![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Feb 18, 2023, 11:28 AM IST
ಹುಣಸೂರು: ನಗರಸಭೆಗೆ ನೂತನ ಪೌರಾಯುಕ್ತರಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಿ.ಚಂದ್ರಪ್ಪರನ್ನು ವರ್ಗಾಯಿಸಿ ನಗರಾಭಿವೃದ್ದಿ ಇಲಾಖೆಯ ಅಧಿನ ಕಾರ್ಯದರ್ಶಿ ಟಿ.ಮಂಜುನಾಥ್ ಅದೇಶಿಸಿದ್ದಾರೆ.
2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಅಯೋಗದ ನಿರ್ದೇಶನದ ಮೇರೆಗೆ ಹುಣಸೂರು ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರಾಯುಕ್ತೆ ಎಂ.ಮಾನಸರನ್ನು ಕೊಳ್ಳೆಗಾಲ ನಗರಸಭೆಗೆ ಹಾಗೂ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರಸಭೆಯಲ್ಲಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಸಿ.ಚಂದ್ರಪ್ಪರನ್ನು ಹುಣಸೂರು ನಗರಸಭೆಗೆ ಪೌರಾಯುಕ್ತರನ್ನಾಗಿ ನೇಮಕ ಮಾಡಿ ನಗಾರಾಭಿವೃದ್ದಿ ಇಲಾಖೆಯ ಅಧಿನ ಕಾರ್ಯದರ್ಶಿ ಟಿ.ಮಂಜುನಾಥ್ ಅದೇಶ ಹೊರಡಿಸಿದ್ದಾರೆ.
ಅಭಿವೃದ್ದಿಗೆ ಹಿನ್ನಡೆ:
ಕಳೆದ ಮೂರು ತಿಂಗಳ ಹಿಂದಷ್ಟೆ ಶ್ರೀರಂಗಪಟ್ಟಣದಿಂದ ಇಲ್ಲಿಗೆ ವರ್ಗಾವಣೆಗೊಂಡಿದ್ದ ಎಂ.ಮಾನಸ ಸ್ಥಳೀಯರು ಎಂಬ ಕಾರಣದಿಂದ ಮತ್ತೆ ವರ್ಗಾವಣೆಗೊಳಿಸಿದೆ. ಆದರೆ ನಾಲ್ಕು ವರ್ಷದಲ್ಲಿ ಎರಡುವರ್ಷ ಪೌರಾಯುಕ್ತರೇ ಇರಲಿಲ್ಲ.
ನಂತರ ಎರಡು ವರ್ಷದಲ್ಲಿ ನಾಲ್ಕು ಮಂದಿ ಪೌರಾಯುಕ್ತರು ಬಂದು ಹೋಗಿದ್ದು. ನಗರದ ಅಭಿವೃದ್ದಿ ಇರಲಿ ಕಚೇರಿಯಲ್ಲಿ ಕಂದಾಯಕಟ್ಟಿದ್ದರೂ ತಮ್ಮ ಆಸ್ತಿಯ ಮಾಲಿಕತ್ವದ ನಮೂನೆ 3 ಪಡೆದುಕೊಳ್ಳುವುದಕ್ಕೂ ಸಾದ್ಯವಾಗದ ಸ್ಥಿತಿ ಇಲ್ಲಿದ್ದು.
ಮಾನಸ ರವರು ಬಂದ ಮೂರು ತಿಂಗಳಿನಲ್ಲೇ ಸಾಕಷ್ಟು ಬದಲಾವಣೆ ತಂದಿದ್ದರಲ್ಲದೆ ಸಿಬ್ಬಂದಿಗಳ ಕಳ್ಳಾಟಕ್ಕೆ ಕಡಿವಾಣ ಹಾಕಿ. ಮೂಲ ಹುದ್ದೆಯ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ಬದಲಾಯಿಸಿ . ಅನಾವಶ್ಯಕ ವಿಳಂಬಕ್ಕೆ ಕಡಿವಾಣ ಹಾಕಿದ್ದರು.
ಈ ವೇಳೆಯಲ್ಲೇ ಮತ್ತೆ ವರ್ಗಾವಣೆಯಾಗಿದ್ದು, ಸಣ್ಣ ಪುಟ್ಟ ಕೆಲಸಕ್ಕೂ ನಾಗರೀಕರು ಚುನಾವಣೆ ವರೆಗೆ ಕಾಯುವಂತಾಗಿದೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.