ರಾಜಕೀಯ ದಾಳವಾದ ಮೈಶುಗರ್‌ ಕಾರ್ಖಾನೆ


Team Udayavani, Feb 16, 2023, 7:45 AM IST

ರಾಜಕೀಯ ದಾಳವಾದ ಮೈಶುಗರ್‌ ಕಾರ್ಖಾನೆ

ಮಂಡ್ಯ: ಮೈಶುಗರ್‌ ಕಾರ್ಖಾನೆಗೆ ಇಡೀ ದೇಶದ ಮೊದಲ ಹಾಗೂ ಏಕೈಕ ಸರಕಾರಿ ಸ್ವಾಮ್ಯದ ಕಾರ್ಖಾನೆ ಎಂಬ ಹೆಗ್ಗಳಿಕೆ ಇದೆ.  ಆದರೆ ಕಳೆದ ಹತ್ತು ವರ್ಷ­ಗಳಿಂದ ರೋಗಗ್ರಸ್ಥ­ವಾಗಿದ್ದು, ಬರುವ ಸರಕಾರಗಳು, ಜನ­ಪ್ರತಿ­ನಿಧಿಗಳು ರಾಜಕೀಯಕ್ಕಾಗಿ ಬಳಸಿಕೊಂಡಿದ್ದೇ ಹೆಚ್ಚು.

ಕಾರ್ಖಾನೆಯ ವಿಚಾರ ಇಡೀ ರಾಜ್ಯ ಹಾಗೂ ದೇಶದ ಗಮನ ಸೆಳೆದಿದೆ. ಹತ್ತು ವರ್ಷಗಳ ಹಿಂದೆ ಕಾರ್ಖಾನೆಯು ಈ ಭಾಗದ ರೈತರ ಜೀವನಾಡಿಯಾಗಿತ್ತು. ಅನಂತರ ಕಾರ್ಖಾನೆಯಲ್ಲಿನ ದುರಾಡಳಿತ, ಅಧಿಕಾರಿಗಳ ನಿರ್ಲಕ್ಷ್ಯ, ಕಾರ್ಮಿಕರಲ್ಲಿ ಗುಂಪುಗಾರಿಕೆ, ರಾಜಕೀಯದಿಂದ ಕಾರ್ಖಾ­ನೆಯು ಅರಾಜಕತೆಯತ್ತ ಸಾಗಿತು.

500 ಕೋಟಿ ರೂ. ಹೆಚ್ಚು: ಕಾರ್ಖಾನೆಗೆ 500 ಕೋಟಿ ರೂ. ಹೆಚ್ಚು ಅನುದಾನ ನೀಡಿದರೂ ಅಧಿಕಾರಿಗಳ ಬೇಜವಾಬ್ದಾರಿತನ, ಆಡಳಿತ ವೈಫಲ್ಯದಿಂದ ಅನುದಾನ ಸರಿಯಾಗಿ ಸದ್ಬಳಕೆಯಾಗಲೇ ಇಲ್ಲ. ಅಲ್ಲದೆ ಅನುದಾನ ಕಾರ್ಖಾನೆಗೆ ಸಮರ್ಪಕವಾಗಿ ಬಳಕೆಯಾಗಿ­ದೆಯೇ ಇಲ್ಲವೋ ಎಂಬ ಮಾಹಿತಿಯೂ ಇಲ್ಲ.

ಒಅಂಡ್‌ಎಂಗೆ ವಹಿಸಲು ನಿರ್ಧಾರ: 2013ರ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಕಾರ್ಖಾನೆ ಚಾಲನೆಗೊಂಡಿತು. ಬಳಿಕ ಬಂದ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೊಸ ಕಾರ್ಖಾನೆ ಸ್ಥಾಪನೆ ಹಾಗೂ ಈಗಿರುವ ಕಾರ್ಖಾನೆಯನ್ನು ಒ ಅಂಡ್‌ ಎಂಗೆ ವಹಿಸಲು ನಿರ್ಧರಿ­ಸಿದ್ದರು. ಅಲ್ಲದೆ ಹೊಸ ಕಾರ್ಖಾನೆ ಸ್ಥಾಪನೆ ಮಾಡುವ ಬಗ್ಗೆ ಬಜೆಟ್‌ನಲ್ಲಿ 400 ಕೋಟಿ ರೂ. ಘೋಷಣೆ ಮಾಡಿದ್ದರು. ಆದರೆ ಕಾರ್ಯಗತವಾಗಲಿಲ್ಲ,

