ಮಾಜಿ ಗೆಳೆಯನಿಂದ ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಖ್ಯಾತ ನಟಿ: ಸ್ಕ್ರೀನ್ ಶಾಟ್, ಫೋಟೋ ವೈರಲ್
Team Udayavani, Mar 7, 2023, 11:12 AM IST
ಚೆನ್ನೈ: ಕಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ಅನಿಕಾ ವಿಜಯಿ ವಿಕ್ರಮನ್ ತನ್ನ ಮಾಜಿ ಗೆಳೆಯ ದೈಹಿಕವಾಗಿ ಹಲ್ಲೆಗೈದು ಹಿಂಸಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಕರಾಳ ಘಟನೆಗಳ ಬಗ್ಗೆ ಬರೆದುಕೊಂಡಿದ್ದಾರೆ.
‘ವಿಷಮಕರನ್’, ʼಐಕ್ಕ್ʼ, ʼಎಂಗ ಪಟ್ಟಣ ಸೋತುʼ ಸಿನಿಮಾಗಳಲ್ಲಿ ನಟಿಸಿ ಕಾಲಿವುಡ್ ನಲ್ಲಿ ಗಮನ ಸೆಳೆದಿರುವ ಅನಿಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಮಾಜಿ ಗೆಳೆಯ ದೌರ್ಜನ್ಯವೆಸಗಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಫೋಟೋ ಹಾಗೂ ಚಾಟ್ ನ ಸ್ಕ್ರೀನ್ ಶಾಟ್ ನ್ನು ಹಂಚಿಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ಬರೆದು, ನನ್ನ ಹಾಗೂ ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿ ಗೆಳೆಯನಿಂದ ಹಲ್ಲೆಗೊಳಗಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಅವನು ನನ್ನ ಮೇಲೆ ಹಲ್ಲೆ ಮಾಡುವ ಮೊದಲು ತೆಗೆದ ಫೋಟೋ ಎಂದು ಕೊನೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಆ ಬಳಿಕ ಅದೇ ದಿನ ಥಳಿತಕ್ಕೊಳಗಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತುಂಟಿ, ಕಣ್ಣು, ದೇಹದ ಇತರ ಭಾಗಗಳಿಗೆ ಹಲ್ಲೆ ಮಾಡಿರುವ ಫೋಟೋಗಳನು ಹಂಚಿಕೊಂಡಿದ್ದಾರೆ. ಇದರೊಂದಿಗೆ ಮಾಜಿ ಗೆಳೆಯನೊಂದಿಗಾದ ಚಾಟಿಂಗ್ ನ್ನು ಸ್ಕ್ರೀನ್ ಶಾಟ್ ಮಾಡಿ ಹಂಚಿಕೊಂಡಿದ್ದಾರೆ.
ಮೊದಲು ಚೆನ್ನೈನಲ್ಲಿ ಆತ ನನ್ನ ಮೇಲೆ ಹಲ್ಲೆ ಮಾಡಿದ್ದ, ಆ ಬಳಿಕ ತಪ್ಪಾಯಿತೆಂದು ಕಾಲಿಗೆ ಬಿದ್ದು ಕ್ಷಮೆ ಕೇಳಿದ. ನಾನು ಆತನನ್ನು ನಂಬಿದೆ. ಆ ಬಳಿಕ ಮತ್ತೆ ಆತ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಈ ಬಾರಿ ಪೊಲೀಸರಿಗೆ ದೂರು ಕೊಟ್ಟೆ. ಪೊಲೀಸರು ನನ್ನ ಬಳಿ ಆತನನ್ನು ಬಿಟ್ಟು ಬಿಡು ಎಂದರು ಕಾರಣ ಆತ ಪೊಲೀಸರಿಗೆ ಆದಾಗಲೇ ಹಣ ಪಾವತಿಸಿದ್ದ ಎಂದು ಹೇಳಿಕೊಂಡಿದ್ದಾರೆ.
