ಏರೋ ಇಂಡಿಯಾ ಶೋಗೆ ಅದ್ಧೂರಿ ತೆರೆ


Team Udayavani, Feb 18, 2023, 11:35 AM IST

ಏರೋ ಇಂಡಿಯಾ ಶೋಗೆ ಅದ್ಧೂರಿ ತೆರೆ

ಬೆಂಗಳೂರು: ಅತ್ತ ಗೋಧೂಳಿಯ ಸಮಯದಲ್ಲಿ ನಿಧಾನವಾಗಿ ಸೂರ್ಯ ಪಶ್ಚಿಮದ ಕಡೆಗೆ ಜಾರುತ್ತಿದ್ದ. ಇತ್ತ ಲೋಹದ ಹಕ್ಕಿಗಳು ನೆರೆದ ಸಾವಿರಾರು ಜನರನ್ನು ರಂಜಿಸಿ ಅದೇ ದಿಕ್ಕಿನಲ್ಲಿ ಮರೆಯಾದವು. ಕರತಾಡನ, ಸಿಳ್ಳೆ-ಕೇಕೆಯೊಂದಿಗೆ ಪ್ರೇಕ್ಷಕರು ಅವುಗಳನ್ನು ಒಲ್ಲದ ಮನಸ್ಸಿನಿಂದಲೇ ಬೀಳ್ಕೊಟ್ಟರು.

ಯಲಹಂಕ ವಾಯುನೆಲೆಯಲ್ಲಿ 5 ದಿನಗಳ ಕಾಲ ಠಿಕಾಣಿ ಹೂಡಿದ್ದ ದೇಶ-ವಿದೇಶದಿಂದ ಬಂದ ತರಹೇವಾರಿ ಲೋಹದಹಕ್ಕಿಗಳು ತಮ್ಮ ಚಿನ್ನಾಟ ಮುಗಿಸಿ ಶುಕ್ರವಾರ ಸಂಜೆ ಗೂಡುಗಳತ್ತ ಪ್ರಯಾಣ ಬೆಳೆಸಿದವು. ಇದರೊಂದಿಗೆ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ 14ನೇ ಆವೃತ್ತಿಗೆ ಅದ್ಧೂರಿ ತೆರೆಬಿದ್ದಿತು.

ವೈಮಾನಿಕ ಪ್ರದರ್ಶನದ ಮೊದಲ 3 ದಿನ ವಹಿವಾಟಿಗೆ ಸೀಮಿತವಾಗಿದ್ದ ಏರೋ ಇಂಡಿಯಾ, ಕೊನೆಯ 2 ದಿನ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. ಈ 5 ದಿನಗಳಲ್ಲಿ ಅಂದಾಜು 6.5 ಲಕ್ಷ ಜನ ಸಾಕ್ಷಿಯಾದರು. ಈ ಪೈಕಿ ಮೊದಲ 3 ದಿನ ದೇಶ ವಿದೇಶ ಸೇರಿದಂತೆ 2 ಲಕ್ಷಕ್ಕೂ ಅಧಿಕ ಉದ್ಯಮಿಗಳು, ವ್ಯಾಪಾರಿಗಳು, ವಾಯು, ನೌಕ ಹಾಗೂ ಭೂಸೇನೆಯ ಅಧಿಕಾರಿ ಸಿಬ್ಬಂದಿಗಳು ಭೇಟಿ ನೀಡಿದರೆ, ಕೊನೆಯ 2 ದಿನ ನಾಲ್ಕು ಲಕ್ಷಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಿದ್ದಾರೆ.

ಇನ್ನು 14ನೇ ಆವೃತ್ತಿಯಲ್ಲಿ 201 ಒಪ್ಪಂದಗಳು ಸೇರಿದಂತೆ 266 ಸಹಭಾಗಿತ್ವದೊಂದಿಗೆ 80 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರಲಿದೆ. 53 ಪ್ರಮುಖ ಘೋಷಣೆಗಳಾಗಿದ್ದು, 9 ಉತ್ಪನ್ನ ಬಿಡುಗಡೆ ಮಾಡಲಾಯಿತು. ಈ ಪೈಕಿ ಕರ್ನಾಟಕದೊಂದಿಗೆ 2,900 ಕೋಟಿ ರೂ. ಮೊತ್ತದ 32 ಒಪ್ಪಂದಗಳಾಗಿವೆ. ಏರೋ ಇಂಡಿಯಾದಲ್ಲಿ ಒಟ್ಟು 811 ಪ್ರದರ್ಶಕರು ಭಾಗವಹಿಸಿದ್ದು, ಈ ಪೈಕಿ 110 ವಿದೇಶಿ ಕಂಪನಿ ಹಾಗೂ ರಕ್ಷಣಾ ಇಲಾಖೆಗಳಿವೆ.

