ಸ್ವಚ್ಛತಾ ಅಭಿಯಾನದ ಹರಿಕಾರ… ಸ್ವಯಂ ಬಡತನದಲ್ಲೇ ಬದುಕಿದ್ದ ಸಂತ ಗಾಡ್ಗೆ ಬಗ್ಗೆ ಗೊತ್ತಾ?

ಇಂದಿಗೂ ಕೂಡಾ ಗಾಡ್ಗೆ ಅವರು ವಿವಿಧ ರಾಜಕೀಯ ಪಕ್ಷಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಪ್ರೇರಣೆಯಾಗಿದ್ದಾರೆ

Team Udayavani, Feb 23, 2023, 1:10 PM IST

ಸ್ವಚ್ಛತಾ ಅಭಿಯಾನದ ಹರಿಹಾರ… ಸ್ವಯಂ ಬಡತನದಲ್ಲೇ ಬದುಕಿದ್ದ ಸಂತ ಗಾಡ್ಗೆ ಬಗ್ಗೆ ಗೊತ್ತಾ?

ಭಾರತದಲ್ಲಿ ಸಂತ ಪರಂಪರೆಗೆ ಬೃಹತ್ ಇತಿಹಾಸವಿದೆ. ಸಂತ ತುಕಾರಾಮ್, ಸಂತ ಕಬೀರ, ಸಂತ ನಾಮದೇವ, ಸಂತ ರವಿದಾಸ್ ಹೀಗೆ ಹಲವು ಮಹಾನ್ ವ್ಯಕ್ತಿಗಳಿದ್ದಾರೆ. ಆದರೆ ಸಂತ ಗಾಡ್ಗೆ ಮಹಾರಾಜ್ ಬಗ್ಗೆ ಕೇಳಿದ್ದೀರಾ?

ಇದನ್ನೂ ಓದಿ:ಮಗಳ ಮದುವೆಗೆ ಸಾಲ; ಸವಣೂರಿನಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ಸಂತ ಗಾಡ್ಗೆ ಮಹಾರಾಜ್ ಭಾರತೀಯ ಚಿಂತಕ, ಸಂತ, ಸಮಾಜ ಸುಧಾರಕರಾಗಿದ್ದಾರೆ. ಸಂತ ಗಾಡ್ಗೆ ಅವರು ಸಮಾಜ ಸುಧಾರಕರಾಗಿದ್ದು, ಅವರು ತಮ್ಮ ಕೆಲಸಗಳಿಗೆ ವೈಜ್ಞಾನಿಕ ಸ್ಪರ್ಶ ನೀಡಿದ್ದರು. ಸಮಾಜದಲ್ಲಿ ತುಳಿತಕ್ಕೊಳಗಾದವರು, ಶೋಷಣೆಗೊಳಗಾದವರ ಸೇವೆಗಾಗಿ ಅವರು ತಮ್ಮ ಜೀವನದುದ್ದಕ್ಕೂ ಅವಿರತವಾಗಿ ಶ್ರಮಿಸಿದ್ದ ಮಹಾನ್ ಕಾಯಕ ಜೀವಿ ಅವರಾಗಿದ್ದರು. ಸಾಮಾಜಿಕ ಕಟ್ಟುಪಾಡು ಮತ್ತು ಸಂಪ್ರದಾಯಗಳನ್ನು ಟೀಕಿಸಲು ಅವರು ಕೀರ್ತನೆಯನ್ನು ಬಳಸಿ, ಸಮಾಜಕ್ಕೆ ಉಪದೇಶ ನೀಡಿದ್ದರು. ಜೊತೆಗೆ ಶಿಕ್ಷಣದ ಮಹತ್ವದ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಿದ್ದರು.

