ಹೊಸಬರು ಗೆಲ್ಲಲಿ ಸಂಭ್ರಮ ಹೆಚ್ಚಲಿ.. ವಿಭಿನ್ನ ಕಂಟೆಂಟ್‌ ಗಳಲ್ಲಿ ನವ ತಂಡಗಳ ಪ್ರಯತ್ನ


Team Udayavani, Feb 17, 2023, 8:50 AM IST

ಹೊಸಬರು ಗೆಲ್ಲಲಿ ಸಂಭ್ರಮ ಹೆಚ್ಚಲಿ.. ವಿಭಿನ್ನ ಕಂಟೆಂಟ್‌ಗಳಲ್ಲಿ ನವ ತಂಡಗಳ ಪ್ರಯತ್ನ

2022ರಲ್ಲಿ 220 ಪ್ಲಸ್‌ ಸಿನಿಮಾಗಳು ತೆರೆ ಕಂಡಿದ್ದವು. ಇದರಲ್ಲಿ ಸ್ಟಾರ್‌ಗಳ ಹಾಗೂ ಚಿತ್ರರಂಗದ ಪರಿಚಯದ ಮುಖಗಳ ಸಿನಿಮಾಗಳೆಂದು ಬಿಡುಗಡೆಯಾಗಿದ್ದು 30 ರಿಂದ 40 ಚಿತ್ರಗಳು. ಉಳಿದಂತೆ ವರ್ಷಪೂರ್ತಿ ಚಿತ್ರರಂಗವನ್ನು ಚಟುವಟಿಕೆಯಲ್ಲಿಟ್ಟಿದ್ದು, ಚಿತ್ರಮಂದಿರಗಳಿಗೆ ಸಿನಿಮಾ ನೀಡಿದ್ದು ಹೊಸಬರೇ. ಆದರೆ, ಗೆಲುವಿನ ಪ್ರಮಾಣ? ಈ ವಿಚಾರ ಬಂದಾಗ ಪ್ರೇಕ್ಷಕ ಯಾಕೋ ಹೊಸಬರತ್ತ ಹೆಚ್ಚು ಆಸಕ್ತಿ ತೋರಿಸುತ್ತಿಲ್ಲ ಎಂಬ ಬೇಸರದ ಅಂಶ ಗೊತ್ತಾಗುತ್ತದೆ. ಹಾಗಂತ

ಹೊಸಬರು ಕೆಟ್ಟ ಸಿನಿಮಾ ಮಾಡುತ್ತಿದ್ದಾರಾ ಎಂದರೆ ಖಂಡಿತಾ ಇಲ್ಲ. ಸದ್ಯ ಕನ್ನಡ ಚಿತ್ರರಂಗಕ್ಕೆ ಇಂಜಿನಿಯರಿಂಗ್‌ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಮಂದಿ ಹೊಸ ಹೊಸ ಚಿಂತನೆಯೊಂದಿಗೆ ಬರುತ್ತಿದ್ದಾರೆ. ಅದೇ ಕಾರಣದಿಂದ ಇತ್ತೀಚೆಗೆ ಬರುತ್ತಿರುವ ಹೊಸಬರ ಸಿನಿಮಾಗಳು ರೆಗ್ಯುಲರ್‌ ಶೈಲಿ ಬಿಟ್ಟು, ಹೊಸತನದಿಂದ ಕೂಡಿರುತ್ತವೆ. ಆದರೆ, ಈ ಸಿನಿಮಾಗಳು ಜನರನ್ನು ಸೆಳೆಯುವಲ್ಲಿ ವಿಫ‌ಲವಾಗುತ್ತಿವೆ ಎಂಬುದು ಅನೇಕ ಹೊಸ ನಿರ್ಮಾಪಕ, ನಿರ್ದೇಶಕರಿಗೆ ಬೇಸರ ತರಿಸಿದೆ. ಇನ್ನೇನು ಬಾಯಿಮಾತಿನ ಮೂಲಕ ಸಿನಿಮಾ ತಲುಪುತ್ತಿದೆ ಎನ್ನುವಷ್ಟರಲ್ಲಿ ಆ ಸಿನಿಮಾಗಳು ಚಿತ್ರಮಂದಿರದಿಂದಲೇ ಹೊರಬಿದ್ದಿರುತ್ತವೆ.

