ಕುಂದಾಪುರ; ಹಕ್ಲಾಡಿ ಗ್ರಾ.ಪಂ.ಗೆ ನರೇಗಾ ಪ್ರಶಸ್ತಿ; ಕುಂದಾಪುರ ತಾ.ಪಂ.ಗೆ ಗೌರವ

ವೈಯಕ್ತಿಕ ಕಾಮಗಾರಿಗಳಿಗೆ ಅತೀ ಹೆಚ್ಚು ಒತ್ತು ನೀಡಲಾಗಿದೆ

Team Udayavani, Mar 17, 2023, 3:11 PM IST

ಕುಂದಾಪುರ; ಹಕ್ಲಾಡಿ ಗ್ರಾ.ಪಂ.ಗೆ ನರೇಗಾ ಪ್ರಶಸ್ತಿ; ಕುಂದಾಪುರ ತಾ.ಪಂ.ಗೆ ಗೌರವ

ಕುಂದಾಪುರ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಗ್ರಾಮಾಂತರ ಭಾಗದ ಜನರ ಜೀವನೋಪಾಯಕ್ಕಾಗಿ ವರದಾನವಾಗಿದೆ. ಇಂತಹ ಮಹತ್ವಕಾಂಕ್ಷಿ ಯೋಜನೆ ಭರಪೂರವಾಗಿ ಬಳಸಿಕೊಂಡ ಹಕ್ಲಾಡಿ ಗ್ರಾ.ಪಂ. ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆಗೈದ ಕೀರ್ತಿಗೆ ಪಾತ್ರವಾಗಿದೆ.

ನರೇಗಾ ಅನುಷ್ಠಾನದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾ.ಪಂ. ಅನ್ನುವ ಪ್ರಶಸ್ತಿ ಹಕ್ಲಾಡಿ ಪಂಚಾಯತ್‌ಗೆ ಒಲಿದಿದೆ. ಕಳೆದ ಬಾರಿ ನರೇಗಾ ಅನುಷ್ಠಾನದಲ್ಲಿ ಎರಡನೇ ಸ್ಥಾನ ಪಡೆದಿದ್ದ ಹಕ್ಲಾಡಿಯು 2022-23ನೇ ಸಾಲಿನಲ್ಲಿ ಮತ್ತೂ ಒಂದು ಹೆಜ್ಜೆ ಮುಂದಡಿಯಿಟ್ಟಿದ್ದು, ಈ ಬಾರಿಯ ನರೇಗಾ ಪ್ರಶಸ್ತಿ ಪಡೆದ ರಾಜ್ಯದ 5 ಅತ್ಯುತ್ತಮ ಗ್ರಾ.ಪಂ.ಗಳಲ್ಲಿ ಹಕ್ಲಾಡಿ ಒಂದಾಗಿದೆ.

ಜಿಲ್ಲೆಯಲ್ಲಿ ಮುಂಚೂಣಿ
ಉದ್ಯೋಗ ಖಾತರಿ ಯೋಜನೆಯಡಿ ಈ ಗ್ರಾ.ಪಂ. ಉಡುಪಿ ಜಿಲ್ಲೆಯಲ್ಲೇ ಅತಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡಿದ ಪಂ. ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. 2022- 23ನೇ ಸಾಲಿನಲ್ಲಿ 26 ಸಾವಿರ ಮಾನವ ದಿನ ಗಳ ಸೃಜನೆ ಮಾಡಿದ್ದು, ಕೂಲಿ, ಸಲಕರಣೆ ಸೇರಿ 96.60 ಲ.ರೂ.ಖರ್ಚು ಭರಿಸಲಾಗಿದೆ.

ಏನೆಲ್ಲ ಕಾಮಗಾರಿ
ನರೇಗಾ ಯೋಜನೆಯಡಿ ಪಂಚಾಯತ್‌ ವ್ಯಾಪ್ತಿಯಲ್ಲಿ ಸಮುದಾಯ, ವೈಯಕ್ತಿಕ ಕಾಮಗಾರಿಗಳಿಗೆ ಅತೀ ಹೆಚ್ಚು ಒತ್ತು ನೀಡಲಾಗಿದೆ. ಸಮುದಾಯ ಕಾಮಗಾರಿಗಳಾದ 10 ಕೆರೆ ರಚನೆ, 1 ಕೆರೆ ಹೂಳೆತ್ತುವುದು, 3 ಆವರಣ ಗೋಡೆ, 18 ಕಡೆ ತೋಡು ಹೂಳೆತ್ತುವ ಕಾಮಗಾರಿಗಳು ನಡೆದಿವೆ. ಇದಲ್ಲದೆ ವೈಯಕ್ತಿಕವಾಗಿ 25 ಬಾವಿ ನಿರ್ಮಾಣ, 14 ಕೊಟ್ಟಿಗೆ, 10 ಮನೆ, 5 ಕೋಳಿ ಶೆಡ್‌, 3 ಗೊಬ್ಬರ ಗುಂಡಿ, ರಸ್ತೆ, ಎರೆಹುಳ ತೊಟ್ಟಿ, ಕುರಿ ಶೆಡ್‌, ಹಂದಿ ಶೆಡ್‌ಗಳನ್ನು ನಿರ್ಮಿಸಲಾಗಿದೆ.