ಸ್ವಯಂಪ್ರೇರಿತರಾಗಿ ಬಡತನದಲ್ಲೇ ಬದುಕಿದ್ದರು:

ಸಂತ ಗಾಡ್ಗೆ ಅವರ ಮೂಲ ಹೆಸರು ದೇಬುಜಿ ಜಿಂಗ್ರಾಜಿ ಜರ್ನೋಕರ್ ಎಂಬುದಾಗಿತ್ತು. ಅವರು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಇಂದಿನ ಅಂಜನಗಢ್ ಸುರ್ಜಿ ತಾಲೂಕಿನ ಶೆಂಡಾಗಾಂವ್ ಗ್ರಾಮದ ಧೋಬಿ ಕುಟುಂಬದಲ್ಲಿ (1876ರ ಫೆಬ್ರುವರಿ 23) ಜನಿಸಿದ್ದರು.

ಸಂತ ಗಾಡ್ಗೆ ಬಾಬಾ ಅವರು ಸಾಮಾಜಿಕ ನ್ಯಾಯ ಮತ್ತು ಸಮಾಜ ಸುಧಾರಣೆಗಾಗಿ ಒಂದು ಹಳ್ಳಿಯಿಂದ, ಮತ್ತೊಂದು ಹಳ್ಳಿಗೆ ತಿರುಗಾಡುತ್ತಿದ್ದರು. ಇಂದಿಗೂ ಕೂಡಾ ಗಾಡ್ಗೆ ಅವರು ವಿವಿಧ ರಾಜಕೀಯ ಪಕ್ಷಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಪ್ರೇರಣೆಯಾಗಿದ್ದಾರೆ ಎಂಬುದು ಅತಿಶಯೋಕ್ತಿಯಾಗಲಾರದು.

ಸ್ವಚ್ಛತೆಗಾಗಿ ಅಂದೇ ಪಣತೊಟ್ಟಿದ್ದರು!

ಗಾಡ್ಗೆ ಬಾಬಾ ಅವರು ಒಂದು ಹಳ್ಳಿಯನ್ನು ಪ್ರವೇಶಿಸಿದ ಕೂಡಲೇ ಗ್ರಾಮದ ಕೊಳಚೆ ಮತ್ತು ರಸ್ತೆಗಳನ್ನು ಗುಡಿಸಲು ಪ್ರಾರಂಭಿಸುತ್ತಿದ್ದರಂತೆ. ಮತ್ತು ತನ್ನ ಕೆಲಸವಾಗುವವರೆಗೂ ತಾನು ನಿಮಗೆ ಅಭಿನಂದನೆ ಹೇಳುವವರೆಗೆ ಕಾಯಬೇಕು ಎಂದು ತಿಳಿಸುತ್ತಿದ್ದರಂತೆ. ಇವರ ಸ್ವಚ್ಛತಾ ಕಾರ್ಯಕ್ಕೆ ಗ್ರಾಮಸ್ಥರು ಹಣವನ್ನು ನೀಡುತ್ತಿದ್ದು, ಅವರು ಅದನ್ನು ಸಮಾಜದ ಏಳಿಗೆಗಾಗಿ ಬಳಸಿದ್ದರು. ಆ ಹಿನ್ನೆಲೆಯಲ್ಲಿ ಗಾಡ್ಗೆ ಮಹಾರಾಜ್ ಅವರು ಶಿಕ್ಷಣ ಸಂಸ್ಥೆ, ಧರ್ಮಶಾಲೆ, ಗೋಶಾಲೆ ಹಾಗೂ ಆಸ್ಪತ್ರೆಗಳನ್ನು ಕಟ್ಟಿಸಿ ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದರು.

ಸಂತ ತುಕಾರಾಮ್ ಅವರಂತೆಯೇ ಸಂತ ಗಾಡ್ಗೆ ಅವರು ಕೀರ್ತನೆಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದ್ದರು. ಗಾಡ್ಗೆ ಬಾಬಾ ಅವರು ರಾತ್ರಿ ಊಟವಾದ ನಂತರ ಎಲ್ಲಾ ಜಾತಿಯ ಜನರು ಒಟ್ಟು ಸೇರುವಂತೆ ಮಾಡುತ್ತಿದ್ದರು. ಸ್ವಯಂ ಬಡತನದಲ್ಲಿ ಬದುಕಿದ ಗಾಡ್ಗೆ ಬಾಬಾ ಅವರು ಸಂತರಂತೆ ಬದುಕಿದ್ದರು. ಅವರು ಹರಿದ ಬಟ್ಟೆಯನ್ನು ಧರಿಸುತ್ತಿದ್ದು, ಸ್ವಂತ ಮನೆ ಕೂಡಾ ಇದ್ದಿರಲಿಲ್ಲವಾಗಿತ್ತು.

