![BJP-flag](https://www.udayavani.com/wp-content/uploads/2024/07/BJP-flag-1-415x249.jpg)
ಉಪ್ಪೂರು: ಸರಣಿ ಅಪಘಾತದಲ್ಲಿ ಇಬ್ಬರು ಗಂಭೀರ
Team Udayavani, Feb 13, 2023, 1:11 AM IST
![ಉಪ್ಪೂರು: ಸರಣಿ ಅಪಘಾತದಲ್ಲಿ ಇಬ್ಬರು ಗಂಭೀರ](https://www.udayavani.com/wp-content/uploads/2023/02/upoour-620x348.jpg)
ಬ್ರಹ್ಮಾವರ: ಉಪ್ಪೂರು ಬಳಿ ರಾ.ಹೆ. 66ರಲ್ಲಿ ರವಿವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ಈರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಸವಾರನನ್ನು ತಪ್ಪಿಸಲು ಹೋದ ಲಾರಿಗೆ ಹಿಂದಿನಿಂದ ಬಂದ ಇನ್ನೊಂದು ಲಾರಿ ಢಿಕ್ಕಿ ಹೊಡೆಯಿತು.
ಘಟನೆಯಲ್ಲಿ ಗಾಯಗೊಂಡವರು ಬೈಕ್ ಸವಾರ ಹರೀಶ್ ಹಾಗೂ ಲಾರಿ ಚಾಲಕ ಕುಮಟದ ಮಹೇಶ್ ಗೌಡ ಎಂದು ತಿಳಿದು ಬಂದಿದೆ. ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಮತ್ತೊಂದು ಲಾರಿಯು ಬಳಿಕ ರಸ್ತೆ ಬದಿಯ ದೀಪದ ಕಂಬಕ್ಕೆ ಢಿಕ್ಕಿಯಾಯಿತು. ಸ್ವಲ್ಪ ಸಮಯ ಟ್ರಾಫಿಕ್ ಜಾಂ ಆಯಿತು.
ಅಕ್ರಮ ಗೋ ಸಾಗಾಟ ಪತ್ತೆ
ಪುತ್ತೂರು: ಕೇರಳ ಗಡಿಯ ಪಾಣಾಜೆ ಗ್ರಾಮದ ಆರ್ಲಪದವಿನಲ್ಲಿ ಅಕ್ರಮ ಗೋ ಸಾಗಾಟವನ್ನು ಹಿಂದೂ ಕಾರ್ಯಕರ್ತರು ತಡೆದು ಜಾನುವಾರು ಗಳನ್ನು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಅಪೆ ವಾಹನದಲ್ಲಿ ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ತಡೆ ಹಿಡಿದರು.
ಟಾಪ್ ನ್ಯೂಸ್
![BJP-flag](https://www.udayavani.com/wp-content/uploads/2024/07/BJP-flag-1-415x249.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.