ಕಳೆದ ಕೆಲ ಸಮಯದಿಂದ ಅನೂಪ್ ಪಿಳಲೈ ಎನ್ನುವನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದೆ. ಆತ ನನ್ನನು ಮಾನಸಿಕವಾಗಿ ಕಿರುಕುಳ ಕೊಟ್ಟು, ದೈಹಿಕವಾಗಿ ದೌರ್ಜನ್ಯಗೈದಿದ್ದಾನೆ. ಆತನಿಂದ ನಾನು ದೂರವಾಗಲೂ ಹೋದಾಗ, ಆತ ನನ್ನನ್ನು ಬಿಡಲು ಒಪ್ಪಿಲ್ಲ. ನಾನು ಶೂಟಿಂಗ್ ಹೋಗಬಾರದೆಂದು ನನ್ನ ಮೊಬೈಲ್ ಒಡೆದು ಹಾಕಿದ. ನನ್ನ ವಾಟ್ಸಾಪ್ ನ್ನು ಆತನ ಲ್ಯಾಪ್ ಟಾಪ್ ಗೆ ಲಿಂಕ್ ಮಾಡಿ ನನ್ನ ಚಾಟ್ ಗಳನ್ನು ನೋಡುತ್ತಿದ್ದ. ಆತ ನನ್ನ ಮೇಲೆ ಹಲ್ಲೆ ಮಾಡಿ ನಾನು ಅಳುವುದನ್ನು ನಾಟಕ ಎಂದು ಹೇಳಿ ನಗುತ್ತಿದ್ದ. ರೂಮ್ ನಲ್ಲಿ ಕೂಡಿ ಹಾಕಿ ಹೊರಗೆ ಹೋಗಿ ಏನು ಆಗಿಲ್ಲ ಎನ್ನುವಂತೆ ಸ್ನೇಹಿತರೊಂದಿಗೆ ಪಾರ್ಟಿ ಮಾಡುತ್ತಿದ್ದ ಎಂದು ಸುದೀರ್ಘವಾಗಿ ಘಟನೆ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಸದ್ಯ ನಟಿ ಪೊಲೀಸರಿಗೆ ಈ ಬಗ್ಗೆ ಮತ್ತೊಮ್ಮೆ ದೂರು ಕೊಟ್ಟಿದ್ದು, ಆತ ನ್ಯೂಯಾರ್ಕ್ ಗೆ ಓಡಿ ಹೋಗಿದ್ದಾನೆ. ಎಲ್ಲೌನ್ನೂ ಮರೆತು ಮತ್ತೆ ಶೂಟಿಂಗ್ ಗೆ ಹೋಗಲು ನಿಧಾನವಾಗಿ ಸಿದ್ದನಾಗುತ್ತಿದ್ದೇನೆ. ಆದರೆ ಆತನ ಕರ್ಮ ಆತನಿಗೆ ವಾಪಾಸ್ ಆಗೇ ಆಗುತ್ತದೆ ಎಂದು ನಟಿ ಬರೆದುಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್ ಧ್ವನಿ; ಹೀರೋ ಮೇಲೆ ಆರೋಪ
Actor Govinda: ಕಾಲಿಗೆ ಗುಂಡು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ನಟ ಗೋವಿಂದ ಡಿಸ್ಚಾರ್ಜ್
Border 2: ಸನ್ನಿ ಡಿಯೋಲ್ ʼಬಾರ್ಡರ್-2ʼಗೆ ʼಫೌಜಿʼಯಾಗಿ ಬಂದ ಸುನಿಲ್ ಶೆಟ್ಟಿ ಪುತ್ರ
Bollywood Actor Govinda: ಬಾಲಿವುಡ್ ನಟ ಗೋವಿಂದ ಕಾಲಿಗೆ ಆಕಸ್ಮಿಕವಾಗಿ ತಗುಲಿದ ಗುಂಡು
‘Emergency’ ದೃಶ್ಯ ಕಡಿತಕ್ಕೆ ಕಂಗನಾ ಸಮ್ಮತಿ: CBFC
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.