2019ರಿಂದ ಸ್ಥಗಿತಗೊಂಡ ಕಾರ್ಖಾನೆ: ರಾಜಕೀಯ ಸ್ಥಿತ್ಯಂತರ ಗಳ ನಡುವೆ ಕಾರ್ಖಾನೆಯು ಸ್ಥಗಿತಗೊಂಡಿತು. ಇದರಿಂದ ಈ ಭಾಗದ ರೈತರು ಸಂಕಷ್ಟ ಅನುಭವಿಸುವಂತಾಯಿತು. ಆರ್ಥಿಕ ಚಟುವಟಿಕೆಗಳು ಕುಸಿಯಿತು. ರೈತರು ಬೆಳೆದ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸಾಗಿಸಲು ಹರಸಾಹಸಪಡುವಂತಾ­ಯಿತು. ಜಿಲ್ಲೆಯ ವಿವಿಧ ಖಾಸಗಿ ಕಾರ್ಖಾನೆಗಳು ಮೈಶುಗರ್‌ ವ್ಯಾಪ್ತಿಯ ಕಬ್ಬು ಕಟಾವು ಮಾಡಿಕೊಳ್ಳಲು ಮುಗಿಬಿದ್ದವು. ಆದರೂ ಪ್ರಭಾವ ಬೀರಿದ ರೈತರ ಕಬ್ಬು ಕಟಾವಾದರೆ ಸಾಮಾನ್ಯ ರೈತರ ಕಬ್ಬು ಗದ್ದೆಯಲ್ಲಿಯೇ ಉಳಿಯುವಂತಾಯಿತು.

ಖಾಸಗಿಗೆ ಗುತ್ತಿಗೆ ನೀಡಲು ಮುಂದಾದ ಬಿಜೆಪಿ ಸರಕಾರ: 2019ರಲ್ಲಿ ಬಂದ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರಕಾರ ಕಾರ್ಖಾನೆಯನ್ನು ಮೊದಲು ಒ ಅಂಡ್‌ ಎಂಗೆ ವಹಿಸಲು ಮುಂದಾಗಿತ್ತು. ಇದರ ವಿರುದ್ಧ ಹೋರಾಟಗಳು ನಡೆದ ಹಿನ್ನೆಲೆಯಲ್ಲಿ ಒ ಅಂಡ್‌ ಎಂ ಕೈಬಿಟ್ಟು ಪಿಎಸ್‌ಎಸ್‌ಕೆ ಕಾರ್ಖಾನೆ ಮಾದರಿಯಲ್ಲಿ 40 ವರ್ಷಗಳ ಕಾಲ ಖಾಸಗಿಯವರಿಗೆ ಗುತ್ತಿಗೆ ನೀಡಲು ಮುಂದಾಗಿತ್ತು.

ಬಣಗಳಾಗಿ ಪರ-ವಿರೋಧ ಹೋರಾಟ: ಕಾರ್ಖಾನೆ ಯನ್ನು ಸರಕಾರವೇ ನಡೆಸಬೇಕೋ ಅಥವಾ ಒ ಅಂಡ್‌ ಎಂಗೆ ನೀಡಬೇಕೋ ಎಂಬ ವಿಚಾರದಲ್ಲಿ ಬಣ ಸೃಷ್ಟಿಯಾಯಿತು. ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾ ಗಿದ್ದ ಡಾ| ಜಿ.ಮಾದೇಗೌಡ ನೇತೃತ್ವದಲ್ಲಿ ಒಂದು ಬಣ ಸರಕಾರಿ ಸ್ವಾಮ್ಯದಲ್ಲಿರಲಿ ಎಂದು ಹೋರಾಟ ಮಾಡಿದರೆ ಸಮಿತಿಯ ಖಜಾಂಚಿಯಾಗಿದ್ದ ಡಾ| ಎಚ್‌. ಡಿ.ಚೌಡಯ್ಯ ನೇತೃತ್ವದ ಬಣ ಒ ಅಂಡ್‌ ಎಂ ಗೆ ನೀಡಬೇಕು ಎಂದು  ಪಟ್ಟು ಹಿಡಿದು ಪ್ರತಿಭಟನೆ ನಡೆಸಿದವು.