ಹೊಸಬರ ಗೆಲುವು ಅನಿವಾರ್ಯ

ಚಿತ್ರರಂಗವೆಂದರೆ ಅಲ್ಲಿ ಸ್ಟಾರ್‌ಗಳ ಜೊತೆಗೆ ಹೊಸಬರ ಸಿನಿಮಾಗಳು ಗೆಲ್ಲುವುದು ಅನಿವಾರ್ಯ. ಒಂದರ ಹಿಂದೊಂದರಂತೆ ಹೊಸಬರ ಸಿನಿಮಾಗಳು ಸೋಲುತ್ತಾ ಹೋದರೆ, ಚಿತ್ರರಂಗಕ್ಕೆ ಹೊಸದಾಗಿ ಬರುವವರ ಆತ್ಮಸ್ಥೈರ್ಯವೇ ಕುಂದುತ್ತದೆ. ಯಾವ ಧೈರ್ಯದ ಮೇಲೆ ನಾನು ಸಿನಿಮಾಕ್ಕೆ ಬಂಡವಾಳ ಹೂಡಲಿ, ನಿರ್ದೇಶನ ಮಾಡಲಿ, ನಾಯಕನಾಗಿ ಎಂಟ್ರಿಕೊಡಲಿ ಎಂಬ ಭಯ, ಗೊಂದಲಕ್ಕೆ ಕಾರಣವಾಗುತ್ತದೆ ಚಿತ್ರರಂಗದಲ್ಲಿ ಸ್ಟಾರ್‌ ಸಿನಿಮಾಗಳ ಗೆಲುವು ಎಷ್ಟು ಮುಖ್ಯವೋ ಹೊಸಬರ ಸಿನಿಮಾಗಳ ಗೆಲುವಿನ ಅಗತ್ಯ ಅದಕ್ಕಿಂತಲೂ ಹೆಚ್ಚೇ ಇದೆ ಎಂದರೆ ತಪ್ಪಲ್ಲ. ಒಂದು ಸ್ಟಾರ್‌ ಸಿನಿಮಾದ ಗೆಲುವು ಚಿತ್ರರಂಗದ ಬಿಝಿನೆಸ್‌ ಜೊತೆಗೆ ರೆಗ್ಯುಲರ್‌ ನಿರ್ಮಾಪಕರ ಮೊಗದಲ್ಲಿ ನಗು ತರಿಸಬಹುದು.

ಹಿಟ್‌ ಆದ ಸಿನಿಮಾದ ಸ್ಟಾರ್‌ ನಟ ತನ್ನ ಸಂಭಾವನೆ ಏರಿಸಿಕೊಳ್ಳಬಹುದು, ಆತನ ಮುಂದಿನ ಸಿನಿಮಾದ ಬಜೆಟ್‌ ದೊಡ್ಡ ಮಟ್ಟದಲ್ಲಿ ಏರಿಕೆಯಾಗಬಹುದು, ಸಿನಿಮಾ ಮೇಕಿಂಗ್‌ ದಿನಗಳು ಜಾಸ್ತಿಯಾಗಬಹುದು…. ಅದೇ ಹೊಸಬರ ಸಿನಿಮಾ ಗೆದ್ದರೆ ಮತ್ತೆ 10 ಹೊಸ ತಂಡಗಳು ಹುಮ್ಮಸ್ಸಿನಿಂದ ಚಿತ್ರರಂಗಕ್ಕೆ ಬರುತ್ತವೆ. ಒಬ್ಬ ಹೊಸ ನಿರ್ಮಾಪಕ, ನಿರ್ದೇಶಕ ಸಿನಿಮಾ ಮಾಡುತ್ತಾನೆ ಎಂದರೆ ಬಹುತೇಕ ಆತ ಹೊಸಬರಿಗೆ ಪ್ರಾಮುಖ್ಯತೆ ಕೊಡುತ್ತಾನೆ. ಅಲ್ಲಿಗೆ ಸಿನಿಮಾದ ಕನಸು ಕಂಡ ಹೊಸಬರಿಗೆ ಒಂದು ಅವಕಾಶ ಸಿಗುವ ಜೊತೆಗೆ ಹೊಸ ಜನರೇಶನ್‌ ಒಂದು ಹುಟ್ಟಿಕೊಂಡಂತಾಗುತ್ತದೆ.