ಉಳಿದಂತೆ 701 ಸ್ವದೇಶಿ ಉದ್ಯಮಿಗಳು ಭಾಗವಹಿಸಿದ್ದವು. 5 ದಿನಗಳು ನಡೆಯುವ ಏರೋ ಶೋನಲ್ಲಿ ಮೊದಲ 3 ದಿನಗಳು (ಫೆ.13-15) ಬ್ಯುಸಿನೆಸ್‌ಗೆ ಮೀಸಲಿಡಲಾಗಿತ್ತು. ಈ ವೇಳೆ ಸಿಇಒ ಕಾನ್‌ಕ್ಲೇವ್‌, ರಕ್ಷಣಾ ಸಚಿವರ ಕಾನ್‌ಕ್ಲೇವ್‌, ಮಂಥನ್‌, ಬಂಧನ್‌ ಸೇರಿದಂತೆ ಮೊದಲಾದ ಸಭೆ- ಸಮಾರಂಭಗಳು ನಡೆದವು.

ಈ ಕಾರ್ಯಕ್ರಮಗಳಿಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಧ್ಯಕ್ಷತೆ ವಹಿಸಿದ್ದರು. ಈ ಕಾರ್ಯಕ್ರಮಗಳಲ್ಲಿ 32 ವಿದೇಶಿ ರಕ್ಷಣಾ ಸಚಿವರು, 29 ಏರ್‌ಚೀಫ್‌, ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ, ಜೆವಿ, ತರಬೇತಿ, ಸ್ಪೇಸ್‌, ಎಐ, ಸೈಬರ್‌ ಸೆಕ್ಯೂರಿಟಿ ಸಂಸ್ಥೆಗಳ ಮುಖ್ಯಸ್ಥರು ಭಾಗಹಿಸಿದ್ದರು.

ಕೊನೆಯ 2 ದಿನ ಯಾವುದೇ ಸಭೆ ಸಮಾರಂಭ ಇರಲಿಲ್ಲ. ಪ್ರತಿ ಏರೋ ಶೋದಲ್ಲಿ ಬೆಳಗ್ಗೆ ಮತ್ತು ಮಧ್ಯಾಹ್ನ ಹೀಗೆ ದಿನಕ್ಕೆ 2 ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ದಿನಕ್ಕೆ ಕೇವಲ ಒಂದು ಬಾರಿ ವೈಮಾನಿಕ ಪ್ರದರ್ಶನ ನಡೆಸಲಾಯಿತು.  ಕೊನೆಯ 2 ದಿನ ಮಾತ್ರ ಬೆಳಗ್ಗೆ ಮತ್ತು ಮಧ್ಯಾಹ್ನ ವೈಮಾನಿಕ ಪ್ರದರ್ಶನ ಏರ್ಪಡಿಸಲಾಗಿತ್ತು.

 67 ವಿಮಾನಗಳ ಪ್ರದರ್ಶನ : ಏರೋ ಇಂಡಿಯಾದಲ್ಲಿ ಅಮೆರಿಕಾದ ಎಫ್-16, ಎಫ್-35, ರಫೇಲ್‌, ತೇಜಸ್‌, ಸೂರ್ಯಕಿರಣ, ಸಾರಂಗ್‌ ಹೆಲಿಕಾಪ್ಟರ್‌ ಸೇರಿದಂತೆ 67 ಏರ್‌ಕಾಪ್ಟ್ರ್‌ಗಳು ಪ್ರದರ್ಶನ ನೀಡಿವೆ. ಸ್ಟಾಟಿಕ್‌ ಡಿಸ್‌ಪ್ಲೇ 36 ಏರ್‌ ಕ್ರಾಪ್ಟ್ ಪ್ರದರ್ಶನಕ್ಕೆ ಇಡಲಾಗಿತ್ತು. ಏರೋ ಇಂಡಿಯಾದಲ್ಲಿ ಮೊದಲ ಬಾರಿಗೆ ಅಮೆರಿಕಾದ ಎಫ್-16, ಎಫ್-35 ಹಾಗೂ ಎಫ್ -18 ಹಾರಾಟ ನಡೆಸಿದರೆ, ಎಚ್‌ಎಎಲ್‌ ನಿರ್ಮಿತ ಯುದ್ಧ ವಿಮಾನ ಪ್ರಚಂಡ ಶಕ್ತಿ ಪ್ರದರ್ಶನ ಮಾಡಿತ್ತು. ಇನ್ನು ಡಿಆರ್‌ಡಿಓ ಅಭಿವೃದ್ಧಿ ಪಡಿಸಿದ ತಪಸ್‌ ಚಾಲಕರಹಿತ ವಾಹನವು ಆಗಸದಲ್ಲಿಂದ ವೈಮಾನಿಕ ಪ್ರದರ್ಶನ ನೇರ ಪ್ರಸಾರವನ್ನು ನೀಡಿತ್ತು.