ಗೊಂದಲದಿಂದ ಹೊರಬರಲು ಸರಕಾರ ಕಾರ್ಖಾನೆಯನ್ನು 40 ವರ್ಷಗಳ ಕಾಲ ಖಾಸಗಿಗೆ ವಹಿಸಿ ಅಧಿಸೂಚನೆ ಹೊರಡಿಸಿತು. ಇದಾದ ಮೇಲೆ ಹೋರಾಟಗಾರರು ಒಂದಾಗಿ ಸರಕಾರದ ವಿರುದ್ಧ ಒಂದು ತಿಂಗಳ ಕಾಲ ಅನಿರ್ದಿಷ್ಟಾವಧಿ ಹೋರಾಟ ನಡೆಸಿದರು. ಬಳಿಕ ಸರಕಾರ ತನ್ನ ನಿರ್ಧಾರ ವಾಪಸ್‌ ಪಡೆಯಿತು.

ತರಾತುರಿಯಲ್ಲಿ ಆರಂಭ: 2022ರಲ್ಲಿ ಹೋರಾಟಗಾರರ ಒತ್ತಡದಿಂದ ತರಾತುರಿಯಲ್ಲಿ ಆರಂಭಿಸಿತು. ಹೀಗಾಗಿ ಕಾರ್ಖಾನೆಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿವೆ. ಕಳೆದ 5 ತಿಂಗ ಳಲ್ಲಿ ಕೇವಲ 1.10 ಲಕ್ಷ ಟನ್‌ ಕಬ್ಬು ಮಾತ್ರ ಅರೆದಿದ್ದು, 30 ಸಾವಿರ ರೂ. ಮೌಲ್ಯದ ಕಳಪೆ ಸಕ್ಕರೆ ಉತ್ಪಾದನೆ ಮಾಡಿದೆ.

ಕಾರ್ಖಾನೆ ಸ್ಥಗಿತ: ಐದು ತಿಂಗಳ ಕಾಲ ಕುಂಟುತ್ತಾ ಸಾಗಿದ ಕಾರ್ಖಾನೆ ಜನವರಿಯಲ್ಲಿ ಪ್ರಸ್ತುತ ವರ್ಷದ ಹಿಂಗಾರು ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಿತು. ಮುಂದಿನ ವರ್ಷದಿಂದ ಕಾರ್ಖಾನೆಯನ್ನು ಸುಸ್ಥಿತಿಗೆ ತಂದು, ದಿನ 5 ಸಾವಿರ ಟನ್‌ ಕಬ್ಬು ಪ್ರತೀದಿನ ಅರೆಯುವ ಸಾಮರ್ಥ್ಯ ವನ್ನು ಹೆಚ್ಚಿಸುವ ಬಗ್ಗೆ ಅಧಿಕಾರಿಗಳು ಹೇಳಿದ್ದಾರೆ.

ಕಾರ್ಖಾನೆಯ ಕ್ರೆಡಿಟ್‌ ಪಡೆಯಲು ಪೈಪೋಟಿ
ಪ್ರಸ್ತುತ ಮೈಶುಗರ್‌ ಕಾರ್ಖಾನೆಯೇ ರಾಜಕೀಯ ಪಕ್ಷಗಳಿಗೆ ದಾಳವಾಗಿ ಸಿಕ್ಕಿದೆ. ಬಿಜೆಪಿ ಸರಕಾರ ಕಾರ್ಖಾನೆಯನ್ನು ನಾವೇ ಆರಂಭಿಸಿದ್ದು ಎಂದು ಹೇಳಿ ಕೊಳ್ಳುತ್ತಿದ್ದರೆ ಅತ್ತ ಕಾಂಗ್ರೆಸ್‌ ಹೋರಾಟಗಾರರಿಗೆ ನಾವೂ ಬೆಂಬಲ ಕೊಟ್ಟಿದ್ದೆವು. ಅಲ್ಲದೆ ಸರಕಾರದ ಮಟ್ಟದಲ್ಲಿ ನಮ್ಮ ನಾಯಕರು ಮಾತನಾಡಿದ್ದಾರೆ ಎನ್ನುತ್ತಿದ್ದಾರೆ. ಅತ್ತ ಸಂಸದೆ ಸುಮಲತಾ, ಕಾರ್ಖಾನೆಯನ್ನು ಆರಂಭಿಸಲು ನಾನು ಸಿಎಂ, ಸಚಿವರು, ಕೇಂದ್ರ ಸಚಿವರ ಜತೆ ಚರ್ಚಿಸಿ ಒತ್ತಡ ತಂದಿದ್ದೆ ಎಂದಿದ್ದಾರೆ. ಸದನದಲ್ಲಿ ಜೆಡಿಎಸ್‌ನ ಎಲ್ಲ ಶಾಸಕರು ಧ್ವನಿ ಎತ್ತಿದ್ದರು. ಮಳವಳ್ಳಿಯಿಂದ ಪಾದಯಾತ್ರೆ ನಡೆಸಿದ್ದರಿಂದ ಆರಂಭಿಸಲಾಗಿದೆ ಎನ್ನುತ್ತಿದ್ದಾರೆ.