ಸ್ಟಾರ್‌ ಗಳ ಪ್ರೋತ್ಸಾಹಬೇಕಿದೆ

ಒಂದು ಒಳ್ಳೆಯ ಸಿನಿಮಾವನ್ನು ಜನರಿಗೆ ತಲುಪಿಸುವಲ್ಲಿ ಇವತ್ತು ಸ್ಟಾರ್‌ಗಳ ಬೆಂಬಲದ ಅಗತ್ಯವಿದೆ. ಇತ್ತೀಚೆಗೆ “ಕಡಲತೀರ’ ಚಿತ್ರದ ನಿರ್ಮಾಪಕ ಕಂ ನಾಯಕ ಪಟೇಲ್‌ ವರುಣ್‌ ರಾಜ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, “ನಾವು ಸಿನಿಮಾ ಚೆನ್ನಾಗಿ ಮಾಡಿದ್ದೇವೆ. ಆದರೆ, ನಮ್ಮಂತಹ ಹೊಸಬರ ಸಿನಿಮಾಗಳು ಜನರಿಗೆ ತಲುಪಲು ಸ್ಟಾರ್‌ಗಳ ಬೆಂಬಲ ಬೇಕಿದೆ. ಸಿನಿಮಾ ಚೆನ್ನಾಗಿದ್ದಾಗ ಆ ಕುರಿತು ಒಂದು ಟ್ವೀಟ್‌, ಒಂದು ಬೈಟ್ಸ್‌ ಸ್ಟಾರ್‌ಗಳಿಂದ ಸಿಕ್ಕರೆ ನಮ್ಮಂತಹ ಹೊಸಬರಿಗೆ ಅದು ಸಹಾಯವಾಗುತ್ತದೆ’ ಎಂದಿದ್ದರು. ಇದು ನಿಜ ಕೂಡಾ. ಸ್ಟಾರ್‌ ನಟರ ಅಭಿಮಾನಿ ವರ್ಗ ಹಾಗೂ ಅವರ ರೀಚ್‌ ದೊಡ್ಡದಿರುವುದರಿಂದ ಸ್ಟಾರ್‌ಗಳು ದೊಡ್ಡ ಮನಸ್ಸು ಮಾಡಿದರೆ, ಹೊಸಬರಿಗೆ ಆನೆಬಲ ಬಂದಂತಾಗುತ್ತದೆ.

ಸಕ್ಸಸ್‌ ರೇಟ್‌ ಗೆ ಸ್ಟಾರ್ ಜೊತೆ ಹೊಸಬರು ಮುಖ್ಯ

ಚಿತ್ರರಂಗದ ಸಕ್ಸಸ್‌ ರೇಟ್‌ ಗಮನದಲ್ಲಿಟ್ಟಾಗ ಕೇವಲ ಸ್ಟಾರ್‌ ಸಿನಿಮಾಗಳ ಜೊತೆಗೆ ಹೊಸಬರ ಸಿನಿಮಾಗಳ ಗೆಲುವು ಕೂಡಾ ಅನಿವಾರ್ಯವಾಗುತ್ತದೆ. ವರ್ಷಕ್ಕೆ ಬಿಡುಗಡೆಯಾಗುವ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸ್ಟಾರ್‌ಗಳ ಸಿನಿಮಾ ಗಳೆಂದು 5-6 ಚಿತ್ರಗಳಷ್ಟೇ. ಮಿಕ್ಕಂತೆ ಹೊಸಬರದ್ದೇ ಮೆರವಣಿಗೆ. ಹೀಗಿರುವಾಗ ಹೊಸಬರ ಸಿನಿಮಾದ ಗೆಲುವು ಚಿತ್ರರಂಗದ ಸಕ್ಸಸ್‌ ರೇಟ್‌ ದೃಷ್ಟಿಯಿಂದಲೂ ಅನಿವಾರ್ಯ.  ಇವತ್ತು ಹೊಸಬರು ಜನರಿಗೆ ಸಿನಿಮಾ ತಲುಪಿಸಲು ಕಷ್ಟಪಡುತ್ತಿದ್ದಾರೆ. ಸ್ಟಾರ್‌ ಸಿನಿಮಾ ಆದರೆ ಬೇಗನೇ ಜನರಿಗೆ ತಲುಪುತ್ತದೆ. ಪ್ರಮೋಶನ್‌ಗೆ ಹೆಚ್ಚು ಕಷ್ಟಪಡಬೇಕಿಲ್ಲ. ಆದರೆ, ನಿಜಕ್ಕೂ ಇವತ್ತು ಸಿನಿಮಾ ತಲುಪಿಸಲು ಕಷ್ಟಪಡುತ್ತಿರುವವರು ಹೊಸಬರು. ಬದಲಾದ ಪ್ರಮೋಶನ್‌ ಶೈಲಿಗೆ ಹೊಂದಿಕೊಳ್ಳುವುದು ಒಂದು ಕಷ್ಟವಾದರೆ, ಎರಡು ವಾರ ಚಿತ್ರಮಂದಿರದಲ್ಲಿ ಸಿನಿಮಾ ಉಳಿಸಿಕೊಳ್ಳುವುದು ಮತ್ತೂಂದು ಸವಾಲು. ಸಿನಿಮಾ ಚೆನ್ನಾಗಿದ್ದರೂ ಚಿತ್ರಮಂದಿರಕ್ಕೆ ಜನರನ್ನು ಕರೆತರುವುದು ನಿಜಕ್ಕೂ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಪ್ರೇಕ್ಷಕ ದೊಡ್ಡ ಮನಸ್ಸು ಮಾಡಬೇಕಿದೆ. ಇಂತಹ ಸಂದರ್ಭದಲ್ಲಿ ಒಂದರೆರಡು ಹೊಸಬರ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆದ್ದರೆ ಹೊಸ ತಂಡಗಳ ಜೊತೆಗೆ ವಿತರಕರಿಗೆ, ಚಿತ್ರಮಂದಿರದವರಿಗೆ ಒಂದು ವಿಶ್ವಾಸ ಬರುತ್ತದೆ.