ಟಾಪ್ ನ್ಯೂಸ್

ramesh

BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Explainer: ವಯನಾಡ್‌ ಲೋಕಸಮರ- ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

The audio rights of 45 movie were sold for a whopping sum

Arjun Janya: ಭರ್ಜರಿ ಮೊತ್ತಕ್ಕೆ ಮಾರಾಟವಾಯ್ತು ʼ45ʼ ಆಡಿಯೋ ರೈಟ್ಸ್

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ

Jammu – Kashmir: ಸೇನಾ ವಾಹನದ ಮೇಲೆ ಗುಂಡಿನ ದಾಳಿ… ಮುಂದುವರೆದ ಶೋಧ ಕಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Potholes: ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು

Potholes: ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ರಸ್ತೆಗಳಲ್ಲಿ ದೊಡ್ಡ ಗುಂಡಿಗಳು

7

Arrested: ವಿದ್ಯಾರ್ಥಿನಿಗೆ ಮುತ್ತು ನೀಡಿದ್ದ ಸೆಕ್ಯುರಿಟಿ ಗಾರ್ಡ್‌ ಬಂಧನ

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ಪತ್ನಿ, ಪ್ರಿಯಕರನ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸಿದ ಗಂಡ!

Bengaluru: ದುಷ್ಕರ್ಮಿಗಳಿಂದ ಬಸ್‌ ಡ್ರೈವರ್‌, ಕಂಡಕ್ಟರ್‌ಗೆ ಥಳಿತ!

Bengaluru: ದುಷ್ಕರ್ಮಿಗಳಿಂದ ಬಸ್‌ ಡ್ರೈವರ್‌, ಕಂಡಕ್ಟರ್‌ಗೆ ಥಳಿತ!

6

Bengaluru: ಹಲ್ಲೆ ನಡೆದರೆ ಪೌರ ಕಾರ್ಮಿಕರು ತಕ್ಷಣವೇ ದೂರು ನೀಡಿ: ಕಮಿಷನರ್‌

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Kaup LaxmiJanardhana Temple: ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮನೋಹರ್ ಶೆಟ್ಟಿ ಆಯ್ಕೆ

Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ

Hosapete: ಜ್ವರದಿಂದ ಮಗು ಸಾವು; ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಪಾಲಕರ ಆಕ್ರೋಶ

ramesh

BJP: ವಿಜಯೇಂದ್ರ ನಾಯಕತ್ವವನ್ನು ನಾನು ಒಪ್ಪುವುದಿಲ್ಲ: ರಮೇಶ ಜಾರಕಿಹೊಳಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Kerala: ವಿಡಿಯೋ ಅಪ್ಲೋಡ್‌ ಮಾಡಿದ ಕೆಲ ಗಂಟೆಯಲ್ಲೇ ಶವವಾಗಿ ಪತ್ತೆಯಾದ ಖ್ಯಾತ ವ್ಲಾಗರ್ ದಂಪತಿ

Explainer: ವಯನಾಡ್‌ ಲೋಕಸಮರ- ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Explainer: ವಯನಾಡ್‌ ಲೋಕಸಮರ-ಪ್ರಿಯಾಂಕಾ ವಿರುದ್ಧ ಮಾಜಿ ಪತ್ರಕರ್ತ, ಕೌನ್ಸಿಲರ್‌ ಅಖಾಡಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.