ಏರೋ ಇಂಡಿಯಾ ಶೋಗೆ ಅದ್ಧೂರಿ ತೆರೆ


Team Udayavani, Feb 18, 2023, 11:35 AM IST

ಏರೋ ಇಂಡಿಯಾ ಶೋಗೆ ಅದ್ಧೂರಿ ತೆರೆ

ಬೆಂಗಳೂರು: ಅತ್ತ ಗೋಧೂಳಿಯ ಸಮಯದಲ್ಲಿ ನಿಧಾನವಾಗಿ ಸೂರ್ಯ ಪಶ್ಚಿಮದ ಕಡೆಗೆ ಜಾರುತ್ತಿದ್ದ. ಇತ್ತ ಲೋಹದ ಹಕ್ಕಿಗಳು ನೆರೆದ ಸಾವಿರಾರು ಜನರನ್ನು ರಂಜಿಸಿ ಅದೇ ದಿಕ್ಕಿನಲ್ಲಿ ಮರೆಯಾದವು. ಕರತಾಡನ, ಸಿಳ್ಳೆ-ಕೇಕೆಯೊಂದಿಗೆ ಪ್ರೇಕ್ಷಕರು ಅವುಗಳನ್ನು ಒಲ್ಲದ ಮನಸ್ಸಿನಿಂದಲೇ ಬೀಳ್ಕೊಟ್ಟರು.

ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಕಾಲ ಠಿಕಾಣಿ ಹೂಡಿದ್ದ ದೇಶ-ವಿದೇಶದಿಂದ ಬಂದ ತರಹೇವಾರಿ ಲೋಹದಹಕ್ಕಿಗಳು ತಮ್ಮ ಚಿನ್ನಾಟ ಮುಗಿಸಿ ಶುಕ್ರವಾರ ಸಂಜೆ ಗೂಡುಗಳತ್ತ ಪ್ರಯಾಣ ಬೆಳೆಸಿದವು. ಇದರೊಂದಿಗೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ 14ನೇ ಆವೃತ್ತಿಗೆ ಅದ್ಧೂರಿ ತೆರೆಬಿದ್ದಿತು.

ವೈಮಾನಿಕ ಪ್ರದರ್ಶನದ ಮೊದಲ 3 ದಿನ ವಹಿವಾಟಿಗೆ ಸೀಮಿತವಾಗಿದ್ದ ಏರೋ ಇಂಡಿಯಾ, ಕೊನೆಯ 2 ದಿನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಈ 5 ದಿನಗಳಲ್ಲಿ ಅಂದಾಜು 6.5 ಲಕ್ಷ ಜನ ಸಾಕ್ಷಿಯಾದರು. ಈ ಪೈಕಿ ಮೊದಲ 3 ದಿನ ದೇಶ ವಿದೇಶ ಸೇರಿದಂತೆ 2 ಲಕ್ಷಕ್ಕೂ ಅಧಿಕ ಉದ್ಯಮಿಗಳು, ವ್ಯಾಪಾರಿಗಳು, ವಾಯು, ನೌಕ ಹಾಗೂ ಭೂಸೇನೆಯ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿದರೆ, ಕೊನೆಯ 2 ದಿನ ನಾಲ್ಕು ಲಕ್ಷಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಿದ್ದಾರೆ.

ಇನ್ನು 14ನೇ ಆವೃತ್ತಿಯಲ್ಲಿ 201 ಒಪ್ಪಂದಗಳು ಸೇರಿದಂತೆ 266 ಸಹಭಾಗಿತ್ವದೊಂದಿಗೆ 80 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರಲಿದೆ. 53 ಪ್ರಮುಖ ಘೋಷಣೆಗಳಾಗಿದ್ದು, 9 ಉತ್ಪನ್ನ ಬಿಡುಗಡೆ ಮಾಡಲಾಯಿತು. ಈ ಪೈಕಿ ಕರ್ನಾಟಕದೊಂದಿಗೆ 2,900 ಕೋಟಿ ರೂ. ಮೊತ್ತದ 32 ಒಪ್ಪಂದಗಳಾಗಿವೆ. ಏರೋ ಇಂಡಿಯಾದಲ್ಲಿ ಒಟ್ಟು 811 ಪ್ರದರ್ಶಕರು ಭಾಗವಹಿಸಿದ್ದು, ಈ ಪೈಕಿ 110 ವಿದೇಶಿ ಕಂಪನಿ ಹಾಗೂ ರಕ್ಷಣಾ ಇಲಾಖೆಗಳಿವೆ.