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್

Chikmagalur; ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್

Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್‌ಗಳ ಅಪಹರಣ

Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್‌ಗಳ ಅಪಹರಣ

belagavi

Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

6-kalburgi

Kalaburagi: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

Hit & run: ದಂಪತಿಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಪತ್ನಿ ಸಾವು, ಪತಿಗೆ ಗಾಯ

Hit & run: ದಂಪತಿಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಪತ್ನಿ ಸಾವು, ಪತಿಗೆ ಗಾಯ

Gadag; ಜಿಲ್ಲೆಯಲ್ಲಿ ಡೇಂಜರ್ ಡೆಂಘೀಗೆ ಮೊದಲ ಬಲಿ

Gadag; ಜಿಲ್ಲೆಯಲ್ಲಿ ಡೇಂಜರ್ ಡೆಂಘೀಗೆ ಮೊದಲ ಬಲಿ

Haveri; 12 ವರ್ಷದ ಬಾಲಕನಿಗೆ ಇಲಿ ಜ್ವರ

Haveri; 12 ವರ್ಷದ ಬಾಲಕನಿಗೆ ಇಲಿ ಜ್ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

Renukaswamy case: ದರ್ಶನ್‌ ಗ್ಯಾಂಗ್‌ ವಿರುದ್ಧ 200 ಸಾಕ್ಷಿಗಳ ಸಂಗ್ರಹ

ಸಾಲು-ಸಾಲು ಹೊಸ ಸಿನೆಮಾ: ಕೋಸ್ಟಲ್‌ವುಡ್‌ಗೀಗ ಪರ್ವ ಕಾಲ!

ಸಾಲು-ಸಾಲು ಹೊಸ ಸಿನೆಮಾ: ಕೋಸ್ಟಲ್‌ವುಡ್‌ಗೀಗ ಪರ್ವ ಕಾಲ!

ರಿಶ್ವಿ‌ಕ್‌ ಶೆಟ್ಟಿ ನಿರ್ಮಾಣದ “ಬಿಲ್ಲಾರಿ” ಮುಹೂರ್ತ

Billari; ರಿಶ್ವಿ‌ಕ್‌ ಶೆಟ್ಟಿ ನಿರ್ಮಾಣದ “ಬಿಲ್ಲಾರಿ” ಮುಹೂರ್ತ

vidyarthi vidyarthiniyare premier show in dubai

ದುಬೈನಲ್ಲಿ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಪ್ರೀಮಿಯರ್‌ ಶೋ

Huccha movie to be re-released with technical update

Huccha; ತಾಂತ್ರಿಕ ಅಪ್ಡೇಟ್ ನೊಂದಿಗೆ ಮರು ಬಿಡುಗಡೆಯಾಗಲಿದೆ ‘ಹುಚ್ಚ’

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್

Chikmagalur; ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ದಂಡು; ಟ್ರಾಫಿಕ್ ನಲ್ಲಿ ಸಿಲುಕಿದ ಟೂರಿಸ್ಟ್

Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್‌ಗಳ ಅಪಹರಣ

Jaipur: ರಸ್ತೆ ಮಧ್ಯೆ ಕಾರು ಅಡ್ಡಗಟ್ಟಿ ಮೂವರು ಯೂಟ್ಯೂಬರ್‌ಗಳ ಅಪಹರಣ

7-yellapura

Yellapura: ನಿಯಂತ್ರಣ ತಪ್ಪಿದ ಕಂಟೈನರ್‌ ಲಾರಿ; ತಪ್ಪಿದ ಅನಾಹುತ

belagavi

Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ

Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.