20ನೇ ಶತಮಾನದ ಪ್ರಸಿದ್ಧ ಧಾರ್ಮಿಕ ಮುಖಂಡ ಮೆಹರ್ ಬಾಬಾ ಅವರನ್ನು ಗಾಡ್ಗೆ ಅವರು ಹಲವಾರು ಬಾರಿ ಭೇಟಿಯಾಗಿದ್ದರು. ಗಾಡ್ಗೆ ಬಾಬಾ ಅವರು ತನ್ನ ಅತೀ ಪ್ರಿಯ ಸಂತರಲ್ಲಿ ಒಬ್ಬರಾಗಿದ್ದಾರೆ ಎಂದು ಮೆಹರ್ ಬಾಬಾ ಹೇಳಿದ್ದರು. 1954ರ ನವೆಂಬರ್ 6ರಂದು ಮೆಹರ್ ಬಾಬಾ ಅವರನ್ನು ಗಾಡ್ಗೆ ಅವರು ಪಂಡರಾಪುರಕ್ಕೆ ಆಹ್ವಾನಿಸಿದ್ದರು, ಅವರು ಈ ಇಬ್ಬರು ಸಂತರ ದರ್ಶನ ಪಡೆಯಲು ಸಾವಿರಾರು ಮಂದಿ ಆಗಮಿಸಿದ್ದರು.

ಗಾಡ್ಗೆ ಮಹಾರಾಜ್ ಅವರು 1956ರ ಡಿಸೆಂಬರ್ 20ರಂದು ಅಮರಾವತಿಗೆ ತೆರಳುತ್ತಿರುವಾಗ ವಾಲ್ಗಾಂವ್ ಸಮೀಪದ ಪೆಢೀ ನದಿ ಪ್ರದೇಶದಲ್ಲಿ ಇಹಲೋಕ ತ್ಯಜಿಸಿದ್ದರು. ಆದರೆ ಗಾಡ್ಗೆ ಅವರ ಚಿಂತನೆ ಮತ್ತು ದೂರದೃಷ್ಟಿ ಇಂದಿಗೂ ಎಲ್ಲರಿಗೂ ಆದರ್ಶಪ್ರಾಯವಾಗಿದೆ.

ಟಾಪ್ ನ್ಯೂಸ್

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

Tulu theater: ತಂತ್ರಜ್ಞಾನ ಬಳಕೆಯಿಂದ ಹೊಸತನಕ್ಕೆ ತೆರೆದುಕೊಂಡ ತುಳು ನಾಟಕ ರಂಗ

1-yekanath

Maharashtra Poll; ”ತ್ಯಾಗ” ಮಾಡಲು ಸಿದ್ಧರಾಗಬೇಕು.. ಶಿಂಧೆಗೆ ಬಿಜೆಪಿ ಸ್ಪಷ್ಟ ಸಂದೇಶ!

5-lips-4

Beauty Tips: ನೈಸರ್ಗಿಕವಾಗಿ ಗುಲಾಬಿ ಬಣ್ಣದ ತುಟಿ ನಿಮ್ಮದಾಗಲು ಈ ಟಿಪ್ಸ್‌ ಬಳಸಿ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

Sweet Recipes: ನಾಲಿಗೆ ಚಪ್ಪರಿಸುವ ರಸಭರಿತ ಗರಿಗರಿ ಜಿಲೇಬಿ… ಇಲ್ಲಿದೆ ಸುಲಭ ವಿಧಾನ

1

2025ಕ್ಕೆ ಬಾಲಿವುಡ್‌ಗೆ ಸೀಕ್ವೆಲ್‌ಗಳೇ ಜೀವಾಳ.. ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.