ಕೊಟ್ಟಾರೆ ಕೊಡು, ಮೋದಿಯಂಥ ದೊರೆ: ಸಂಕಷ್ಟದಲ್ಲಿರುವ ಪಾಕಿಸ್ಥಾನ ನಾಗರಿಕರ ಬೇಡಿಕೆ
Team Udayavani, Feb 24, 2023, 8:05 AM IST
ಇಸ್ಲಾಮಾಬಾದ್: “ಮೋದಿಯಂಥ ನಾಯಕನಿದ್ದಿದ್ದರೆ ಇಂದು ನಮ್ಮ ಮಕ್ಕಳು ಹಸಿದ ಹೊಟ್ಟೆಯಲ್ಲಿ ಮಲಗುತ್ತಿರಲಿಲ್ಲ. ಕನಿಷ್ಠ ಹೊಟ್ಟೆ ತುಂಬ ಊಟ ಬಡಿಸಲು ಸಾಧ್ಯವಾಗುತ್ತಿತ್ತು! ಪಾಕ್ ಸರಕಾರ ತಂದಿಟ್ಟಿರುವ ಪರಿಸ್ಥಿತಿಯಿಂದ ನಾವು ಪಾಕ್ನಲ್ಲಿ ಹುಟ್ಟಿದ್ದೇ ತಪ್ಪು ಎಂದೆನಿಸುತ್ತಿದೆ. ಮೋದಿ ತರಹದ ನಾಯಕನನ್ನು ನೀಡು ಎಂದು ಅಲ್ಲಾನಲ್ಲಿ ಬೇಡಿಕೊಳ್ಳುತ್ತೇವೆ’.
ಇದು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜರ್ಝರಿತವಾಗಿರುವ ಪಾಕಿಸ್ಥಾನದ ಜನರ ಭಾವುಕ ಮಾತುಗಳು! ತೆರಿಗೆ ಹೆಚ್ಚಳ, ಬೆಲೆ ಏರಿಕೆ, ಆಹಾರ ಬಿಕ್ಕಟ್ಟಿನಂಥ ಬರೆಗಳು ಒಂದರ ಮೇಲೆ ಒಂದರಂತೆ ಜನರ ಮೇಲೆ ಬೀಳುತ್ತಿವೆ. ಜನರ ಸಂಕಷ್ಟಗಳನ್ನು ಆಲಿಸಲೆಂದು ಪಾಕ್ ಯೂಟ್ಯೂಬರ್ ಸನಾ ಅಮ್ಜದ್ ಜನರ ಪ್ರತಿಕ್ರಿಯೆ ಸಂಗ್ರಹದ ವೀಡಿಯೋ ಒಂದನ್ನು ಮಾಡಿದ್ದು, ಈ ವೇಳೆ ಪಾಕ್ ಪ್ರಜೆಯೊಬ್ಬರು ಈ ರೀತಿ ಹೇಳಿಕೆ ನೀಡಿದ್ದಾರೆ. ಪಾಕಿಸ್ಥಾನ ಭಾರತದಿಂದ ವಿಭಜನೆಗೊಳ್ಳಲೇಬಾರದಿತ್ತು. ನಾವು ಕನಿಷ್ಠ ಅಗತ್ಯ ಸಾಮಗ್ರಿಗಳನ್ನಾದರೂ ಕಡಿಮೆ ಬೆಲೆಯಲ್ಲಿ ಕೊಂಡುಕೊಳ್ಳ ಬಹುದಿತ್ತು. ಮೋದಿ ಭಾರತವನ್ನು ಮುನ್ನಡೆಸುವಂತೆ, ಪಾಕ್ ಅನ್ನು ಆಡಳಿತ ಮಾಡಿದ್ದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನವಾಜ್ ಷರೀಫ್, ಭುಟ್ಟೋ, ಇಮ್ರಾನ್, ಶೆಹಬಾಜ್ ಈ ಯಾವ ನಾಯಕರೂ ನಮಗೆ ಬೇಕಿಲ್ಲ. ಮೋದಿ ಅಂಥ ಓರ್ವ ದಿಟ್ಟ ನಾಯಕ ಬೇಕು ಎಂದು ಹೇಳಿದ್ದಾರೆ. ಐಎಸ್ಎ ಅನುದಾನ ಕಡಿತ: ಹಣದ ಕೊರತೆ ಹಿನ್ನೆಲೆ ಪಾಕಿಸ್ಥಾನ ಸರಕಾರ ಗುಪ್ತಚರ ಇಲಾಖೆ, ತನಿಖಾ ಸಂಸ್ಥೆಗಳಿಗೆ ನೀಡುತ್ತಿರುವ ಅನುದಾನ ಕಡಿತಗೊಳಿಸಲು ನಿರ್ಧರಿಸಿದೆ.
