![1-e4qeewqewq](https://www.udayavani.com/wp-content/uploads/2024/12/1-e4qeewqewq-415x234.jpg)
ಮನಸ್ಸಿಗೆ ಬಂದಂತೆ ಇತಿಹಾಸ ಬದಲಿಸಲಾಗದು: ಸುಪ್ರೀಂಕೋರ್ಟ್
ಇತಿಹಾಸವು ಭವಿಷ್ಯದ ಪೀಳಿಗೆಯನ್ನು ಕಾಡುವಂತಿರಬಾರದು
Team Udayavani, Feb 28, 2023, 6:50 AM IST
![ಮನಸ್ಸಿಗೆ ಬಂದಂತೆ ಇತಿಹಾಸ ಬದಲಿಸಲಾಗದು: ಸುಪ್ರೀಂಕೋರ್ಟ್](https://www.udayavani.com/wp-content/uploads/2023/02/sc-a-2-620x377.jpg)
ನವದೆಹಲಿ:“ಭಾರತದ ಮೇಲೆ ವಿದೇಶಿಗರು ಆಕ್ರಮಣ ನಡೆಸಿ, ಆಳಿದ್ದರು ಎಂಬುದು ಇತಿಹಾಸದ ಸತ್ಯ. ನಮಗೆ ಬೇಕಾದಂತೆ ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲ. ಯಾವುದೇ ದೇಶದ ಇತಿಹಾಸವು ಆ ದೇಶದ ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಯನ್ನು ಕಾಡುವಂತಿರಬಾರದು’ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.
ವಿದೇಶಿ ಆಕ್ರಮಣಕಾರರಿಂದ ಹೆಸರು ಬದಲಾಗಿರುವ ದೇಶದ ಸಾಂಸ್ಕೃತಿಕ, ಪ್ರಾಚೀನ ಹಾಗೂ ಧಾರ್ಮಿಕ ಕ್ಷೇತ್ರಗಳ ಮೂಲ ಹೆಸರನ್ನೇ ಮತ್ತೆ ಇಡಲು ಮರು ನಾಮಕರಣ ಆಯೋಗ ರಚಿಸಬೇಕು ಎಂದು ಕೋರಿ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಹಾಗೂ ನ್ಯಾ..ಬಿ.ವಿ. ನಾಗರತ್ನ ಅವರ ನ್ಯಾಯಪೀಠ ವಜಾಗೊಳಿಸಿದೆ.
ಇಂಥ ಅರ್ಜಿಗಳ ಮೂಲಕ ದೇಶದಲ್ಲಿ ವಿವಾದದ ಬೆಂಕಿ ಹೊತ್ತಿಸಕೂಡದು ಎಂದು ನ್ಯಾಯಪೀಠ ಸೂಚಿಸಿದೆ. ವಿದೇಶಿಗರ ಆಕ್ರಮಣ ಮತ್ತು ಆಡಳಿತ ಇತಿಹಾಸದ ಭಾಗವಾಗಿದೆ. ಈಗ ನಾವು ನಮಗೆ ಬೇಕಾದದ್ದನ್ನು ಆಯ್ದ ಇತಿಹಾಸ ಪುಟಗಳಲ್ಲಿ ಸೇರಿಸಲು ಸಾಧ್ಯವಿಲ್ಲ. ಅಲ್ಲದೇ, ಭಾರತ ಜಾತ್ಯತೀತ ರಾಷ್ಟ್ರ, ಹಿಂದೂ ಎನ್ನುವುದು ಒಂದು ಜೀವನಕ್ರಮ. ಅದು ಎಲ್ಲರನ್ನೂ ಒಗ್ಗೂಡಿಸಿದೆ. ಅದರಲ್ಲಿ ಧರ್ಮಾಂಧತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿ, ವಿವಾದಗಳನ್ನು ಜೀವಂತವಿರಿಸುವಂಥ ಅರ್ಜಿಗಳು ಸಲ್ಲದು ಎಂದು ಹೇಳಿದೆ.
ಅರ್ಜಿಯಲ್ಲಿ ಏನಿತ್ತು?
ದೇಶದ ಮೇಲೆ ದಾಳಿ ನಡೆಸಿದ ಆಕ್ರಮಣಕಾರರ ಹೆಸರನ್ನೇ ಐತಿಹಾಸಿಕ, ಪೌರಾಣಿಕ, ಧಾರ್ಮಿಕ ಸ್ಥಳಗಳಿಗೆ ಇಟ್ಟಿರುವುದು ಸಂವಿಧಾನದ ಅನ್ವಯ ನೀಡಿರುವ ಸಾರ್ವಭೌಮತ್ವ ಹಾಗೂ ನಾಗರಿಕ ಹಕ್ಕಿನ ಉಲ್ಲಂಘನೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಮತ್ತೆ ಮೂಲ ಹೆಸರುಗಳನ್ನಿಡಲು ಆಯೋಗ ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲು ಅರ್ಜಿಯಲ್ಲಿ ಕೋರಲಾಗಿತ್ತು.
ಟಾಪ್ ನ್ಯೂಸ್
![1-e4qeewqewq](https://www.udayavani.com/wp-content/uploads/2024/12/1-e4qeewqewq-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-e4qeewqewq](https://www.udayavani.com/wp-content/uploads/2024/12/1-e4qeewqewq-150x84.jpg)
Manipur ಗಲಭೆಗಳಲ್ಲಿ ‘ಸ್ಟಾರ್ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
![1-sulakshana](https://www.udayavani.com/wp-content/uploads/2024/12/1-sulakshana-150x70.jpg)
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
![ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ](https://www.udayavani.com/wp-content/uploads/2024/12/PET-150x90.jpg)
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
![Dharmendra-Pradahan](https://www.udayavani.com/wp-content/uploads/2024/12/Dharmendra-Pradahan-150x90.jpg)
Decision Awaited: 2025ಕ್ಕೆ ನೀಟ್ ಆನ್ಲೈನ್: ಶೀಘ್ರವೇ ನಿರ್ಧಾರ
![Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!](https://www.udayavani.com/wp-content/uploads/2024/12/TATA-150x94.jpg)
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
MUST WATCH
ಹೊಸ ಸೇರ್ಪಡೆ
![1-e4qeewqewq](https://www.udayavani.com/wp-content/uploads/2024/12/1-e4qeewqewq-150x84.jpg)
Manipur ಗಲಭೆಗಳಲ್ಲಿ ‘ಸ್ಟಾರ್ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
![7](https://www.udayavani.com/wp-content/uploads/2024/12/7-28-150x90.jpg)
Sadalwood: ಶ್ರೀಮುರಳಿ ಬರ್ತ್ಡೇಗೆ ಎರಡು ಚಿತ್ರ ಘೋಷಣೆ
![4-bantwala](https://www.udayavani.com/wp-content/uploads/2024/12/4-bantwala-150x90.jpg)
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
![Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ](https://www.udayavani.com/wp-content/uploads/2024/12/6-33-150x90.jpg)
Bengaluru: ಹಸುಗೂಸನ್ನೂ ಕೊಲ್ಲಲು ಯತ್ಲಿಸಿದ ತಂದೆಯ ಹತ್ಯೆ
![Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್](https://www.udayavani.com/wp-content/uploads/2024/12/5-34-150x90.jpg)
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.