Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!
Greece Golden Visa:ಶೇ.37ರಷ್ಟು ಭಾರತೀಯ ಪ್ರಜೆಗಳ ಬಂಡವಾಳ
GDP ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳ ಕೊಡುಗೆ ಹೆಚ್ಚು: ವರದಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.