ಭಯೋತ್ಪಾದನೆಯನ್ನು ಉದ್ಯಮವಾಗಿಸಿಕೊಂಡಿರುವ ಯಾವುದೇ ದೇಶ ಎಂದಿಗೂ ಸಮಸ್ಯೆಗಳಿಂದ ಹೊರಬಂದು, ಸಮೃದ್ಧವಾಗಲು ಸಾಧ್ಯವಿಲ್ಲ. ಪಾಕ್ ವಿಚಾರದಲ್ಲಿ ನಾವು ಕೈಗೊಳ್ಳುವ ಯಾವುದೇ ದೊಡ್ಡ ನಿರ್ಣಯ ನಮ್ಮ ದೇಶದ ಜನರ ಭಾವನೆಗಳ ನಾಡಿಮಿಡಿತವನ್ನು ಆಧರಿಸಿರುತ್ತದೆ.
ಎಸ್.ಜೈಶಂಕರ್, ವಿದೇಶಾಂಗ ಸಚಿವ
ಬ್ಯುಸಿನೆಸ್ ಕ್ಲಾಸ್ ಪ್ರಯಾಣ ರದ್ದು
ಪಾಕಿಸ್ಥಾನದ ಸಚಿವರು ವಿದೇಶಗಳಿಗೆ ಇನ್ನು ಮುಂದೆ ಬ್ಯುಸಿನೆಸ್ ಕ್ಲಾಸ್ನಲ್ಲಿ ಪ್ರಯಾಣಿಸುವಂತಿಲ್ಲ ಅಥವಾ ಪಂಚತಾರಾ ಹೊಟೇಲ್ಗಳಲ್ಲಿ ಉಳಿಯುವಂತಿಲ್ಲ. ಸದ್ಯದ ಸಮಯ ನಮ್ಮಿಂದ ತಾಳ್ಮೆ, ತ್ಯಾಗ, ಸರಳತೆ ಬಯಸುತ್ತಿದೆ. ನಾವೆಲ್ಲರೂ ಅದೇ ರೀತಿ ಇರಬೇಕು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಚಿವ ಸಂಪುಟ ಸಭೆಯಲ್ಲಿ ಸಚಿವರಿಗೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Burkina Faso: ಬುರ್ಕಿನಫಾಸೋದಲ್ಲಿ ಒಂದೇ ಗಂಟೆಯಲ್ಲಿ 600 ಮಂದಿ ಹತ್ಯೆ
Zakir Naik ವಿವಾದ; ಎಲ್ಲರೂ ಅಲ್ಲಾಹನನ್ನಷ್ಟೇ ಪ್ರಾರ್ಥಿಸಿದರೆ ಶಾಂತಿ…
Iran ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ಮಾಡಿ: ಇಸ್ರೇಲ್ಗೆ ಟ್ರಂಪ್
Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು
Iran ಸರ್ವೋಚ್ಚ ನಾಯಕನ ಕೈಯಲ್ಲಿ ರೈಫಲ್!; ಇಸ್ರೇಲ್ ದೀರ್ಘಕಾಲ ಉಳಿಯುವುದಿಲ್ಲ..
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.