ಪಾಕಿಸ್ತಾನದಲ್ಲೀಗ ಕೆಜಿ ಟೀಪುಡಿ ಬೆಲೆ 1,600 ರೂ.!
ಕೋಳಿ ಮಾಂಸ, ಗೋಧಿಯ ನಂತರ ನೆರೆಯ ರಾಷ್ಟ್ರಕ್ಕೆ ಇನ್ನೊಂದು ಹೊಡೆತ
Team Udayavani, Feb 13, 2023, 7:55 AM IST
ಕರಾಚಿ: ಪಾಕಿಸ್ತಾನದಲ್ಲಿ ಕೋಳಿ ಮಾಂಸ ಮತ್ತು ಗೋಧಿಯ ಬೆಲೆ ವಿಪರೀತ ಏರಿರುವುದರಿಂದ ಜನ ಕಂಗಾಲಾಗಿದ್ದಾರೆ. ಇದರ ಮಧ್ಯೆ ಇನ್ನೊಂದು ಆಘಾತಕಾರಿ ಸುದ್ದಿ ಬಂದಪ್ಪಳಿಸಿದೆ. ಒಂದು ಕೆಜಿ ಬ್ರಾಂಡೆಡ್ ಟೀಪುಡಿ ಬೆಲೆ 1,600 ರೂ.ಗೇರಿದೆ.
ಕಳೆದ 15 ದಿನಗಳ ಹಿಂದೆ ಈ ಬೆಲೆ 1,100 ರೂ.ಗಳಿತ್ತು. ಇದರ ಮಧ್ಯೆ ಕಳೆದ ಡಿಸೆಂಬರ್ ಕೊನೆಗೆ ಪಾಕ್ ಬಂದರಿಗೆ ಬಂದು ತಲುಪಿರುವ ಟೀಪುಡಿಯ 250 ಕಂಟೈನರ್ಗಳು ಇನ್ನೂ ಕೆಳಕ್ಕಿಳಿದಿಲ್ಲ. ಅದನ್ನು ಇಳಿಸಿಕೊಳ್ಳಲು ಬೇಕಾದ ಹಣವೇ ಇಲ್ಲ.
ಪಾಕಿಸ್ತಾನದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ (ಎಫ್ಪಿಸಿಸಿಐ) ಟೀ ವಿಭಾಗದ ಸ್ಥಾಯೀ ಸಮಿತಿ ಕಾರ್ಯದರ್ಶಿ ಝೀಶನ್ ಮಖೂÕದ್ ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
ವಿದೇಶಿ ವಿನಿಮಯದ ಪ್ರಮಾಣ ಕಡಿಮೆಯಿರುವುದರಿಂದ ಆಮದು ಮಾಡಿಕೊಳ್ಳುವುದು ಅಸಾಧ್ಯವೆನ್ನುವ ಸ್ಥಿತಿ. ಇದರಿಂದ ಮಾರ್ಚ್ನಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಹೇಳಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ನಿರ್ದೇಶನದ ಪ್ರಕಾರ, ಆಮದು ವಸ್ತುಗಳನ್ನು 180 ದಿನಗಳ ಮುಂದೂಡಲ್ಪಟ್ಟ ಗುತ್ತಿಗೆಯಡಿ ಅಥವಾ 180 ದಿನಗಳ ಅವಧಿಗೆ ಸಾಲದಲ್ಲಿ ಕೊಳ್ಳಲು ಸೂಚಿಸಿದೆ. 180 ದಿನಗಳು ಕಳೆದ ನಂತರ ಡಾಲರ್ ಮೌಲ್ಯ ಎಲ್ಲಿಗೆ ಏರಿರುತ್ತದೆ ಎಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಹಾಗಾಗಿ ಆ ನಿರ್ಧಾರ ಮಾಡಲು ಯಾವ ಆಮದುದಾರರೂ ಸಿದ್ಧವಿಲ್ಲ ಎಂದು ಝೀಶನ್ ತಿಳಿಸಿದ್ದಾರೆ.
“ಮನಮೋಹನ್ರನ್ನು ನೇಮಿಸಿದ ಭಾರತವನ್ನು ನೋಡಿ ಕಲಿಯಿರಿ’
1990ರ ಹೊತ್ತಿನಲ್ಲಿ ಭಾರತದಲ್ಲೂ ಇಂತಹದ್ದೇ ಸನ್ನಿವೇಶವಿದ್ದಾಗ ಆ ದೇಶ ಮನಮೋಹನ್ ಸಿಂಗ್ರಂತಹ ಖ್ಯಾತ ಅರ್ಥಶಾಸ್ತ್ರಜ್ಞರನ್ನು ವಿತ್ತಸಚಿವರನ್ನಾಗಿ ನೇಮಿಸಿತ್ತು. ಅವರು ಆರ್ಥಿಕ ಹಿಂಜರಿತದಿಂದ ಭಾರತವನ್ನು ಕಾಪಾಡಿದರು. ಅದನ್ನು ನೋಡಿ ಪಾಕಿಸ್ತಾನ ಕಲಿಯಬೇಕು. ಸೂಕ್ತ ಸ್ಥಾನಕ್ಕೆ ಯೋಗ್ಯರನ್ನು ನೇಮಕ ಮಾಡಬೇಕು ಎಂದು ಪ್ರಿನ್ಸ್ಟನ್ ವಿವಿಯ ಅರ್ಥಶಾಸ್ತ್ರಜ್ಞ, ಪ್ರೊ.ಆತಿಫ್ ಮಿಯಾನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ
Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…
Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್ಗೆ ಟ್ರಂಪ್
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.