ಸಮುದಾಯ ಕಾಮಗಾರಿಗಳಲ್ಲಿ 250ಕ್ಕೂ ಅಧಿಕ ಮಂದಿ ಮಹಿಳೆಯರು ಬದುಕು ಕಟ್ಟಿಕೊಂಡಿದ್ದಾರೆ. ಒಟ್ಟು ಶೇ. 88ರಷ್ಟು ಮಹಿಳೆಯರ ಭಾಗವಹಿಸಿದ್ದು, ಇತರೆ ಮಹಿಳಾ ಸಬಲೀಕರಣ ನಿಟ್ಟಿನಲ್ಲಿಯೂ ಇದೊಂದು ಮಾದರಿಯಾಗಿದೆ. ನಮಗೆ ರಾಜ್ಯ ಮಟ್ಟದ ನರೇಗಾ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಜಿ.ಪಂ. ಸಿಇಒ, ತಾ.ಪಂ. ಇಒ, ಗ್ರಾ.ಪಂ. ಅಧ್ಯಕ್ಷ ಚೇತನ್‌ ಮೊಗವೀರ, ಸದಸ್ಯರು, ಸಿಬಂದಿ ವರ್ಗ, ನರೇಗಾ ಕಾರ್ಮಿಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹಕ್ಲಾಡಿ ಪಿಡಿಒ ಚಂದ್ರ ಬಿಲ್ಲವ ತಿಳಿಸಿದ್ದಾರೆ.

ಕುಂದಾಪುರ ತಾ.ಪಂ.ಗೆ ಗೌರವ
2022-23ನೇ ಸಾಲಿನಲ್ಲಿ ನರೇಗಾ ಯೋಜನೆ ಅನುಷ್ಠಾನದಲ್ಲಿ ಉತ್ತಮ ಆಡಳಿತ ಪಂಚಾಯತ್‌ ಪುರಸ್ಕಾರವು ಕುಂದಾಪುರ ತಾ. ಪಂ.ಗೆ ಲಭಿಸಿದೆ. ಸಾಮಾಜಿಕ ಪರಿಶೋಧನೆ, ದೂರುಗಳ ವಿಲೇವಾರಿ, ಸಕಾಲದಲ್ಲಿ ಸಿಬಂದಿಗೆ ಸಂಭಾವನೆ ಮತ್ತು ಪ್ರಯಾಣ ಭತ್ತೆ ಪಾವತಿ, 60:40 ಕೂಲಿ ಸಾಮಗ್ರಿಗಳ ಅನುಪಾತ ನಿರ್ವಹಣೆ, ಮೊಬೈಲ್‌ ಆ್ಯಪ್‌ ಇವೆಲ್ಲವನ್ನು ಮಾನದಂಡವಾಗಿರಿಸಿಕೊಂಡು ಉತ್ತಮ ಆಡಳಿತ ಪುರಸ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಕ್ಲಾಡಿ ಅಲ್ಲದೆ, ಜಲಸಂಜೀವಿನಿ ಪುರಸ್ಕಾರವು ಹೆಬ್ರಿ ತಾಲೂಕಿನ ವರಂಗ ಗ್ರಾ.ಪಂ.ಗೆ ಒಲಿದಿದೆ.

ಎಲ್ಲರಿಗೂ ಮಾದರಿ
ಉದ್ಯೋಗ ಖಾತರಿ ಯೋಜನೆ ಅನುಷ್ಠಾನದಲ್ಲಿ 2022-23ನೇ ಸಾಲಿ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿವಿಧ ಹಂತದ ಪ್ರಶಸ್ತಿಗಳಲ್ಲಿ ಕುಂದಾಪುರ ತಾ.ಪಂ.ಗೆ ಉತ್ತಮ ಆಡಳಿತ ಪಂಚಾಯತ್‌ ಪುರಸ್ಕಾರ ಲಭಿಸಿದೆ. ಜತೆಗೆ ಹಕ್ಲಾಡಿ ಗ್ರಾ.ಪಂ. ನರೇಗಾದಲ್ಲಿ ಉತ್ತಮ ಸಾಧನೆ ಮಾಡಿದ್ದರಿಂದ ರಾಜ್ಯ ಮಟ್ಟದ ನರೇಗಾ ಪ್ರಶಸ್ತಿ ಲಭಿಸಿದೆ. ನರೇಗಾ ಸದ್ಭಳಕೆಯಲ್ಲಿ ಎಲ್ಲರಿಗೂ ಮಾದರಿಯಾಗಿದೆ. ಹಕ್ಲಾಡಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ.
-ಮಹೇಶ್‌ ಕುಮಾರ್‌ ಹೊಳ್ಳ, 
ಕಾರ್ಯನಿರ್ವಾಹಕ ಅಧಿಕಾರಿ ಕುಂದಾಪುರ ತಾ.ಪಂ.

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ottin

Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ

1-kotaaaaaa

Kota: ಅಚ್ಲಾಡಿ ಸಿದ್ಧಿವಿನಾಯಕ ದೇವಸ್ಥಾನ ತೀರ್ಥ ಪುಷ್ಕರಿಣಿ ಲೋಕಾರ್ಪಣೆ

train-track

Kundapura; ರೈಲಿನಿಂದ ಬಿದ್ದ ಯುವಕನ ರಕ್ಷಣೆ

robbers

Kota; ಪಾರಂಪಳ್ಳಿ ದೇವಸ್ಥಾನದ ಆಸುಪಾಸಿನಲ್ಲಿ ಕಳ್ಳನ ಓಡಾಟದ ಸುದ್ದಿ

1–a-KNDp[

Kundapura; ಕಂಚುಗೋಡಲ್ಲಿ ಕಡಲ್ಕೊರೆತ: ಮನೆಗಳು ಅಪಾಯದಲ್ಲಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.