ಉಳಿದಂತೆ 701 ಸ್ವದೇಶಿ ಉದ್ಯಮಿಗಳು ಭಾಗವಹಿಸಿದ್ದವು. 5 ದಿನಗಳು ನಡೆಯುವ ಏರೋ ಶೋನಲ್ಲಿ ಮೊದಲ 3 ದಿನಗಳು (ಫೆ.13-15) ಬ್ಯುಸಿನೆಸ್‌ಗೆ ಮೀಸಲಿಡಲಾಗಿತ್ತು. ಈ ವೇಳೆ ಸಿಇಒ ಕಾನ್‌ಕ್ಲೇವ್‌, ರಕ್ಷಣಾ ಸಚಿವರ ಕಾನ್‌ಕ್ಲೇವ್‌, ಮಂಥನ್‌, ಬಂಧನ್‌ ಸೇರಿದಂತೆ ಮೊದಲಾದ ಸಭೆ- ಸಮಾರಂಭಗಳು ನಡೆದವು.

ಈ ಕಾರ್ಯಕ್ರಮಗಳಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮಗಳಲ್ಲಿ 32 ವಿದೇಶಿ ರಕ್ಷಣಾ ಸಚಿವರು, 29 ಏರ್‌ಚೀಫ್‌, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ, ಜೆವಿ, ತರಬೇತಿ, ಸ್ಪೇಸ್‌, ಎಐ, ಸೈಬರ್‌ ಸೆಕ್ಯೂರಿಟಿ ಸಂಸ್ಥೆಗಳ ಮುಖ್ಯಸ್ಥರು ಭಾಗಹಿಸಿದ್ದರು.

ಕೊನೆಯ 2 ದಿನ ಯಾವುದೇ ಸಭೆ ಸಮಾರಂಭ ಇರಲಿಲ್ಲ. ಪ್ರತಿ ಏರೋ ಶೋದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಹೀಗೆ ದಿನಕ್ಕೆ 2 ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ದಿನಕ್ಕೆ ಕೇವಲ ಒಂದು ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಯಿತು.  ಕೊನೆಯ 2 ದಿನ ಮಾತ್ರ ಬೆಳಗ್ಗೆ ಮತ್ತು ಮಧ್ಯಾಹ್ನ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿತ್ತು.

 67 ವಿಮಾನಗಳ ಪ್ರದರ್ಶನ : ಏರೋ ಇಂಡಿಯಾದಲ್ಲಿ ಅಮೆರಿಕಾದ ಎಫ್-16, ಎಫ್-35, ರಫೇಲ್‌, ತೇಜಸ್‌, ಸೂರ್ಯಕಿರಣ, ಸಾರಂಗ್‌ ಹೆಲಿಕಾಪ್ಟರ್‌ ಸೇರಿದಂತೆ 67 ಏರ್‌ಕಾಪ್ಟ್ರ್‌ಗಳು ಪ್ರದರ್ಶನ ನೀಡಿವೆ. ಸ್ಟಾಟಿಕ್‌ ಡಿಸ್‌ಪ್ಲೇ 36 ಏರ್‌ ಕ್ರಾಪ್ಟ್ ಪ್ರದರ್ಶನಕ್ಕೆ ಇಡಲಾಗಿತ್ತು. ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಅಮೆರಿಕಾದ ಎಫ್-16, ಎಫ್-35 ಹಾಗೂ ಎಫ್ -18 ಹಾರಾಟ ನಡೆಸಿದರೆ, ಎಚ್‌ಎಎಲ್‌ ನಿರ್ಮಿತ ಯುದ್ಧ ವಿಮಾನ ಪ್ರಚಂಡ ಶಕ್ತಿ ಪ್ರದರ್ಶನ ಮಾಡಿತ್ತು. ಇನ್ನು ಡಿಆರ್‌ಡಿಓ ಅಭಿವೃದ್ಧಿ ಪಡಿಸಿದ ತಪಸ್‌ ಚಾಲಕರಹಿತ ವಾಹನವು ಆಗಸದಲ್ಲಿಂದ ವೈಮಾನಿಕ ಪ್ರದರ್ಶನ ನೇರ ಪ್ರಸಾರವನ್ನು ನೀಡಿತ್ತು.

ಟಾಪ್ ನ್ಯೂಸ್

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.