ಮೈಶುಗರ್‌ ಹೆಸರು ಹೇಳದೆ ಮಾತು ಮುಗಿಯುತ್ತಿಲ್ಲ
ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳು ಮೈಶುಗರ್‌ ಕಾರ್ಖಾನೆಯ ಹೆಸರು ಹೇಳದೆ ಮಾತು ಮುಗಿಸುತ್ತಿಲ್ಲ ಎಂಬಂತಾಗಿದೆ. ಇತ್ತೀಚೆಗೆ ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸಿದಾಗಲೂ ಮೈಶುಗರ್‌ ಕಾರ್ಖಾನೆ ಆರಂಭಿಸಿದ್ದು ನಾವು ಎಂದಿದ್ದರು. ಅನಂತರ ನಡೆದ ಕಾಂಗ್ರೆಸ್‌ನ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಕೂಡ ನಾವು ಅಧಿಕಾರಕ್ಕೆ ಬಂದರೆ ಮೈಶುಗರ್‌ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದಾಗಿ ಹೇಳಿದರು. ಜೆಡಿಎಸ್‌ನ ಪಂಚರತ್ನ ರಥಯಾತ್ರೆಯಲ್ಲೂ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರಸ್ತಾವಿಸಿದ್ದರು.

-ಎಚ್‌.ಶಿವರಾಜು

ಟಾಪ್ ನ್ಯೂಸ್

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Mudhol: ಬೆಳ್ಳಂಬೆಳಗ್ಗೆ ಅಬ್ಬರಿಸಿದ ಮಳೆರಾಯ… ಜನಜೀವನ ಅಸ್ತವ್ಯಸ್ತ

Mudhol: ವಾರದ ಸಂತೆಗೆ ಮಳೆರಾಯನ ಕಾಟ… ಜನಜೀವನ ಅಸ್ತವ್ಯಸ್ತ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ

31 ವರ್ಷದ ಲಾರೆನ್ಸ್‌ ಬಿಷ್ಣೋಯ್‌ ಪಾತಕಲೋಕಕ್ಕೆ ಹೊಸ ಎಂಟ್ರಿ; ಮುಂಬಯಿಗೆ ಹೊಸ ಡಾನ್‌!

31 ವರ್ಷದ ಲಾರೆನ್ಸ್‌ ಬಿಷ್ಣೋಯ್‌ ಪಾತಕಲೋಕಕ್ಕೆ ಹೊಸ ಎಂಟ್ರಿ; ಮುಂಬಯಿಗೆ ಹೊಸ ಡಾನ್‌!

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ಚುನಾವಣೆ ಗೆಲ್ಲುವ ಅಸ್ತ್ರವಾದ ಉಚಿತ ಕೊಡುಗೆ

Election: ಗೆಲ್ಲುವ ಅಸ್ತ್ರವಾದ ಉಚಿತ ಕೊಡುಗೆ

PM-Intren

Practical Training: ಉದ್ಯೋಗಕ್ಕೆ ಹೊಸ ದಾರಿ: ಪ್ರಧಾನಮಂತ್ರಿ ಇಂಟರ್ನ್ಶಿಪ್‌ ಯೋಜನೆ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

5-ptr

Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು

simha roopini kannada movie

Simha Roopini: ಭಕ್ತಿ ಭಾವದ ʼಸಿಂಹ ರೂಪಿಣಿʼ: ಕಿನ್ನಾಳ್‌ ರಾಜ್‌ ನಿರ್ದೇಶನ

4-bng-crime

Bengaluru: ಪತಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.