ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿ
ಆ್ಯಕ್ಸಿಸ್ ಮೈ ಇಂಡಿಯಾ ಸಿಎಸ್ಐ ಸರ್ವೆಯಿಂದ ಬಹಿರಂಗ
Team Udayavani, Mar 7, 2023, 7:45 AM IST
ನವದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 9 ವರ್ಷಗಳು ಪೂರೈಸುತ್ತಾ ಬಂದರೂ ಈಗಲೂ ಅವರ ಜನಪ್ರಿಯತೆ ವೃದ್ಧಿಸಿದೆ. ” ಆ್ಯಕ್ಸಿಸ್ ಮೈ ಇಂಡಿಯಾ ಸಿಎಸ್ಐ’ ಸಮೀಕ್ಷೆ ನಡೆಸಿದ ಪ್ರಕಾರ ದೇಶದಲ್ಲಿ ಶೇ.72ರಷ್ಟು ಜನರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಪ್ರಭಾವಶಾಲಿ ವ್ಯಕ್ತಿ ಎಂಬ ಭಾವನೆಯಿದೆ.
ಕೊರೊನಾ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳು ಕೇಂದ್ರ ಸರ್ಕಾರದ ದೊಡ್ಡ ಸಾಧನೆಗಳಾಗಿವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜನರು ಅಭಿಪ್ರಾಯಪಟ್ಟಿದ್ದಾರೆ.
ದೇಶದ 10,124 ನಾಗರಿಕರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ ಶೇ.65ರಷ್ಟು ಗ್ರಾಮೀಣ ಭಾಗದವರಾಗಿದ್ದು, ಶೇ.35ರಷ್ಟು ನಗರ ಭಾಗದವರಾಗಿದ್ದಾರೆ.
2023ರ ಕೇಂದ್ರ ಬಜೆಟ್ ತೃಪ್ತಿಕರವಾಗಿದೆ ಎಂಬುದು ಶೇ.52ರಷ್ಟು ಜನರ ಅಭಿಪ್ರಾಯವಾಗಿದೆ. ಇನ್ನೊಂದೆಡೆ, ಒಟ್ಟಾರೆ ಮನೆಯ ಖರ್ಚು ಶೇ.58ಕ್ಕೆ ಏರಿಕೆಯಾಗಿದೆ. ಅದೇ ರಿತಿ ಅಗತ್ಯ ವಸ್ತುಗಳ ಬಳಕೆಯು ಶೇ.36ಕ್ಕೆ ಹಾಗೂ ಆರೋಗ್ಯ ಸಂಬಂಧಿತ ವಸ್ತುಗಳ ಬಳಕೆ ಶೇ.35ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ಹೇಳಿದೆ. ಶೇ.37ರಷ್ಟು ಮಂದಿ ಒಂದು ಗಂಟೆಗಳಿಗಿಂತ ಹೆಚ್ಚು ಸಮಯ ಓಟಿಟಿಯಲ್ಲಿ ಕಳೆಯುತ್ತಿ¨ªಾರೆ ಎಂದು ಸಮೀಕ್ಷೆ ತಿಳಿಸಿದೆ.
ಸೆನ್ಸೆಕ್ಸ್ 70,000 ದಾಟಲಿದೆ
ಮುಂದಿನ ಮೂರು ತಿಂಗಳಲ್ಲಿ ಸೆನ್ಸೆಕ್ಸ್ 70,000 ದಾಟಲಿದೆ ಎಂದು ಸರ್ವೆಯಲ್ಲಿ ಭಾಗವಹಿಸಿದ್ದ ಶೇ.43ರಷ್ಟು ಮಂದಿ ಸಕಾರಾತ್ಮಕ ಆಶಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶೇ.25ರಷ್ಟು ಮಂದಿ ಸೆನ್ಸೆಕ್ಸ್ 55,000ದಿಂದ 65,000 ಒಳಗೆ ಉಳಿಯಲಿದೆ ಎಂದು ಅಂದಾಜಿಸಿದ್ದಾರೆ. ಆದರೆ ಶೇ.15ರಷ್ಟು ಮಂದಿ ಸೆನ್ಸೆಕ್ಸ್ 50,000ಕ್ಕಿಂತ ಕೆಳಕ್ಕೆ ಇಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
* 2023ರ ಕೇಂದ್ರ ಬಜೆಟ್ ತೃಪ್ತಿಕರವಾಗಿದೆ ಎಂಬುದು ಶೇ.52ರಷ್ಟು ಜನರ ಅಭಿಮತ
* ಒಟ್ಟಾರೆ ಮನೆಯ ಖರ್ಚು ಶೇ.58ಕ್ಕೆ ಏರಿಕೆ
* ಅಗತ್ಯ ವಸ್ತುಗಳ ಬಳಕೆಯು ಶೇ.36ಕ್ಕೆ ಏರಿಕೆ
* ಆರೋಗ್ಯ ಸಂಬಂಧಿತ ವಸ್ತುಗಳ ಬಳಕೆಯು ಶೇ.35ಕ್ಕೆ ಏರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K ಸಂಸದ ಇಂಜಿನಿಯರ್ ರಶೀದ್ ಗೆ ಕೈಕೊಟ್ಟು ಎನ್ ಸಿ ಸೇರಿದ ಅಭ್ಯರ್ಥಿ!
Modi 100 days; ಮುಂದಿನ 1000 ವರ್ಷಗಳ ಅಭಿವೃದ್ಧಿಗೆ ತಳಹದಿ ಸಿದ್ಧಪಡಿಸಲಾಗುತ್ತಿದೆ
J-K ಉಗ್ರವಾದ ಯಾರೂ ಪುನರುಜ್ಜೀವನಗೊಳಿಸುವ ಧೈರ್ಯ ತೋರದಂತೆ ಸಮಾಧಿ: ಶಾ
ಗಂಟಲಲ್ಲಿ ಇಡ್ಲಿ ಸಿಲುಕಿ ವ್ಯಕ್ತಿ ಮೃತ್ಯು… ಜೀವಕ್ಕೆ ಮುಳುವಾದ ಇಡ್ಲಿ ತಿನ್ನುವ ಸ್ಪರ್ಧೆ
Fake Visa: ನಕಲಿ ವೀಸಾ ಉತ್ಪಾದನೆಯ ಫ್ಯಾಕ್ಟರಿ ಪತ್ತೆ-ಮೂವರು ಆರೋಪಿಗಳ ಬಂಧನ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.