ಅದಾನಿ ಪ್ರಕರಣ: ಮಾಧ್ಯಮಗಳಿಗೆ ನಿರ್ಬಂಧ ಹೇರಲು ಸುಪ್ರೀಂ ನಕಾರ
Team Udayavani, Feb 25, 2023, 6:25 AM IST
ನವದೆಹಲಿ: ಅದಾನಿ-ಹಿಂಡನ್ಬರ್ಗ್ ಪ್ರಕರಣದ ಕುರಿತು ವರದಿ ಪ್ರಕಟಿಸದಂತೆ ಮಾಧ್ಯಮಗಳಿಗೆ ಪ್ರತಿಬಂಧಕಾಜ್ಞೆ ಹೊರಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಮಾಧ್ಯಮಗಳಿಗೆ ವರದಿ ಪ್ರಸಾರ ಮಾಡದಂತೆ ನಿರ್ಬಂಧ ಹೇರಬೇಕು ಎಂದು ಕೋರಿ ವಕೀಲ ಎಂ.ಎಲ್.ಶರ್ಮಾ ಸಲ್ಲಿಸಿದ್ದ ಅರ್ಜಿಯ ವಿಚಾ ರಣೆ ನಡೆಸಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, “ಪ್ರಕರಣದ ಪರಿಶೀಲ ನೆಗೆ ಸಮಿತಿ ರಚಿಸುವ ಕುರಿತು ಆದೇಶ ಹೊರ ಬೀಳು ವವರೆಗೂ ಮಾಧ್ಯಮಗಳಿಗೆ ನಿರ್ಬಂಧ ಹೇರಲು ಸಾಧ್ಯವಿಲ್ಲ’ ಎಂದು ಹೇಳಿದೆ.
12 ಲಕ್ಷ ಕೋಟಿ ನಷ್ಟ: ಈ ನಡುವೆ, ಹಿಂಡನ್ಬರ್ಗ್ ವರದಿ ಪರಿಣಾಮವೆಂಬಂತೆ, ಕೇವಲ ಒಂದು ತಿಂಗಳಲ್ಲಿ ಅದಾನಿ ಗ್ರೂಪ್ನ 10 ಕಂಪನಿಗಳ ಮಾರುಕಟ್ಟೆ ಮೌಲ್ಯ 12 ಲಕ್ಷ ಕೋಟಿ ರೂ.ಗಳಷ್ಟು ಕುಸಿತ ಕಂಡಿದೆ. ಜನವರಿ 24ಕ್ಕೂ ಮುಂಚೆ ಅದಾನಿ ಗ್ರೂಪ್ ಮೌಲ್ಯ 19 ಲಕ್ಷ ಕೋಟಿ ರೂ.ಗಳಾಗಿದ್ದವು. ಈಗ ಅದು 7.2 ಲಕ್ಷ ಕೋಟಿ ರೂ.ಗೆ ಇಳಿದಿದೆ.
ಖರೀದಿ ಮೊತ್ತಕ್ಕಿಂತಲೂ ಕೆಳಗಿಳಿದ ಮೌಲ್ಯ: ಇದೇ ವೇಳೆ, ಎಲ್ಐಸಿ ಬಳಿಯಿದ್ದ ಅದಾನಿ ಗ್ರೂಪ್ನ 7 ಕಂಪನಿಗಳ ಷೇರುಗಳ ಮೌಲ್ಯವು ಖರೀದಿ ಮೊತ್ತಕ್ಕಿಂತಲೂ ಕೆಳಗಿಳಿದಿದ್ದು, ಶೇ.11 ರಷ್ಟು ಕುಸಿತ ಕಂಡಿದೆ. ಕಂಪನಿಗಳ ಷೇರುಗಳನ್ನು ಎಲ್ಐಸಿ 30,127 ಕೋಟಿ ರೂ.ಗಳಿಗೆ ಖರೀದಿಸಿತ್ತು. ಶುಕ್ರವಾರ ಇವುಗಳ ಮೌಲ್ಯ 26,862 ಕೋಟಿ ರೂ.ಗಳಿಗೆ ತಲುಪಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.